ETV Bharat / state

ರೇಣುಕಾಸ್ವಾಮಿ ಕೊಲೆ ಪ್ರಕರಣ: ಪವಿತ್ರಾ ಗೌಡ ಸೇರಿ ನಾಲ್ವರ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ನ್ಯಾಯಾಲಯ - Renukaswamy murder Case

author img

By ETV Bharat Karnataka Team

Published : Aug 28, 2024, 6:42 PM IST

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಸೇರಿ ನಾಲ್ವರು ಆರೋಪಿಗಳ ಜಾಮೀನು ಅರ್ಜಿ ತೀರ್ಪನ್ನು ನ್ಯಾಯಾಲಯ ಆಗಸ್ಟ್ 31 ಹಾಗೂ ಸೆ.2ಕ್ಕೆ ಕಾಯ್ದಿರಿಸಿದೆ. ಮತ್ತೊಂದೆಡೆ ದರ್ಶನ್​ ಮತ್ತು ಅವರ ಸಹಚರರನ್ನು ರಾಜ್ಯದ ಬೇರೆ ಬೇರೆ ಕಾರಾಗೃಹಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ.

ಪವಿತ್ರಾಗೌಡ
ಪವಿತ್ರಾ ಗೌಡ (ETV Bharat)

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ಮೊದಲ ಆರೋಪಿಯಾಗಿರುವ ಪವಿತ್ರಾ ಗೌಡ ಸೇರಿ ನಾಲ್ವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ 57ನೇ ಸಿಟಿ ಸಿವಿಲ್ ಹಾಗೂ ಸೆಷನ್ಸ್ ನ್ಯಾಯಾಲಯವು ತೀರ್ಪು ಕಾಯ್ದಿರಿಸಿದೆ. ಆರೋಪಿಗಳಾದ ಪವಿತ್ರಾ ಗೌಡ ಹಾಗೂ ಅನುಕುಮಾರ್ ಜಾಮೀನು ಅರ್ಜಿ ತೀರ್ಪು ಆ.31ಕ್ಕೆ ಹಾಗೂ ಸೆ.2ರಂದು ವಿನಯ್ ಹಾಗೂ ಕೇಶವಮೂರ್ತಿ ಬೇಲ್ ಭವಿಷ್ಯ ನಿರ್ಧಾರವಾಗಲಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ನಾಲ್ವರು ನ್ಯಾಯಾಲಯಕ್ಕೆ ಪ್ರತ್ಯೇಕ ಜಾಮೀನು ಅರ್ಜಿ ಸಲ್ಲಿಸಿದ್ದರು. ಇಂದು ಮಧ್ಯಾಹ್ನ ನ್ಯಾಯಾಧೀಶರ ಮುಂದೆ ವಾದ ಮಂಡಿಸಿದ ಸರ್ಕಾರಿ ಪರ ವಕೀಲ ಪ್ರಸನ್ನ ಕುಮಾರ್, ಹತ್ಯೆ ಸಂಚಿನಲ್ಲಿ ಪವಿತ್ರಾ ಗೌಡ ಅವರ ನೇರ ಪಾತ್ರವಿದೆ. ಚಿತ್ರದುರ್ಗದಿಂದ ಮೃತನನ್ನು ಅಪಹರಿಸಿ ಪಟ್ಟಣಗೆರೆ ಶೆಡ್ ಕರೆತಂದಿದ್ದರು. ಇತರೆ ಆರೋಪಿಗಳೊಂದಿಗೆ ಪವಿತ್ರಾ ತೆರಳಿ ಮೃತನ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದರು. ಇವರ ಚಪ್ಪಲಿಯಲ್ಲಿ ರೇಣುಕಾಸ್ವಾಮಿ ರಕ್ತದ ಗುರುತು ಪತ್ತೆಯಾಗಿದೆ. ಎಫ್​ಎಸ್​ಎಲ್ ವರದಿಯಲ್ಲಿ ಬಹಿರಂಗವಾಗಿದೆ. ಮಹಿಳೆ ಎಂಬ ಕಾರಣಕ್ಕಾಗಿ ಜಾಮೀನು ನೀಡಕೂಡದು ಎಂದು ಮನವಿ ಮಾಡಿದರು.

