ETV Bharat / sports

ಸೂರ್ಯ, ರಿಂಕು 'ಸುಂದರ್' ಬೌಲಿಂಗ್​; ಸಿಂಹಳೀಯರ ವಿರುದ್ಧ ಭಾರತಕ್ಕೆ 'ಸೂಪರ್' ವಿಜಯ, ಸರಣಿ ಕ್ಲೀನ್‌ ಸ್ವೀಪ್‌ - India vs Sri Lanka T20

author img

By PTI

Published : Jul 31, 2024, 8:22 AM IST

ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿಯನ್ನು ಸೂರ್ಯಕುಮಾರ್ ಯಾದವ್ ನಾಯಕತ್ವದ ಟೀಂ ಇಂಡಿಯಾ 3-0 ಮೂಲಕ ಕ್ಲೀನ್‌ ಸ್ವೀಪ್ ಮಾಡಿದೆ.

ಭಾರತ ಕ್ರಿಕೆಟ್ ತಂಡ
ಭಾರತ ಕ್ರಿಕೆಟ್ ತಂಡ (IANS)

ಪಲ್ಲೆಕೆಲೆ(ಶ್ರೀಲಂಕಾ): ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ಮಂಗಳವಾರ ಭಾರತ ರೋಚಕ ಗೆಲುವು ದಾಖಲಿಸಿತು. ಸಾಧಾರಣ ಮೊತ್ತದ ಪಂದ್ಯದಲ್ಲಿ ನಾಯಕ ಸೂರ್ಯಕುಮಾರ್ ಯಾದವ್, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್​ ಬೌಲಿಂಗ್​ ಮ್ಯಾಜಿಕ್‌ಗೆ ಸಿಂಹಳೀಯರು ದಿಢೀರ್ ಕುಸಿದರು. ಇದರಿಂದ ಪಂದ್ಯ 'ಸೂಪರ್​ ಓವರ್'ನತ್ತ ಸಾಗಿ ಅಂತಿಮವಾಗಿ ವಿಜಯ ಟೀಂ ಇಂಡಿಯಾ ಪಾಲಾಯಿತು. 3-0ರ ಅಂತರದಿಂದ ಸೂರ್ಯ ನಾಯಕತ್ವದ ತಂಡ ಸರಣಿ ಕ್ಲೀನ್ ಸ್ವೀಪ್ ಮಾಡಿತು.

ಇಲ್ಲಿನ ಪಲ್ಲೆಕೆಲೆ ಕ್ರಿಕೆಟ್​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ನಾಯಕ ಚರಿತ್ ಅಸಲಂಕಾ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡರು. ಸೂರ್ಯಕುಮಾರ್ ಯಾದವ್ ಬಳಗ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ಆದರೆ, ಬ್ಯಾಟರ್​ಗಳಿಂದ ನಿರೀಕ್ಷಿತ ರನ್​ ಹರಿದು ಬರಲಿಲ್ಲ. ಮಹೇಶ್ ತೀಕ್ಷಣ ಅವರ ತೀಕ್ಷ್ಣ ಬೌಲಿಂಗ್​ ದಾಳಿಯಿಂದ ಭಾರತ ತಂಡವನ್ನು 137 ರನ್​ಗಳ ಸಾಧಾರಣ ಮೊತ್ತಕ್ಕೆ ಲಂಕಾ ಕಟ್ಟಿ ಹಾಕಿತು.

