ಕರ್ನಾಟಕ

karnataka

ETV Bharat / bharat

ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ...!

ಸದನದಲ್ಲಿ ಬಹುಮತ ಸಾಬೀತಿಗೆ ಮುಖ್ಯಮಂತ್ರಿಗಳು ವಿಳಂಬ ಮಾಡುತ್ತಿದ್ದು ಶೀಘ್ರವೇ ವಿಶ್ವಾಸಮತ ಯಾಚಿಸಬೇಕು ಎಂದು ಪಕ್ಷೇತರರು ಸುಪ್ರೀಂ ಮೊರೆ ಹೋಗಿದ್ದರು.

By

Published : Jul 23, 2019, 12:11 PM IST

Updated : Jul 23, 2019, 2:40 PM IST

ಅರ್ಜಿ

ನವದೆಹಲಿ:ಪಕ್ಷೇತರ ಶಾಸಕರುಗಳಾದ ಹೆಚ್​​.ನಾಗೇಶ್ ಹಾಗೂ ಆರ್.ಶಂಕರ್​ ಸುಪ್ರೀಂ ಕೋರ್ಟ್​ನಲ್ಲಿ ಸಲ್ಲಿಕೆ ಮಾಡಿದ್ದ ಅರ್ಜಿಯ ವಿಚಾರಣೆಯನ್ನು ಮುಂದೂಡಲಾಗಿದೆ.

ಸದನದಲ್ಲಿ ಬಹುಮತ ಸಾಬೀತಿಗೆ ಮುಖ್ಯಮಂತ್ರಿಗಳು ವಿಳಂಬ ಮಾಡುತ್ತಿದ್ದು ಶೀಘ್ರವೇ ವಿಶ್ವಾಸಮತ ಯಾಚಿಸಬೇಕು ಎಂದು ಪಕ್ಷೇತರರು ಸುಪ್ರೀಂ ಮೊರೆ ಹೋಗಿದ್ದರು.

ಸದ್ಯ ಸುಪ್ರೀಂ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿಗಳು ವಿಚಾರಣೆಯನ್ನು ನಾಳೆಗೆ ಮುಂದೂಡಿದ್ದಾರೆ.

ವಿಚಾರಣೆ ವೇಳೆ ಕಾಂಗ್ರೆಸ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಇಂದೇ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮನವರಿಕೆ ಮಾಡಿದ್ದಾರೆ. ಕಲಾಪ ನಡೆಯುತ್ತಿರುವ ಸಂದರ್ಭದಲ್ಲಿ ರಾಜ್ಯಪಾಲರು ಯಾವುದೇ ನಿರ್ದೇಶನ ನೀಡುವಂತಿಲ್ಲ ಎಂದು ಮನು ಸಿಂಘ್ವಿ ವಾದ ಮಂಡಿಸಿದ್ದಾರೆ.

ಕೋರ್ಟ್​ ವಿಚಾರಣೆ ಮುಂದೂಡಿಕೆ ಬಳಿಕ ಮುಕುಲ್ ರೋಹ್ಟಗಿ ಮಾತು

ಸ್ಪೀಕರ್​​​ ಎದುರು ಎಲ್ಲ 15 ಜನ ಅತೃಪ್ತ ಶಾಸಕರು ಹಾಜರಾಗುವ ಅವಶ್ಯಕತೆ ಇಲ್ಲವೆಂದು ಹೇಳಿದ್ದೇನೆ ಎಂದು ಕೋರ್ಟ್​ ವಿಚಾರಣೆ ಮುಂದೂಡಿಕೆ ಬಳಿಕ ಮುಕುಲ್ ರೋಹ್ಟಗಿ ಹೇಳಿದ್ದಾರೆ.

ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಪರ ರಾಜೀವ್ ಧವನ್​​, ಕಾಂಗ್ರೆಸ್ ಪರ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದ್ದರೆ, ಪಕ್ಷೇತರರ ಪರವಾಗಿ ಮುಕುಲ್ ರೋಹ್ಟಗಿ ವಾದ ಮಂಡಿಸಿದ್ದಾರೆ.

Last Updated : Jul 23, 2019, 2:40 PM IST

ABOUT THE AUTHOR

...view details