ಕರ್ನಾಟಕ

karnataka

ತಮಿಳುನಾಡಿನಲ್ಲಿ ಅಪಘಾತ: ಕರ್ನಾಟಕದ ಉದ್ಯಮಿ ಸೇರಿ ಐವರ ದುರ್ಮರಣ

ತಮಿಳುನಾಡಿನ ತಿರುವನಮಲೈನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ. ಬೆಂಗಳೂರಿನ ಕೋರಮಂಗಲದಲ್ಲಿ ಗ್ರಾನೈಟ್​ ಉದ್ಯಮಿ ಕುಟುಂಬ ಎಂದು ತಿಳಿದು ಬಂದಿದೆ.

By

Published : Aug 13, 2019, 3:55 PM IST

Published : Aug 13, 2019, 3:55 PM IST

ETV Bharat / bharat

ತಮಿಳುನಾಡಿನಲ್ಲಿ ಅಪಘಾತ: ಕರ್ನಾಟಕದ ಉದ್ಯಮಿ ಸೇರಿ ಐವರ ದುರ್ಮರಣ

ಅಪಘಾತದಲ್ಲಿ ಕರ್ನಾಟಕ ಉದ್ಯಮಿ ಮೃತ

ಬೆಂಗಳೂರು:ತಮಿಳುನಾಡಿನ ತಿರುವನಮಲೈನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಕೋರಮಂಗಲದಲ್ಲಿ ಗ್ರಾನೈಟ್​ ಉದ್ಯಮ ನಡೆಸುತ್ತಿದ್ದ ನಗರದ ಉದ್ಯಮಿ ಶ್ರೀನಾಥ್​ ರೆಡ್ಡಿ, ಪತ್ನಿ ಚಂದ್ರಮಾಲಾ ಪುತ್ರಿ ಶಾಲಿನಿ ಪುತ್ರ ಭರತ್​ ಹಾಗೂ ಅಳಿಯಸಂದೀಪ್​ ಈ ದುರಂತದಲ್ಲಿ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.

ಅಪಘಾತದಲ್ಲಿ ಕರ್ನಾಟಕ ಉದ್ಯಮಿ ಮೃತ

ಮೃತರೆಲ್ಲರೂ ಅಣ್ಣಮಲೈಯರ್​ ದರ್ಶನಕ್ಕೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಇವರು ತೆರಳುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details