ಇನ್ನು ಪ್ರಕರಣದಲ್ಲಿ ಎ7 ಆರೋಪಿ ಅನುಕುಮಾರ್, ಮೃತನ ಮನೆ ವಿಳಾಸ ಪತ್ತೆ ಹಚ್ಚಿ, ಫಾರ್ಮಸಿಯೊಂದರಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದು, ಇತರೆ ಆರೋಪಿಗಳೊಂದಿಗೆ ಸಂಚು ರೂಪಿಸಿ ಕಾರಿನಲ್ಲಿ ಚಿತ್ರದುರ್ಗದಿಂದ ಬೆಂಗಳೂರು ನಗರಕ್ಕೆ ಅಪಹರಿಸಿ ಕರೆತಂದಿದ್ದರು. ಟೋಲ್ ಕ್ಯಾಮರಾಗಳಲ್ಲಿ ಆರೋಪಿಯ ಚಹರೆ ಸೆರೆಯಾಗಿತ್ತು. ಮಾರ್ಗಮಧ್ಯೆ ಚಿನ್ನಾಭರಣ ದೋಚಿದ್ದಾನೆ. ವಿಚಾರಣೆ ವೇಳೆ ಇತರೆ ಆರೋಪಿಗಳೊಂದಿಗೆ ಚಾಟ್ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ವಾದ ಮಂಡಿಸಿದರು.

10 ದಿನದೊಳಗಾಗಿ ಚಾರ್ಜ್​ಶೀಟ್ ಸಲ್ಲಿಕೆ: ಇನ್ನು ವಿನಯ್ ಜಾಮೀನು ಅರ್ಜಿ ಸಂಬಂಧ ವಾದ ಮುಂದುವರೆಸಿದ ಎಸ್​ಪಿಪಿ, ಮೃತನ ಅರೆಪ್ರಜ್ಞಾ ಸ್ಥಿತಿಯಲ್ಲಿರುವ ಫೋಟೋವನ್ನು ಎ3 ಪವನ್, ವಿನಯ್​ಗೆ ಕಳುಹಿಸಿದ್ದ. ಹತ್ಯೆ ಬಳಿಕ ಮೊಬೈಲ್ ನಲ್ಲಿದ್ದ ಫೋಟೋ ಡಿಲೀಟ್ ಮಾಡಿದ್ದ. ಮೊಬೈಲ್ ರಿಟ್ರೀವ್ ಮಾಡಿದಾಗ ಫೋಟೋ ಹಿಡಿದಿರುವುದು ರುಜುವಾಗಿದೆ. ಆರೋಪಿಗಳೊಂದಿಗೆ ಪಟ್ಟಣಗೆರೆ ಶೆಡ್ ಕಾವಲುಗಾರ ಪ್ರತ್ಯಕ್ಷ ಸಾಕ್ಷಿಯಾಗಿದ್ದು, ಸಿಆರ್​ಪಿಸಿ 164ನಡಿ ಹೇಳಿಕೆ ದಾಖಲಿಸಲಾಗಿದೆ. ಹತ್ಯೆ ಮಾಡಲು ಎರಡು ತಿಂಗಳ ಹಿಂದೆ ಸಂಚು ರೂಪಿಸಲಾಗಿತ್ತು. ತನಿಖೆಯು ಅಂತಿಮ ಹಂತದಲ್ಲಿದ್ದು, 10 ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಸಲ್ಲಿಸುವುದಾಗಿ ಮಾಹಿತಿ ನೀಡಿದರು.

