ಕರ್ನಾಟಕ

karnataka

ರೈತರ ಧರಣಿಗೆ ರಾಹುಲ್​ ಗಾಂಧಿ ಹಣ ನೀಡುತ್ತಿದ್ದಾರೆ: ಸುಶೀಲ್​ ಮೋದಿ ಆರೋಪ

By

Published : Jan 19, 2021, 1:42 PM IST

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಿರುದ್ಧ ಬಿಜೆಪಿ ಮುಖಂಡ ಸುಶೀಲ್​ ಕುಮಾರ್​ ಮೋದಿ ಗಂಭೀರ ಆರೋಪಗಳನ್ನು ಮಾಡಿ ಟ್ವೀಟ್​ ಮಾಡಿದ್ದಾರೆ.

sushil modi
ರಾಹುಲ್​ ಗಾಂಧಿ ವಿರುದ್ಧ ಸುಶೀಲ್​ ಮೋದಿ ಆರೋಪ

ಪಾಟ್ನಾ (ಬಿಹಾರ): ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕೇಂದ್ರದ ಕೃಷಿ ಕಾನೂನುಗಳ ವಿರುದ್ಧದ ರೈತರ ಪ್ರತಿಭಟನೆಗೆ ಧನಸಹಾಯ ಮಾಡುತ್ತಿದ್ದು, ಭಾರತದ ಆರ್ಥಿಕತೆ ಉರುಳಿಸಲು ರೈತರ ಬ್ರೇನ್​ ವಾಶ್​ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಸುಶೀಲ್​ ಕುಮಾರ್​ ಮೋದಿ ಆರೋಪಿಸಿದ್ದಾರೆ.

ಸರಣಿ ಟ್ವೀಟ್​ಗಳನ್ನು ಮಾಡಿರುವ ಸುಶೀಲ್​ ಮೋದಿ, ಹರಿಯಾಣ ಕಿಸಾನ್​ ಯೂನಿಯನ್​ ರಾಜ್ಯಾಧ್ಯಕ್ಷ ಗುರ್ನಾಮ್​ ಸಿಂಗ್​ ಅವರು ಕಾಂಗ್ರೆಸ್‌ನಿಂದ 10 ಕೋಟಿ ರೂ. ತೆಗೆದುಕೊಂಡಿರುವ ಆರೋಪ ಸುಳ್ಳಲ್ಲ. ಅದಕ್ಕಾಗಿಯೇ ಅವರನ್ನು ಅಮಾನತು ಮಾಡಲಾಗಿದೆ. ಕೃಷಿ ಕಾನೂನುಗಳ ವಿರೋಧದ ಹೋರಾಟದಲ್ಲಿ ರಾಹುಲ್​ ಗಾಂಧಿ ಜೊತೆಗೆ ಬಿಹಾರ ಸಂಸದರು ಇಲ್ಲ. 19 ಸದಸ್ಯರ ಪೈಕಿ ಯಾರೋ ಒಬ್ಬರು ಮಾತ್ರ ಸೇರಿಕೊಂಡಿದ್ದಕ್ಕೆ ಎಲ್ಲರನ್ನು ದೂಷಿಸಲಾಗುವುದಿಲ್ಲ ಎಂದರು.

ಇದನ್ನೂ ಓದಿ: ರೈತರ ಸಮಸ್ಯೆಯಿಂದ ಗಮನ ಬೇರೆಡೆ ಸೆಳೆಯಲು ರಾಮ ಮಂದಿರಕ್ಕೆ ದೇಣಿಗೆ ಸಂಗ್ರಹಿಸಲಾಗುತ್ತಿದೆ: ಅಖಿಲೇಶ್ ಯಾದವ್

ರಾಹುಲ್ ಗಾಂಧಿ ಒಂದು ಕಡೆ ರೈತ ಚಳವಳಿಗೆ ಧನಸಹಾಯ ನೀಡುತ್ತಿದ್ದರೆ, ಮತ್ತೊಂದೆಡೆ ಸರ್ಕಾರ ಮತ್ತು ಕೈಗಾರಿಕಾ ಸಂಸ್ಥೆಗಳ ವಿರುದ್ಧ ರೈತರಲ್ಲಿ ದ್ವೇಷ ಹುಟ್ಟುಹಾಕುವ ಮೂಲಕ ದೇಶದ ಆರ್ಥಿಕತೆಯನ್ನು ಉರುಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕ ಟ್ವೀಟ್​ ಮಾಡಿದ್ದಾರೆ.

ABOUT THE AUTHOR

...view details