ಕರ್ನಾಟಕ

karnataka

ETV Bharat / bharat

ಶನಿವಾರದ ರಾಶಿ ಭವಿಷ್ಯ : ವೃಶ್ಚಿಕ ರಾಶಿಯವರಿಗೆ ಸಂಕಷ್ಟ ಸಾಧ್ಯತೆ

ಶನಿವಾರದ ರಾಶಿ ಫಲ

By

Published : Aug 31, 2019, 5:48 AM IST

astrology

ಮೇಷ:ನಿಮಗೆ ಮಕ್ಕಳಿದ್ದರೆ ಅವರನ್ನು ನೀವು ಇಂದು ಹಾಳು ಮಾಡುತ್ತೀರಿ. ಇಂತಹ ದಿನಗಳಲ್ಲಿ ನೀವು ಕಠಿಣ ಪರಿಶ್ರಮ ಪಡಬೇಕು. ನೀವು ಬಾಕಿ ಇರುವ ಕೆಲಸಗಳನ್ನೂ ಮುಗಿಸುತ್ತೀರಿ, ಮತ್ತು ವೈದ್ಯ ವೃತ್ತಿ ಮತ್ತು ಸಾರ್ವಜನಿಕ ಸೇವೆಗಳಲ್ಲಿ ಇರುವವರಿಗೆ ಉತ್ಪಾದಕ ದಿನವಾಗಿದೆ.

ವೃಷಭ:ಇಂದು ನಿಮ್ಮ ಸೃಜನಶೀಲ ಪ್ರವೃತ್ತಿ ನಿಮ್ಮ ಸ್ಪರ್ಧಾತ್ಮಕತೆಯ ಭಾಗಕ್ಕೆ ಪೂರಕವಾಗಿರುತ್ತದೆ. ನಿಮ್ಮ ದಕ್ಷತೆ ಗುರುತಿಸದೇ ಹೋಗುವುದಿಲ್ಲ ಮತ್ತು ನೀವು ನಿಮ್ಮ ಕಾರ್ಯವೈಖರಿಯಿಂದ ಪ್ರತಿಯೊಬ್ಬರನ್ನೂ ಆಶ್ಚರ್ಯಗೊಳಿಸುತ್ತೀರಿ. ನೀವು ಇಂದು ನಿಮ್ಮ ಸಹೋದ್ಯೋಗಿಗಳನ್ನು ಖಂಡಿತಾ ಪ್ರೇರೇಪಣೆ ಮತ್ತು ಪ್ರಭಾವಿತಗೊಳಿಸುತ್ತೀರಿ.

ಮಿಥುನ: ನೀವು ಇಂದು ಭಾವನೆಗಳ ಚಕ್ರಸುಳಿಯನ್ನು ಅನುಭವಿಸುವ ಸಾಧ್ಯತೆ ಇದ್ದು ನೀವು ನಿಮ್ಮ ಮೆದುಳಿಗೆ ಬದಲಾಗಿ ಹೃದಯಕ್ಕೆ ಆದ್ಯತೆ ನೀಡುತ್ತೀರಿ. ಇದು ಹಿಂದಕ್ಕೆ ಹೊಡೆಯುತ್ತದೆ, ಏಕೆಂದರೆ ನಿಮಗೆ ಯಾರಿಗೆ ಮನಸ್ಸಿನಲ್ಲಿ ಒಳ್ಳೆಯ ಉದ್ದೇಶವಿದೆ ಅಥವಾ ಯಾರಿಗೆ ಕೆಟ್ಟ ಉದ್ದೇಶವಿದೆ ಎಂದು ನಿಮಗೆ ತಿಳಿಯುವುದಿಲ್ಲ. ಆದರೆ ಇದು ಬಹಳ ಕಾಲ ಉಳಿಯುವುದಿಲ್ಲ, ಏಕೆಂದರೆ ಸಂಜೆ ನಿಮಗೆ ಶುಭಸುದ್ದಿ ತರಬಹುದು.

ಕರ್ಕಾಟಕ:ನೀವು ಭವಿಷ್ಯಕ್ಕಾಗಿ ಯೋಜಿಸುತ್ತಿರುವುದರಿಂದ ನಿಮ್ಮ ದಿನ ಸ್ಫೂರ್ತಿದಾಯಕ ರೀತಿಯಲ್ಲಿ ಪ್ರಾರಂಭವಾಗುತ್ತದೆ. ನೀವು ನಿಮ್ಮ ವಿವರವಾದ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತೀರಿ. ಭವಿಷ್ಯವನ್ನು ಯೋಜಿಸುವುದರಿಂದ, ನೀವು ಇತರೆ ಕೆಲಸಗಳನ್ನು ಮಾಡಲು ಸಾಕಷ್ಟು ಸಮಯ ಉಳಿಸುತ್ತೀರಿ. ನೀವು ಕೈಗೊಳ್ಳುವ ಪ್ರತಿ ಕೆಲಸವೂ ದಿನದ ಅಂತ್ಯಕ್ಕೆ ಉತ್ಸಾಹಕರ ಫಲಿತಾಂಶಗಳನ್ನು ನೀಡುತ್ತದೆ.

