ETV Bharat / entertainment

ರೇಣುಕಾಸ್ವಾಮಿ ಕೊಲೆ ಪ್ರಕರಣ: ಆರೋಪಿ ಪವಿತ್ರಾ ಗೌಡ ಯಾರು, ಹಿನ್ನೆಲೆ ಏನು? - Who is Pavitra gowda

author img

By ETV Bharat Karnataka Team

Published : Jun 12, 2024, 5:45 PM IST

Updated : Jun 12, 2024, 6:06 PM IST

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿರುವ ಪವಿತ್ರಾ ಗೌಡ ಯಾರು? ಎಂಬ ಪ್ರಶ್ನೆ ಜೋರಾಗಿ ಕೇಳಿಬರುತ್ತಿದೆ.

Pavitra gowda
ಆರೋಪಿ ಪ್ರವಿತ್ರಾ ಗೌಡ (ETV Bharat)

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಚಿತ್ರರಂಗದ ಜನಪ್ರಿಯ ನಟ. ಅಭಿಮಾನಿಗಳ ಪಾಲಿಗೆ ಡಿ ಬಾಸ್. ಆದ್ರಿಂದು ವಿವಾದಗಳ ಸುಳಿಯಲ್ಲಿ ಸಿಲುಕಿದ್ದಾರೆ. ಗೆಳತಿ ಪವಿತ್ರಾ ಗೌಡ ಅವರ ಹೆಸರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೋರಾಗಿಯೇ ಕೇಳಿಬರುತ್ತಿದೆ. ಅಷ್ಟಕ್ಕೂ ಯಾರು ಈ ಪವಿತ್ರಾ ಗೌಡ? ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ..

ಕಾಲೇಜು ದಿನಗಳಲ್ಲೇ ಬಣ್ಣದ ಲೋಕದ ಕ್ರೇಜ್​; ಅಗಮ್ಯ ಎಂಬ ಚಿತ್ರದಲ್ಲಿ ಒಂದು ಪಾತ್ರ ನಿರ್ವಹಿಸಿದ್ದ ಪವಿತ್ರಾ ಗೌಡ ಸ್ಟಾರ್ ನಟಿಯರ ಪಟ್ಟಿಯಲ್ಲಿಲ್ಲ. ಕಾಲೇಜು ದಿನಗಳಲ್ಲೇ ಬಣ್ಣದ ಜಗತ್ತಿನ ಕ್ರೇಜ್​​ ಬೆಳೆಸಿಕೊಂಡು ನಾಟಕ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಿಂಚಿದ್ದರು. ಆ ನಂತರ ಮಾಡೆಲ್ ಆಗುವ ಕನಸು ಕಂಡರು.

ಬಿಷಪ್ ಕಾಟನ್ ಕಾಲೇಜಿನಲ್ಲಿ ಬಿಸಿಎ ಪದವಿ ಮುಗಿಸಿರುವ ಇವರು, ಮಾಡೆಲಿಂಗ್​ನಲ್ಲಿ ಗುರುತಿಸಿಕೊಂಡಿದ್ದರು. ಸಾಕಷ್ಟು ರ‍್ಯಾಂಪ್ ಶೋಗಳಲ್ಲಿ ಹೆಜ್ಜೆ ಹಾಕಿರುವ ಅನುಭವವಿದೆ. ಅಲ್ಲದೇ ಬೆಂಗಳೂರಿನಲ್ಲಿ ನಡೆದ ಮೂರು ಫ್ಯಾಷನ್ ಶೋಗಳಲ್ಲಿ ಮೂರು ಬಾರಿ ಶೋ ಟಾಪರ್ ಪಟ್ಟ ಗಿಟ್ಟಿಸಿಕೊಂಡ ಚೆಲುವೆ ಮೂಲತಃ ಬೆಂಗಳೂರಿನ ಜೆ.ಪಿ ನಗರದವರು.

