ಕರ್ನಾಟಕ

karnataka

By

Published : Dec 15, 2020, 1:08 PM IST

ETV Bharat / bharat

ಮಹಿಳೆಯ ರಕ್ಷಿಸಲು ಹೋದ ಪತ್ರಕರ್ತನ ಮೇಲೆ ಹಲ್ಲೆ

ಮಹಿಳೆ ಮೇಲೆ ನಡೆಯುತ್ತಿದ್ದ ಹಲ್ಲೆ ತಪ್ಪಿಸಲೆತ್ನಿಸಿದ ಪತ್ರಕರ್ತನ ಮೇಲೆಯೇ ಹಲ್ಲೆ ನಡೆಸಿದ ಆರೋಪಿಯನ್ನು ಬಂಧಿಸಲಾಗಿದೆ.

Assam based journalist attacked while saving a helpless woman
ಹಲ್ಲೆಗೊಳಗಾದ ಪತ್ರಕರ್ತ ಅಫ್ನೂರ್ ಅಲಿ

ಗುವಾಹಟಿ (ಅಸ್ಸೋಂ):ತೊಂದರೆಗೊಳಗಾಗಿದ್ದ ಅಪರಿಚಿತ ಮಹಿಳೆಯನ್ನು ರಕ್ಷಿಸಲು ಹೋದ ಪತ್ರಕರ್ತನೋರ್ವನ ಮೇಲೆ ಹಲ್ಲೆ ನಡೆದಿರುವ ಘಟನೆ ಅಸ್ಸೋಂನ ಗುವಾಹಟಿಯಲ್ಲಿ ನಡೆದಿದೆ.

ಹಲ್ಲೆಗೊಳಗಾದ ಪತ್ರಕರ್ತ ಅಫ್ನೂರ್ ಅಲಿ

ನವವಿವಾಹಿತನಾಗಿರುವ ಅಫ್ನೂರ್ ಅಲಿ ಎಂಬ ಪತ್ರಕರ್ತ ನಿನ್ನೆ ಸಂಜೆ ಗುವಾಹಟಿಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (ಜಿಎಂಸಿಎಚ್)ಯಲ್ಲಿ ಕೆಲಸ ಮಾಡುತ್ತಿರುವ ತನ್ನ ಪತ್ನಿಯನ್ನು ಕರೆದುಕೊಂಡು ಹೋಗಲು ಬಂದಿದ್ದಾರೆ. ಈ ವೇಳೆ ಆಸ್ಪತ್ರೆಯ ಹೊರಗೆ ವ್ಯಕ್ತಿಯೊಬ್ಬ ಹರಿತವಾದ ಆಯುಧದಿಂದ ಮಹಿಳೆ ಮೇಲೆ ಹಲ್ಲೆ ಮಾಡಲು ಯತ್ನಿಸುತ್ತಿರುವುದನ್ನು ಗಮನಿಸಿದ ಅಲಿ ಆಕೆಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಆದರೆ ಆ ವ್ಯಕ್ತಿ ಅಲಿ ಮೇಲೆ ಹಲ್ಲೆ ನಡೆಸಿದ್ದಾನೆ.

ಆರೋಪಿ ಪಂಕಜ್ ಬೈಶ್ಯನನ್ನು ಬಂಧಿಸಿದ ಪೊಲೀಸರು

ಓದಿ:ಪತ್ರಕರ್ತನ ಮನೆಗೆ ಬೆಂಕಿ: ಸ್ಥಳೀಯ ರಿಪೋರ್ಟರ್​ ಸಾವು

ಗಂಭೀರವಾಗಿ ಗಾಯಗೊಂಡ ಅಲಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪಂಕಜ್ ಬೈಶ್ಯನನ್ನು ಬಂಧಿಸಿದ್ದಾರೆ.

ABOUT THE AUTHOR

...view details