ಸಿಂಹ:ಹೊಸ ಉದ್ಯಮಗಳು ಮತ್ತು ಗುರಿಗಳು ನಿಮ್ಮ ಜೊತೆಯಲ್ಲಿರುವ ಸಾಧ್ಯತೆ ಇದೆ. ನೀವು ಏನೇ ಕೈಗೊಂಡರೂ ಅದನ್ನು ಸಮರ್ಥವಾಗಿ ಪೂರ್ಣಗೊಳಿಸುತ್ತೀರಿ. ನಿಮ್ಮ ಬಾಂಧವ್ಯದಲ್ಲಿ ಕೊಂಚ ತೊಂದರೆ ಎದುರಿಸಿದರೂ ಸುಲಭವಾಗಿ ನಿಭಾಯಿಸಬಹುದಾದ ಮತ್ತು ಪರಿಹರಿಸಬಹುದಾದ ಯಾವುದೂ ಇಲ್ಲ.

ಕನ್ಯಾ:ನೀವು ಇಂದು ಕೌಟುಂಬಿಕ ವಿಷಯಗಳ ಪ್ರಾಮುಖ್ಯತೆಯನ್ನು ಅರಿಯುತ್ತೀರಿ. ಸಂಧಾನ ಮಾತುಕತೆಗಳ ವಿಷಯಕ್ಕೆ ಬಂದರೆ ನಿಮಗೆ ಮಹತ್ತರ ಕೌಶಲ್ಯಗಳಿವೆ, ಮತ್ತು ನೀವು ಅದನ್ನು ವಿವಾದಗಳನ್ನು ಇತ್ಯರ್ಥಪಡಿಸಲು ಬಳಸುತ್ತೀರಿ. ನೀವು ಜೀವನದ ಪಾಠಗಳನ್ನು ಕಲಿತಿದ್ದೀರಿ ಮತ್ತು ವಿರೋಧ ಪ್ರಗತಿಗೆ ದಾರಿಯಾಗುತ್ತದೆ ಎಂದು ದೃಢವಾಗಿ ನಂಬುತ್ತೀರಿ.

ತುಲಾ:ನಿಮ್ಮ ದಿನ ಕುಟುಂಬದ ವಿನೋದದ ಸಮಯದೊಂದಿಗೆ ತುಂಬಿರುತ್ತದೆ. ನಿಮ್ಮ ಮನಸ್ಥಿತಿಯು ನಿಮ್ಮ ಕುಟುಂಬವನ್ನು ಹೊರಗಡೆ ಸುತ್ತಾಡಲು ಕರೆದೊಯ್ಯುವುದು ಅಥವಾ ಪಾರ್ಟಿ ಅಥವಾ ಸಂತೋಷಕೂಟ ಆಯೋಜಿಸುವಂತಿದೆ. ನೀವು ಧಾರ್ಮಿಕ ಸುತ್ತಾಟ ಯೋಜಿಸಲಿದ್ದು ಅದರ ಮೂಲಕ ನೀವು ದೇವರ ಆಶೀರ್ವಾದ ಪಡೆಯುತ್ತೀರಿ.

ವೃಶ್ಚಿಕ:ನೀವು ಸಾಕಷ್ಟು ಸಂಕಷ್ಟ ಅನುಭವಿಸುತ್ತೀರಿ, ಇಂದು ನಿಮ್ಮ ಭಾವನೆಗಳನ್ನು ಹೊರಹಾಕಲು ಸೂಕ್ತವಾದ ದಿನ. ನೀವು ಒತ್ತಡದಿಂದ ಸೋತುಹೋದ ಭಾವನೆ ಅನುಭವಿಸುತ್ತೀರಿ ಮತ್ತು ಆದ್ದರಿಂದ ನಿಮ್ಮ ಕುಟುಂಬ ಮತ್ತು ಮಿತ್ರರೊಂದಿಗೆ ಕೊಂಚ ಸಮಯ ಕಳೆಯುವುದು ಸೂಕ್ತ.

