ETV Bharat / sports

'ನ್ಯೂಯಾರ್ಕ್‌ನಲ್ಲಿ ಆಡುವುದು ಸುಲಭವಲ್ಲ'; ಯುಎಸ್​ ವಿರುದ್ಧದ ಗೆಲುವಿನ ಬಗ್ಗೆ ರೋಹಿತ್​ ಮಾತು - IND vs USA

author img

By PTI

Published : Jun 13, 2024, 9:52 AM IST

ಅಮೆರಿಕ ತಂಡದ​ ವಿರುದ್ಧ ಸಮಯೋಚಿತ ಆಟ ತೋರಿದ ಸೂರ್ಯಕುಮಾರ್ ಯಾದವ್ ಮತ್ತು ಶಿವಂ ದುಬೆ ಬಗ್ಗೆ ನಾಯಕ ರೋಹಿತ್​ ಶರ್ಮಾ ಹೊಗಳಿಕೆಯ ಮಾತುಗಳನ್ನಾಡಿದರು. ಇದೇ ವೇಳೆ, ಅಮೆರಿಕ ಕ್ರಿಕೆಟ್​ ಬೆಳವಣಿಗೆ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದರು.

rohit sharma
ಯುಎಸ್ ವಿರುದ್ದ ಗೆದ್ದ ಭಾರತ (Photos: IANS)

ನ್ಯೂಯಾರ್ಕ್: ಇಲ್ಲಿನ ನಸ್ಸೌ ಕೌಂಟಿ ಮೈದಾನದ ದ್ವಿಸ್ವರೂಪಿ ಪಿಚ್​ನಲ್ಲಿ ಆಡುವುದು ಸುಲಭವಲ್ಲ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ತಂಡವು ಪ್ರಸ್ತುತ ಟಿ20 ವಿಶ್ವಕಪ್‌ನಲ್ಲಿ ಕೊನೆಯವರೆಗೂ ಹೋರಾಡುವ ಮೂಲಕ ಮೂರು ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿದೆ ಎಂದಿದ್ದಾರೆ.

ಅರ್ಷದೀಪ್ ಸಿಂಗ್ (9ಕ್ಕೆ 4 ವಿಕೆಟ್​), ಸೂರ್ಯಕುಮಾರ್ ಯಾದವ್ (50*) ಮತ್ತು ಶಿವಂ ದುಬೆ (31*) ಜವಾಬ್ದಾರಿಯುತ ಆಟದಿಂದ ಯುಎಸ್ ವಿರುದ್ಧ ಬುಧವಾರ ಭಾರತವು 7 ವಿಕೆಟ್​ ಜಯ ಗಳಿಸಿ ಸೂಪರ್​-8ಕ್ಕೆ ತಲುಪಿತು. ಪಂದ್ಯದ ಬಳಿಕ ಮಾತನಾಡಿದ ನಾಯಕ ರೋಹಿತ್​ ಶರ್ಮಾ, ''ಪಿಚ್​​ನಲ್ಲಿ ಬ್ಯಾಟಿಂಗ್​ ಕಠಿಣ ಎಂದು ನಮಗೆ ತಿಳಿದಿತ್ತು. ನಾವು ಕ್ರೀಸ್​ನಲ್ಲಿ ದೃಢವಾಗಿ ನಿಂತು ಜೊತೆಯಾಟವಾಡಿ ಗೆದ್ದೆವು. ಪ್ರಬುದ್ಧತೆ ತೋರಿದ ಸೂರ್ಯ ಮತ್ತು ಶಿವಂ ದುಬೆಗೆ ಗೆಲುವಿನ ಶ್ರೇಯ ಸಲ್ಲಬೇಕು'' ಎಂದು ಹೇಳಿದರು.

