ಕರ್ನಾಟಕ

karnataka

By

Published : Mar 24, 2019, 2:59 PM IST

Updated : Mar 24, 2019, 3:21 PM IST

ETV Bharat / bharat

'ಅಮೇಥಿಯಿಂದ ಓಡಿಹೋದ ರಾಹುಲ್​​': ಭಾಗ್​ ರಾಹುಲ್​ ಭಾಗ್ ಎಂದು ಸ್ಮೃತಿ ಟ್ವೀಟಾಸ್ತ್ರ

ಅಮೇಥಿಯಲ್ಲಿ ರಾಹುಲ್​ - ಸ್ಮೃತಿ ನಡುವೆ ಪೈಪೋಟಿ. ಮತ್ತೊಂದು ಕ್ಷೇತ್ರದ ಮೇಲೆ ರಾಗಾ ಕಣ್ಣು. ಟ್ವೀಟ್​ ಮೂಲಕ ಭಾಗ್​ ರಾಹುಲ್​ ಭಾಗ್​ ಅಂತಾ ರಾಗಾ ಕಾಲೆಳೆದ ಕೇಂದ್ರ ಸಚಿವೆ.

ಭಾಗ್​ ರಾಹುಲ್​ ಭಾಗ್ ಎಂದು ಕಿಚಾಯಿಸಿದ ಸ್ಮೃತಿ ಇರಾನಿ

ನವದೆಹಲಿ: ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಈ ಬಾರಿ ದಕ್ಷಿಣ ಭಾರತದಿಂದ ಸ್ಪರ್ಧಿಸುತ್ತಿದ್ದಾರೆ ಎಂಬ ವದಂತಿಯನ್ನೇ ಟೀಕಾಸ್ತ್ರವನ್ನಾಗಿ ಬಳಸಿಕೊಂಡಿರುವ ಬಿಜೆಪಿ, ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ​ ಕಾಲೆಳೆದಿದೆ.

ಕೇಂದ್ರ ಸಚಿವೆ ಸ್ಮೃತಿ ಇರಾನಿ ಟ್ವಿಟ್ಟರ್​ನಲ್ಲಿ ಭಾಗ್​ ರಾಹುಲ್​ ಭಾಗ್​ (ಓಡು ರಾಹುಲ್​ ಓಡು) ಎಂದು ಛೇಡಿಸಿದ್ದಾರೆ. ರಾಹುಲ್​ರನ್ನು ಅಮೇಥಿಯಿಂದ ಜನರು ಓಡಿಸಿದ್ದಾರೆ. ಜನರು ನಿಮ್ಮನ್ನು ತಿರಸ್ಕಾರ ಮಾಡಿದ್ದರಿಂದಲೇ ಬೇರೆ ಬೇರೆ ಕ್ಷೇತ್ರಗಳಿಂದ ಸ್ಪರ್ಧಿಸುತ್ತಾರೆಂಬ ಪ್ರಹಸನ ಸೃಷ್ಟಿಯಾಗಿದೆ ಎಂದು ಕುಟುಕಿದ್ದಾರೆ.

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಮೃತಿ ಇರಾನಿ ಅಮೇಥಿಯಿಂದಲೇ ಸ್ಪರ್ಧಿಸುತ್ತಿದ್ದಾರೆ.

ಕಳೆದ ಚುನಾವಣೆಯಲ್ಲಿ ಅಮೇಥಿಯಿಂದ ಸ್ಪರ್ಧಿಸಿ ಗೆದ್ದಿದ್ದ ರಾಹುಲ್​ಗೆ ಈ ಬಾರಿ ಕರ್ನಾಟಕ, ತಮಿಳುನಾಡಿನಿಂದ ಸ್ಪರ್ಧಿಸುವಂತೆ ಬೇಡಿಕೆ ಇದೆ. ರಾಹುಲ್​ ಅಮೇಥಿಯಿಂದಲೇ ಸ್ಪರ್ಧಿಸುತ್ತಾರೆಂದು ಕಳೆದ ತಿಂಗಳು ಕಾಂಗ್ರೆಸ್ ಸಹ ಹೇಳಿತ್ತು.

Last Updated : Mar 24, 2019, 3:21 PM IST

ABOUT THE AUTHOR

...view details