ಕುಸಿದ ಭಾರತದ ಬ್ಯಾಟಿಂಗ್ ಬಲ: ಟೀಂ ಇಂಡಿಯಾದ ಆರಂಭಿಕ ಯಶಸ್ವಿ ಜೈಸ್ವಾಲ್​ ಕೇವಲ 10 ರನ್​ಗೆ​ ನಿರ್ಗಮಿಸಿದರು. ನಂತರ ಬಂದ ಸಂಜು ಸಮ್ಸನ್​ ಶೂನ್ಯ ಸುತ್ತಿದರು. ರಿಂಕು ಸಿಂಗ್ 1 ರನ್​ಗೆ ಪೆವಿಲಿಯನ್​ ಸೇರಿದರು. ನಾಯಕ​ ಸೂರ್ಯ 8 ರನ್​ ಗಳಿಸಲಷ್ಟೇ ಶಕ್ತರಾದರು. ಶಿವಂ ದುಬೆ 13 ರನ್​ಗೆ ವಿಕೆಟ್​ ಒಪ್ಪಿಸಿದರು. ಇದರಿಂದ 9 ಓವರ್ ಮುಗಿಯುವಷ್ಟರಲ್ಲೇ ತಂಡ 48 ರನ್​ಗಳಿಗೆ ಪ್ರಮುಖ 5 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಇದರ ನಡುವೆ ಮತ್ತೊಬ್ಬ ಆರಂಭಿಕ ಶುಭಮನ್​ ಗಿಲ್​ ಜೊತೆಗೂಡಿದ ರಿಯಾನ್ ಪರಾಗ್ ತಂಡಕ್ಕೆ ಚೇತರಿಕೆ ನೀಡಿದರು. 6ನೇ ವಿಕೆಟ್​ಗೆ ಈ ಜೋಡಿ 54 ರನ್​ಗಳ ಜೊತೆಯಾಟವಾಡಿ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿತು. ಗಿಲ್​ 37 ಎಸೆತಗಳಲ್ಲಿ 39 ರನ್​ ಕಾಣಿಕೆ ನೀಡಿದರೆ, ಪರಾಗ್ 18 ಬಾಲ್​ಗಳಲ್ಲಿ 26 ರನ್​ ಕಲೆ ಹಾಕಿದರು. ಮತ್ತೊಂದೆಡೆ, ಕೊನೆಯಲ್ಲಿ ವಾಷಿಂಗ್ಟನ್​ ಸುಂದರ್ 25 ರನ್ ಕೊಡುಗೆ ಇತ್ತರು. ರವಿ ಬಿಷ್ಣೋಯಿ 8 ರನ್​ ಗಳಿಸಿ ಅಜೇಯರಾಗುಳಿದರು.

ಲಂಕಾ ಪರ ಮಹೇಶ್ ತೀಕ್ಷಣ 3 ವಿಕೆಟ್​ ಪಡೆದು ಮಿಂಚಿದರೆ, ವನಿಂದು ಹಸರಂಗ 2 ಮತ್ತು ಚಾಮಿಂದು ವಿಕ್ರಮಸಿಂಘೆ, ಅಸಿತ್ ಫೆರ್ನಾಂಡೋ, ರಮೇಶ್ ಮೆಂಡಿಸ್ ತಲಾ 1 ವಿಕೆಟ್​ ಪಡೆದರು.

ಸೂರ್ಯ, ರಿಂಕು, ಸುಂದರ್ ಆಕರ್ಷಕ ಬೌಲಿಂಗ್: ಭಾರತ ನೀಡಿದ 138 ರನ್​ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ಪಾತುಮ್ ನಿಸ್ಸಾಂಕ ಹಾಗೂ ಕುಸಾಲ್ ಮೆಂಡಿಸ್ ಮೊದಲ ವಿಕೆಟ್​ಗೆ 58 ರನ್​ಗಳ ಜೊತೆಯಾಟ ನೀಡಿದರು. ಇದರ ನಡುವೆ ನಿಸ್ಸಾಂಕ 26 ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಬಂದ ಕುಸಲ್ ಪೆರೆರಾ ಕೂಡಾ ಮೆಂಡಿಸ್ ಅವರಿಗೆ ಉತ್ತಮ ಸಾಥ್​ ನೀಡಿದರು.

