ಕರ್ನಾಟಕ

karnataka

By

Published : Sep 11, 2019, 6:54 PM IST

ETV Bharat / bharat

ಸ್ನೇಹಿತರೊಂದಿಗೆ ದೇವಸ್ಥಾನಕ್ಕೆ ತೆರಳ್ತಿದ್ದಾಗ ಅತ್ಯಾಚಾರ; ರಾಜಸ್ತಾನದಲ್ಲಿ ಕಾಮುಕರ ಅಟ್ಟಹಾಸ

ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಬಾಲಕಿಯನ್ನು ಅಪಹರಿಸಿರುವ ಕಾಮುಕರು ಅತ್ಯಾಚಾರಗೈದಿರುವ ಪೈಶಾಚಿಕ ಪ್ರಕರಣ ರಾಜಸ್ಥಾನದ ಬಿಲ್ವಾರ್​ ಎಂಬಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ

ಜೋಧಪುರ:ಸ್ನೇಹಿತರೊಂದಿಗೆ ದೇಗುಲಕ್ಕೆ ತೆರಳುತ್ತಿದ್ದ ವೇಳೆ ಮೂವರು ಕಾಮುಕರು 15 ವರ್ಷದ ಬಾಲಕಿಯನ್ನು ಕಿಡ್ನಾಪ್‌ ಮಾಡಿ ಅತ್ಯಾಚಾರ ಮಾಡಿರುವ ಘಟನೆ ರಾಜಸ್ಥಾನದ ಬಿಲ್ವಾರ್​ ಜಿಲ್ಲೆಯಲ್ಲಿ ನಡೆದಿದೆ.

ದೇವಸ್ಥಾನಕ್ಕೆ ಹೋಗುತ್ತಿದ್ದ ವೇಳೆ ಮೂವರು ಕಾಮುಕರು ಆಕೆಯ ಗೆಳೆಯರನ್ನು ಥಳಿಸಿದ್ದು, ತದನಂತರ ಬಾಲಕಿ ಅಪಹರಿಸಿ, ಅತ್ಯಾಚಾರವೆಸಗಿದ್ದಾರೆ. ಈ ವೇಳೆ ಅವರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಮಹಿಳೆ ಸರಿಸುಮಾರು ಅರ್ಧ ಕಿ.ಮೀಟರ್​ ಬೆತ್ತಲೆಯಾಗಿ ಓಡಿ ಹೋಗಿದ್ದಾಳೆ.ಈ ವೇಳೆ ಆಕೆಯನ್ನು ಗುರುತು ಹಿಡಿದಿರುವ ಸ್ನೇಹಿತನೋರ್ವ ಬಟ್ಟೆ ನೀಡಿ, ತದನಂತರ ಮನೆಗೆ ಕರೆದೊಯ್ದಿದ್ದಾನೆ.

ಪೋಷಕರು ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದು, ಆರೋಪಿಗಳಾದ ರಾಜು, ಕೈಲಾಶ್​ ಹಾಗೂ ನಾರಾಯಣನನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಸೋಮವಾರ ಈ ಘಟನೆ ನಡೆದಿದ್ದು ರಾಜಸ್ಥಾನದ ರಾಜಧಾನಿ ಜೈಪುರ್​​ನಿಂದ 250 ಕಿ.ಮೀಟರ್​ ದೂರದಲ್ಲಿದೆ ಬಿಲ್ವಾರ್​ ಜಿಲ್ಲೆ. ದೇವಸ್ಥಾನಕ್ಕೆ ತೆರಳುವ ಮಾರ್ಗ ಮಧ್ಯೆ ಮದ್ಯಪಾನ ಮಾಡಿ ಕುಳಿತಿದ್ದ ಮೂವರು ಈ ಕೃತ್ಯ ಎಸಗಿರುವುದಾಗಿ ಪೊಲೀಸ್​ ಅಧಿಕಾರಿ ಭರತ್​ ಸಿಂಗ್​ ತಿಳಿಸಿದ್ದಾರೆ. ಸಂತ್ರಸ್ತೆ ಮೈಮೇಲೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ.

ABOUT THE AUTHOR

...view details