ಪವಿತ್ರಾಗೌಡ ಪರ ವಾದ ಮಂಡಿಸಿದ ವಕೀಲ ಟಾಮಿ ಸೆಬಾಸ್ಟಿಯನ್, ಮೃತನಿಗೆ ಕಪಾಳಮೋಕ್ಷ ಮಾಡಿದ್ದಾಗಿ ಪೊಲೀಸರು ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಕಪಾಳಮೋಕ್ಷದಿಂದ ಸಾವು ಎಂದು ಹೇಳಿಲ್ಲ. ಎದೆಗೂಡಿನ ಮೂಳೆಗಳು, ತಲೆಗೆ ಹೊಡೆತ ಬಿದ್ದು ಗಂಭೀರ ಗಾಯದಿಂದ ರೇಣುಕಾಸ್ವಾಮಿ ಸಾವನ್ನಪ್ಪಿರುವುದಾಗಿ ವರದಿ ನೀಡಿದೆ. ತನ್ನ ಕಕ್ಷಿದಾರೆ ಅಪರಾಧ ಹಿನ್ನೆಲೆ ಹೊಂದಿಲ್ಲ. ಹೀಗಾಗಿ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

ಪ್ರಕರಣದ 16ನೇ ಆರೋಪಿ ಕೇಶವಮೂರ್ತಿ ಪರ ವಕೀಲ ರಂಗನಾಥರೆಡ್ಡಿ ವಾದ ಮಂಡಿಸಿ, ತಮ್ಮ ಕಕ್ಷಿದಾರನ ವಿರುದ್ಧ ಯಾವುದೇ ಐ ವಿಟ್ನೆಸ್ ಇಲ್ಲ. ಪೊಲೀಸರು ಒಳಸಂಚು ರೂಪಿಸಿ ಆರೋಪ ಹೊರಿಸಿದ್ದಾರೆ. ಫೋನ್​ನಲ್ಲಿ ರಿಕವರಿಯಾಗಿರುವುದನ್ನು ನೇರವಾಗಿ ತೋರಿಸಿಲ್ಲ. ಈತನ ಪಾತ್ರದ ಬಗ್ಗೆ ನೇರ ಸಾಕ್ಷಿಯಿಲ್ಲ. ಯಾವ ಉದ್ದೇಶಕ್ಕೆ ಅರೆಸ್ಟ್ ಮಾಡಿದ್ದಾರೆ ಉಲ್ಲೇಖಿಸಿಲ್ಲ. ಹತ್ಯೆಗೂ ಮುನ್ನ ಹಾಗೂ ಹತ್ಯೆ ನಂತರ ಕೇಶವಮೂರ್ತಿ ಇರಲಿಲ್ಲ. ಹೀಗಾಗಿ ಜಾಮೀನು ನೀಡಬೇಕೆಂದು ಕೋರಿದರು.

10ನೇ ಆರೋಪಿ ವಿನಯ್ ಪರ ವಕೀಲ ನಟರಾಜ್ ವಾದ ಮಂಡಿಸಿ, ವಿನಯ್ ಹೋಟೆಲ್​ ಉದ್ಯಮಿಯಾಗಿದ್ದು, ಸಿನಿ ನಟರು ಸೇರಿದಂತೆ ಗಣ್ಯರು ಹೋಟೆಲ್​ಗೆ ಬರುತ್ತಾರೆ. ಪ್ರಚಾರಕ್ಕಾಗಿ ಗಣ್ಯರೊಂದಿಗೆ ಫೋಟೋ ತೆಗೆಸಿಕೊಳ್ಳುತ್ತಾರೆ. ನಟ ದರ್ಶನ್ ಹಾಗೂ ಪವಿತ್ರಾ ಗೌಡ ಇವರಿಗೆ ಸಂಬಂಧಿ ಅಲ್ಲ. ಹತ್ಯೆ ಮಾಡಿದ ಜಾಗದಿಂದ 1 ಕಿ.ಮೀ ವ್ಯಾಪ್ತಿಯಲ್ಲಿ ಹೋಟೆಲ್​ ಇರುವುದರಿಂದ ಟವರ್ ಲೊಕೇಶನ್​ನಲ್ಲಿ ವಿನಯ್ ಕಂಡುಬಂದಿದ್ದರಿಂದ ಇವರನ್ನು ಆರೋಪಿಯನ್ನಾಗಿ ಮಾಡಲಾಗಿದೆ ಎಂದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ನಾಲ್ವರ ಜಾಮೀನು ಅರ್ಜಿ ತೀರ್ಪನ್ನು ಆಗಸ್ಟ್ 31 ಹಾಗೂ ಸೆ.2ರಂದು ಕಾಯ್ದಿರಿಸಿತು.

