ETV Bharat / entertainment

'ಅತ್ಯುತ್ತಮ ನಟ​'​​ ರಾಷ್ಟ್ರಪ್ರಶಸ್ತಿ ಸ್ವೀಕರಿಸಿದ ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ: ಕರ್ನಾಟಕ ಜನತೆಗೆ ಅರ್ಪಣೆ

ಚಂದನವನದ ಡಿವೈನ್​ ಸ್ಟಾರ್​ ಖ್ಯಾತಿಯ ರಿಷಬ್​ ಶೆಟ್ಟಿ ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದರು. ನವದೆಹಲಿಯ ವಿಜ್ಞಾನ ಭವನದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಿದರು.

author img

By ETV Bharat Entertainment Team

Published : 3 hours ago

Rishab Shetty won 'Best actor' National Award
ಅತ್ಯುತ್ತಮ ನಟ​​​ ರಾಷ್ಟ್ರಪ್ರಶಸ್ತಿ ಪಡೆದ ರಿಷಬ್​ ಶೆಟ್ಟಿ (Photo: Fil poster, ANI)

ನವದೆಹಲಿ: ಕಾಂತಾರ ಎಂಬ ಅದ್ಭುತ ಸಿನಿಮಾದ ಸಾರಥ್ಯ ವಹಿಸಿದ್ದ ರಿಷಬ್​ ಶೆಟ್ಟಿ 'ಅತ್ಯುತ್ತಮ ನಟ' ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ನವದೆಹಲಿಯ ವಿಜ್ಞಾನ ಭವನದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು. ರಾಷ್ಟ್ರಪತಿ ಜೊತೆ ಸಚಿವ ಅಶ್ವಿನಿ ವೈಷ್ಣವ್​ ಉಪಸ್ಥಿತರಿದ್ದರು.

ಅತ್ಯುತ್ತಮ ನಟ​​​ ರಾಷ್ಟ್ರಪ್ರಶಸ್ತಿ ಪಡೆದ ರಿಷಬ್​ ಶೆಟ್ಟಿ (ANI)

"ಪ್ರತೀ ಚಿತ್ರಗಳೂ ಪ್ರಭಾವ ಬೀರುತ್ತವೆ. ಸಮಾಜದಲ್ಲಿ ಬದಲಾವಣೆ ಅಥವಾ ಪ್ರಭಾವ ಬೀರುವ ಸಿನಿಮಾಗಳನ್ನು ಮಾಡುವುದೇ ನಮ್ಮ ಉದ್ದೇಶ. ನಾನು ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸುತ್ತೇನೆ. ರಾಷ್ಟ್ರೀಯ ಪ್ರಶಸ್ತಿಗಳು ಕಲಾವಿದನಿಗೆ ಅತ್ಯಂತ ಪ್ರತಿಷ್ಠಿತ ಬಹುಮಾನ" ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

ರಿಷಬ್​​ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಈ ಚಿತ್ರ ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಕಾಣುವ ಮೂಲಕ ದಾಖಲೆ ಬರೆದಿತ್ತು. 16 ಕೋಟಿ ರೂ. ಬಜೆಟ್​ನಲ್ಲಿ ನಿರ್ಮಾಣಗೊಂಡ ಚಿತ್ರ ಕಲೆಕ್ಷನ್​ ಮಾಡಿದ್ದು 450 ಕೋಟಿ ರೂಪಾಯಿಗೂ ಅಧಿಕ!.

