ಕೋಲ್ಕತ್ತಾ:ಪಶ್ಚಿಮ ಬಂಗಾಳದಲ್ಲಿ ಭಾನುವಾರ ನಡೆದ ಚುನಾವಣಾ ಫಲಿತಾಂಶದ ನಂತರ ನಡೆದ ಹಿಂಸಾಚಾರದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮೂವರು ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ.
ದಕ್ಷಿಣ 24 ಪರಗಣದ ಸೋನಾರ್ಪುರದಲ್ಲಿ ಬಿಜೆಪಿ ಕಾರ್ಯಕರ್ತ ಹರಣ್ ಅಧಿಕಾರಿ ಎಂಬುವವರನ್ನು ಕೊಲೆ ಮಾಡಲಾಗಿದೆ. ಅದೇ ರೀತಿ, ಕೋಲ್ಕತ್ತಾದ ಬೇಲೆಘಾಟಾದ ಬಳಿ ನಡೆದ ಮತ್ತೊಂದು ಹಿಂಸಾಚಾರ ಪ್ರಕರಣದಲ್ಲಿ ಅವಿಜಿತ್ ಸರ್ಕಾರ್ ಎಂಬ ಬಿಜೆಪಿಯ ಯುವ ಕಾರ್ಯಕರ್ತನೊಬ್ಬನನ್ನು ಹತ್ಯೆಗೈಯ್ಯಲಾಗಿದೆ.
ಉತ್ತರ 24 ಪರಗಣಗಳ ದತ್ತಾಪುಕೂರ್ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಐಎಸ್ಎಫ್ ಕಾರ್ಯಕರ್ತ ಹಸನೂರ್ ರಹಮಾನ್ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಮೃತರ ಕುಟುಂಬಸ್ಥರು ಟಿಎಂಸಿಯನ್ನು ದೂಷಿಸಿದ್ದಾರೆ.