ಕರ್ನಾಟಕ

karnataka

ETV Bharat / bharat

ಬೆನ್ನು ಬಿಡದ ಜವರಾಯ... ಅಪಘಾತದಲ್ಲಿ ಬದುಕಿದರೂ ಮತ್ತೊಂದು ಆಕ್ಸಿಡೆಂಟ್​​ನಲ್ಲಿ ಸಾವು!

ಇವರೆಲ್ಲ ಸಣ್ಣ ಅಪಘಾತದಲ್ಲಿ ಗಾಯಗೊಂಡಿದ್ದರು. ದುರಾದೃಷ್ಟ ನೋಡಿ ಹೀಗೆ ಸಾವಿನಿಂದ ಬಚಾವಾದರು ಎನ್ನುವಾಗಲೇ ಲಾರಿ ಹಾಗೂ ಆ್ಯಂಬುಲೆನ್ಸ್​ ಮಧ್ಯೆ ಅಪಘಾತ ಸಂಭವಿಸಿತ್ತು. ಲಾರಿ ಗುದ್ದಿದ ರಭಸಕ್ಕೆ ಆ್ಯಂಬುಲೆನ್ಸ್​ ನಜ್ಜುಗುಜ್ಜಾಗಿದ್ದು, ಎಂಟು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

By

Published : Jun 10, 2019, 12:41 PM IST

ಬೆನ್ನು ಬಿಡದ ಜವರಾಯ...

ಪಾಲಕ್ಕಾಡ್ :ನಿನ್ನೆ ಜವರಾಯನ ಅಟ್ಟಹಾಸಕ್ಕೆ ಎಂಟು ಜನರು ಬಲಿಯಾಗಿದ್ದಾರೆ. ಹೀಗೆ ಮೃತಪಟ್ಟ ಕೆಲವರು ಮೊದಲು ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ಆ್ಯಂಬುಲೆನ್ಸ್​ ಮೂಲಕ ಆಸ್ಪತ್ರೆಗೆ ತೆರಳುತ್ತಿದ್ದರು. ದುರಾದೃಷ್ಟ ಎಂದರೆ ಜವರಾಯ ಅವರನ್ನ ಬೆನ್ನು ಬಿದಿದ್ದಾ ಅಂತಾ ಕಾಣಿಸುತ್ತಿದೆ. ಜೀವ ಉಳಿಸಲು ರೋಗಿಗಳನ್ನ ಹೊತ್ಯೋಯ್ಯುತ್ತಿದ್ದ ಆ್ಯಂಬುಲೆನ್ಸ್​​ ಅಪಘಾತಕ್ಕೀಡಾಗಿ ಬಿಟ್ಟಿತು.

ಹೌದು, ನಿನ್ನೆ ಆ್ಯಂಬುಲೆನ್ಸ್​- ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಎಂಟು ಜನರು ದಾರುಣವಾಗಿ ಮೃತಪಟ್ಟಿದ್ದರು. ಅದಕ್ಕೂ ಮುನ್ನ ಕೆಲವರು ಮತ್ತೊಂದು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದವರು ಎಂಬ ಮಾಹಿತಿ ಲಭ್ಯವಾಗಿದೆ.

ಬೆನ್ನು ಬಿಡದ ಜವರಾಯ...

ನಿನ್ನೆ ಪಾಲಕ್ಕಾಡ್​ ಸಮೀಪದ ನೆಲ್ಲಿಯಂಪಥಿಗೆ ಕೆಲವರು ವಿವಾಹಯಾತ್ರೆಗೆ ತೆಳಿದ್ದರು. ಈ ವೇಳೆ ಅಪಘಾತ ಸಂಭವಿಸಿತ್ತು. ಗಾಯಾಳುಗಳನ್ನು ನೆನ್ಮಾರ್​ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಅವರ ಸಂಬಂಧಿಗಳು ಹೆಚ್ಚಿನ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ದಾಖಲಿಸಲು ಆ್ಯಂಬುಲೆನ್ಸ್​​​ ಮೂಲಕ ತೆರಳಿದ್ದಾಗ ಈ ಅಪಘಾತ ಸಂಭವಿಸಿದೆ.

ಪಾಲಕ್ಕಾಡ್​ನ ತಾನಿಸ್ಸೇರಿಯಲ್ಲಿ ಮೀನು ಸಾಗಿಸುತ್ತಿದ್ದ ಲಾರಿ ಹಾಗೂ ಆ್ಯಂಬುಲೆನ್ಸ್​ ಮಧ್ಯೆ ಅಪಘಾತ ಸಂಭವಿಸಿ ಎಂಟು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಗಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತರು ಇಲ್ಲಿನ ಪಟ್ಟಂಬಿ ನಿವಾಸಿಗರೆಂದು ಗುರುತಿಸಲಾಗಿದೆ. ಮೃತಪಟ್ಟ ಎಂಟು ಜನರಲ್ಲಿ ಮೂವರನ್ನು ನಾಸ್ಸಿರ್, ಫವಸ್​ ಮತ್ತು ಸುಬೈರ್​ ಎಂದು ಪತ್ತೆ ಹಚ್ಚಲಾಗಿದೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details