'ಕಾಂತಾರ 1', 2022ರ ಸೆಪ್ಟೆಂಬರ್​​​ 30ರಂದು ಚಿತ್ರಮಂದಿರ ಪ್ರವೇಶಿಸಿತು. ಕರುನಾಡಿಗರನ್ನು ಗಮನದಲ್ಲಿಟ್ಟುಕೊಂಡು ಮಾಡಿದ್ದ ಈ ಚಿತ್ರ ಮಾತ್ರ ಗಡಿ ಮೀರಿ ವಿಸ್ತರಿಸಿತು. ಭಾರತೀಯ ಚಿತ್ರರಂಗದಾದ್ಯಂತ ಸದ್ದು ಮಾಡಿತು. ಪ್ರೇಕ್ಷಕರು, ಅಭಿಮಾನಿಗಳು ಮಾತ್ರವಲ್ಲದೇ ಸಿನಿವಲಯದ ಹೆಸರಾಂತರು ಈ ಸಿನಿಮಾವನ್ನು ಮೆಚ್ಚಿ ಕೊಂಡಾಡಿದ್ದರು. ಈ ಗೆಲುವು ಸಿನಿಮಾದ ಮತ್ತೊಂದು ಭಾಗ ಮೂಡಿಬರಲು ಕಾರಣವಾಯಿತು. ಚಿತ್ರದ ಪ್ರೀಕ್ವೆಲ್​​ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿದೆ.

ಈ ಚಿತ್ರದಲ್ಲಿನ ನಟನ ನಟನೆ ಅಮೋಘ. ಮೂಲತಃ ಕರಾವಳಿ ಅವರೇ ಆಗಿರುವ ಶೆಟ್ರು ಚಿತ್ರದ ಕಥೆಯನ್ನು ಅದ್ಭುತವಾಗಿ ರವಾನಿಸಿದ್ದರು. ಕರಾವಳಿ ಸಂಸ್ಕೃತಿಯನ್ನು ಎತ್ತಿಹಿಡಿದಿದ್ದ ಚಿತ್ರದ ಕ್ಲೈಮ್ಯಾಕ್ಸ್​​​ ವರ್ಣನಾತೀತ. ಕೊನೆಯ 15-20 ನಿಮಿಷಳು ಸಿನಿಮಾದ ಹೈಲೆಟ್​ ಅಂತಲೇ ಹೇಳಬಹುದು. ತಮ್ಮ ಮೈಮೇಲೆ ದೈವ ಆಹ್ವಾಹನೆಯಾದಂತೆ ರಿಷಬ್ ಶೆಟ್ಟಿ ಅದ್ಭುತವಾಗಿ ನಟಿಸಿದ್ದರು. ದೈವಾರಾಧನೆಯನ್ನು ತಮ್ಮ ಜೀವನದ ಪ್ರಮುಖ ವಿಷಯವನ್ನಾಗಿಸಿಕೊಂಡಿರುವ ಕರಾವಳಿ ಜನತೆಯಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.

ಇದನ್ನೂ ಓದಿ: 'ಕೆಜಿಎಫ್​ 2'ಗೆ ಅತ್ಯುತ್ತಮ ಆ್ಯಕ್ಷನ್ ಡೈರೆಕ್ಷನ್​​​ ರಾಷ್ಟ್ರಪ್ರಶಸ್ತಿ ಪ್ರದಾನ