''ನಸ್ಸೌ ಕೌಂಟಿ ಪಿಚ್​ನಲ್ಲಿ ಆಡುವುದು ಸರಳವಲ್ಲ, ಸೂಪರ್-8ಕ್ಕೆ ತಲುಪಿರುವ ಸಮಾಧಾನವಿದೆ. ಈ ಮೈದಾನದಲ್ಲಿ ಪಂದ್ಯವನ್ನು ಯಾವ ತಂಡ ಬೇಕಾದರೂ ಗೆಲ್ಲಬಹುದು. ಎಲ್ಲಾ ಮೂರು ಪಂದ್ಯಗಳಲ್ಲಿ ನಾವು ಕೊನೆಯವರೆಗೂ ಹೋರಾಡಿ ಗೆದ್ದೆವು. ಈ ಗೆಲುವಿನಿಂದ ನಮ್ಮ ವಿಶ್ವಾಸ ಹೆಚ್ಚಿದೆ. ಸೂರ್ಯಕುಮಾರ್ ವಿಭಿನ್ನ ಆಟ ತೋರಿದರು. ಅನುಭವಿ ಆಟಗಾರರಿಂದ ನೀವು ನಿರೀಕ್ಷಿಸುವುದು ಅದನ್ನೇ. ಕೊನೆಯವರೆಗೂ ಕ್ರೀಸ್​ನಲ್ಲಿದ್ದು, ಪಂದ್ಯ ಗೆಲ್ಲಿಸಿದರು'' ಎಂದು ಶ್ಲಾಘಿಸಿದರು.

''ರನ್​ ಗಳಿಕೆ ಕಷ್ಟವಾಗಿದ್ದರಿಂದ ಬೌಲರ್‌ಗಳು ಮೇಲುಗೈ ಸಾಧಿಸುವುದು ಅಗತ್ಯವಿತ್ತು. ವಿಶೇಷವಾಗಿ ಅರ್ಷದೀಪ್ ಸೇರಿದಂತೆ ಎಲ್ಲಾ ಬೌಲರ್‌ಗಳೂ ಆ ಕೆಲಸ ಮಾಡಿದರು. ಬೌಲಿಂಗ್​ ಆಯ್ಕೆಗಳು ಇರಬೇಕು, ಅಗತ್ಯವಿದ್ದಾಗ ನಾವು ಬಳಸಲು ಸಾಧ್ಯವಾಗುತ್ತದೆ. ವೇಗಿಗಳು ಪ್ರಾಬಲ್ಯ ಸಾಧಿಸುವ ನಿರೀಕ್ಷೆಯಿಂದ ದುಬೆಗೆ ಬೌಲಿಂಗ್​ ನೀಡಲಾಯಿತು'' ಎಂದರು.

ಅಮೆರಿಕ ತಂಡದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ರೋಹಿತ್​, ''ಅವರಲ್ಲಿ ಬಹಳಷ್ಟು ಮಂದಿ ಒಟ್ಟಿಗೆ ಕ್ರಿಕೆಟ್ ಆಡಿದ್ದು, ಪ್ರಗತಿಯನ್ನು ಕಂಡು ಬಹಳ ಸಂತಸವಾಗುತ್ತಿದೆ. ಕಳೆದ ವರ್ಷ ಮೇಜರ್ ಲೀಗ್​​ ಕ್ರಿಕೆಟ್ (MLC)​ ಟೂರ್ನಿಯಲ್ಲೂ ಅವರ ಆಟವನ್ನು ನೋಡಿದ್ದೇನೆ. ಎಲ್ಲರೂ ಶ್ರಮವಹಿಸಿ ಆಡುತ್ತಾರೆ'' ಎಂದು ಹೇಳಿದರು.

ಭಾರತದ ಪರ ಟಿ20 ಪಂದ್ಯವೊಂದರಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಅರ್ಷದೀಪ್ ಮಾತನಾಡಿ, ''ನಾನು ವೇಗಿಗಳ ಸ್ನೇಹಿ ಪಿಚ್​ನ ಸಂಪೂರ್ಣ ನೆರವನ್ನು ಪಡೆಯಲು ಬಯಸುತ್ತೇನೆ. ಕೊನೆಯ ಎರಡು ಪಂದ್ಯಗಳಲ್ಲಿ ಹೆಚ್ಚು ರನ್​​ ನೀಡಿದ್ದರ ಬಗ್ಗೆ ನನಗೆ ಸಂತಸವಿರಲಿಲ್ಲ. ತಂಡವು ನನ್ನ ಮೇಲೆ ಯಾವಾಗಲೂ ನಂಬಿಕೆ ತೋರಿ, ಬೆಂಬಲಕ್ಕೆ ನಿಂತಿದೆ. ಹೀಗಾಗಿ ಗೆಲುವಿಗೆ ನೆರವಾಗಬೇಕಿದೆ'' ಎಂದು ಹೇಳಿದರು.