ಮಾಡೆಲ್​ ಲೋಕದಲ್ಲಿ ಮಿಸ್​ ಬೆಂಗಳೂರು; ಪದವಿ ಮುಗಿಯುತ್ತಲೇ ಮಾಡೆಲ್ ಆಗುವ ನಿಟ್ಟಿನಲ್ಲಿ ಪ್ರಯತ್ನ ಪ್ರಾರಂಭವಾಯಿತು. ಸಖತ್​​ ಆಕ್ಟಿವ್​ ಆಗಿದ್ದ ಈ ಹುಡುಗಿ ಬಲು ಬೇಗನೇ ಆ ವಲಯದ ಎಲ್ಲರ ಗಮನ ಸೆಳೆದರು. ಅತಿ ಕಡಿಮೆ ಅವಧಿಯಲ್ಲೇ ಹಲವಾರು ಚಿನ್ನಾಭರಣ ಮಳಿಗೆಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡರು. ಮಾಡೆಲ್ ಲೋಕದಲ್ಲಿ ಮಿಸ್ ಬೆಂಗಳೂರು ಆಗಿಯೂ ಹೊರಹೊಮ್ಮಿದರು.

ಆರಂಭದಿಂದಲೂ ಪವಿತ್ರಾಗೆ ಚಿತ್ರರಂಗದತ್ತ ಒಂದು ಸೆಳೆತವಿತ್ತು. ಅವರಿದ್ದ ಮಾಡೆಲಿಂಗ್ ಜಗತ್ತು ಅದಕ್ಕೆ ಪೂರಕವಾಗಿದ್ದುದರಿಂದ ಸಿನಿರಂಗ ಪ್ರವೇಶಿಸಲು ಹೆಚ್ಚು ಸಮಯ ಹಿಡಿಯಲಿಲ್ಲ. ಅಗಮ್ಯ ಚಿತ್ರಕ್ಕಾಗಿ ನಟಿಯ ಹುಡುಕಾಟದಲ್ಲಿದ್ದ ನಿರ್ದೇಶಕ ಉಮೇಶ್ ಗೌಡರ ಕಣ್ಣಿಗೆ ಬಿದ್ದದ್ದು ಪವಿತ್ರಾ. ಒಂದು ಕಾಲದಲ್ಲಿ ಬೆಂಗಳೂರು ಭೂಗತಲೋಕವನ್ನು ಆಳಿದ್ದ ಎಂ.ಪಿ ಜಯರಾಜ್ ಮಗ ನಾಯಕನಾಗಿದ್ದ ಈ ಸಿನಿಮಾದಲ್ಲಿ ಪವಿತ್ರಾ ಕೂಡಾ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಆದರೆ ಸಿನಿಮಾ ನಿರೀಕ್ಷಿತ ಮಟ್ಟಕ್ಕೆ ಗೆಲುವು ಕಾಣಲಿಲ್ಲ.

ಅಷ್ಟೊತ್ತಿಗೆ ಫಿಜ್ಜಾ ಎಂಬ ಚಿತ್ರ ಮಾಡಿ ಗೆಲುವು ಕಂಡ ತಂಡ ತಮಿಳಿನಲ್ಲಿ ಇನ್ನೊಂದು ಚಿತ್ರಕ್ಕೆ ಕೈ ಹಾಕಿತ್ತು. ಅದಕ್ಕೆ 54312 ಎಂಬ ಹೆಸರನ್ನೂ ಇಟ್ಟಿತ್ತು. ಈ ಚಿತ್ರಕ್ಕೆ ಪವಿತ್ರಾ ನಾಯಕಿಯಾಗಿದ್ದರು. ಆದರೆ ಆ ನಂತರ ಆ ಚಿತ್ರದ ಕಥೆ ಏನಾಯ್ತು ಅನ್ನುವುದು ಖುದ್ದು ಪವಿತ್ರಾರಿಗೆ ಗೊತ್ತು. ಒಟ್ಟಾರೆ ನಟನೆಯಲ್ಲಿ ಅವರು ಅಷ್ಟೊಂದು‌ ಕ್ಲಿಕ್ ಆಗಲಿಲ್ಲ.