ಆಗಸ್ಟ್ 16ರಂದು ಪ್ರತಿಷ್ಠಿತ ಪ್ರಶಸ್ತಿ ಘೋಷಣೆಯಾಗಿತ್ತು. ಅಂದು ಸೋಷಿಯಲ್​ ಮೀಡಿಯಾ ಮೂಲಕ ಸರ್ವರಿಗೂ ತಮ್ಮ ಕೃತಘ್ಞತೆ ಅರ್ಪಿಸಿದ್ದ ರಿಷಬ್​ ಶೆಟ್ಟಿ, 'ಕಾಂತಾರ ಸಿನಿಮಾಗೆ ಸಿಕ್ಕಿರುವ ರಾಷ್ಟ್ರೀಯ ಪ್ರಶಸ್ತಿಯ ಗೌರವಕ್ಕೆ ನಾನು ನಿಜವಾಗಿಯೂ ಆಭಾರಿ. ನನ್ನೀ ಪಯಣದಲ್ಲಿ ಭಾಗಿಯಾದ ಪ್ರತಿಯೊಬ್ಬ ಕಲಾವಿದರು, ತಂತ್ರಜ್ಞರು ಮತ್ತು ವಿಶೇಷವಾಗಿ ಹೊಂಬಾಳೆ ಫಿಲ್ಮ್ಸ್​​​ ತಂಡಕ್ಕೆ ನಾನು ನನ್ನ ಹೃತ್ಫೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ಪ್ರೇಕ್ಷಕರು ಈ ಸಿನಿಮಾ ಕೊಟ್ಟಿರುವ ಬೆಂಬಲವು ನನ್ನಲ್ಲಿ ಇನ್ನಷ್ಟು ಜವಾಬ್ದಾರಿ ತುಂಬಿದೆ. ನಮ್ಮ ವೀಕ್ಷಕರಿಗೆ ಇನ್ನೂ ಉತ್ತಮ ಚಿತ್ರ ನೀಡಲು ಇನ್ನೂ ಹೆಚ್ಚು ಶ್ರಮಿಸಲು ನಾನು ಬದ್ಧನಾಗಿದ್ದೇನೆ. ಅತ್ಯಂತ ಗೌರವದಿಂದ ನಾನು ಈ ಪ್ರಶಸ್ತಿಯನ್ನು ಕನ್ನಡ ಪ್ರೇಕ್ಷಕರು, ದೈವ ನರ್ತಕರು, ಅಪ್ಪು ಸರ್​​ಗೆ ಅರ್ಪಿಸುತ್ತೇನೆ. ದೈವದ ಆಶೀರ್ವಾದದಿಂದ ನಾವು ಈ ಕ್ಷಣ ತಲುಪಿದ್ದೇವೆ' ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ: 'ಕೆಜಿಎಫ್ ​2' ಅತ್ಯುತ್ತಮ ಕನ್ನಡ ಸಿನಿಮಾ

ಅಲ್ಲದೇ ಮಾಧ್ಯಮಗಳೊಂದಿಗೆ ಮಾತನಾಡಿದ್ದ ನಟ, "ಈ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿ ನನ್ನ ಸಿನಿಮಾ ಜವಾಬ್ದಾರಿಯನ್ನು ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುವಂತಹ ಅತ್ಯುತ್ತಮ ಸಿನಿಮಾಗಳನ್ನು ಮಾಡುತ್ತೇನೆ" ಎಂದು ಭರವಸೆ ನೀಡಿದ್ದರು.

ನವದೆಹಲಿ: ಕಾಂತಾರ ಎಂಬ ಅದ್ಭುತ ಸಿನಿಮಾದ ಸಾರಥ್ಯ ವಹಿಸಿದ್ದ ರಿಷಬ್​ ಶೆಟ್ಟಿ 'ಅತ್ಯುತ್ತಮ ನಟ' ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ನವದೆಹಲಿಯ ವಿಜ್ಞಾನ ಭವನದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು. ರಾಷ್ಟ್ರಪತಿ ಜೊತೆ ಸಚಿವ ಅಶ್ವಿನಿ ವೈಷ್ಣವ್​ ಉಪಸ್ಥಿತರಿದ್ದರು.

ಅತ್ಯುತ್ತಮ ನಟ​​​ ರಾಷ್ಟ್ರಪ್ರಶಸ್ತಿ ಪಡೆದ ರಿಷಬ್​ ಶೆಟ್ಟಿ (ANI)

"ಪ್ರತೀ ಚಿತ್ರಗಳೂ ಪ್ರಭಾವ ಬೀರುತ್ತವೆ. ಸಮಾಜದಲ್ಲಿ ಬದಲಾವಣೆ ಅಥವಾ ಪ್ರಭಾವ ಬೀರುವ ಸಿನಿಮಾಗಳನ್ನು ಮಾಡುವುದೇ ನಮ್ಮ ಉದ್ದೇಶ. ನಾನು ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸುತ್ತೇನೆ. ರಾಷ್ಟ್ರೀಯ ಪ್ರಶಸ್ತಿಗಳು ಕಲಾವಿದನಿಗೆ ಅತ್ಯಂತ ಪ್ರತಿಷ್ಠಿತ ಬಹುಮಾನ" ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

