ಕರ್ನಾಟಕ

karnataka

ETV Bharat / bharat

ಕಮಲ ಕೈ ಬಿಟ್ಟು 'ಕೈ' ಹಿಡಿಯಲು ಮುಂದಾದ ಶತ್ರುಘ್ನ ಸಿನ್ಹಾ..! ರಾಗಾ ಸಮ್ಮುಖದಲ್ಲಿ ಸೋಮವಾರ ಪಕ್ಷ ಸೇರ್ಪಡೆ ?

ಪಾಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಸಿನ್ಹಾರನ್ನು ಬಿಜೆಪಿ ಕೈಬಿಟ್ಟ ಕೆಲ ದಿನಗಳಲ್ಲೇ ನಟ ಪಕ್ಷಾಂತರಕ್ಕೆ ಮುಂದಾಗಿದ್ದಾರೆ.

By

Published : Mar 26, 2019, 5:50 PM IST

Updated : Mar 26, 2019, 7:05 PM IST

ಶತ್ರುಘ್ನ ಸಿನ್ಹಾ

ಪಾಟ್ನಾ: ಬಿಜೆಪಿಯಲ್ಲಿದ್ದು ಅದೇ ಪಕ್ಷದ ನೀತಿಗಳನ್ನು ವಿರೋಧಿಸುತ್ತಿದ್ದ ನಟ,ರಾಜಕಾರಣಿ ಶತ್ರುಘ್ನ ಸಿನ್ಹಾ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸೋಮವಾರದಂದು ಶತ್ರುಘ್ನ ಸಿನ್ಹಾ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎನ್ನುವ ಖಚಿತ ಮಾಹಿತಿ ಹೊರಬಿದ್ದಿದೆ. ಪಾಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಸಿನ್ಹಾರನ್ನು ಬಿಜೆಪಿ ಕೈಬಿಟ್ಟ ಕೆಲ ದಿನಗಳಲ್ಲೇ ನಟ ಪಕ್ಷಾಂತರಕ್ಕೆ ಮುಂದಾಗಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಶತ್ರುಘ್ನ ಸಿನ್ಹಾ ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್​ನಿಂದ ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಸ್ಪರ್ಧೆ ನಡೆಸಲಿದ್ದಾರೆ ಎನ್ನುವ ಸುದ್ದಿಯೂ ಕೇಳಿಬಂದಿದೆ.

ಸದ್ಯ ಪಾಟ್ನಾ ಸಾಹಿಬ್ ಕ್ಷೇತ್ರದಿಂದ ರವಿಶಂಕರ್​ ಪ್ರಸಾದ್​ರನ್ನು ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಇದೀಗ ರವಿಶಂಕರ್ ಪ್ರಸಾದ್ ವಿರುದ್ಧ ಕಾಂಗ್ರೆಸ್​​ನಿಂದ ಶತ್ರುಘ್ನಾ ಸಿನ್ಹಾ ಕಣಕ್ಕಿಳಿಯೋದು ಪಕ್ಕಾ ಎನ್ನಲಾಗಿದೆ.

Last Updated : Mar 26, 2019, 7:05 PM IST

ABOUT THE AUTHOR

...view details