ಅವಕಾಶಗಳ ಕೊರತೆ ಎದುರಿಸಿದ ಪವಿತ್ರಾ ಮತ್ತು ದರ್ಶನ್ ಹೇಗೆ ಪರಿಚಿತರೆಂಬ ಪ್ರಶ್ನೆ ಮೂಡೋದು ಸಹಜ. ಇದಕ್ಕೆ ಉತ್ತರ ಪಾರ್ಟಿಗಳು. ಹೌದು, ಪವಿತ್ರಾ ಕನ್ನಡ ಚಿತ್ರರಂಗದಲ್ಲಿ ಕಾಸ್ಟ್ಯೂಮ್​​ ಡಿಸೈನರ್ ಆಗಿ ಗುರುತಿಸಿಕೊಂಡಿರುವ ಮಹಿಳೆ. ಇವರ ಸ್ನೇಹಿತೆಯೊಬ್ಬರ ಪತಿ ವೃತ್ತಿಯಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಕೊರಿಯೋಗ್ರಾಫರ್ ಮತ್ತು ನಿರ್ದೇಶಕ. ಒಂದು ಕಾಲದಲ್ಲಿ ದರ್ಶನ್‌ ಅವರ ಬಹುತೇಕ ಸಿನಿಮಾಗಳಿಗೆ ಕೋರಿಯೋಗ್ರಾಫಿ ಮಾಡುತ್ತಿದ್ದವರು ಇವರೇ ಆಗಿದ್ದರು. ಇವರ ಮೂಲಕ ದರ್ಶನ್ ಅವರಿಗೆ ಪವಿತ್ರಾ ಸ್ನೇಹ ಬೆಳೆಯಿತು. ಹೀಗೆ ದರ್ಶನ್​​ಗೆ ಪರಿಚಯವಾದ ಪವಿತ್ರಾ, ಆ ಕಾಲದಲ್ಲಿ ದರ್ಶನ್ ಅವರ ಜಗ್ಗುದಾದಾ ಎಂಬ ಸಿನಿಮಾದ ನಾಯಕಿ ಪಾತ್ರಕ್ಕೆ ಆಡಿಷನ್ ಕೊಡಲು ಹೋಗಿದ್ದರು ಎನ್ನುತ್ತೆ ಗಾಂಧಿನಗರ.

ಹೀಗೆ ಶುರುವಾದ ಸ್ನೇಹ ಪ್ರೇಮಕ್ಕೆ ತಿರುಗಿತು ಎಂಬುದು ಹಲವರ ಅಭಿಪ್ರಾಯ. ಇದಕ್ಕೆ ಸಾಕ್ಷಿ ಎನ್ನುವಂತೆ 2016ರಲ್ಲಿ ಜಗ್ಗುದಾದಾ ತೆರೆಗೆ ಬಂದ ಬೆನ್ನಲ್ಲೇ, 2017ರಲ್ಲಿ ತಾರಕ್ ಚಿತ್ರದ ಬಿಡುಗಡೆಯ ಸಮಯದಲ್ಲಿ ಪವಿತ್ರಾ, ದರ್ಶನ್ ಜೊತೆಗಿನ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆಗೈದ ಸ್ಥಳಕ್ಕೆ ದರ್ಶನ್ ಕರೆದೊಯ್ದು ಮಹಜರು ನಡೆಸಿದ ಪೊಲೀಸರು - Renukaswamy Murder Case

ಇತ್ತೀಚಿಗೆ ಪವಿತ್ರಾ ಗೌಡ ಸಾರ್ವಜನಿಕವಾಗಿಯೇ ದರ್ಶನ್ ಹಾಗೂ ನನ್ನ ಸ್ನೇಹಕ್ಕೆ 10 ವರ್ಷ ಆಯಿತೆಂದು ಆತ್ಮೀಯ ಕ್ಷಣಗಳ ಫೋಟೋಗಳನ್ನು ಮತ್ತೊಮ್ಮೆ ಸೋಷಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಇದರಿಂದ ಕೆರಳಿದ್ದ ದರ್ಶನ್​ ಪತ್ನಿ ವಿಜಯಲಕ್ಷ್ಮೀ ಸೋಷಿಯಲ್ ಮೀಡಿಯಾದಲ್ಲಿ ಪವಿತ್ರಾ ಗೌಡರ ಮೊದಲ ಪತಿಯ ಫೋಟೋಗಳನ್ನು ಶೇರ್ ಮಾಡಿದ್ದರು. ಇದು ಇಬ್ಬರ (ಪವಿತ್ರಾ- ವಿಜಯಲಕ್ಷ್ಮಿ) ಮಧ್ಯೆ ಜಾಲತಾಣದಲ್ಲಿ ಪರಸ್ಪರ ಗಲಾಟೆಗೆ ಕಾರಣವಾಯಿತು.