ಇದರಿಂದಾಗಿ ಸಿಂಹಳೀಯರು 15.1 ಓವರ್‌ಗಳಲ್ಲಿ 1 ವಿಕೆಟ್‌ಗೆ 110 ರನ್ ಗಳಿಸಿ ಗೆಲುವಿನ ಹಾದಿಯಲ್ಲಿದ್ದರು. ಆದರೆ, ರಿಂಕು ಸಿಂಗ್, ನಾಯಕ ಸೂರ್ಯ, ವಾಷಿಂಗ್ಟನ್​ ಸುಂದರ್ ಬೌಲಿಂಗ್ ಕೈಚಳಕದಿಂದ ಎದುರಾಳಿ ತಂಡ ಆಘಾತಕಾರಿಯಾಗಿ ಕುಸಿಯಿತು. 2ನೇ ವಿಕೆಟ್​ಗೆ ಮೆಂಡಿಸ್ (43) ನಿರ್ಗಮನದ ನಂತರ ಯಾವೊಬ್ಬ ಬ್ಯಾಟರ್​ ಕೂಡಾ ಹೆಚ್ಚು ಹೊತ್ತು ನಿಲ್ಲಲಿಲ್ಲ.

17ನೇ ಓವರ್​ನಲ್ಲಿ ವಾಷಿಂಗ್ಟನ್​ ಸುಂದರ್ 2 ವಿಕೆಟ್​ ಪಡೆದು ಪಂದ್ಯಕ್ಕೆ ತಿರುವು ನೀಡಿದರು. ನಂತರದ ಓವರ್​ನಲ್ಲಿ​ ಬೌಲ್​ ಮಾಡಿದ ರಿಂಕು 46 ರನ್​ ಗಳಿಸಿ ಆಡುತ್ತಿದ್ದ ಪೆರೆರಾ ವಿಕೆಟ್ ಕಬಳಿಸಿ ಪಂದ್ಯದ ಗತಿಯನ್ನೇ ಬದಲಿಸಿದರು. ಅಲ್ಲದೇ, ಇದೇ ಓವರ್​ನಲ್ಲಿ ರಮೇಶ್ ಮೆಂಡಿಸ್ ಅವರಿಗೂ ಪೆವಿಲಿಯನ್​ ದಾರಿ ತೋರಿದರು.

ಕೊನೆಯ ಓವರ್​ನಲ್ಲಿ ನಾಯಕ ಸೂರ್ಯ ತಾವೇ ಬೌಲಿಂಗ್‌ ​ಮಾಡಿ 2 ವಿಕೆಟ್ ಉರುಳಿಸಿದರು!. ಈ ಮೂಲಕ 20 ಓವರ್​ಗಳಲ್ಲಿ ಲಂಕಾ 137 ರನ್​ ಪೇರಿಸಿ ಗುರಿ ತಲುಪುವಲ್ಲಿ ಎಡವಿಬಿತ್ತು. ಭಾರತ ಪರ ರಿಂಕು ಸಿಂಗ್ 3 ರನ್​ಗೆ 2 ವಿಕೆಟ್​, ಸೂರ್ಯ 5 ರನ್​ಗೆ 2 ವಿಕೆಟ್​ ಕಬಳಿಸಿ ಬೌಲಿಂಗ್​ನಲ್ಲೂ ಸೈ ಎನಿಸಿಕೊಂಡರು. ಅಲ್ಲದೇ, ವಾಷಿಂಗ್ಟನ್​ ಮತ್ತು ರವಿ ಬಿಷ್ಣೋಯಿ ತಲಾ 2 ವಿಕೆಟ್ ಪಡೆದರು.

ವಾಷಿಂಗ್ಟನ್ ಸುಂದರ್ 'ಸೂಪರ್'​ ಓವರ್​: ಭಾರತ ನೀಡಿದ್ದ 138 ರನ್ ಟಾರ್ಗೆಟ್​ ಪೂರೈಸುವಲ್ಲಿ ಶ್ರೀಲಂಕಾ ಸಫಲವಾಗದ ಕಾರಣ ಸೂಪರ್​ ಓವರ್​ ಆಡಿಸಲಾಯಿತು. ಈ ಓವರ್​ನಲ್ಲೂ ವಾಷಿಂಗ್ಟನ್ ಸುಂದರ್ ಮ್ಯಾಜಿಕ್​ ಮಾಡಿದರು. ಕೇವಲ 2 ರನ್ ನೀಡಿ 2 ವಿಕೆಟ್‌ ಪಡೆದರು. ಮತ್ತೊಂದೆಡೆ, ನಾಯಕ ಸೂರ್ಯ ಮೊದಲ ಎಸೆತವನ್ನೇ ಬೌಂಡರಿಯ ಗಡಿ ದಾಟಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಇದನ್ನೂ ಓದಿ: ಏಷ್ಯನ್ ಕ್ರಿಕೆಟ್ ಮಂಡಳಿ: ಜಯ್ ಶಾ ಸ್ಥಾನಕ್ಕೆ ಪಾಕ್ ಕ್ರಿಕೆಟ್ ಮಂಡಳಿಯ ಹಾಲಿ ಅಧ್ಯಕ್ಷ ಮೊಹ್ಸಿನ್ ನಖ್ವಿ?