''ವಿಕೆಟ್ ವೇಗದ ಬೌಲರ್‌ಗಳಿಗೆ ತುಂಬಾ ಅನುಕೂಲಕರವಾಗಿದೆ. ಕೆಲವೊಮ್ಮೆ ಬಾಲ್​ಗಳು ಸೀಮ್ ಪಡೆಯವುದರಿಂದ ನಮಗೆ ಹೆಚ್ಚು ಸಹಕಾರಿಯಾಯಿತು. ನನ್ನ ಪ್ಲಾನ್​ ಸರಳವಾಗಿದ್ದು, ಬಾಲ್​​ನ್ನು ಸರಿಯಾದ ಜಾಗದಲ್ಲಿ ಎಸೆದು ಸ್ವಿಂಗ್​ ಮಾಡಲು ಯತ್ನಿಸಿದೆ. ರನ್ ಗಳಿಸಲು ಸುಲಭದ ಎಸೆತಗಳನ್ನು ಕೊಡಬಾರದು. ಹಾರ್ಡ್​ ಲೆಂಥ್​ನಲ್ಲಿ ಬೌಲಿಂಗ್​ ಮಾಡುವುದು ನನ್ನ ಯೋಜನೆಯಾಗಿತ್ತು. ಪಿಚ್​ನಲ್ಲಿ ನಮ್ಮ ಬ್ಯಾಟರ್​​ಗಳೂ ಕೂಡ ರನ್ ಗಳಿಸಲು ಕಷ್ಟಪಟ್ಟರು'' ಎಂದರು.

ಯುಎಸ್ಎ ಹಂಗಾಮಿ ನಾಯಕ ನಾಯಕ ಆರನ್ ಜೋನ್ಸ್ ಮಾತನಾಡಿ, ''ನಮ್ಮ ತಂಡ ಭಾರತಕ್ಕೆ ಸ್ಪರ್ಧೆಯೊಡ್ಡಿದರೂ ಕೂಡ ಹೆಚ್ಚಿನ ರನ್​ ಕೊರತೆ ಅನುಭವಿಸಿದೆವು. ನಾವು 10-15 ರನ್ ಕಡಿಮೆ ಗಳಿಸಿದ್ದೆವು. 130 ರನ್​ ಬಾರಿಸಿದ್ದರೆ ಅದೊಂದು ಕಠಿಣ ಮೊತ್ತವಾಗುತ್ತಿತ್ತು. ಕೆಲವೊಮ್ಮೆ ಹೀಗಾಗುತ್ತದೆ. ನಮ್ಮ ಆಟಗಾರರು ಶಿಸ್ತುಬದ್ಧ ಪ್ರದರ್ಶನ ತೋರಿದ್ದು, ಬೌಲಿಂಗ್ ಬಗ್ಗೆ ಹೆಮ್ಮೆಯಿದೆ'' ಎಂದು ಹೇಳಿದರು.

''ನಮಗೆ ಬಹಳ ಸಂತಸವಾಗುತ್ತಿದೆ. ನಾವು ಯುಎಸ್​ ಕ್ರಿಕೆಟ್‌ಗಾಗಿ ಇದನ್ನೇ ಬಯಸಿದ್ದು, ಆಟವನ್ನು ಆನಂದಿಸುತ್ತಿದ್ದೇವೆ. ಸೋಲಿನ ಬಗ್ಗೆ ಮರುಪರಿಶೀಲಿಸುತ್ತೇವೆ. ಕೆಲ ಸಭೆಗಳನ್ನು ನಡೆಸಿ, ಕಮ್​ಬ್ಯಾಕ್​ ಮಾಡಲು ಯತ್ನಿಸುತ್ತೇವೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಮೆರಿಕ ತಂಡದ ನಿಯಮಿತ ನಾಯಕ ಮೊನಾಂಕ್ ಪಟೇಲ್ ಐರ್ಲೆಂಡ್ ವಿರುದ್ಧದ ಕೊನೆಯ ಪಂದ್ಯಕ್ಕೆ ಫಿಟ್ ಆಗಬೇಕಿದೆ ಎಂದು ಜೋನ್ಸ್ ಹೇಳಿದರು. ಸಣ್ಣ ಪ್ರಮಾಣದ ಗಾಯವಾಗಿದ್ದು, ಆ ಪಂದ್ಯಕ್ಕೆ ಅವರು ತಂಡಕ್ಕೆ ಮರಳಬಹುದು ಎಂದರು.