ಇದನ್ನೂ ಓದಿ: ಅತ್ಯಾಚಾರ ಸಂತ್ರಸ್ತ ಎನ್ನಲಾದ ಮಹಿಳೆ ಅಪಹರಣ ಆರೋಪ; ರೇವಣ್ಣ ಜಾಮೀನು ಆದೇಶ ಎತ್ತಿಹಿಡಿದ ಹೈಕೋರ್ಟ್ - Kidnap Case

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ಮೊದಲ ಆರೋಪಿಯಾಗಿರುವ ಪವಿತ್ರಾ ಗೌಡ ಸೇರಿ ನಾಲ್ವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ 57ನೇ ಸಿಟಿ ಸಿವಿಲ್ ಹಾಗೂ ಸೆಷನ್ಸ್ ನ್ಯಾಯಾಲಯವು ತೀರ್ಪು ಕಾಯ್ದಿರಿಸಿದೆ. ಆರೋಪಿಗಳಾದ ಪವಿತ್ರಾ ಗೌಡ ಹಾಗೂ ಅನುಕುಮಾರ್ ಜಾಮೀನು ಅರ್ಜಿ ತೀರ್ಪು ಆ.31ಕ್ಕೆ ಹಾಗೂ ಸೆ.2ರಂದು ವಿನಯ್ ಹಾಗೂ ಕೇಶವಮೂರ್ತಿ ಬೇಲ್ ಭವಿಷ್ಯ ನಿರ್ಧಾರವಾಗಲಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ನಾಲ್ವರು ನ್ಯಾಯಾಲಯಕ್ಕೆ ಪ್ರತ್ಯೇಕ ಜಾಮೀನು ಅರ್ಜಿ ಸಲ್ಲಿಸಿದ್ದರು. ಇಂದು ಮಧ್ಯಾಹ್ನ ನ್ಯಾಯಾಧೀಶರ ಮುಂದೆ ವಾದ ಮಂಡಿಸಿದ ಸರ್ಕಾರಿ ಪರ ವಕೀಲ ಪ್ರಸನ್ನ ಕುಮಾರ್, ಹತ್ಯೆ ಸಂಚಿನಲ್ಲಿ ಪವಿತ್ರಾ ಗೌಡ ಅವರ ನೇರ ಪಾತ್ರವಿದೆ. ಚಿತ್ರದುರ್ಗದಿಂದ ಮೃತನನ್ನು ಅಪಹರಿಸಿ ಪಟ್ಟಣಗೆರೆ ಶೆಡ್ ಕರೆತಂದಿದ್ದರು. ಇತರೆ ಆರೋಪಿಗಳೊಂದಿಗೆ ಪವಿತ್ರಾ ತೆರಳಿ ಮೃತನ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದರು. ಇವರ ಚಪ್ಪಲಿಯಲ್ಲಿ ರೇಣುಕಾಸ್ವಾಮಿ ರಕ್ತದ ಗುರುತು ಪತ್ತೆಯಾಗಿದೆ. ಎಫ್​ಎಸ್​ಎಲ್ ವರದಿಯಲ್ಲಿ ಬಹಿರಂಗವಾಗಿದೆ. ಮಹಿಳೆ ಎಂಬ ಕಾರಣಕ್ಕಾಗಿ ಜಾಮೀನು ನೀಡಕೂಡದು ಎಂದು ಮನವಿ ಮಾಡಿದರು.

