ಶ್ರೀನಗರ:ದೇಶ 73ನೇ ಸ್ವತಂತ್ರ ಸಂಭ್ರಮದಲ್ಲಿದ್ದು, ಇದರ ಮಧ್ಯೆ ಕದನ ವಿರಾಮ ಉಲ್ಲಂಘನೆ ಮಾಡಿರುವ ಪಾಕ್ನ ಮೂವರು ಯೋಧರನ್ನ ಭಾರತೀಯ ಯೋಧರು ಹೊಡೆದುರುಳಿಸಿದ್ದಾರೆಂದು ತಿಳಿದು ಬಂದಿದೆ.
ಉರಿ ಹಾಗೂ ರಾಜೌರಿ ಗಡಿ ಪ್ರದೇಶದಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿ ಗುಂಡಿನ ಚಕಮಕಿ ನಡೆಸುತ್ತಿದ್ದ ಪಾಕ್ ಯೋಧರ ಮೇಲೆ ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿದಾಗ ಎದುರಾಳಿ ಸೇನೆಯ ಮೂವರು ಯೋಧರು ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಅಲ್ಲಿನ ಡಾನ್ ಪತ್ರಿಕೆ ಸಹ ವರದಿ ಮಾಡಿದ್ದು, ಅಲ್ಲಿನ ಯೋಧರು ಸಾವನ್ನಪ್ಪಿರುವುದ ನಿಜ ಎಂದು ಲೈನ್ ಆಫ್ ಕಂಟ್ರೋಲ್ನ ಸಾರ್ವಜನಿಕ ಸಂಪರ್ಕಧಿಕಾರಿ ಮೇಜರ್ ಜನರಲ್ ಆಸೀಫ್ ಗಫೂರ್ ತಿಳಿಸಿದ್ದಾರೆ.