ಕರ್ನಾಟಕ

karnataka

By

Published : Aug 13, 2019, 12:08 PM IST

ETV Bharat / bharat

ಸುಪ್ರೀಂ ಮೆಟ್ಟಿಲೇರಿದ ಅನರ್ಹ ಶಾಸಕರು.. ತುರ್ತು ವಿಚಾರಣೆಗೆ ಮನವಿ

ಸ್ಪೀಕರ್​ ರಮೇಶ್ ಕುಮಾರ್​ ಆದೇಶ ಪ್ರಶ್ನಿಸಿ, ಎಲ್ಲ 17 ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ಸುಪ್ರೀಂ

ನವದೆಹಲಿ/ಬೆಂಗಳೂರು: ಸ್ಪೀಕರ್​ ರಮೇಶ್​ ಕುಮಾರ್​, ರಾಜೀನಾಮೆ ನೀಡಿದ ಎಲ್ಲ 17 ಶಾಸಕರನ್ನು ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಅನರ್ಹ ಮಾಡಿ ಆದೇಶ ಹೊರಡಿಸಿದ್ದರು.

ಸ್ಪೀಕರ್​ ರಮೇಶ್ ಕುಮಾರ್​ ಆದೇಶ ಪ್ರಶ್ನಿಸಿ, ಎಲ್ಲ 17 ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ಸ್ಪೀಕರ್​ ಆದೇಶ ನೀಡಿದ ಕೆಲ ದಿನಗಳಲ್ಲಿ ಇವರೆಲ್ಲ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ಸುಪ್ರೀಂಕೋರ್ಟ್​ ಇವರ ಅರ್ಜಿಯನ್ನ ಕೈಗೆತ್ತಿಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲ 17 ಅನರ್ಹ ಶಾಸಕರು, ಈ ಅರ್ಜಿಯ ವಿಚಾರಣೆಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳುವಂತೆ ಇಂದು ಸುಪ್ರೀಂಕೋರ್ಟ್​ಗೆ ಮನವಿ ಮಾಡಿದ್ದಾರೆ.

ರಮೇಶ್​ ಕುಮಾರ್​ ಈ ಎಲ್ಲ ಶಾಸಕರು ಬಾಕಿ ಉಳಿದಿರುವ ವಿಧಾನಸಭೆ ಅವಧಿಯಲ್ಲಿ ಯಾವುದೇ ಉಪ ಚುನಾವಣೆ ಸೇರಿದಂತೆ ಇನ್ನಿತರ ಚಟುವಟಿಕೆಯಲ್ಲಿ ಭಾಗಿಯಾಗದಂತೆ ಶಾಸಕರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು.

ABOUT THE AUTHOR

...view details