ಪಲ್ಲೆಕೆಲೆ(ಶ್ರೀಲಂಕಾ): ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ಮಂಗಳವಾರ ಭಾರತ ರೋಚಕ ಗೆಲುವು ದಾಖಲಿಸಿತು. ಸಾಧಾರಣ ಮೊತ್ತದ ಪಂದ್ಯದಲ್ಲಿ ನಾಯಕ ಸೂರ್ಯಕುಮಾರ್ ಯಾದವ್, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್​ ಬೌಲಿಂಗ್​ ಮ್ಯಾಜಿಕ್‌ಗೆ ಸಿಂಹಳೀಯರು ದಿಢೀರ್ ಕುಸಿದರು. ಇದರಿಂದ ಪಂದ್ಯ 'ಸೂಪರ್​ ಓವರ್'ನತ್ತ ಸಾಗಿ ಅಂತಿಮವಾಗಿ ವಿಜಯ ಟೀಂ ಇಂಡಿಯಾ ಪಾಲಾಯಿತು. 3-0ರ ಅಂತರದಿಂದ ಸೂರ್ಯ ನಾಯಕತ್ವದ ತಂಡ ಸರಣಿ ಕ್ಲೀನ್ ಸ್ವೀಪ್ ಮಾಡಿತು.

ಇಲ್ಲಿನ ಪಲ್ಲೆಕೆಲೆ ಕ್ರಿಕೆಟ್​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ನಾಯಕ ಚರಿತ್ ಅಸಲಂಕಾ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡರು. ಸೂರ್ಯಕುಮಾರ್ ಯಾದವ್ ಬಳಗ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ಆದರೆ, ಬ್ಯಾಟರ್​ಗಳಿಂದ ನಿರೀಕ್ಷಿತ ರನ್​ ಹರಿದು ಬರಲಿಲ್ಲ. ಮಹೇಶ್ ತೀಕ್ಷಣ ಅವರ ತೀಕ್ಷ್ಣ ಬೌಲಿಂಗ್​ ದಾಳಿಯಿಂದ ಭಾರತ ತಂಡವನ್ನು 137 ರನ್​ಗಳ ಸಾಧಾರಣ ಮೊತ್ತಕ್ಕೆ ಲಂಕಾ ಕಟ್ಟಿ ಹಾಕಿತು.

