ಕರ್ನಾಟಕ

karnataka

By

Published : Aug 19, 2019, 11:39 PM IST

ETV Bharat / bharat

ಪೊಲೀಸಪ್ಪನನ್ನು ಬಾನೆಟ್​ ಮೇಲೆ ಕೂರಿಸಿಕೊಂಡು 2ಕಿ.ಮೀ.ವರೆಗೆ ಎಳೆದೊಯ್ದ ಡ್ರೈವರ್​!

ಅಡ್ಡಾದಿಡ್ಡಿ ಕಾರು ಓಡಿಸಿಕೊಂಡು ಬಂದ ಡ್ರೈವರ್​​ನನ್ನು ಹಿಡಿಯಲು ಹೋದ ಪೊಲೀಸ್​ ಪೇದೆಯನ್ನೇ ಕಾರಿನ ಬಾನೆಟ್​ ಮೇಲೆ ಕೂರಿಸಿಕೊಂಡು ಬರೋಬ್ಬರಿ 2 ಕಿ,ಮೀ ದೂರ ಎಳೆದೊಯ್ದಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.

driver ran with police

ನವದೆಹಲಿ:ಮಿತಿ ಮೀರಿದ ವೇಗದಲ್ಲಿ ಬರುತ್ತಿದ್ದ ಕಾರೊಂದನ್ನು ತಡೆದ ಪೊಲೀಸ್​ ಪೇದೆಗೆ ಡಿಕ್ಕಿ ಹೊಡೆದು ಆತನನ್ನು ಕಾರಿನ ಬಾನೆಟ್​ ಮೇಲೆ 2 ಕಿ.ಮೀ. ವರೆಗೂ ಕರೆದೊಯ್ದ ಘಟನೆ ಗುರುಗ್ರಾಮದಲ್ಲಿ ನಡೆದಿದೆ.

ಸೆಕ್ಟರ್​ 8ರಲ್ಲಿ ಕೆಲಸ ಮಾಡುತ್ತಿದ್ದ ಪೇದೆ ರೋಹಿತ್​ ಎಂಬುವವರು ಜ್ಯೋತಿ ಪ್ರಕಾಶ್​ ರಸ್ತೆಯಲ್ಲಿ ಬಿಳಿ ಬಣ್ಣದ ಕಾರೊಂದನ್ನು ತಡೆಯಲು ಯತ್ನಿಸಿದರು. ಆದರೆ, ಚಾಲಕ ಕಾರನ್ನು ನಿಲ್ಲಿಸದೆ ಪೇದೆಗೆ ನೇರವಾಗಿ ಡಿಕ್ಕಿ ಹೊಡೆದಿದ್ದಾನೆ.

ಪೊಲೀಸಪ್ಪನನ್ನು ಬಾನೆಟ್​ ಮೇಲೆ ಕೂರಿಸಿಕೊಂಡು 2ಕಿ.ಮೀ.ವರೆಗೆ ಎಳೆದೊಯ್ದ ಡ್ರೈವರ್​

ಡಿಕ್ಕಿಯ ರಭಸಕ್ಕೆ ಕಾರಿನ ಬಾನೆಟ್​ಅನ್ನು ಬಿಗಿಯಾಗಿ ಹಿಡಿದ ಪೇದೆಯು ಕಾರನ್ನು ನಿಲ್ಲಿಸುವಂತೆ ಎಷ್ಟೇ ಮನವಿ ಮಾಡಿದರೂ ಚಾಲಕ ನಿಲ್ಲಿಸದೆ ಸುಮಾರು ಎರಡು ಕಿ.ಮೀ. ವರೆಗೆ ಎಳೆದೊಯ್ದಿದ್ದಾನೆ. ಇದನ್ನು ಕಂಡ ಯುವಕನೊಬ್ಬ ಪೊಲೀಸರಿಗೆ ಮಾಹಿತಿ ಮುಟ್ಟಿಸಿದಾಗ ಕಾರನ್ನು ಟ್ರೇಸ್​ ಮಾಡಲು ಯತ್ನಿಸಲಾಯಿತು. ಆದರೆ, ಚಾಲಕ ಪೇದೆಯನ್ನು ಮಧ್ಯ ದಾರಿಯಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

ಕಾರು ಪೇದೆಯನ್ನು ಬಾನೆಟ್​ ಮಾಲೆ ಹೊತ್ತು ಮುಂದಕ್ಕೆ ಚಲಿಸುತ್ತಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಫುಟೇಜ್​ಗಳ ನೆರವಿನಿಂದ ಕಾರಿನ ಮಾಲಿಕನ ಗುರುತು ಪತ್ತೆಹಚ್ಚಲು ಪೊಲೀಸರು ಯತ್ನಿಸುತ್ತಿದ್ದಾರೆ. ಸದ್ಯ ಪೇದೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ.

ಗುರುಗ್ರಾಮದಲ್ಲಿ ಇಂಥ ಘಟನೆಗಳು ಸಾಮಾನ್ಯವಾಗಿವೆ. ಕಳೆದ ಎರಡು ತಿಂಗಳಿನಲ್ಲಿ ನಡೆದ ಮೂರನೇ ಘಟನೆ ಇದಾಗಿದೆ.

ABOUT THE AUTHOR

...view details