ಇದನ್ನೂ ಓದಿ: ಟಿ20 ವಿಶ್ವಕಪ್‌: ಅರ್ಷದೀಪ್ ಮಾರಕ ದಾಳಿ; ಅಮೆರಿಕ​ ಮಣಿಸಿ ಸೂಪರ್​​-8ಕ್ಕೆ ಭಾರತ ಲಗ್ಗೆ - India Enters super 8

ನ್ಯೂಯಾರ್ಕ್: ಇಲ್ಲಿನ ನಸ್ಸೌ ಕೌಂಟಿ ಮೈದಾನದ ದ್ವಿಸ್ವರೂಪಿ ಪಿಚ್​ನಲ್ಲಿ ಆಡುವುದು ಸುಲಭವಲ್ಲ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ತಂಡವು ಪ್ರಸ್ತುತ ಟಿ20 ವಿಶ್ವಕಪ್‌ನಲ್ಲಿ ಕೊನೆಯವರೆಗೂ ಹೋರಾಡುವ ಮೂಲಕ ಮೂರು ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿದೆ ಎಂದಿದ್ದಾರೆ.

ಅರ್ಷದೀಪ್ ಸಿಂಗ್ (9ಕ್ಕೆ 4 ವಿಕೆಟ್​), ಸೂರ್ಯಕುಮಾರ್ ಯಾದವ್ (50*) ಮತ್ತು ಶಿವಂ ದುಬೆ (31*) ಜವಾಬ್ದಾರಿಯುತ ಆಟದಿಂದ ಯುಎಸ್ ವಿರುದ್ಧ ಬುಧವಾರ ಭಾರತವು 7 ವಿಕೆಟ್​ ಜಯ ಗಳಿಸಿ ಸೂಪರ್​-8ಕ್ಕೆ ತಲುಪಿತು. ಪಂದ್ಯದ ಬಳಿಕ ಮಾತನಾಡಿದ ನಾಯಕ ರೋಹಿತ್​ ಶರ್ಮಾ, ''ಪಿಚ್​​ನಲ್ಲಿ ಬ್ಯಾಟಿಂಗ್​ ಕಠಿಣ ಎಂದು ನಮಗೆ ತಿಳಿದಿತ್ತು. ನಾವು ಕ್ರೀಸ್​ನಲ್ಲಿ ದೃಢವಾಗಿ ನಿಂತು ಜೊತೆಯಾಟವಾಡಿ ಗೆದ್ದೆವು. ಪ್ರಬುದ್ಧತೆ ತೋರಿದ ಸೂರ್ಯ ಮತ್ತು ಶಿವಂ ದುಬೆಗೆ ಗೆಲುವಿನ ಶ್ರೇಯ ಸಲ್ಲಬೇಕು'' ಎಂದು ಹೇಳಿದರು.

''ನಸ್ಸೌ ಕೌಂಟಿ ಪಿಚ್​ನಲ್ಲಿ ಆಡುವುದು ಸರಳವಲ್ಲ, ಸೂಪರ್-8ಕ್ಕೆ ತಲುಪಿರುವ ಸಮಾಧಾನವಿದೆ. ಈ ಮೈದಾನದಲ್ಲಿ ಪಂದ್ಯವನ್ನು ಯಾವ ತಂಡ ಬೇಕಾದರೂ ಗೆಲ್ಲಬಹುದು. ಎಲ್ಲಾ ಮೂರು ಪಂದ್ಯಗಳಲ್ಲಿ ನಾವು ಕೊನೆಯವರೆಗೂ ಹೋರಾಡಿ ಗೆದ್ದೆವು. ಈ ಗೆಲುವಿನಿಂದ ನಮ್ಮ ವಿಶ್ವಾಸ ಹೆಚ್ಚಿದೆ. ಸೂರ್ಯಕುಮಾರ್ ವಿಭಿನ್ನ ಆಟ ತೋರಿದರು. ಅನುಭವಿ ಆಟಗಾರರಿಂದ ನೀವು ನಿರೀಕ್ಷಿಸುವುದು ಅದನ್ನೇ. ಕೊನೆಯವರೆಗೂ ಕ್ರೀಸ್​ನಲ್ಲಿದ್ದು, ಪಂದ್ಯ ಗೆಲ್ಲಿಸಿದರು'' ಎಂದು ಶ್ಲಾಘಿಸಿದರು.

