ETV Bharat / bharat

Be careful; ಸುಲಭವಾಗಿ ಹಣ ಗಳಿಸಲು ಹೋದರೆ, ಸೈಬರ್ ಕ್ರೈಮ್ ಬಲೆಗೆ ಬೀಳುವ ಅಪಾಯವಿದೆ... ತಡೆಯಲು ಹೀಗೆ ಮಾಡಿ! - CYBERCRIME TRAP

ಸುಲಭವಾಗಿ ಹಣ ಗಳಿಸಲು ಮುಂದಾಗುವ ಯುವಕರಿಗೆ ವಂಚಕರು ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಲ್ಲಿ ಸೆಳೆದು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ. ಹೀಗಾಗಿ ನಿಮ್ಮ ಹುಷಾರಿನಲ್ಲಿ ನೀವಿರಿ.

Cybercrime
ಸೈಬರ್ ಕ್ರೈಮ್ (ETV Bharat)
author img

By ETV Bharat Karnataka Team

Published : Jan 27, 2025, 5:34 PM IST

ನಿಜಾಮಾಬಾದ್ (ತೆಲಂಗಾಣ) : ಸುಲಭ ಹಣ ಗಳಿಕೆಯ ಆಮಿಷ ನೀಡುತ್ತಿರುವ ಟೆಲಿಗ್ರಾಮ್​ನಂತರ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್​ಗಳು ಯುವಕರನ್ನು ಸೈಬರ್ ಕ್ರೈಮ್‌ಗಳ ಕರಾಳ ಜಗತ್ತಿಗೆ ಸೆಳೆಯುತ್ತಿವೆ. ಮನೆಯಿಂದ ಕೆಲಸ ಮಾಡುವ ಅವಕಾಶಗಳ ನೆಪದಲ್ಲಿ ವಂಚಕರು ಯುವಕರ ಅಮಾಯಕತೆಯನ್ನ ಬಳಸಿಕೊಳ್ಳುತ್ತಿದ್ದಾರೆ. ಯುವಕರಿಗೆ ಈ ಬಗ್ಗೆ ಅರಿವಿಲ್ಲದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತಿದ್ದಾರೆ. ತ್ವರಿತ ಹಣ ಗಳಿಕೆಯ ಈ ಸುಳ್ಳು ಭರವಸೆ ಸಂತ್ರಸ್ತರನ್ನು ಮೋಸ ಮತ್ತು ಸಂಕಷ್ಟಕ್ಕೆ ಸಿಲುಕಿಸುತ್ತಿದೆ.

ಸೈಬರ್ ಕ್ರೈಮ್ ಸ್ಕೀಮ್‌ನಲ್ಲಿ ಸಿಲುಕಿದ ಯುವತಿ : 25 ವರ್ಷದ ಮಹಿಳೆಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಮನೆಯಿಂದ ಕೆಲಸ ಮಾಡುವ ಜಾಹೀರಾತನ್ನ ಕಂಡು ತನ್ನ ಬ್ಯಾಂಕ್ ಖಾತೆ, ಡೆಬಿಟ್ ಕಾರ್ಡ್ ಮತ್ತು ಚೆಕ್‌ಬುಕ್‌ನಂತಹ ವೈಯಕ್ತಿಕ ವಿವರಗಳನ್ನು ಅಪರಾಧಿಗಳೊಂದಿಗೆ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಅವಳ ಖಾತೆಗೆ ಹಣ ಬಂದಿದೆ. ಇದನ್ನ ಕಂಡ ಯುವತಿ ಈ ಕೆಲಸ ನಿಜವೆಂದು ತಿಳಿದಿದ್ದಾಳೆ. ಇದಾದ ನಂತರ ಪೊಲೀಸರು ಆಕೆಯನ್ನ ಸಂಪರ್ಕಿಸಿದಾಗ ತನ್ನ ಬ್ಯಾಂಕ್​ ಖಾತೆಯನ್ನ ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಲಾಗಿದೆ ಎಂಬುದು ಗೊತ್ತಾಗಿದೆ.