ಕುಸಿದ ಭಾರತದ ಬ್ಯಾಟಿಂಗ್ ಬಲ: ಟೀಂ ಇಂಡಿಯಾದ ಆರಂಭಿಕ ಯಶಸ್ವಿ ಜೈಸ್ವಾಲ್​ ಕೇವಲ 10 ರನ್​ಗೆ​ ನಿರ್ಗಮಿಸಿದರು. ನಂತರ ಬಂದ ಸಂಜು ಸಮ್ಸನ್​ ಶೂನ್ಯ ಸುತ್ತಿದರು. ರಿಂಕು ಸಿಂಗ್ 1 ರನ್​ಗೆ ಪೆವಿಲಿಯನ್​ ಸೇರಿದರು. ನಾಯಕ​ ಸೂರ್ಯ 8 ರನ್​ ಗಳಿಸಲಷ್ಟೇ ಶಕ್ತರಾದರು. ಶಿವಂ ದುಬೆ 13 ರನ್​ಗೆ ವಿಕೆಟ್​ ಒಪ್ಪಿಸಿದರು. ಇದರಿಂದ 9 ಓವರ್ ಮುಗಿಯುವಷ್ಟರಲ್ಲೇ ತಂಡ 48 ರನ್​ಗಳಿಗೆ ಪ್ರಮುಖ 5 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಇದರ ನಡುವೆ ಮತ್ತೊಬ್ಬ ಆರಂಭಿಕ ಶುಭಮನ್​ ಗಿಲ್​ ಜೊತೆಗೂಡಿದ ರಿಯಾನ್ ಪರಾಗ್ ತಂಡಕ್ಕೆ ಚೇತರಿಕೆ ನೀಡಿದರು. 6ನೇ ವಿಕೆಟ್​ಗೆ ಈ ಜೋಡಿ 54 ರನ್​ಗಳ ಜೊತೆಯಾಟವಾಡಿ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿತು. ಗಿಲ್​ 37 ಎಸೆತಗಳಲ್ಲಿ 39 ರನ್​ ಕಾಣಿಕೆ ನೀಡಿದರೆ, ಪರಾಗ್ 18 ಬಾಲ್​ಗಳಲ್ಲಿ 26 ರನ್​ ಕಲೆ ಹಾಕಿದರು. ಮತ್ತೊಂದೆಡೆ, ಕೊನೆಯಲ್ಲಿ ವಾಷಿಂಗ್ಟನ್​ ಸುಂದರ್ 25 ರನ್ ಕೊಡುಗೆ ಇತ್ತರು. ರವಿ ಬಿಷ್ಣೋಯಿ 8 ರನ್​ ಗಳಿಸಿ ಅಜೇಯರಾಗುಳಿದರು.

ಲಂಕಾ ಪರ ಮಹೇಶ್ ತೀಕ್ಷಣ 3 ವಿಕೆಟ್​ ಪಡೆದು ಮಿಂಚಿದರೆ, ವನಿಂದು ಹಸರಂಗ 2 ಮತ್ತು ಚಾಮಿಂದು ವಿಕ್ರಮಸಿಂಘೆ, ಅಸಿತ್ ಫೆರ್ನಾಂಡೋ, ರಮೇಶ್ ಮೆಂಡಿಸ್ ತಲಾ 1 ವಿಕೆಟ್​ ಪಡೆದರು.

ಸೂರ್ಯ, ರಿಂಕು, ಸುಂದರ್ ಆಕರ್ಷಕ ಬೌಲಿಂಗ್: ಭಾರತ ನೀಡಿದ 138 ರನ್​ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ಪಾತುಮ್ ನಿಸ್ಸಾಂಕ ಹಾಗೂ ಕುಸಾಲ್ ಮೆಂಡಿಸ್ ಮೊದಲ ವಿಕೆಟ್​ಗೆ 58 ರನ್​ಗಳ ಜೊತೆಯಾಟ ನೀಡಿದರು. ಇದರ ನಡುವೆ ನಿಸ್ಸಾಂಕ 26 ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಬಂದ ಕುಸಲ್ ಪೆರೆರಾ ಕೂಡಾ ಮೆಂಡಿಸ್ ಅವರಿಗೆ ಉತ್ತಮ ಸಾಥ್​ ನೀಡಿದರು.

ಇದರಿಂದಾಗಿ ಸಿಂಹಳೀಯರು 15.1 ಓವರ್‌ಗಳಲ್ಲಿ 1 ವಿಕೆಟ್‌ಗೆ 110 ರನ್ ಗಳಿಸಿ ಗೆಲುವಿನ ಹಾದಿಯಲ್ಲಿದ್ದರು. ಆದರೆ, ರಿಂಕು ಸಿಂಗ್, ನಾಯಕ ಸೂರ್ಯ, ವಾಷಿಂಗ್ಟನ್​ ಸುಂದರ್ ಬೌಲಿಂಗ್ ಕೈಚಳಕದಿಂದ ಎದುರಾಳಿ ತಂಡ ಆಘಾತಕಾರಿಯಾಗಿ ಕುಸಿಯಿತು. 2ನೇ ವಿಕೆಟ್​ಗೆ ಮೆಂಡಿಸ್ (43) ನಿರ್ಗಮನದ ನಂತರ ಯಾವೊಬ್ಬ ಬ್ಯಾಟರ್​ ಕೂಡಾ ಹೆಚ್ಚು ಹೊತ್ತು ನಿಲ್ಲಲಿಲ್ಲ.