''ರನ್​ ಗಳಿಕೆ ಕಷ್ಟವಾಗಿದ್ದರಿಂದ ಬೌಲರ್‌ಗಳು ಮೇಲುಗೈ ಸಾಧಿಸುವುದು ಅಗತ್ಯವಿತ್ತು. ವಿಶೇಷವಾಗಿ ಅರ್ಷದೀಪ್ ಸೇರಿದಂತೆ ಎಲ್ಲಾ ಬೌಲರ್‌ಗಳೂ ಆ ಕೆಲಸ ಮಾಡಿದರು. ಬೌಲಿಂಗ್​ ಆಯ್ಕೆಗಳು ಇರಬೇಕು, ಅಗತ್ಯವಿದ್ದಾಗ ನಾವು ಬಳಸಲು ಸಾಧ್ಯವಾಗುತ್ತದೆ. ವೇಗಿಗಳು ಪ್ರಾಬಲ್ಯ ಸಾಧಿಸುವ ನಿರೀಕ್ಷೆಯಿಂದ ದುಬೆಗೆ ಬೌಲಿಂಗ್​ ನೀಡಲಾಯಿತು'' ಎಂದರು.

ಅಮೆರಿಕ ತಂಡದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ರೋಹಿತ್​, ''ಅವರಲ್ಲಿ ಬಹಳಷ್ಟು ಮಂದಿ ಒಟ್ಟಿಗೆ ಕ್ರಿಕೆಟ್ ಆಡಿದ್ದು, ಪ್ರಗತಿಯನ್ನು ಕಂಡು ಬಹಳ ಸಂತಸವಾಗುತ್ತಿದೆ. ಕಳೆದ ವರ್ಷ ಮೇಜರ್ ಲೀಗ್​​ ಕ್ರಿಕೆಟ್ (MLC)​ ಟೂರ್ನಿಯಲ್ಲೂ ಅವರ ಆಟವನ್ನು ನೋಡಿದ್ದೇನೆ. ಎಲ್ಲರೂ ಶ್ರಮವಹಿಸಿ ಆಡುತ್ತಾರೆ'' ಎಂದು ಹೇಳಿದರು.

ಭಾರತದ ಪರ ಟಿ20 ಪಂದ್ಯವೊಂದರಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಅರ್ಷದೀಪ್ ಮಾತನಾಡಿ, ''ನಾನು ವೇಗಿಗಳ ಸ್ನೇಹಿ ಪಿಚ್​ನ ಸಂಪೂರ್ಣ ನೆರವನ್ನು ಪಡೆಯಲು ಬಯಸುತ್ತೇನೆ. ಕೊನೆಯ ಎರಡು ಪಂದ್ಯಗಳಲ್ಲಿ ಹೆಚ್ಚು ರನ್​​ ನೀಡಿದ್ದರ ಬಗ್ಗೆ ನನಗೆ ಸಂತಸವಿರಲಿಲ್ಲ. ತಂಡವು ನನ್ನ ಮೇಲೆ ಯಾವಾಗಲೂ ನಂಬಿಕೆ ತೋರಿ, ಬೆಂಬಲಕ್ಕೆ ನಿಂತಿದೆ. ಹೀಗಾಗಿ ಗೆಲುವಿಗೆ ನೆರವಾಗಬೇಕಿದೆ'' ಎಂದು ಹೇಳಿದರು.