ಧನು:ನೀವು ಕಠಿಣ ಕೆಲಸಗಾರರು ಮತ್ತು ಬಹುಕಾರ್ಯಗಳನ್ನು ಮಾಡುವುದು ಇಂದು ನಿಮಗೆ ಬಲವಾದ ಅಂಶವಾಗುತ್ತದೆ. ನೀವು ಕೆಲವು ಸವಾಲುಗಳನ್ನು ಎದುರಿಸಬಹುದು ಆದರೆ ನಿಮ್ಮ ದೃಢತೆಯನ್ನು ನಂಬಿರಿ ಮತ್ತು ನಿಮ್ಮ ಸಹಜ ಪ್ರವೃತ್ತಿಗೆ ಹಿಂದಿರುಗಿರಿ. ನಿಮಗೆ ಇದು ಸರಾಗವಾಗಿಲ್ಲದೇ ಇರಬಹುದು, ಆದರೆ ಕೆಲ ಕಷ್ಟಗಳಿಲ್ಲದೆ ಜೀವನವಾದರೂ ಎಂಥದ್ದು?

ಮಕರ:ನೀವು ಸದೃಢ ಮತ್ತು ಆದರಪೂರ್ವಕವಾಗಿರುತ್ತೀರಿ, ಮತ್ತು ಯಾವುದೇ ಆರೋಗ್ಯದ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿಲ್ಲ. ಬಾಕಿ ಕೆಲಸವನ್ನು ಪೂರ್ಣಗೊಳಿಸಲು ನಿಮಗೆ ಕಷ್ಟವೆನಿಸಿದರೂ, ಅದು ಅಸಾಧ್ಯವಾದ ಕೆಲಸವಲ್ಲ. ನೀವು ಸಕಾಲದಲ್ಲಿ ಕೆಲಸ ಪೂರ್ಣಗೊಳಿಸದೆ ನಿಮ್ಮ ಬಾಸ್ ಅಸಮಾಧಾನಕ್ಕೆ ಕಾರಣವಾಗುವ ಸಾಧ್ಯತೆ ಇದೆ. ನೀವು ಇಂದು, ಹಣಕಾಸಿಗೆ ಸಂಬಂಧಿಸಿದ ವಿಷಯಗಳನ್ನು ಮುಂದೂಡಲು ಬಯಸಬಹುದು.

ಕುಂಭ:ಇಂದು ನೀವು ನಿಮ್ಮ ಪ್ರೀತಿಪಾತ್ರರ ಜೊತೆಯಲ್ಲಿ ಆನಂದಿಸುತ್ತೀರಿ. ಪಿಕ್​ನಿಕ್ ಮತ್ತು ಶಾಪಿಂಗ್ ನಿಮ್ಮ ಮಾಡಲೇಬೇಕಾದ ಪಟ್ಟಿಯಲ್ಲಿವೆ. ಕುಟುಂಬದೊಂದಿಗೆ ಪ್ರೀತಿ ಮತ್ತು ಸಂಭ್ರಮ ನಿಮ್ಮ ತಾರೆಗಳು ಸೂಚಿಸುತ್ತಿವೆ.

ಮೀನ:ನೀವು ಜನರನ್ನು ಅರ್ಥ ಮಾಡಿಕೊಳ್ಳಲು ಮತ್ತು ಅವರೊಂದಿಗೆ ಅಗತ್ಯವಿರುವಾಗ ಅನುಕರಿಸಲು ಸಮರ್ಥರಾಗುತ್ತೀರಿ. ಇದು ನಿಮಗೆ ಅವರ ಆಶೀರ್ವಾದ ಪಡೆದುಕೊಳ್ಳಲು ನೆರವಾಗುತ್ತದೆ. ನೀವು ನಿಮ್ಮನ್ನು ಸಮರ್ಥ ಬಾಸ್, ಸಹ-ಕೆಲಸಗಾರ, ಸಂಗಾತಿ ಮತ್ತು ಒಡಹುಟ್ಟಿದವರಂತೆ ಸಾಬೀತುಪಡಿಸಿಕೊಳ್ಳುತ್ತೀರಿ. ಇದು ನಿಮ್ಮನ್ನು ವ್ಯಕ್ತಿಯಾಗಿ ವ್ಯಾಖ್ಯಾನಿಸುವುದರಿಂದ ಈ ಸದ್ಗುಣಗಳನ್ನು ಕಳೆದುಕೊಳ್ಳುವುದು ಒಳ್ಳೆಯದಲ್ಲ.

ABOUT THE AUTHOR

...view details