ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈ ಬಾರಿ ದಕ್ಷಿಣ ಭಾರತದಿಂದ ಸ್ಪರ್ಧಿಸುತ್ತಿದ್ದಾರೆ ಎಂಬ ವದಂತಿಯನ್ನೇ ಟೀಕಾಸ್ತ್ರವನ್ನಾಗಿ ಬಳಸಿಕೊಂಡಿರುವ ಬಿಜೆಪಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಾಲೆಳೆದಿದೆ.
ಕೇಂದ್ರ ಸಚಿವೆ ಸ್ಮೃತಿ ಇರಾನಿ ಟ್ವಿಟ್ಟರ್ನಲ್ಲಿ ಭಾಗ್ ರಾಹುಲ್ ಭಾಗ್ (ಓಡು ರಾಹುಲ್ ಓಡು) ಎಂದು ಛೇಡಿಸಿದ್ದಾರೆ. ರಾಹುಲ್ರನ್ನು ಅಮೇಥಿಯಿಂದ ಜನರು ಓಡಿಸಿದ್ದಾರೆ. ಜನರು ನಿಮ್ಮನ್ನು ತಿರಸ್ಕಾರ ಮಾಡಿದ್ದರಿಂದಲೇ ಬೇರೆ ಬೇರೆ ಕ್ಷೇತ್ರಗಳಿಂದ ಸ್ಪರ್ಧಿಸುತ್ತಾರೆಂಬ ಪ್ರಹಸನ ಸೃಷ್ಟಿಯಾಗಿದೆ ಎಂದು ಕುಟುಕಿದ್ದಾರೆ.