ಕರ್ನಾಟಕ

karnataka

By

Published : Jul 18, 2021, 7:54 AM IST

Updated : Jul 18, 2021, 12:54 PM IST

ETV Bharat / bharat

ಮಳೆ ತಂದ ಅವಾಂತರ.. ಮುಂಬೈನಲ್ಲಿ ಮನೆ, ಗೋಡೆ, ಗುಡ್ಡ ಕುಸಿದು 21 ಜನ ದುರ್ಮರಣ

ಮುಂಬೈನಲ್ಲಿ ಭಾರೀ ಮಳೆಯ ಪರಿಣಾಮ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 21ಕ್ಕೆ ಏರಿದೆ. ರಕ್ಷಣಾ ಕಾರ್ಯ ಭರದಿಂದ ನಡೆಯುತ್ತಿದೆ. ಅವಶೇಷಗಳ ಅಡಿಯಲ್ಲಿ ಇನ್ನೂ ಹಲವು ಮಂದಿ ಸಿಲುಕಿಕೊಂಡಿದ್ದು, NDRF ಕಾರ್ಯಾಚರಣೆ ನಡೆಸುತ್ತಿದೆ.

11 people killed after a wall collapse in Mumbai
ಮುಂಬೈನಲ್ಲಿ ಗೋಡೆ ಕುಸಿತ

ಮುಂಬೈ : ಮಹಾರಾಷ್ಟ್ರದಲ್ಲಿ ಮಳೆ ಆರ್ಭಟ ಜೋರಾಗಿದ್ದು, ಜನರು ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಗರದ ಮೂರು ಕಡೆಗಳಲ್ಲಿ ಮನೆ, ಗೋಡೆ, ಗುಡ್ಡ ಕುಸಿದು ಬಿದ್ದು ಒಟ್ಟು 21 ಜನ ಮೃತಪಟ್ಟಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ದುರ್ಘಟನೆ ನಡೆದ ಮೂರು ಕಡೆಗಳಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ

ನಗರದ ಚೆಂಬೂರಿನ ಭಾರತ್ ನಗರ, ವಿಖ್ರೋಲಿ ಮತ್ತು ಮುಲುಂದ್​ನಲ್ಲಿ ಮನೆ, ಗೋಡೆ ಮತ್ತು ಗುಡ್ಡ ಕುಸಿತ ಸಂಭವಿಸಿದೆ. ಚೆಂಬೂರಿನಲ್ಲಿ 4-5 ಮನೆಗಳು ನೆಲ ಸಮಗೊಂಡಿದ್ದು ಒಟ್ಟು 17 ಮಂದಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದು, ಒಟ್ಟು 19 ಜನರನ್ನು ರಕ್ಷಣೆ ಮಾಡಲಾಗಿದೆ.

ವಿಖ್ರೋಲಿಯಲ್ಲಿ ಮನೆಗಳು ಕುಸಿದಿರುವುದು

ಅದೇ ರೀತಿ ವಿಖ್ರೋಲಿಯಲ್ಲಿ ಒಂದು ಮನೆ ಕುಸಿದು ಬಿದ್ದು ಮೂವರು ಕೊನೆಯುಸಿರೆಳೆದಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಮುಲುಂದ್​ನಲ್ಲಿ ಗೋಡೆ ಕುಸಿದು ಬಿದ್ದು 15 ವರ್ಷದ ಬಾಲಕ ಮೃತಪಟ್ಟಿದ್ದಾನೆ.

ಚೆಂಬೂರಿನಲ್ಲಿ ರಕ್ಷಣಾ ಕಾರ್ಯ

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್​ಡಿಆರ್​ಎಫ್​) ಮುಂಬೈ ಮಹಾನಗರ ಪಾಲಿಕೆ ( ಬಿಎಂಸಿ) ಯ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಮಣ್ಣಿನಡಿ ಸಿಲುಕಿದವರ ರಕ್ಷಣಾ ಕಾರ್ಯ ಮಾಡುತ್ತಿದ್ದಾರೆ.

ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಎನ್​ಡಿಆರ್​ಎಫ್​ ಸಿಬ್ಬಂದಿ

ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಹಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

Last Updated : Jul 18, 2021, 12:54 PM IST

ABOUT THE AUTHOR

...view details