ಕರ್ನಾಟಕ

karnataka

ETV Bharat / bharat

'ಕೈ'​ ಪ್ರಣಾಳಿಕೆ ಎಲೆಕ್ಷನ್​ ರಿಸಲ್ಟ್​ ದಿನ ಅಂತ್ಯ: ಕಾಂಗ್ರೆಸ್​, ದೀದಿ ವಿರುದ್ಧ ಪ್ರಧಾನಿ ವಾಗ್ದಾಳಿ

ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ಮೋದಿ ಚುನಾವಣಾ ರ್ಯಾಲಿಯಲ್ಲಿ ಭಾಗಿಯಾಗಿದ್ದು, ಮಮತಾ ಬ್ಯಾನರ್ಜಿ ಹಾಗೂ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

By

Published : Apr 3, 2019, 5:15 PM IST

Updated : Apr 3, 2019, 5:24 PM IST

ನರೇಂದ್ರ ಮೋದಿ

ಸಿಲಿಗುರಿ(ಪಶ್ಚಿಮ ಬಂಗಾಳ): ಲೋಕಸಭಾ ಚುನಾವಣೆ ದಿನ ರಂಗೇರಿದೆ. ಆಡಳಿತ - ಪ್ರತಿಪಕ್ಷಗಳ ನಡುವಿನ ಮಾತಿನ ಸಮರ ಜೋರಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಡ ತಮ್ಮ ಭಾಷಣದ ಮೂಲಕ ವಿರೋಧ ಪಕ್ಷಗಳ ಮೇಲೆ ಹರಿ ಹಾಯುತ್ತಿದ್ದಾರೆ.

ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ಹಾಗೂ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದರು. ಪಶ್ಚಿಮ ಬಂಗಾಳದಲ್ಲಿ ಸ್ಪೀಡ್​ ಬ್ರೇಕರ್ ತರಹ ಮಮತಾ ಬ್ಯಾನರ್ಜಿ ಕೆಲಸ ಮಾಡುತ್ತಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಅವರು ತಡೆಗೋಡೆಯಾಗಿದ್ದಾರೆ. ಅವರನ್ನ ತಡೆದು ಹಾಕಿದಾಗ ಮಾತ್ರ ಅಭಿವೃದ್ಧಿ ಕಾರ್ಯ ವೇಗ ಪಡೆದುಕೊಳ್ಳಲಿದೆ ಎಂದರು. ಪಾಕಿಸ್ತಾನದ ಬಾಲಕೋಟ್​ ಮೇಲೆ ನಾವು ನಡೆಸಿರುವ ದಾಳಿ ಮಮತಾ ಬ್ಯಾನರ್ಜಿಗೆ ತುಂಬಾ ನೋವಾಗಿದೆ. ಹೀಗಾಗಿ ಅವರು ದಾಳಿಗೆ ಸಂಬಂಧಿಸಿದಂತೆ ಪುರಾವೆ ಕೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇತ್ತ ಕಾಂಗ್ರೆಸ್​ ವಿರುದ್ಧ ದಾಳಿ ನಡೆಸಿದ ಮೋದಿ, ಕಾಂಗ್ರೆಸ್​ ಪಕ್ಷ ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಕೆ ಎಲೆಕ್ಷನ್​ ಫಲಿತಾಂಶದ ದಿನ ಅಂತ್ಯಗೊಳ್ಳಲಿದೆ ಎಂದರು.

Last Updated : Apr 3, 2019, 5:24 PM IST

ABOUT THE AUTHOR

...view details