ಕರ್ನಾಟಕ

karnataka

ETV Bharat / bharat

ಪರಸ್ತ್ರೀ ಜೊತೆ ಪರಾರಿಯಾಗಲು ಹೋಗಿ ಸಿಕ್ಕಿಬಿದ್ದವನಿಗೆ ಬಿತ್ತು ಸಖತ್​ ಗೂಸಾ!

ಮದುವೆಯಾದ ಮಹಿಳೆಯ ಜೊತೆ ಓಡಿ ಹೋದ ಕಾರಣಕ್ಕಾಗಿ ವ್ಯಕಿ ಸೇರಿದಂತೆ ಇಬ್ಬರು ಆತನ ಸಂಬಂಧಿಕರನ್ನು ಮರಕ್ಕೆ ಕಟ್ಟಿ ಥಳಿಸಿರುವ ಘಟನೆ ಮಧ್ಯಪ್ರದೇಶದ ಧರ್​ ಜಿಲ್ಲೆಯ ಅರ್ಜುನ್​ ಕಾಲೋನಿಯಲ್ಲಿ ನಡೆದಿದೆ.

By

Published : May 16, 2019, 10:22 AM IST

Updated : May 16, 2019, 3:02 PM IST

ಪರಸ್ತ್ರೀ ಜೊತೆ ಪರಾರಿಯಾದವನಿಗೆ ಬಿತ್ತು ಗೂಸ...!

ಮಧ್ಯಪ್ರದೇಶ : ​ಮದುವೆಯಾದ ಮಹಿಳೆಯ ಜೊತೆ ಓಡಿ ಹೋದ ಎಂಬ ಕಾರಣಕ್ಕಾಗಿ ವ್ಯಕ್ತಿಯೊಬ್ಬನನ್ನು ಹಾಗೂ ಆತನ ಇಬ್ಬರು ಸಂಬಂಧಿಕರನ್ನು ಮರಕ್ಕೆ ಕಟ್ಟಿ ಥಳಿಸಿರುವ ಘಟನೆ ಮಧ್ಯಪ್ರದೇಶದ ಧರ್​ ಜಿಲ್ಲೆಯ ಅರ್ಜುನ್​ ಕಾಲೋನಿಯಲ್ಲಿ ನಡೆದಿದೆ.

ಇನ್ನು ಥಳಿತಕ್ಕೆ ಒಳಗಾಗಿರುವ ಮೂವರಲ್ಲಿ ಒಬ್ಬಳು ಅಪ್ರಾಪ್ತಳಾಗಿದ್ದರೆ, ಇನ್ನೊಬ್ಬರು ಮಹಿಳೆಯಾಗಿದ್ದಾರೆ. ಈ ಅಪ್ರಾಪಸ್ತೆ ಮತ್ತು ಮಹಿಳೆಯೂ ತನ್ನ ಸಂಬಂಧಿಕನಿಗೆ ಓಡಿಹೋಗಲು ಸಹಾಯ ಮಾಡಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಸೆರೆ ಸಿಕ್ಕ ವ್ಯಕ್ತಿ ಜತೆ ಸಹಾಯ ಮಾಡಿದ ಇಬ್ಬರನ್ನೂ ಮರಕ್ಕೆ ಕಟ್ಟಿ ಗ್ರಾಮದ ಜನ ಥಳಿಸಿದ್ದಾರೆ ಎಂದು ಹೇಳಲಾಗಿದೆ.

ಪರಸ್ತ್ರೀ ಜೊತೆ ಪರಾರಿಯಾಗಲು ಹೋಗಿ ಸಿಕ್ಕಿಬಿದ್ದವನಿಗೆ ಬಿತ್ತು ಸಖತ್​ ಗೂಸಾ!

ಊರ ಮಂದಿ ಮತ್ತು ಓಡಿಹೋದ ಮಹಿಳೆಯ ಗಂಡ ಆ ಮೂವರನ್ನು ಥಳಿಸುತ್ತಿದ್ದರೆ, ಕೆಲವರು ಈ ದೃಶ್ಯಗಳನ್ನು ಮೊಬೈಲ್​ ನಲ್ಲಿ ಶೂಟ್​ ಮಾಡಿ ನಗುತ್ತಿದ್ದರು ಎನ್ನಲಾಗಿದೆ. ಹೀಗೆ ತೆಗೆದ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿವೆ. ಘಟನೆ ಸಂಬಂಧ ಒಂಭತ್ತು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ ಅಪ್ರಾಪ್ತ ಯುವತಿಯ ಮೇಲೆ ಕೈ ಮಾಡಿದ್ದಕ್ಕೆ, ಥಳಿಸಿದವರ ಮೇಲೆ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

Last Updated : May 16, 2019, 3:02 PM IST

ABOUT THE AUTHOR

...view details