ಇದನ್ನೂ ಓದಿ: 'ಅಂತಿಮ ನಿರ್ಧಾರ ಸರಿಯಲ್ಲ, ದರ್ಶನ್-ಪವಿತ್ರಾ ನಿರಪರಾಧಿಗಳು': ವಕೀಲ ನಾರಾಯಣಸ್ವಾಮಿ - Darshan Advocate Narayanaswamy

ಸದ್ಯ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಕೊಲೆಗೈದಿರುವ ಆರೋಪ ದರ್ಶನ್ ಹಾಗೂ ಅವರ ಸಹವರ್ತಿಗಳ ಮೇಲಿದೆ. ಈ ಪ್ರಕರಣದ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಚಿತ್ರರಂಗದ ಜನಪ್ರಿಯ ನಟ. ಅಭಿಮಾನಿಗಳ ಪಾಲಿಗೆ ಡಿ ಬಾಸ್. ಆದ್ರಿಂದು ವಿವಾದಗಳ ಸುಳಿಯಲ್ಲಿ ಸಿಲುಕಿದ್ದಾರೆ. ಗೆಳತಿ ಪವಿತ್ರಾ ಗೌಡ ಅವರ ಹೆಸರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೋರಾಗಿಯೇ ಕೇಳಿಬರುತ್ತಿದೆ. ಅಷ್ಟಕ್ಕೂ ಯಾರು ಈ ಪವಿತ್ರಾ ಗೌಡ? ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ..

ಕಾಲೇಜು ದಿನಗಳಲ್ಲೇ ಬಣ್ಣದ ಲೋಕದ ಕ್ರೇಜ್​; ಅಗಮ್ಯ ಎಂಬ ಚಿತ್ರದಲ್ಲಿ ಒಂದು ಪಾತ್ರ ನಿರ್ವಹಿಸಿದ್ದ ಪವಿತ್ರಾ ಗೌಡ ಸ್ಟಾರ್ ನಟಿಯರ ಪಟ್ಟಿಯಲ್ಲಿಲ್ಲ. ಕಾಲೇಜು ದಿನಗಳಲ್ಲೇ ಬಣ್ಣದ ಜಗತ್ತಿನ ಕ್ರೇಜ್​​ ಬೆಳೆಸಿಕೊಂಡು ನಾಟಕ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಿಂಚಿದ್ದರು. ಆ ನಂತರ ಮಾಡೆಲ್ ಆಗುವ ಕನಸು ಕಂಡರು.

ಬಿಷಪ್ ಕಾಟನ್ ಕಾಲೇಜಿನಲ್ಲಿ ಬಿಸಿಎ ಪದವಿ ಮುಗಿಸಿರುವ ಇವರು, ಮಾಡೆಲಿಂಗ್​ನಲ್ಲಿ ಗುರುತಿಸಿಕೊಂಡಿದ್ದರು. ಸಾಕಷ್ಟು ರ‍್ಯಾಂಪ್ ಶೋಗಳಲ್ಲಿ ಹೆಜ್ಜೆ ಹಾಕಿರುವ ಅನುಭವವಿದೆ. ಅಲ್ಲದೇ ಬೆಂಗಳೂರಿನಲ್ಲಿ ನಡೆದ ಮೂರು ಫ್ಯಾಷನ್ ಶೋಗಳಲ್ಲಿ ಮೂರು ಬಾರಿ ಶೋ ಟಾಪರ್ ಪಟ್ಟ ಗಿಟ್ಟಿಸಿಕೊಂಡ ಚೆಲುವೆ ಮೂಲತಃ ಬೆಂಗಳೂರಿನ ಜೆ.ಪಿ ನಗರದವರು.

ಮಾಡೆಲ್​ ಲೋಕದಲ್ಲಿ ಮಿಸ್​ ಬೆಂಗಳೂರು; ಪದವಿ ಮುಗಿಯುತ್ತಲೇ ಮಾಡೆಲ್ ಆಗುವ ನಿಟ್ಟಿನಲ್ಲಿ ಪ್ರಯತ್ನ ಪ್ರಾರಂಭವಾಯಿತು. ಸಖತ್​​ ಆಕ್ಟಿವ್​ ಆಗಿದ್ದ ಈ ಹುಡುಗಿ ಬಲು ಬೇಗನೇ ಆ ವಲಯದ ಎಲ್ಲರ ಗಮನ ಸೆಳೆದರು. ಅತಿ ಕಡಿಮೆ ಅವಧಿಯಲ್ಲೇ ಹಲವಾರು ಚಿನ್ನಾಭರಣ ಮಳಿಗೆಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡರು. ಮಾಡೆಲ್ ಲೋಕದಲ್ಲಿ ಮಿಸ್ ಬೆಂಗಳೂರು ಆಗಿಯೂ ಹೊರಹೊಮ್ಮಿದರು.

