ಕರ್ನಾಟಕ

karnataka

By

Published : Nov 8, 2019, 4:18 PM IST

ETV Bharat / bharat

ನನಗೆ ಕೇಸರಿ ಮುಖವಾಡ ಧರಿಸಲು ಪ್ರಯತ್ನಗಳು ನಡೆಯುತ್ತಿವೆ: ರಜನಿಕಾಂತ್

ನಾನು ಎಲ್ಲಿಯೂ ಬಿಜೆಪಿ ಪಕ್ಷ ಸೇರುವುದಾಗಿ ಹೇಳಿಕೆ ನೀಡಿಲ್ಲ. ಆದರೆ ಕೆಲವು ವ್ಯಕ್ತಿಗಳು ಹಾಗು ಮಾಧ್ಯಮದವರು ನಾನು ಬಿಜೆಪಿ ಬಗ್ಗೆ ಒಲವು ಹೊಂದಿರುವುದಾಗಿ ವದಂತಿ ಹಬ್ಬಿಸಿದ್ದಾರೆ ಎಂದು ತಮಿಳು ನಟ ರಜನಿಕಾಂತ್​ ಹೇಳಿದ್ರು.

ರಜನಿಕಾಂತ್​​

ಚೆನ್ನೈ: ಕೆಲವು ಜನಪ್ರತಿನಿಧಿಗಳು ಹಾಗು ಮಾಧ್ಯಮಗಳು ನಾನು ಬಿಜೆಪಿ ಪಕ್ಷ ಸೇರಲಿದ್ದೇನೆ ಎಂದು ವದಂತಿ ಹಬ್ಬಿಸುತ್ತಿದ್ದಾರೆ. ಆದರೆ ಯಾವ ಪಕ್ಷ ಸೇರಿದರೆ ಒಳಿತು, ಏನು ನಿರ್ಧಾರ ಕೈಗೊಳ್ಳಬೇಕು ಎಂಬುದು ನನಗೆ ಬಿಟ್ಟಿದ್ದು ಎಂದು ತಮಿಳು ನಟ​​​ ರಜಿನಿಕಾಂತ್​ ಹೇಳಿದ್ದಾರೆ.

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್​ ಪ್ರತಿಕ್ರಿಯೆ​

ಚೆನ್ನೈನಲ್ಲಿ ನಿರ್ಮಿಸಲಾಗಿರುವ ಚಲನಚಿತ್ರ ನಿರ್ದೇಶಕ ದಿ. ಕೆ. ಬಾಲಚಂದರ್ ಅವರ ಪ್ರತಿಮೆ ಅನಾವರಣಗೊಳಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಬಿಜೆಪಿಯವನು ಹಾಗೂ ಆ ಪಕ್ಷದ ಮೇಲೆ ಒಲವು ಹೊಂದಿದ್ದೇನೆ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ನನಗೆ ಕೇಸರಿ ಮುಖವಾಡ ಧರಿಸುವ ಕೆಲಸ ನಡೆದಿದೆ. ಆದರೆ ಈ ಕುರಿತ ನಿರ್ಧಾರ ನನಗೆ ಬಿಟ್ಟಿದ್ದು ಎಂದು ರಜಿನಿ ತಿಳಿಸಿದ್ರು.

ABOUT THE AUTHOR

...view details