ಕರ್ನಾಟಕ

karnataka

ETV Bharat / bharat

ತಾಯಿಯ ಮೃತದೇಹ ನೋಡಿ ಅಮ್ಮಾ ಎಂದು ಕೂಗಿ ಪ್ರಾಣಬಿಟ್ಟ ಮಗ...!

ಯಾದಾದ್ರಿ ಭುವನಗಿರಿ (ತೆಲಂಗಾಣ): ಹೆತ್ತ ತಾಯಿ ಅಂದ್ರೆ ಎಲ್ಲ ಮಕ್ಕಳಿಗೂ ಇಷ್ಟನಾ ಅಲ್ಲವೇ. ಇದು ಸಹಜವಾದ ಪ್ರಕ್ರಿಯೆಯೂ ಹೌದು. ತಾಯಿ ನಮ್ಮನ್ನ ಬಿಟ್ಟು ಅಗಲಿದ್ರೇ ಒಂದು ಕ್ಷಣ ಹೃದಯ ಬಡಿತವೇ ನಿಲ್ಲುತ್ತೆ. ಹೌದು ಈ ಮಾತಿಗೆ ಇಂಬು ನೀಡುವಂತಹ ಘಟನೆ ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯಲ್ಲಿ ನಡೆದಿದೆ.

By

Published : Mar 20, 2019, 3:22 PM IST

ಕೃಪೆ: eenadu.net

ಭೂದಾನ್​ಪೊಚಂಪಲ್ಲಿ ನಿವಾಸಿ ಚೆರಿಪಲ್ಲಿ ಲಲಿತಾ (70) ಸೋಮವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹೈದರಾಬಾದ್​ನ ವನಸ್ಥಲೀಪುರಂನಲ್ಲಿ ಫೋಟೋಗ್ರಾಫರ್​ ಆಗಿ ಕೆಲಸ ಮಾಡುತ್ತಿದ್ದ ಲಲಿತಾ ಅವರ ಮಗ ಸುಂದರ್​ಗೆ (50) ತಾಯಿ ಮೃತಪಟ್ಟಿರುವ ಸುದ್ದಿ ತಿಳಿಸಿದ್ದಾರೆ.

ಸುಂದರ್ ತನ್ನ ಹೆಂಡ್ತಿ, ಮಗ ಮತ್ತು ಮಗಳೊಡನೆ ಸ್ವಗ್ರಾಮಕ್ಕೆ ತೆರಳಿದ್ದಾರೆ. ​ ತಾಯಿಯ ಮೃತದೇಹವನ್ನು ನೋಡಿದ ಸುಂದರ್​ ಕಣ್ಣೀರಿಡುತ್ತಲೇ ಅಮ್ಮಾ ಎಂದು ಜೋರಾಗಿ ಕೂಗಿ​​ ಕುಸಿದು ಬಿದ್ದಿದ್ದಾರೆ. ಸುಂದರ್​ಗೆ ಲಘು ಹೃದಯಾಘಾತವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್​ಗೆ ಕೊಂಡೊಯ್ಯುತ್ತಿರುವಾಗ ಮಾರ್ಗ ಮಧ್ಯೆದಲ್ಲೇ ಪ್ರಾಣಬಿಟ್ಟಿದ್ದಾರೆ. ಒಂದೇ ಮನೆಯಲ್ಲಿ ತಾಯಿ - ಮಗ ಮೃತಪಟ್ಟಿರುವುದರಿಂದ ಗ್ರಾಮದಲ್ಲಿ ವಿಷಾದದ ಛಾಯೆ ಮೂಡಿದೆ.

ಇನ್ನು ಹೆಂಡ್ತಿ, ಹಿರಿಯ ಮಗನನ್ನು ಕಳೆದುಕೊಂಡ ಸುಂದರ್​ ತಂದೆ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ತಾಯಿ ಜೊತೆಯೇ ಮಗನ ಅಂತ್ಯಕ್ರಿಯೆಯನ್ನೂ ನೆರವೇರಿಸಲಾಯಿತು.

ABOUT THE AUTHOR

...view details