ಕರ್ನಾಟಕ

karnataka

By

Published : Aug 15, 2019, 7:49 PM IST

Updated : Aug 15, 2019, 8:40 PM IST

ETV Bharat / bharat

ಸ್ವಾತಂತ್ರ್ಯೋತ್ಸವ ದಿನವೇ ಕದನ ವಿರಾಮ ಉಲ್ಲಂಘನೆ... ಪಾಕ್​ನ ಮೂವರು ಯೋಧರನ್ನು ಹೊಡೆದುರುಳಿಸಿದ ಸೇನೆ!

ಸ್ವತಂತ್ರ್ಯೋತ್ಸವ ದಿನವೇ ಪಾಕಿಸ್ತಾನ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಇದಕ್ಕೆ ಪ್ರತ್ಯುತ್ತರ ನೀಡಿರುವ ಭಾರತೀಯ ಯೋಧರು ಪಾಕಿಸ್ತಾನದ ಮೂವರು ಯೋಧರನ್ನ ಹೊಡೆದುರುಳಿಸಿದ್ದಾಗಿ ತಿಳಿದು ಬಂದಿದೆ.

india Army

ಶ್ರೀನಗರ:ದೇಶ 73ನೇ ಸ್ವತಂತ್ರ ಸಂಭ್ರಮದಲ್ಲಿದ್ದು, ಇದರ ಮಧ್ಯೆ ಕದನ ವಿರಾಮ ಉಲ್ಲಂಘನೆ ಮಾಡಿರುವ ಪಾಕ್​ನ ಮೂವರು ಯೋಧರನ್ನ ಭಾರತೀಯ ಯೋಧರು ಹೊಡೆದುರುಳಿಸಿದ್ದಾರೆಂದು ತಿಳಿದು ಬಂದಿದೆ.

ಉರಿ ಹಾಗೂ ರಾಜೌರಿ ಗಡಿ ಪ್ರದೇಶದಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿ ಗುಂಡಿನ ಚಕಮಕಿ ನಡೆಸುತ್ತಿದ್ದ ಪಾಕ್​ ಯೋಧರ ಮೇಲೆ ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿದಾಗ ಎದುರಾಳಿ ಸೇನೆಯ ಮೂವರು ಯೋಧರು ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಅಲ್ಲಿನ ಡಾನ್​ ಪತ್ರಿಕೆ ಸಹ ವರದಿ ಮಾಡಿದ್ದು, ಅಲ್ಲಿನ ಯೋಧರು ಸಾವನ್ನಪ್ಪಿರುವುದ ನಿಜ ಎಂದು ಲೈನ್​ ಆಫ್​ ಕಂಟ್ರೋಲ್​​ನ ಸಾರ್ವಜನಿಕ ಸಂಪರ್ಕಧಿಕಾರಿ ಮೇಜರ್​ ಜನರಲ್​ ಆಸೀಫ್​ ಗಫೂರ್​ ತಿಳಿಸಿದ್ದಾರೆ.

ನಿನ್ನೆ ಸ್ವತಂತ್ರ್ಯೋತ್ಸವ ಆಚರಣೆ ಮಾಡಿದ್ದ ಪಾಕ್​, ಇಂದು ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಅಧಿಕಾರದ ಆರ್ಟಿಕಲ್​ 370 ರದ್ದುಪಡಿಸಿರುವುದನ್ನ ವಿರೋಧಿಸಿ ಕರಾಳ ದಿನ ಆಚರಣೆ ಮಾಡುತ್ತಿದೆ.

ಇನ್ನು ಪಾಕ್​ ಸೈನಿಕರು ಭಾರತೀಯ ಐವರು ಯೋಧರನ್ನು ಹೊಡೆದುರುಳಿಸಿದೆ ಎಂಬ ಮಾಹಿತಿ ನೀಡಿದ್ದು, ಅದನ್ನ ಇಂಡಿಯನ್​ ಆರ್ಮಿ ಅಲ್ಲಗಳೆದಿದ್ದು, ನಮ್ಮ ಯಾವುದೇ ಯೋಧರು ಘಟನೆಯಲ್ಲಿ ಹುತಾತ್ಮರಾಗಿಲ್ಲ ಎಂದು ತಿಳಿಸಿದೆ.

Last Updated : Aug 15, 2019, 8:40 PM IST

ABOUT THE AUTHOR

...view details