ಇನ್ನು ಪ್ರಕರಣದಲ್ಲಿ ಎ7 ಆರೋಪಿ ಅನುಕುಮಾರ್, ಮೃತನ ಮನೆ ವಿಳಾಸ ಪತ್ತೆ ಹಚ್ಚಿ, ಫಾರ್ಮಸಿಯೊಂದರಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದು, ಇತರೆ ಆರೋಪಿಗಳೊಂದಿಗೆ ಸಂಚು ರೂಪಿಸಿ ಕಾರಿನಲ್ಲಿ ಚಿತ್ರದುರ್ಗದಿಂದ ಬೆಂಗಳೂರು ನಗರಕ್ಕೆ ಅಪಹರಿಸಿ ಕರೆತಂದಿದ್ದರು. ಟೋಲ್ ಕ್ಯಾಮರಾಗಳಲ್ಲಿ ಆರೋಪಿಯ ಚಹರೆ ಸೆರೆಯಾಗಿತ್ತು. ಮಾರ್ಗಮಧ್ಯೆ ಚಿನ್ನಾಭರಣ ದೋಚಿದ್ದಾನೆ. ವಿಚಾರಣೆ ವೇಳೆ ಇತರೆ ಆರೋಪಿಗಳೊಂದಿಗೆ ಚಾಟ್ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ವಾದ ಮಂಡಿಸಿದರು.

10 ದಿನದೊಳಗಾಗಿ ಚಾರ್ಜ್​ಶೀಟ್ ಸಲ್ಲಿಕೆ: ಇನ್ನು ವಿನಯ್ ಜಾಮೀನು ಅರ್ಜಿ ಸಂಬಂಧ ವಾದ ಮುಂದುವರೆಸಿದ ಎಸ್​ಪಿಪಿ, ಮೃತನ ಅರೆಪ್ರಜ್ಞಾ ಸ್ಥಿತಿಯಲ್ಲಿರುವ ಫೋಟೋವನ್ನು ಎ3 ಪವನ್, ವಿನಯ್​ಗೆ ಕಳುಹಿಸಿದ್ದ. ಹತ್ಯೆ ಬಳಿಕ ಮೊಬೈಲ್ ನಲ್ಲಿದ್ದ ಫೋಟೋ ಡಿಲೀಟ್ ಮಾಡಿದ್ದ. ಮೊಬೈಲ್ ರಿಟ್ರೀವ್ ಮಾಡಿದಾಗ ಫೋಟೋ ಹಿಡಿದಿರುವುದು ರುಜುವಾಗಿದೆ. ಆರೋಪಿಗಳೊಂದಿಗೆ ಪಟ್ಟಣಗೆರೆ ಶೆಡ್ ಕಾವಲುಗಾರ ಪ್ರತ್ಯಕ್ಷ ಸಾಕ್ಷಿಯಾಗಿದ್ದು, ಸಿಆರ್​ಪಿಸಿ 164ನಡಿ ಹೇಳಿಕೆ ದಾಖಲಿಸಲಾಗಿದೆ. ಹತ್ಯೆ ಮಾಡಲು ಎರಡು ತಿಂಗಳ ಹಿಂದೆ ಸಂಚು ರೂಪಿಸಲಾಗಿತ್ತು. ತನಿಖೆಯು ಅಂತಿಮ ಹಂತದಲ್ಲಿದ್ದು, 10 ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಸಲ್ಲಿಸುವುದಾಗಿ ಮಾಹಿತಿ ನೀಡಿದರು.

ಪವಿತ್ರಾಗೌಡ ಪರ ವಾದ ಮಂಡಿಸಿದ ವಕೀಲ ಟಾಮಿ ಸೆಬಾಸ್ಟಿಯನ್, ಮೃತನಿಗೆ ಕಪಾಳಮೋಕ್ಷ ಮಾಡಿದ್ದಾಗಿ ಪೊಲೀಸರು ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಕಪಾಳಮೋಕ್ಷದಿಂದ ಸಾವು ಎಂದು ಹೇಳಿಲ್ಲ. ಎದೆಗೂಡಿನ ಮೂಳೆಗಳು, ತಲೆಗೆ ಹೊಡೆತ ಬಿದ್ದು ಗಂಭೀರ ಗಾಯದಿಂದ ರೇಣುಕಾಸ್ವಾಮಿ ಸಾವನ್ನಪ್ಪಿರುವುದಾಗಿ ವರದಿ ನೀಡಿದೆ. ತನ್ನ ಕಕ್ಷಿದಾರೆ ಅಪರಾಧ ಹಿನ್ನೆಲೆ ಹೊಂದಿಲ್ಲ. ಹೀಗಾಗಿ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

