ವಿಶಾಖಪಟ್ಟಣ( ಆಂಧ್ರಪ್ರದೇಶ): ತನ್ನದೇ ಇಲಾಖೆಯ ಅಧಿಕಾರಿಯ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವಿಶೇಷ ಜಾರಿ ನಿರ್ದೇಶನಾಲಯ ಇಲಾಖೆಯ ಮಹಿಳಾ ಎಸ್ಐ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವಿಶಾಖಪಟ್ಟಣದಲ್ಲಿ ಬೆಳಕಿಗೆ ಬಂದಿದೆ.
ವಿಶೇಷ ಜಾರಿ ನಿರ್ದೇಶನಾಲಯ ಇಲಾಖೆಯ ಇಎಸ್ ಎನ್ ಬಾಲಕೃಷ್ಣನ್ ಎಂಬ ಅಧಿಕಾರಿಯು ವ್ಯಾಪಾರಿವೊಬ್ಬನಿಂದ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದಿದದ್ದರು. ಅದರಲ್ಲಿ ಅಶ್ಲೀಲ ವಿಡಿಯೋ ಸೇರಿದಂತೆ ಅಸಭ್ಯವಾಗಿ ಮಾತನಾಡಿದ ಆಡಿಯೋಗಳಿದ್ದವು. ಇವುಗಳನ್ನು ಡೌನ್ಲೋಡ್ ಮಾಡಿ ಸಿಡಿಗೆ ವರ್ಗಾಯಿಸುವಂತೆ ಮಹಿಳಾ ಎಸ್ಐಗೆ ಆದೇಶಿಸಿದ್ದರಂತೆ.
ಇದು ಅಶ್ಲೀಲ ಕೆಲಸ, ನಾನು ಮಾಡುವುದಿಲ್ಲ ಎಂದು ಎಸ್ಐ ನಿರಾಕರಿಸಿದ್ದರು. ಆದರೆ ಬಾಲಕೃಷ್ಣನ್ ಆಕೆಯ ಮೇಲೆ ಸಾಕಷ್ಟು ಒತ್ತಡ ಹೇರಿದ್ದರಿಂದ ನೊಂದ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗ್ತಿದೆ.