1 ಲಕ್ಷಕ್ಕೂ ಅಧಿಕ ಮೊತ್ತದ ಆಘಾತಕಾರಿ ವಂಚನೆ : ಈ ತಿಂಗಳ 8 ಮತ್ತು 9 ರಂದು ನರೇಶ್ ಎಂಬುವವರ ಬ್ಯಾಂಕ್ ಖಾತೆಯಿಂದ ಅವರಿಗೆ ತಿಳಿಯದಂತೆ 1,04,999 ರೂ ಹಣ ವಿಥ್ ಡ್ರಾ ಆಗಿದೆ. ಇದಾದ ನಂತರ ನರೇಶ್​ ಅವರು ಜನವರಿ 11 ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಆಟೋನಗರದ ಮೊಹಮ್ಮದ್ ಅಬ್ದುಲ್ (23) ಖಾತೆಗೆ ಹಣ ವರ್ಗಾವಣೆಯಾಗಿದೆ ಎಂಬುದನ್ನ ಪತ್ತೆ ಮಾಡಿದ್ದರು. ನಂತರ ಮೊಹಮ್ಮದ್ ಜೊತೆಗೆ ಗುಡುಮುಳದ ನಿತೀಶ್ (24) ಎಂಬಾತನನ್ನೂ ವಂಚನೆಯಲ್ಲಿ ತೊಡಗಿದ್ದಕ್ಕಾಗಿ ಬಂಧಿಸಿದ್ದಾರೆ.

ಸೈಬರ್ ಅಪರಾಧಕ್ಕೆ ಬಲಿಯಾಗುವುದನ್ನು ತಪ್ಪಿಸುವುದು ಹೇಗೆ?: ಜನರನ್ನು ವಂಚಿಸುವುದಕ್ಕೆ ಸೈಬರ್ ಅಪರಾಧಿಗಳು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ, ಜನರು ಜಾಗರೂಕರಾಗಿರುವುದು ಮುಖ್ಯ.

  • ಬ್ಯಾಂಕ್ ಖಾತೆ ವಿವರಗಳು ಅಥವಾ OTP ಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
  • ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡುವುದನ್ನು ತಪ್ಪಿಸಿ.
  • ಲಾಟರಿ ಟಿಕೆಟ್ ಅಥವಾ ನಕಲಿ ಬಹುಮಾನದ ಕೊಡುಗೆಗಳನ್ನು ಕ್ಲೈಮ್ ಮಾಡುವ ಸಂದೇಶಗಳನ್ನು ನಿರ್ಲಕ್ಷಿಸಿ.
  • ಅಪರಿಚಿತ ಸಂಖ್ಯೆಗಳಿಂದ ಬರುವ ಕರೆಗಳು ಅಥವಾ WhatsApp ಸಂದೇಶಗಳಿಗೆ ಉತ್ತರಿಸಬೇಡಿ.
  • 1930ಗೆ ಕರೆ ಮಾಡುವ ಮೂಲಕ ಸೈಬರ್ ಅಪರಾಧಗಳನ್ನು ವರದಿ ಮಾಡಿ.

ಅಧಿಕಾರಿಗಳಿಂದ ಎಚ್ಚರಿಕೆಯ ಮಾತು : ನಿಜಾಮಾಬಾದ್ ಎಸಿಪಿ ರಾಜಾ ವೆಂಕಟ್ ರೆಡ್ಡಿ ಮಾತನಾಡಿ, ''ನೀವು ಅಪರಿಚಿತರಿಗೆ ಹಣ ನೀಡಿದರೆ ಅದನ್ನು ವಂಚನೆ ಎಂದು ತಿಳಿಯಬೇಕಾಗುತ್ತದೆ. ಇಲ್ಲದಿದ್ದರೆ, ನೀವು ಅಪರಾಧದಲ್ಲಿ ಭಾಗಿದಾರರಂತೆ ಕಾಣಬಹುದು ಮತ್ತು ಕಾನೂನಿನ ಶಿಕ್ಷೆಗೆ ಗುರಿಯಾಗಬಹುದು. ಸೈಬರ್ ಕ್ರೈಂಗಳನ್ನು ತಡೆಗಟ್ಟಲು ನಾವು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ'' ಎಂದು ಅವರು ಹೇಳಿದರು.

ಮಾಹಿತಿ ಮತ್ತು ಜಾಗರೂಕರಾಗಿರುವುದರ ಮೂಲಕ, ವ್ಯಕ್ತಿಗಳು ಸೈಬರ್ ಅಪರಾಧಗಳ ಬಲೆಗೆ ಬೀಳುವುದನ್ನು ತಪ್ಪಿಸಬಹುದು ಮತ್ತು ಆರ್ಥಿಕ ಮತ್ತು ಕಾನೂನು ತೊಂದರೆಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಬಹುದು.