ಪ್ರಕರಣದ 16ನೇ ಆರೋಪಿ ಕೇಶವಮೂರ್ತಿ ಪರ ವಕೀಲ ರಂಗನಾಥರೆಡ್ಡಿ ವಾದ ಮಂಡಿಸಿ, ತಮ್ಮ ಕಕ್ಷಿದಾರನ ವಿರುದ್ಧ ಯಾವುದೇ ಐ ವಿಟ್ನೆಸ್ ಇಲ್ಲ. ಪೊಲೀಸರು ಒಳಸಂಚು ರೂಪಿಸಿ ಆರೋಪ ಹೊರಿಸಿದ್ದಾರೆ. ಫೋನ್​ನಲ್ಲಿ ರಿಕವರಿಯಾಗಿರುವುದನ್ನು ನೇರವಾಗಿ ತೋರಿಸಿಲ್ಲ. ಈತನ ಪಾತ್ರದ ಬಗ್ಗೆ ನೇರ ಸಾಕ್ಷಿಯಿಲ್ಲ. ಯಾವ ಉದ್ದೇಶಕ್ಕೆ ಅರೆಸ್ಟ್ ಮಾಡಿದ್ದಾರೆ ಉಲ್ಲೇಖಿಸಿಲ್ಲ. ಹತ್ಯೆಗೂ ಮುನ್ನ ಹಾಗೂ ಹತ್ಯೆ ನಂತರ ಕೇಶವಮೂರ್ತಿ ಇರಲಿಲ್ಲ. ಹೀಗಾಗಿ ಜಾಮೀನು ನೀಡಬೇಕೆಂದು ಕೋರಿದರು.

10ನೇ ಆರೋಪಿ ವಿನಯ್ ಪರ ವಕೀಲ ನಟರಾಜ್ ವಾದ ಮಂಡಿಸಿ, ವಿನಯ್ ಹೋಟೆಲ್​ ಉದ್ಯಮಿಯಾಗಿದ್ದು, ಸಿನಿ ನಟರು ಸೇರಿದಂತೆ ಗಣ್ಯರು ಹೋಟೆಲ್​ಗೆ ಬರುತ್ತಾರೆ. ಪ್ರಚಾರಕ್ಕಾಗಿ ಗಣ್ಯರೊಂದಿಗೆ ಫೋಟೋ ತೆಗೆಸಿಕೊಳ್ಳುತ್ತಾರೆ. ನಟ ದರ್ಶನ್ ಹಾಗೂ ಪವಿತ್ರಾ ಗೌಡ ಇವರಿಗೆ ಸಂಬಂಧಿ ಅಲ್ಲ. ಹತ್ಯೆ ಮಾಡಿದ ಜಾಗದಿಂದ 1 ಕಿ.ಮೀ ವ್ಯಾಪ್ತಿಯಲ್ಲಿ ಹೋಟೆಲ್​ ಇರುವುದರಿಂದ ಟವರ್ ಲೊಕೇಶನ್​ನಲ್ಲಿ ವಿನಯ್ ಕಂಡುಬಂದಿದ್ದರಿಂದ ಇವರನ್ನು ಆರೋಪಿಯನ್ನಾಗಿ ಮಾಡಲಾಗಿದೆ ಎಂದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ನಾಲ್ವರ ಜಾಮೀನು ಅರ್ಜಿ ತೀರ್ಪನ್ನು ಆಗಸ್ಟ್ 31 ಹಾಗೂ ಸೆ.2ರಂದು ಕಾಯ್ದಿರಿಸಿತು.

ಇದನ್ನೂ ಓದಿ: ಅತ್ಯಾಚಾರ ಸಂತ್ರಸ್ತ ಎನ್ನಲಾದ ಮಹಿಳೆ ಅಪಹರಣ ಆರೋಪ; ರೇವಣ್ಣ ಜಾಮೀನು ಆದೇಶ ಎತ್ತಿಹಿಡಿದ ಹೈಕೋರ್ಟ್ - Kidnap Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.