ಕರ್ನಾಟಕ

karnataka

ಒಂದು ಅನುಮಾನ... ತಪ್ಪು ತಿಳಿವಳಿಕೆ..? ಹಳ್ಳಿ ರಕ್ಷಣೆಗಾಗಿ ಆತ್ಮಹತ್ಯೆ: ಸಾವಿನ ಹಿಂದಿನ ರಹಸ್ಯ ಏನು?

ಕೊರೊನಾ ಮಹಾಮಾರಿಗೆ ಈಗಾಗಲೇ ಸಾವಿರಾರು ಜನರು ಸಾವನ್ನಪ್ಪಿದ್ದು, ಆಂಧ್ರಪ್ರದೇಶದಲ್ಲಿ ವ್ಯಕ್ತಿಯೋರ್ವ ಇಡೀ ಗ್ರಾಮದ ರಕ್ಷಣೆ ಮಾಡಲು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

By

Published : Feb 12, 2020, 7:30 AM IST

Published : Feb 12, 2020, 7:30 AM IST

Updated : Feb 12, 2020, 8:19 AM IST

Andhra man coronavirus
Andhra man coronavirus

ಚಿತ್ತೂರ್​(ಆಂಧ್ರಪ್ರದೇಶ):ಮಹಾಮಾರಿ ಕೊರೊನಾ ವೈರಸ್​​ ಚೀನಾದಲ್ಲಿ ರೌದ್ರತಾಂಡವ ಆಡ್ತಿದ್ದು, ಈಗಾಗಲೇ 1,100ಕ್ಕೂ ಹೆಚ್ಚು ಅಮಾಯಕ ಜೀವಗಳ ಬಲಿ ಪಡೆದುಕೊಂಡಿದೆ. ಇದರ ಮಧ್ಯೆ ಭಾರತದಲ್ಲೂ ಅಲ್ಲೊಂದು ಇಲ್ಲೊಂದು ಪ್ರಕರಣಗಳು ಕಾಣಸಿಗ್ತಿವೆ.

ಇದೀಗ ಆಂಧ್ರಪ್ರದೇಶದ ಚಿತ್ತೂರ್​​ನಲ್ಲಿ ವ್ಯಕ್ತಿಯೊಬ್ಬ ತನಗೆ ಕೊರೊನಾ ವೈರಸ್​ ಇದೆ ಎಂದು ತಪ್ಪಾಗಿ ಭಾವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 54 ವರ್ಷದ ವ್ಯಕ್ತಿಯೊಬ್ಬ ಆಸ್ಪತ್ರೆಗೆ ತೆರಳಿದ್ದು, ಈ ವೇಳೆ ವೈದ್ಯರು ಮಾಸ್ಕ್​ ಹಾಕಿಕೊಂಡು ಹೊರಗಡೆ ನಡೆದಾಡುವಂತೆ ಆತನಿಗೆ ಸೂಚನೆ ನೀಡಿದ್ದಾರೆ. ಇಷ್ಟಕ್ಕೆ ತನಗೆ ಕೊರೊನಾ ಇದೆ ಎಂದು ಭಾವಿಸಿದ್ದು, ಈ ಸೋಂಕು ಗ್ರಾಮದ ಇತರರಿಗೆ ಬರಬಾರದು ಎಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.

ಡಾಕ್ಟರ್​​ ಹೇಳಿರುವ ಪ್ರಕಾರ ಆತನಿಗೆ ಕೊರೊನಾ ವೈರಸ್​ ಇರಲಿಲ್ಲ. ಜ್ವರ ಹಾಗೂ ಕೆಮ್ಮು ಇದ್ದ ಕಾರಣ ಬೇರೆ ಸೋಂಕು ಆತನಿಗೆ ಬರಬಾರದು ಎಂಬ ಉದ್ದೇಶದಿಂದ ಮಾಸ್ಕ್​ ಹಾಕಿಕೊಂಡು ಹೊರಗಡೆ ನಡೆದಾಡುವಂತೆ ಮಾಹಿತಿ ನೀಡಿದ್ದೆವು ಎಂದು ವೈದ್ಯರು ತಿಳಿಸಿದ್ದಾರೆ.

Last Updated : Feb 12, 2020, 8:19 AM IST

ABOUT THE AUTHOR

...view details