ಇದನ್ನೂ ಓದಿ : ಮಂಗಳೂರು: ಷೇರು ಮಾರುಕಟ್ಟೆ ಹೆಸರಿನಲ್ಲಿ 40 ಲಕ್ಷ ರೂ. ವಂಚನೆ, ಕೇರಳದಲ್ಲಿ ಆರೋಪಿ ಬಂಧನ - FRAUD CASE

ನಿಜಾಮಾಬಾದ್ (ತೆಲಂಗಾಣ) : ಸುಲಭ ಹಣ ಗಳಿಕೆಯ ಆಮಿಷ ನೀಡುತ್ತಿರುವ ಟೆಲಿಗ್ರಾಮ್​ನಂತರ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್​ಗಳು ಯುವಕರನ್ನು ಸೈಬರ್ ಕ್ರೈಮ್‌ಗಳ ಕರಾಳ ಜಗತ್ತಿಗೆ ಸೆಳೆಯುತ್ತಿವೆ. ಮನೆಯಿಂದ ಕೆಲಸ ಮಾಡುವ ಅವಕಾಶಗಳ ನೆಪದಲ್ಲಿ ವಂಚಕರು ಯುವಕರ ಅಮಾಯಕತೆಯನ್ನ ಬಳಸಿಕೊಳ್ಳುತ್ತಿದ್ದಾರೆ. ಯುವಕರಿಗೆ ಈ ಬಗ್ಗೆ ಅರಿವಿಲ್ಲದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತಿದ್ದಾರೆ. ತ್ವರಿತ ಹಣ ಗಳಿಕೆಯ ಈ ಸುಳ್ಳು ಭರವಸೆ ಸಂತ್ರಸ್ತರನ್ನು ಮೋಸ ಮತ್ತು ಸಂಕಷ್ಟಕ್ಕೆ ಸಿಲುಕಿಸುತ್ತಿದೆ.

ಸೈಬರ್ ಕ್ರೈಮ್ ಸ್ಕೀಮ್‌ನಲ್ಲಿ ಸಿಲುಕಿದ ಯುವತಿ : 25 ವರ್ಷದ ಮಹಿಳೆಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಮನೆಯಿಂದ ಕೆಲಸ ಮಾಡುವ ಜಾಹೀರಾತನ್ನ ಕಂಡು ತನ್ನ ಬ್ಯಾಂಕ್ ಖಾತೆ, ಡೆಬಿಟ್ ಕಾರ್ಡ್ ಮತ್ತು ಚೆಕ್‌ಬುಕ್‌ನಂತಹ ವೈಯಕ್ತಿಕ ವಿವರಗಳನ್ನು ಅಪರಾಧಿಗಳೊಂದಿಗೆ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಅವಳ ಖಾತೆಗೆ ಹಣ ಬಂದಿದೆ. ಇದನ್ನ ಕಂಡ ಯುವತಿ ಈ ಕೆಲಸ ನಿಜವೆಂದು ತಿಳಿದಿದ್ದಾಳೆ. ಇದಾದ ನಂತರ ಪೊಲೀಸರು ಆಕೆಯನ್ನ ಸಂಪರ್ಕಿಸಿದಾಗ ತನ್ನ ಬ್ಯಾಂಕ್​ ಖಾತೆಯನ್ನ ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಲಾಗಿದೆ ಎಂಬುದು ಗೊತ್ತಾಗಿದೆ.

1 ಲಕ್ಷಕ್ಕೂ ಅಧಿಕ ಮೊತ್ತದ ಆಘಾತಕಾರಿ ವಂಚನೆ : ಈ ತಿಂಗಳ 8 ಮತ್ತು 9 ರಂದು ನರೇಶ್ ಎಂಬುವವರ ಬ್ಯಾಂಕ್ ಖಾತೆಯಿಂದ ಅವರಿಗೆ ತಿಳಿಯದಂತೆ 1,04,999 ರೂ ಹಣ ವಿಥ್ ಡ್ರಾ ಆಗಿದೆ. ಇದಾದ ನಂತರ ನರೇಶ್​ ಅವರು ಜನವರಿ 11 ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಆಟೋನಗರದ ಮೊಹಮ್ಮದ್ ಅಬ್ದುಲ್ (23) ಖಾತೆಗೆ ಹಣ ವರ್ಗಾವಣೆಯಾಗಿದೆ ಎಂಬುದನ್ನ ಪತ್ತೆ ಮಾಡಿದ್ದರು. ನಂತರ ಮೊಹಮ್ಮದ್ ಜೊತೆಗೆ ಗುಡುಮುಳದ ನಿತೀಶ್ (24) ಎಂಬಾತನನ್ನೂ ವಂಚನೆಯಲ್ಲಿ ತೊಡಗಿದ್ದಕ್ಕಾಗಿ ಬಂಧಿಸಿದ್ದಾರೆ.