17ನೇ ಓವರ್​ನಲ್ಲಿ ವಾಷಿಂಗ್ಟನ್​ ಸುಂದರ್ 2 ವಿಕೆಟ್​ ಪಡೆದು ಪಂದ್ಯಕ್ಕೆ ತಿರುವು ನೀಡಿದರು. ನಂತರದ ಓವರ್​ನಲ್ಲಿ​ ಬೌಲ್​ ಮಾಡಿದ ರಿಂಕು 46 ರನ್​ ಗಳಿಸಿ ಆಡುತ್ತಿದ್ದ ಪೆರೆರಾ ವಿಕೆಟ್ ಕಬಳಿಸಿ ಪಂದ್ಯದ ಗತಿಯನ್ನೇ ಬದಲಿಸಿದರು. ಅಲ್ಲದೇ, ಇದೇ ಓವರ್​ನಲ್ಲಿ ರಮೇಶ್ ಮೆಂಡಿಸ್ ಅವರಿಗೂ ಪೆವಿಲಿಯನ್​ ದಾರಿ ತೋರಿದರು.

ಕೊನೆಯ ಓವರ್​ನಲ್ಲಿ ನಾಯಕ ಸೂರ್ಯ ತಾವೇ ಬೌಲಿಂಗ್‌ ​ಮಾಡಿ 2 ವಿಕೆಟ್ ಉರುಳಿಸಿದರು!. ಈ ಮೂಲಕ 20 ಓವರ್​ಗಳಲ್ಲಿ ಲಂಕಾ 137 ರನ್​ ಪೇರಿಸಿ ಗುರಿ ತಲುಪುವಲ್ಲಿ ಎಡವಿಬಿತ್ತು. ಭಾರತ ಪರ ರಿಂಕು ಸಿಂಗ್ 3 ರನ್​ಗೆ 2 ವಿಕೆಟ್​, ಸೂರ್ಯ 5 ರನ್​ಗೆ 2 ವಿಕೆಟ್​ ಕಬಳಿಸಿ ಬೌಲಿಂಗ್​ನಲ್ಲೂ ಸೈ ಎನಿಸಿಕೊಂಡರು. ಅಲ್ಲದೇ, ವಾಷಿಂಗ್ಟನ್​ ಮತ್ತು ರವಿ ಬಿಷ್ಣೋಯಿ ತಲಾ 2 ವಿಕೆಟ್ ಪಡೆದರು.

ವಾಷಿಂಗ್ಟನ್ ಸುಂದರ್ 'ಸೂಪರ್'​ ಓವರ್​: ಭಾರತ ನೀಡಿದ್ದ 138 ರನ್ ಟಾರ್ಗೆಟ್​ ಪೂರೈಸುವಲ್ಲಿ ಶ್ರೀಲಂಕಾ ಸಫಲವಾಗದ ಕಾರಣ ಸೂಪರ್​ ಓವರ್​ ಆಡಿಸಲಾಯಿತು. ಈ ಓವರ್​ನಲ್ಲೂ ವಾಷಿಂಗ್ಟನ್ ಸುಂದರ್ ಮ್ಯಾಜಿಕ್​ ಮಾಡಿದರು. ಕೇವಲ 2 ರನ್ ನೀಡಿ 2 ವಿಕೆಟ್‌ ಪಡೆದರು. ಮತ್ತೊಂದೆಡೆ, ನಾಯಕ ಸೂರ್ಯ ಮೊದಲ ಎಸೆತವನ್ನೇ ಬೌಂಡರಿಯ ಗಡಿ ದಾಟಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಇದನ್ನೂ ಓದಿ: ಏಷ್ಯನ್ ಕ್ರಿಕೆಟ್ ಮಂಡಳಿ: ಜಯ್ ಶಾ ಸ್ಥಾನಕ್ಕೆ ಪಾಕ್ ಕ್ರಿಕೆಟ್ ಮಂಡಳಿಯ ಹಾಲಿ ಅಧ್ಯಕ್ಷ ಮೊಹ್ಸಿನ್ ನಖ್ವಿ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.