ಕರ್ನಾಟಕ

karnataka

ETV Bharat / bharat

ಧೋನಿಗೆ ವಿದಾಯ ಪಂದ್ಯ ಆಯೋಜಿಸಿದ್ರೆ ಜಾರ್ಖಂಡ್​ ಸರ್ಕಾರದ್ದೇ ಆತಿಥ್ಯ: ಹೇಮಂತ್‌ ಸೊರೇನ್‌

ಭಾರತೀಯ ಕ್ರಿಕೆಟ್‌ನ ಯಶಸ್ವಿ ನಾಯಕ ಹಾಗೂ ಭಾರತ ತಂಡದ ಮಾಜಿ ಕ್ಯಾಪ್ಟನ್​ ಮಹೇಂದ್ರ ಸಿಂಗ್‌ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಕುರಿತು ಜಾರ್ಖಂಡ್‌ ಸಿಎಂ ಹೇಮಂತ್ ಸೊರೇನ್‌ ಪ್ರತಿಕ್ರಿಯಿಸಿದ್ದಾರೆ.

By

Published : Aug 15, 2020, 9:52 PM IST

MS Dhoni
ಎಂಎಸ್​ ಧೋನಿ

ನವದೆಹಲಿ: ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿರುವ ಕುರಿತು ಮುಖ್ಯಮಂತ್ರಿ ಹೇಮಂತ್ ಸೊರೆನ್ ಪ್ರತಿಕ್ರಿಯಿಸಿ, ಎಂ.ಎಸ್.ಧೋನಿ ಅವರಿಗೆ ವಿದಾಯ ಪಂದ್ಯವನ್ನು ನಡೆಸಲು ನಾನು ಬಿಸಿಸಿಐಗೆ ಮನವಿ ಮಾಡಲು ಬಯಸುತ್ತೇನೆ. ಒಂದು ವೇಳೆ ಕ್ರಿಕೆಟ್​ ಪಂದ್ಯ ನಡೆಸಿದರೆ ಜಾರ್ಖಂಡ್ ಸರ್ಕಾರವೇ ಆತಿಥ್ಯ ವಹಿಸುತ್ತದೆ ಎಂದು ಕ್ರಿಕೆಟ್​ ಮಂಡಳಿಗೆ ಮನವಿ ಮಾಡಿದ್ದಾರೆ.

ಭಾರತೀಯ ಕ್ರಿಕೆಟ್‌ನ ಯಶಸ್ವಿ ನಾಯಕ ಹಾಗೂ ಭಾರತ ತಂಡದ ಮಾಜಿ ಕ್ಯಾಪ್ಟನ್​ ಮಹೇಂದ್ರ ಸಿಂಗ್‌ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.ಇದರೊಂದಿಗೆ ಸುಮಾರು ಒಂದು ವರ್ಷದಿಂದ ಅವರ ನಿವೃತ್ತಿಯ ಕುರಿತು ನಡೆಯುತ್ತಿದ್ದ ಚರ್ಚೆಗಳಿಗೆ ತೆರೆ ಎಳೆದಿದ್ದಾರೆ.

ABOUT THE AUTHOR

...view details