ರಿಷಬ್​​ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಈ ಚಿತ್ರ ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಕಾಣುವ ಮೂಲಕ ದಾಖಲೆ ಬರೆದಿತ್ತು. 16 ಕೋಟಿ ರೂ. ಬಜೆಟ್​ನಲ್ಲಿ ನಿರ್ಮಾಣಗೊಂಡ ಚಿತ್ರ ಕಲೆಕ್ಷನ್​ ಮಾಡಿದ್ದು 450 ಕೋಟಿ ರೂಪಾಯಿಗೂ ಅಧಿಕ!.

'ಕಾಂತಾರ 1', 2022ರ ಸೆಪ್ಟೆಂಬರ್​​​ 30ರಂದು ಚಿತ್ರಮಂದಿರ ಪ್ರವೇಶಿಸಿತು. ಕರುನಾಡಿಗರನ್ನು ಗಮನದಲ್ಲಿಟ್ಟುಕೊಂಡು ಮಾಡಿದ್ದ ಈ ಚಿತ್ರ ಮಾತ್ರ ಗಡಿ ಮೀರಿ ವಿಸ್ತರಿಸಿತು. ಭಾರತೀಯ ಚಿತ್ರರಂಗದಾದ್ಯಂತ ಸದ್ದು ಮಾಡಿತು. ಪ್ರೇಕ್ಷಕರು, ಅಭಿಮಾನಿಗಳು ಮಾತ್ರವಲ್ಲದೇ ಸಿನಿವಲಯದ ಹೆಸರಾಂತರು ಈ ಸಿನಿಮಾವನ್ನು ಮೆಚ್ಚಿ ಕೊಂಡಾಡಿದ್ದರು. ಈ ಗೆಲುವು ಸಿನಿಮಾದ ಮತ್ತೊಂದು ಭಾಗ ಮೂಡಿಬರಲು ಕಾರಣವಾಯಿತು. ಚಿತ್ರದ ಪ್ರೀಕ್ವೆಲ್​​ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿದೆ.

ಈ ಚಿತ್ರದಲ್ಲಿನ ನಟನ ನಟನೆ ಅಮೋಘ. ಮೂಲತಃ ಕರಾವಳಿ ಅವರೇ ಆಗಿರುವ ಶೆಟ್ರು ಚಿತ್ರದ ಕಥೆಯನ್ನು ಅದ್ಭುತವಾಗಿ ರವಾನಿಸಿದ್ದರು. ಕರಾವಳಿ ಸಂಸ್ಕೃತಿಯನ್ನು ಎತ್ತಿಹಿಡಿದಿದ್ದ ಚಿತ್ರದ ಕ್ಲೈಮ್ಯಾಕ್ಸ್​​​ ವರ್ಣನಾತೀತ. ಕೊನೆಯ 15-20 ನಿಮಿಷಳು ಸಿನಿಮಾದ ಹೈಲೆಟ್​ ಅಂತಲೇ ಹೇಳಬಹುದು. ತಮ್ಮ ಮೈಮೇಲೆ ದೈವ ಆಹ್ವಾಹನೆಯಾದಂತೆ ರಿಷಬ್ ಶೆಟ್ಟಿ ಅದ್ಭುತವಾಗಿ ನಟಿಸಿದ್ದರು. ದೈವಾರಾಧನೆಯನ್ನು ತಮ್ಮ ಜೀವನದ ಪ್ರಮುಖ ವಿಷಯವನ್ನಾಗಿಸಿಕೊಂಡಿರುವ ಕರಾವಳಿ ಜನತೆಯಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.

