ಕರ್ನಾಟಕ

karnataka

By

Published : Aug 23, 2020, 11:38 AM IST

ETV Bharat / bharat

ಸ್ವಗ್ರಾಮದಲ್ಲಿ ಐಸಿಸ್ ಉಗ್ರನನ್ನ ವಶಕ್ಕೆ ಪಡೆದ ದೆಹಲಿ ಪೊಲೀಸರು

ನಿನ್ನೆ ದೆಹಲಿಯಲ್ಲಿ ಬಂಧಿಸಲ್ಪಟ್ಟ ಐಸಿಸ್ ಉಗ್ರ ಅಬು ಯೂಸುಫ್​ನನ್ನು ದೆಹಲಿಯಿಂದ ಉತ್ತರ ಪ್ರದೇಶದಲ್ಲಿನ ಆತನ ಸ್ವಗ್ರಾಮವಾದ ಬಾದ್ಯಾ ಭೈಸಾಹಿಗೆ ಕರೆತರಲಾಗಿತ್ತು. ಗ್ರಾಮದಲ್ಲಿ ತಪಾಸಣೆ ನಡೆಸಿದ ಬಳಿಕ ಮತ್ತೆ ಈಗ ಉಗ್ರನನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Delhi Police
ಸ್ವಗ್ರಾಮದಲ್ಲಿ ಐಸಿಸ್ ಉಗ್ರನನ್ನ ವಶಕ್ಕೆ ಪಡೆದ ದೆಹಲಿ ಪೊಲೀಸರು

ಬಲರಾಂಪುರ (ಉತ್ತರ ಪ್ರದೇಶ): ದೆಹಲಿಯಲ್ಲಿ ಬಂಧಿಸಲ್ಪಟ್ಟ ಐಸಿಸ್ ಉಗ್ರ ಅಬು ಯೂಸುಫ್​ನನ್ನು ಉತ್ತರ ಪ್ರದೇಶದಲ್ಲಿನ ಆತನ ಸ್ವಗ್ರಾಮದಲ್ಲಿಂದು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಿನ್ನೆ ದೆಹಲಿಯ ರಿಡ್ಜ್ ರಸ್ತೆಯ ಧೌಲಾ ಕುವಾನ್ ಪ್ರದೇಶದಲ್ಲಿ ವಿಶೇಷ ಪೊಲೀಸ್ ಘಟಕದ ಅಧಿಕಾರಿಗಳು ಅಬು ಯೂಸುಫ್​ನನ್ನು ಬಂಧಿಸಿ, ಭಾರಿ ಪ್ರಮಾಣದ ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ವಶಪಡಿಸಿಕೊಂಡಿದ್ದರು. ಬಳಿಕ ಐಇಡಿಗಳನ್ನು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಎಸ್‌ಜಿ) ಕಮಾಂಡೋಗಳು ನಿಷ್ಕ್ರಿಯಗೊಳಿಸಿದ್ದರು.

ದೆಹಲಿಯಲ್ಲಿ ನಿನ್ನೆ ಬಂಧಿಸಲ್ಪಟ್ಟ ಐಸಿಸ್ ಉಗ್ರ ಅಬು ಯೂಸುಫ್

ಯೂಸುಫ್​ನನ್ನು ಬಂಧಿಸಿದ ವಿಶೇಷ ಪೊಲೀಸ್ ಘಟಕದ ಅಧಿಕಾರಿಗಳು, ದೆಹಲಿಯ ತಮ್ಮ ಕಚೇರಿಗೆ ಕರೆತಂದಿದ್ದರು. ವಿಚಾರಣೆ ವೇಳೆ ಆತ ಕೆಲವು ತಿಂಗಳ ಹಿಂದೆ ತನ್ನ ಗ್ರಾಮದಲ್ಲಿ ಸ್ಫೋಟಕಗಳ ಪರೀಕ್ಷೆ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಹೀಗಾಗಿ ಉಗ್ರ ಯೂಸುಫ್​ನನ್ನು ದೆಹಲಿಯಿಂದ ಉತ್ತರ ಪ್ರದೇಶದಲ್ಲಿನ ಆತನ ಸ್ವಗ್ರಾಮವಾದ ಬಾದ್ಯಾ ಭೈಸಾಹಿಗೆ ಕರೆತರಲಾಗಿತ್ತು. ಗ್ರಾಮದಲ್ಲಿ ತಪಾಸಣೆ ನಡೆಸಿದ ಬಳಿಕ ಮತ್ತೆ ಈಗ ಉಗ್ರನನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ABOUT THE AUTHOR

...view details