ಕರ್ನಾಟಕ

karnataka

ETV Bharat / bharat

ರತ್ನಗಿರಿ ಡ್ಯಾಂ ದುರಂತ: ಮೃತದೇಹಳ ಪತ್ತೆಗೆ ಆರನೇ ದಿನವೂ ಮುಂದುವರಿದ ಕಾರ್ಯಾಚರಣೆ

ರತ್ನಗಿರಿಯ ಟಿವೇರ್ ಡ್ಯಾಂ ದುರಂತದಲ್ಲಿ ನಾಪತ್ತೆಯಾದ 23 ಜನರ ಪೈಕಿ 19 ಜನರ ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ. ಇನ್ನುಳಿದ 4 ಜನರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಕಾರ್ಯಾಚರಣೆ ಆರನೇ ದಿನಕ್ಕೆ ಕಾಲಿಟ್ಟಿದೆ.

By

Published : Jul 8, 2019, 10:58 AM IST

ಮುಂದುವರೆದ ಶೋಧ ಕಾರ್ಯ

ರತ್ನಗಿರಿ(ಮಹಾರಾಷ್ಟ್ರ): ರತ್ನಗಿರಿಯಲ್ಲಿ ಇತ್ತೀಚೆಗೆ ನಡೆದ ಡ್ಯಾಂ ದುರಂತದಲ್ಲಿ ನಾಪತ್ತೆಯಾದವರ ಶೋಧ ಕಾರ್ಯ ಆರನೇ ದಿನವೂ ಮುಂದುವರೆದಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಕಾರ್ಯಾಚರಣೆ ನಡೆಸಿದೆ.

ಜುಲೈ 3 ರ ರಾತ್ರಿ ಅತಿಯಾದ ಮಳೆಯಿಂದ ಟಿವೇರ್ ಆಣೆಕಟ್ಟು ಒಡೆದು ಸುತ್ತಮುತ್ತಲಿನ ಹಳ್ಳಿಗಳಿಗೆ ನೀರು ನುಗ್ಗಿತ್ತು. ಪರಿಣಾಮ ಪ್ರವಾಹಕ್ಕೆ ಸಿಲುಕಿ 23 ಜನರು ನಾಪತ್ತೆಯಾಗಿದ್ದರು. ನಾಪತ್ತೆಯಾದವರಲ್ಲಿ 19 ಜನರ ಮೃತದೇಹವನ್ನು ಈಗಾಗಲೇ ಪತ್ತೆಹಚ್ಚಿದ್ದು, ಇನ್ನುಳಿದ 4 ಜನರಿಗಾಗಿ ಹುಡುಕಾಟ ಮುಂದುವರೆದಿದೆ.

ಪರಿಸ್ಥಿತಿ ಈಗ ನಿಯಂತ್ರಣದಲ್ಲಿದ್ದು, ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ಮೃತರ ಕುಟುಂಬಸ್ಥರಿಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ 4 ಲಕ್ಷ ಪರಿಹಾರ ಘೋಷಿಸಿದ್ದಾರೆ.

ABOUT THE AUTHOR

...view details