''ವಿಕೆಟ್ ವೇಗದ ಬೌಲರ್‌ಗಳಿಗೆ ತುಂಬಾ ಅನುಕೂಲಕರವಾಗಿದೆ. ಕೆಲವೊಮ್ಮೆ ಬಾಲ್​ಗಳು ಸೀಮ್ ಪಡೆಯವುದರಿಂದ ನಮಗೆ ಹೆಚ್ಚು ಸಹಕಾರಿಯಾಯಿತು. ನನ್ನ ಪ್ಲಾನ್​ ಸರಳವಾಗಿದ್ದು, ಬಾಲ್​​ನ್ನು ಸರಿಯಾದ ಜಾಗದಲ್ಲಿ ಎಸೆದು ಸ್ವಿಂಗ್​ ಮಾಡಲು ಯತ್ನಿಸಿದೆ. ರನ್ ಗಳಿಸಲು ಸುಲಭದ ಎಸೆತಗಳನ್ನು ಕೊಡಬಾರದು. ಹಾರ್ಡ್​ ಲೆಂಥ್​ನಲ್ಲಿ ಬೌಲಿಂಗ್​ ಮಾಡುವುದು ನನ್ನ ಯೋಜನೆಯಾಗಿತ್ತು. ಪಿಚ್​ನಲ್ಲಿ ನಮ್ಮ ಬ್ಯಾಟರ್​​ಗಳೂ ಕೂಡ ರನ್ ಗಳಿಸಲು ಕಷ್ಟಪಟ್ಟರು'' ಎಂದರು.

ಯುಎಸ್ಎ ಹಂಗಾಮಿ ನಾಯಕ ನಾಯಕ ಆರನ್ ಜೋನ್ಸ್ ಮಾತನಾಡಿ, ''ನಮ್ಮ ತಂಡ ಭಾರತಕ್ಕೆ ಸ್ಪರ್ಧೆಯೊಡ್ಡಿದರೂ ಕೂಡ ಹೆಚ್ಚಿನ ರನ್​ ಕೊರತೆ ಅನುಭವಿಸಿದೆವು. ನಾವು 10-15 ರನ್ ಕಡಿಮೆ ಗಳಿಸಿದ್ದೆವು. 130 ರನ್​ ಬಾರಿಸಿದ್ದರೆ ಅದೊಂದು ಕಠಿಣ ಮೊತ್ತವಾಗುತ್ತಿತ್ತು. ಕೆಲವೊಮ್ಮೆ ಹೀಗಾಗುತ್ತದೆ. ನಮ್ಮ ಆಟಗಾರರು ಶಿಸ್ತುಬದ್ಧ ಪ್ರದರ್ಶನ ತೋರಿದ್ದು, ಬೌಲಿಂಗ್ ಬಗ್ಗೆ ಹೆಮ್ಮೆಯಿದೆ'' ಎಂದು ಹೇಳಿದರು.

''ನಮಗೆ ಬಹಳ ಸಂತಸವಾಗುತ್ತಿದೆ. ನಾವು ಯುಎಸ್​ ಕ್ರಿಕೆಟ್‌ಗಾಗಿ ಇದನ್ನೇ ಬಯಸಿದ್ದು, ಆಟವನ್ನು ಆನಂದಿಸುತ್ತಿದ್ದೇವೆ. ಸೋಲಿನ ಬಗ್ಗೆ ಮರುಪರಿಶೀಲಿಸುತ್ತೇವೆ. ಕೆಲ ಸಭೆಗಳನ್ನು ನಡೆಸಿ, ಕಮ್​ಬ್ಯಾಕ್​ ಮಾಡಲು ಯತ್ನಿಸುತ್ತೇವೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಮೆರಿಕ ತಂಡದ ನಿಯಮಿತ ನಾಯಕ ಮೊನಾಂಕ್ ಪಟೇಲ್ ಐರ್ಲೆಂಡ್ ವಿರುದ್ಧದ ಕೊನೆಯ ಪಂದ್ಯಕ್ಕೆ ಫಿಟ್ ಆಗಬೇಕಿದೆ ಎಂದು ಜೋನ್ಸ್ ಹೇಳಿದರು. ಸಣ್ಣ ಪ್ರಮಾಣದ ಗಾಯವಾಗಿದ್ದು, ಆ ಪಂದ್ಯಕ್ಕೆ ಅವರು ತಂಡಕ್ಕೆ ಮರಳಬಹುದು ಎಂದರು.

ಇದನ್ನೂ ಓದಿ: ಟಿ20 ವಿಶ್ವಕಪ್‌: ಅರ್ಷದೀಪ್ ಮಾರಕ ದಾಳಿ; ಅಮೆರಿಕ​ ಮಣಿಸಿ ಸೂಪರ್​​-8ಕ್ಕೆ ಭಾರತ ಲಗ್ಗೆ - India Enters super 8

ETV Bharat Logo

Copyright © 2024 Ushodaya Enterprises Pvt. Ltd., All Rights Reserved.