ಇದನ್ನೂ ಓದಿ: 'ಕೆಜಿಎಫ್​ 2'ಗೆ ಅತ್ಯುತ್ತಮ ಆ್ಯಕ್ಷನ್ ಡೈರೆಕ್ಷನ್​​​ ರಾಷ್ಟ್ರಪ್ರಶಸ್ತಿ ಪ್ರದಾನ

ಆಗಸ್ಟ್ 16ರಂದು ಪ್ರತಿಷ್ಠಿತ ಪ್ರಶಸ್ತಿ ಘೋಷಣೆಯಾಗಿತ್ತು. ಅಂದು ಸೋಷಿಯಲ್​ ಮೀಡಿಯಾ ಮೂಲಕ ಸರ್ವರಿಗೂ ತಮ್ಮ ಕೃತಘ್ಞತೆ ಅರ್ಪಿಸಿದ್ದ ರಿಷಬ್​ ಶೆಟ್ಟಿ, 'ಕಾಂತಾರ ಸಿನಿಮಾಗೆ ಸಿಕ್ಕಿರುವ ರಾಷ್ಟ್ರೀಯ ಪ್ರಶಸ್ತಿಯ ಗೌರವಕ್ಕೆ ನಾನು ನಿಜವಾಗಿಯೂ ಆಭಾರಿ. ನನ್ನೀ ಪಯಣದಲ್ಲಿ ಭಾಗಿಯಾದ ಪ್ರತಿಯೊಬ್ಬ ಕಲಾವಿದರು, ತಂತ್ರಜ್ಞರು ಮತ್ತು ವಿಶೇಷವಾಗಿ ಹೊಂಬಾಳೆ ಫಿಲ್ಮ್ಸ್​​​ ತಂಡಕ್ಕೆ ನಾನು ನನ್ನ ಹೃತ್ಫೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ಪ್ರೇಕ್ಷಕರು ಈ ಸಿನಿಮಾ ಕೊಟ್ಟಿರುವ ಬೆಂಬಲವು ನನ್ನಲ್ಲಿ ಇನ್ನಷ್ಟು ಜವಾಬ್ದಾರಿ ತುಂಬಿದೆ. ನಮ್ಮ ವೀಕ್ಷಕರಿಗೆ ಇನ್ನೂ ಉತ್ತಮ ಚಿತ್ರ ನೀಡಲು ಇನ್ನೂ ಹೆಚ್ಚು ಶ್ರಮಿಸಲು ನಾನು ಬದ್ಧನಾಗಿದ್ದೇನೆ. ಅತ್ಯಂತ ಗೌರವದಿಂದ ನಾನು ಈ ಪ್ರಶಸ್ತಿಯನ್ನು ಕನ್ನಡ ಪ್ರೇಕ್ಷಕರು, ದೈವ ನರ್ತಕರು, ಅಪ್ಪು ಸರ್​​ಗೆ ಅರ್ಪಿಸುತ್ತೇನೆ. ದೈವದ ಆಶೀರ್ವಾದದಿಂದ ನಾವು ಈ ಕ್ಷಣ ತಲುಪಿದ್ದೇವೆ' ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ: 'ಕೆಜಿಎಫ್ ​2' ಅತ್ಯುತ್ತಮ ಕನ್ನಡ ಸಿನಿಮಾ

ಅಲ್ಲದೇ ಮಾಧ್ಯಮಗಳೊಂದಿಗೆ ಮಾತನಾಡಿದ್ದ ನಟ, "ಈ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿ ನನ್ನ ಸಿನಿಮಾ ಜವಾಬ್ದಾರಿಯನ್ನು ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುವಂತಹ ಅತ್ಯುತ್ತಮ ಸಿನಿಮಾಗಳನ್ನು ಮಾಡುತ್ತೇನೆ" ಎಂದು ಭರವಸೆ ನೀಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.