ಆರಂಭದಿಂದಲೂ ಪವಿತ್ರಾಗೆ ಚಿತ್ರರಂಗದತ್ತ ಒಂದು ಸೆಳೆತವಿತ್ತು. ಅವರಿದ್ದ ಮಾಡೆಲಿಂಗ್ ಜಗತ್ತು ಅದಕ್ಕೆ ಪೂರಕವಾಗಿದ್ದುದರಿಂದ ಸಿನಿರಂಗ ಪ್ರವೇಶಿಸಲು ಹೆಚ್ಚು ಸಮಯ ಹಿಡಿಯಲಿಲ್ಲ. ಅಗಮ್ಯ ಚಿತ್ರಕ್ಕಾಗಿ ನಟಿಯ ಹುಡುಕಾಟದಲ್ಲಿದ್ದ ನಿರ್ದೇಶಕ ಉಮೇಶ್ ಗೌಡರ ಕಣ್ಣಿಗೆ ಬಿದ್ದದ್ದು ಪವಿತ್ರಾ. ಒಂದು ಕಾಲದಲ್ಲಿ ಬೆಂಗಳೂರು ಭೂಗತಲೋಕವನ್ನು ಆಳಿದ್ದ ಎಂ.ಪಿ ಜಯರಾಜ್ ಮಗ ನಾಯಕನಾಗಿದ್ದ ಈ ಸಿನಿಮಾದಲ್ಲಿ ಪವಿತ್ರಾ ಕೂಡಾ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಆದರೆ ಸಿನಿಮಾ ನಿರೀಕ್ಷಿತ ಮಟ್ಟಕ್ಕೆ ಗೆಲುವು ಕಾಣಲಿಲ್ಲ.

ಅಷ್ಟೊತ್ತಿಗೆ ಫಿಜ್ಜಾ ಎಂಬ ಚಿತ್ರ ಮಾಡಿ ಗೆಲುವು ಕಂಡ ತಂಡ ತಮಿಳಿನಲ್ಲಿ ಇನ್ನೊಂದು ಚಿತ್ರಕ್ಕೆ ಕೈ ಹಾಕಿತ್ತು. ಅದಕ್ಕೆ 54312 ಎಂಬ ಹೆಸರನ್ನೂ ಇಟ್ಟಿತ್ತು. ಈ ಚಿತ್ರಕ್ಕೆ ಪವಿತ್ರಾ ನಾಯಕಿಯಾಗಿದ್ದರು. ಆದರೆ ಆ ನಂತರ ಆ ಚಿತ್ರದ ಕಥೆ ಏನಾಯ್ತು ಅನ್ನುವುದು ಖುದ್ದು ಪವಿತ್ರಾರಿಗೆ ಗೊತ್ತು. ಒಟ್ಟಾರೆ ನಟನೆಯಲ್ಲಿ ಅವರು ಅಷ್ಟೊಂದು‌ ಕ್ಲಿಕ್ ಆಗಲಿಲ್ಲ.

ಅವಕಾಶಗಳ ಕೊರತೆ ಎದುರಿಸಿದ ಪವಿತ್ರಾ ಮತ್ತು ದರ್ಶನ್ ಹೇಗೆ ಪರಿಚಿತರೆಂಬ ಪ್ರಶ್ನೆ ಮೂಡೋದು ಸಹಜ. ಇದಕ್ಕೆ ಉತ್ತರ ಪಾರ್ಟಿಗಳು. ಹೌದು, ಪವಿತ್ರಾ ಕನ್ನಡ ಚಿತ್ರರಂಗದಲ್ಲಿ ಕಾಸ್ಟ್ಯೂಮ್​​ ಡಿಸೈನರ್ ಆಗಿ ಗುರುತಿಸಿಕೊಂಡಿರುವ ಮಹಿಳೆ. ಇವರ ಸ್ನೇಹಿತೆಯೊಬ್ಬರ ಪತಿ ವೃತ್ತಿಯಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಕೊರಿಯೋಗ್ರಾಫರ್ ಮತ್ತು ನಿರ್ದೇಶಕ. ಒಂದು ಕಾಲದಲ್ಲಿ ದರ್ಶನ್‌ ಅವರ ಬಹುತೇಕ ಸಿನಿಮಾಗಳಿಗೆ ಕೋರಿಯೋಗ್ರಾಫಿ ಮಾಡುತ್ತಿದ್ದವರು ಇವರೇ ಆಗಿದ್ದರು. ಇವರ ಮೂಲಕ ದರ್ಶನ್ ಅವರಿಗೆ ಪವಿತ್ರಾ ಸ್ನೇಹ ಬೆಳೆಯಿತು. ಹೀಗೆ ದರ್ಶನ್​​ಗೆ ಪರಿಚಯವಾದ ಪವಿತ್ರಾ, ಆ ಕಾಲದಲ್ಲಿ ದರ್ಶನ್ ಅವರ ಜಗ್ಗುದಾದಾ ಎಂಬ ಸಿನಿಮಾದ ನಾಯಕಿ ಪಾತ್ರಕ್ಕೆ ಆಡಿಷನ್ ಕೊಡಲು ಹೋಗಿದ್ದರು ಎನ್ನುತ್ತೆ ಗಾಂಧಿನಗರ.

