ನವದೆಹಲಿ:ಕನ್ನಡಿಯ ಮುಂದೆ ಸ್ವತಃ ತಯಾರಾಗುತ್ತಿರುವ ಚಿತ್ರವನ್ನು ಹಂಚಿಕೊಂಡಿರುವ ನಟಿ ಕಂಗನಾ ರನೌತ್ ಕಾರ್ಯಕ್ರಮದ ವ್ಯವಹಾರಗಳು 'ಮಾದಕವಾಗಿವೆ' ಎಂದು ಹೇಳಿದ್ದಾರೆ. ಇತ್ತೀಚೆಗೆ ಟ್ವಿಟರ್ನಲ್ಲಿ ತಮ್ಮ ಫೋಟೋ ಹಾಗೂ ಆಲೋಚನೆಗಳನ್ನು ಪೋಸ್ಟ್ ಮಾಡಿದ ನಟಿ, "ಪ್ರದರ್ಶನ ವ್ಯವಹಾರ" ಎಂದು ಶೀರ್ಷಿಕೆ ನೀಡಿದ್ದಾರೆ.
ಸಂಸದೆ ಜಯಾ ಬಚ್ಚನ್ ವಿರುದ್ಧ ಹರಿಹಾಯ್ದ ನಟಿ ಕಂಗನಾ
ಮಹಾರಾಷ್ಟ್ರ ಸರ್ಕಾರ ಮತ್ತು ಶಿವಸೇನೆ ಜೊತೆಗೆ ವಾರ್ ನಡೆಸಿ ಸುದ್ದಿಯಲ್ಲಿರುವ ಕಂಗನಾ, ಇದೀಗ ಸಮಾಜವಾದಿ ಪಕ್ಷದ ಸಂಸದೆ ಮತ್ತು ನಟಿ ಜಯಾ ಬಚ್ಚನ್ ಅವರ ವಿರುದ್ಧವೂ ಹರಿಹಾಯ್ದಿದ್ದಾರೆ. "ಚಿತ್ರರಂಗದ ಚಿತ್ರಣವನ್ನು ಕೆಡಿಸಲು ಪ್ರಯತ್ನಿಸುತ್ತಿರುವ ಜನರ ವಿರುದ್ಧ ಮಾಡಿದ ಟೀಕೆಗಳನ್ನು ಟೀಕಿಸಿದ್ದಾರೆ. ಅಷ್ಟೇ ಏಕೆ ಅವರ ಮಕ್ಕಳು ಇಂತಹ ವಿಚಾರದಲ್ಲಿ ಭಾಗಿಯಾಗಿದ್ದರೆ ಅವರು ಈ ನಿಲುವುಗಳನ್ನು ಪ್ರಶ್ನಿಸುತ್ತಾರೆಯೇ" ಎಂದು ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರ ಮತ್ತು ಶಿವಸೇನೆ ಜೊತೆಗೆ ವಾರ್ ನಡೆಸಿ ಸುದ್ದಿಯಲ್ಲಿರುವ ಕಂಗನಾ, ಇದೀಗ ಸಮಾಜವಾದಿ ಪಕ್ಷದ ಸಂಸದೆ ಮತ್ತು ನಟಿ ಜಯಾ ಬಚ್ಚನ್ ಅವರ ವಿರುದ್ಧವೂ ಹರಿಹಾಯ್ದಿದ್ದಾರೆ. "ಚಿತ್ರರಂಗದ ಚಿತ್ರಣವನ್ನು ಕೆಡಿಸಲು ಪ್ರಯತ್ನಿಸುತ್ತಿರುವ ಜನರ ವಿರುದ್ಧ ಮಾಡಿದ ಟೀಕೆಗಳನ್ನು ಟೀಕಿಸಿದ್ದಾರೆ. ಅಷ್ಟೇ ಏಕೆ ಅವರ ಮಕ್ಕಳು ಇಂತಹ ವಿಚಾರದಲ್ಲಿ ಭಾಗಿಯಾಗಿದ್ದರೆ ಅವರು ಈ ನಿಲುವುಗಳನ್ನು ಪ್ರಶ್ನಿಸುತ್ತಾರೆಯೇ" ಎಂದು ಪ್ರಶ್ನಿಸಿದ್ದಾರೆ.
ಶಿವಸೇನೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದೊಂದಿಗಿನ ಸಂಬಂಧದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ ಕಂಗನಾ ಸೋಮವಾರ ಮನಾಲಿಗೆ ಮರಳಿದ್ದಾರೆ. ಇನ್ನು ಇದಕ್ಕೂ ಮುಂಚೆ ಭಾನುವಾರ ಮಧ್ಯಾಹ್ನ ಕಂಗನಾ ಮತ್ತು ಅವರ ಸಹೋದರಿ ರಂಗೋಲಿ ಅವರು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶಾರಿ ಅವರನ್ನು ರಾಜ್ ಭವನದಲ್ಲಿ ಭೇಟಿಯಾದರು.