ಕರ್ನಾಟಕ

karnataka

By

Published : Apr 2, 2020, 4:53 PM IST

ETV Bharat / bharat

ಕೊರೊನಾ ವಿರುದ್ಧ ಸೆಣಸಲಿದೆ ಎನ್​ಸಿಸಿ: ಅಧಿಕಾರಿಗಳಿಗೆ ಸಾಥ್ ನೀಡಲು ಸಜ್ಜು

ಕೊರೊನಾ ಹೊಡೆದೋಡಿಸಲು ದೇಶ ಹರಸಾಹಸ ಮಾಡುತ್ತಿದೆ. ಇದಕ್ಕೆ ಸಾಕಷ್ಟು ಸಂಘ ಸಂಸ್ಥೆಗಳು ಕೂಡಾ ಕೈ ಜೋಡಿಸಿ ಕೆಲಸ ಮಾಡುತ್ತಿವೆ. ಈಗ ಎನ್​ಸಿಸಿ ಕೂಡಾ ಕೊರೊನಾ ವಿರುದ್ಧ ಹೋರಾಡಲು ಮುಂದೆ ಬಂದಿದ್ದು, ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸಹಾಯ ಹಸ್ತ ಚಾಚಲಿದೆ.

Ncc
ಎನ್​ಸಿಸಿ

ನವದೆಹಲಿ: ಕೊರೊನಾ ವಿರುದ್ಧ ಹೋರಾಡಲು ನ್ಯಾಷನಲ್​ ಕೆಡೆಟ್​ ಕಾರ್ಪ್ಸ್ (ಎನ್​ಸಿಸಿ) ಮುಂದಾಗಿದೆ. ಕೊರೊನಾ ವಿರುದ್ಧ ಹೋರಾಡುತ್ತಿರುವ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಎನ್​​ಸಿಸಿ ಯೋಗದಾನ್​ ಕಾರ್ಯಕ್ರಮದ ಅಡಿಯಲ್ಲಿ ಸಹಾಯ ಹಸ್ತ ಚಾಚಲು ಮುಂದೆ ಬಂದಿದೆ.

ಈಗಿರುವ ಎನ್​ಸಿಸಿ ಅಭ್ಯರ್ಥಿಗಳಿಗೆ ತಾತ್ಕಾಲಿಕ ಉದ್ಯೋಗಾವಕಾಶವನ್ನು ನೀಡಲಿದ್ದು ಕೊರೊನಾ ವಿರುದ್ಧ ಹೋರಾಡಲು ತರಬೇತಿ ನೀಡಿ ಕಾರ್ಯಾಚರಣೆಗೆ ಇಳಿಸಲಿದೆ. ಸಹಾಯವಾಣಿ ಕೇಂದ್ರಗಳಲ್ಲಿ ನೆರವು, ಪರಿಹಾರ ಸಾಮಗ್ರಿಗಳ ಪೂರೈಕೆ, ಅಗತ್ಯ ವಸ್ತುಗಳ ವಿತರಣೆ, ಆಹಾರ ಪೂರೈಕೆ ಮುಂತಾದ ವಿಚಾರಗಳಲ್ಲಿ ಸರ್ಕಾರದ ಅಧಿಕಾರಿಗಳಿಗೆ ಸಹಕರಿಸಲಿದ್ದು, ಕಾನೂನು ಸುವ್ಯವಸ್ಥೆ, ಮಿಲಿಟರಿ ಕರ್ತವ್ಯಗಳಿರುವ ಜಾಗದಲ್ಲಿ ಕೆಲಸ ಮಾಡಲು ಎನ್​ಸಿಸಿ ಅಭ್ಯರ್ಥಿಗಳಿಗೆ ಅವಕಾಶವಿಲ್ಲ.

18 ವರ್ಷ ಮೇಲ್ಪಟ್ಟ ಎನ್​ಸಿಸಿ ಅಭ್ಯರ್ಥಿಗಳನ್ನು ಈ ಕರ್ತವ್ಯಕ್ಕೆ ನೇಮಿಸಲಾಗುತ್ತದೆ. 8ರಿಂದ 20 ಮಂದಿಯ ಸಣ್ಣ ಸಣ್ಣ ಗುಂಪುಗಳನ್ನು ರಚಿಸಲಿದ್ದು ಇದಕ್ಕೆ ಓರ್ವ ಆಫೀಸರ್​ನನ್ನು ನೇಮಕ ಮಾಡಲಾಗುತ್ತದೆ. ರಾಜ್ಯ ಸರ್ಕಾರ ಅಥವಾ ಜಿಲ್ಲಾಡಳಿತಗಳು ತಮಗೆ ಎನ್​ಸಿಸಿ ಸ್ವಯಂಸೇವಕರು ಬೇಕಾದಾಗ ಎನ್​ಸಿಸಿ ನಿರ್ದೇಶನಾಲಯಗಳ ಮೂಲಕ ವಿನಂತಿ ಕಳಿಸಬೇಕಾಗುತ್ತದೆ.

ರಕ್ಷಣಾ ಇಲಾಖೆಯಡಿಯಲ್ಲಿ ಎನ್​ಸಿಸಿ ಕಾರ್ಯನಿರ್ವಹಣೆ ಮಾಡುತ್ತಿದ್ದು ಭಾರತದ ಅತಿ ದೊಡ್ಡ ಯುವ ಸಂಘಟನೆಗಳಲ್ಲಿ ಒಂದಾಗಿದೆ. ಅವಶ್ಯಕತೆ ಇದ್ದಾಗ ಸಾಮಾಜಿಕ ಸೇವೆಯಲ್ಲಿ ಭಾಗಿಯಾಗೋದು ಮಾತ್ರವಲ್ಲದೇ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಕೂಡಾ ಪಾಲ್ಗೊಳ್ಳುತ್ತಿದೆ.

ABOUT THE AUTHOR

...view details