ಪಣಜಿ (ಗೋವಾ):ಕೆಲವು ದಿನಗಳ ಹಿಂದೆ ಗೋವಾ ಸಿಎಂ ಪ್ರಮೋದ್ ಸಾವಂತ್ಗೆ ಜೀವ ಬೆದರಿಕೆ ಹಾಗೂ ಬೈಗುಳಗಳನ್ನು ಹೊಂದಿದ ಸಂದೇಶಗಳು ಬರುತ್ತಿವೆ ಎಂದು ವರದಿಯಾದ ಬೆನ್ನಲ್ಲೇ ಗೋವಾದ ಹಲವು ಜನಪ್ರತಿನಿಧಿಗಳಿಗೆ ಇದೇ ರೀತಿಯ ಸಂದೇಶಗಳು ಬರುತ್ತಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ಬಗ್ಗೆ ಸ್ವತಃ ಜನಪ್ರತಿನಿಧಿಗಳೇ ಪೊಲೀಸ್ ಠಾಣೆಗಳಲ್ಲಿ ದೂರು ನೀಡಿದ್ದಾರೆ. ಗೋವಾ ಫಾರ್ವರ್ಡ್ ಫಾರ್ಟಿಯ ಉಪಾಧ್ಯಕ್ಷರಾದ ದುರ್ಗಾದಾಸ್ ಕಾಮತ್ ಪೊಂಡಾ ಪೊಲೀಸ್ ಠಾಣೆಯಲ್ಲಿ ಹಾಗೂ ಬಿಜೆವೈಎಂ ಪಕ್ಷದ ಮಾಜಿ ನಾಯಕರಾಗಿರುವ ಪ್ರಣವ್ ಸವಾರ್ದೆಕರ್ ಕರ್ಚೋರೆಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.