ಸೈಬರ್ ಅಪರಾಧಕ್ಕೆ ಬಲಿಯಾಗುವುದನ್ನು ತಪ್ಪಿಸುವುದು ಹೇಗೆ?: ಜನರನ್ನು ವಂಚಿಸುವುದಕ್ಕೆ ಸೈಬರ್ ಅಪರಾಧಿಗಳು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ, ಜನರು ಜಾಗರೂಕರಾಗಿರುವುದು ಮುಖ್ಯ.

  • ಬ್ಯಾಂಕ್ ಖಾತೆ ವಿವರಗಳು ಅಥವಾ OTP ಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
  • ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡುವುದನ್ನು ತಪ್ಪಿಸಿ.
  • ಲಾಟರಿ ಟಿಕೆಟ್ ಅಥವಾ ನಕಲಿ ಬಹುಮಾನದ ಕೊಡುಗೆಗಳನ್ನು ಕ್ಲೈಮ್ ಮಾಡುವ ಸಂದೇಶಗಳನ್ನು ನಿರ್ಲಕ್ಷಿಸಿ.
  • ಅಪರಿಚಿತ ಸಂಖ್ಯೆಗಳಿಂದ ಬರುವ ಕರೆಗಳು ಅಥವಾ WhatsApp ಸಂದೇಶಗಳಿಗೆ ಉತ್ತರಿಸಬೇಡಿ.
  • 1930ಗೆ ಕರೆ ಮಾಡುವ ಮೂಲಕ ಸೈಬರ್ ಅಪರಾಧಗಳನ್ನು ವರದಿ ಮಾಡಿ.

ಅಧಿಕಾರಿಗಳಿಂದ ಎಚ್ಚರಿಕೆಯ ಮಾತು : ನಿಜಾಮಾಬಾದ್ ಎಸಿಪಿ ರಾಜಾ ವೆಂಕಟ್ ರೆಡ್ಡಿ ಮಾತನಾಡಿ, ''ನೀವು ಅಪರಿಚಿತರಿಗೆ ಹಣ ನೀಡಿದರೆ ಅದನ್ನು ವಂಚನೆ ಎಂದು ತಿಳಿಯಬೇಕಾಗುತ್ತದೆ. ಇಲ್ಲದಿದ್ದರೆ, ನೀವು ಅಪರಾಧದಲ್ಲಿ ಭಾಗಿದಾರರಂತೆ ಕಾಣಬಹುದು ಮತ್ತು ಕಾನೂನಿನ ಶಿಕ್ಷೆಗೆ ಗುರಿಯಾಗಬಹುದು. ಸೈಬರ್ ಕ್ರೈಂಗಳನ್ನು ತಡೆಗಟ್ಟಲು ನಾವು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ'' ಎಂದು ಅವರು ಹೇಳಿದರು.

ಮಾಹಿತಿ ಮತ್ತು ಜಾಗರೂಕರಾಗಿರುವುದರ ಮೂಲಕ, ವ್ಯಕ್ತಿಗಳು ಸೈಬರ್ ಅಪರಾಧಗಳ ಬಲೆಗೆ ಬೀಳುವುದನ್ನು ತಪ್ಪಿಸಬಹುದು ಮತ್ತು ಆರ್ಥಿಕ ಮತ್ತು ಕಾನೂನು ತೊಂದರೆಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಬಹುದು.

ಇದನ್ನೂ ಓದಿ : ಮಂಗಳೂರು: ಷೇರು ಮಾರುಕಟ್ಟೆ ಹೆಸರಿನಲ್ಲಿ 40 ಲಕ್ಷ ರೂ. ವಂಚನೆ, ಕೇರಳದಲ್ಲಿ ಆರೋಪಿ ಬಂಧನ - FRAUD CASE

ETV Bharat Logo

Copyright © 2025 Ushodaya Enterprises Pvt. Ltd., All Rights Reserved.