ಹೀಗೆ ಶುರುವಾದ ಸ್ನೇಹ ಪ್ರೇಮಕ್ಕೆ ತಿರುಗಿತು ಎಂಬುದು ಹಲವರ ಅಭಿಪ್ರಾಯ. ಇದಕ್ಕೆ ಸಾಕ್ಷಿ ಎನ್ನುವಂತೆ 2016ರಲ್ಲಿ ಜಗ್ಗುದಾದಾ ತೆರೆಗೆ ಬಂದ ಬೆನ್ನಲ್ಲೇ, 2017ರಲ್ಲಿ ತಾರಕ್ ಚಿತ್ರದ ಬಿಡುಗಡೆಯ ಸಮಯದಲ್ಲಿ ಪವಿತ್ರಾ, ದರ್ಶನ್ ಜೊತೆಗಿನ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆಗೈದ ಸ್ಥಳಕ್ಕೆ ದರ್ಶನ್ ಕರೆದೊಯ್ದು ಮಹಜರು ನಡೆಸಿದ ಪೊಲೀಸರು - Renukaswamy Murder Case

ಇತ್ತೀಚಿಗೆ ಪವಿತ್ರಾ ಗೌಡ ಸಾರ್ವಜನಿಕವಾಗಿಯೇ ದರ್ಶನ್ ಹಾಗೂ ನನ್ನ ಸ್ನೇಹಕ್ಕೆ 10 ವರ್ಷ ಆಯಿತೆಂದು ಆತ್ಮೀಯ ಕ್ಷಣಗಳ ಫೋಟೋಗಳನ್ನು ಮತ್ತೊಮ್ಮೆ ಸೋಷಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಇದರಿಂದ ಕೆರಳಿದ್ದ ದರ್ಶನ್​ ಪತ್ನಿ ವಿಜಯಲಕ್ಷ್ಮೀ ಸೋಷಿಯಲ್ ಮೀಡಿಯಾದಲ್ಲಿ ಪವಿತ್ರಾ ಗೌಡರ ಮೊದಲ ಪತಿಯ ಫೋಟೋಗಳನ್ನು ಶೇರ್ ಮಾಡಿದ್ದರು. ಇದು ಇಬ್ಬರ (ಪವಿತ್ರಾ- ವಿಜಯಲಕ್ಷ್ಮಿ) ಮಧ್ಯೆ ಜಾಲತಾಣದಲ್ಲಿ ಪರಸ್ಪರ ಗಲಾಟೆಗೆ ಕಾರಣವಾಯಿತು.

ಇದನ್ನೂ ಓದಿ: 'ಅಂತಿಮ ನಿರ್ಧಾರ ಸರಿಯಲ್ಲ, ದರ್ಶನ್-ಪವಿತ್ರಾ ನಿರಪರಾಧಿಗಳು': ವಕೀಲ ನಾರಾಯಣಸ್ವಾಮಿ - Darshan Advocate Narayanaswamy

ಸದ್ಯ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಕೊಲೆಗೈದಿರುವ ಆರೋಪ ದರ್ಶನ್ ಹಾಗೂ ಅವರ ಸಹವರ್ತಿಗಳ ಮೇಲಿದೆ. ಈ ಪ್ರಕರಣದ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ.

Last Updated : Jun 12, 2024, 6:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.