ಕರ್ನಾಟಕ

karnataka

By

Published : May 9, 2020, 7:39 AM IST

Updated : May 9, 2020, 8:43 AM IST

ETV Bharat / bharat

ಕೊರೊನಾದಿಂದ ಉದ್ಯೋಗಿ ಮೃತಪಟ್ಟರೆ ರಕ್ತಸಂಬಂಧಿಗೆ ಕೆಲಸ: ಬೃಹನ್ಮುಂಬೈ ವಿದ್ಯುತ್​, ಸಾರಿಗೆ ಸಂಸ್ಥೆ

ತನ್ನ ಉದ್ಯೋಗಿ ಕೊರೊನಾ ವೈರಸ್​ನಿಂದಾಗಿ ಮೃತಪಟ್ಟರೆ ಆ ವ್ಯಕ್ತಿಯ ರಕ್ತಸಂಬಂಧಿಯನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳುವುದಾಗಿ ಬೃಹನ್ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ ಸಂಸ್ಥೆ ತಿಳಿಸಿದೆ. ಇಲ್ಲಿಯವರೆಗೆ 64 ಉದ್ಯೋಗಿಗಳಿಗೆ ಸೋಂಕು ತಗುಲಿದ್ದ, ನಾಲ್ವರು ಸಾವನ್ನಪ್ಪಿದ್ದಾರೆ.

corona
corona

ಮುಂಬೈ (ಮಹಾರಾಷ್ಟ್ರ): ಕರ್ತವ್ಯನಿರತ ಉದ್ಯೋಗಿ ಕೊರೊನಾ ವೈರಸ್​ನಿಂದಾಗಿ ಮೃತಪಟ್ಟರೆ ಆ ವ್ಯಕ್ತಿಯ ರಕ್ತಸಂಬಂಧಿಯನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳುವುದಾಗಿ ಬೃಹನ್ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ (ಬೆಸ್ಟ್) ಸಂಸ್ಥೆ ತಿಳಿಸಿದೆ.

ರಕ್ತಸಂಬಂಧಿಗಳ ಶೈಕ್ಷಣಿಕ ಅರ್ಹತೆಗಳನ್ನು ಅವಲಂಬಿಸಿ II ಅಥವಾ IV ವರ್ಗದ ವಿಭಾಗಗಳಲ್ಲಿ ನೇಮಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಮೃತ ನೌಕರನ ಹೆಂಡತಿ ಅಥವಾ ಮಗ ಅಥವಾ ಅವಿವಾಹಿತ ಮಗಳಿಗೆ ಉದ್ಯೋಗ ನೀಡಲಾಗುವುದು. ಮೃತ ವ್ಯಕ್ತಿಯು ಸ್ನಾತಕೋತ್ತರನಾಗಿದ್ದರೆ, ಆ ಕೆಲಸವನ್ನು ಅವನ ಸಹೋದರ ಅಥವಾ ಅವಿವಾಹಿತ ಸಹೋದರಿಗೆ ನೀಡಲಾಗುವುದು" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಲ್ಲಿಯವರೆಗೆ, 64 ಉದ್ಯೋಗಿಗಳಿಗೆ ಸೋಂಕು ತಗುಲಿದ್ದ, ನಾಲ್ವರು ಸಾವನ್ನಪ್ಪಿದ್ದಾರೆ.

Last Updated : May 9, 2020, 8:43 AM IST

ABOUT THE AUTHOR

...view details