ETV Bharat / state

ಕುಮಟಾದಲ್ಲಿ ಸುರಂಗ ಪತ್ತೆ... ಅಚ್ಚರಿ ನೋಡಲು ಮುಗಿಬಿದ್ದ ಜನ! - undefined

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಂಡಿವಾಳ ಗ್ರಾಮದಲ್ಲಿ ಈ ಸುರಂಗ ಪತ್ತೆಯಾಗಿದ್ದು, ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿದೆ.

ಸುರಂಗ
author img

By

Published : May 24, 2019, 8:21 PM IST

ಕಾರವಾರ: ಮನೆ ನಿರ್ಮಾಣಕ್ಕೆ ಭೂಮಿ ಸಮತಟ್ಟುಗೊಳಿಸುವ ವೇಳೆ ಸುರಂಗವೊಂದು ಪತ್ತೆಯಾಗಿದ್ದು, ಸುತ್ತಮುತ್ತಲಿನ ಜನರಲ್ಲಿ ಅಚ್ಚರಿ ಮೂಡಿಸಿದೆ. ಇದೇನು ನಿಸರ್ಗ ನಿರ್ಮಿತ ಸುರಂಗವೋ ಅಥವಾ ಮಾನವ ನಿರ್ಮಿತ ಸುರಂಗವೋ ಎಂಬ ಚರ್ಚೆ ಶುರುವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಂಡಿವಾಳ ಗ್ರಾಮದ ನಿವಾಸಿಗಳಾಗಿರುವ ಗಣಪತಿ ಹೆಬ್ಬಾರ, ಲಿಂಗಪ್ಪ ಹೆಬ್ಬಾರ ಹಾಗೂ ಸತ್ಯನಾರಾಯಣ ಹೆಬ್ಬಾರ ಎಂಬುವವರಿಗೆ ಸೇರಿದ ಖಾಸಗಿ ಜಾಗದಲ್ಲಿ ಈ ಸುರಂಗ ಪತ್ತೆಯಾಗಿದೆ. ಮನೆ ನಿರ್ಮಾಣಕ್ಕೆ ನೆಲ ಸ್ವಚ್ಛಗೊಳಿಸಲಾಗುತ್ತಿತ್ತು. ಚಿರೆಕಲ್ಲು ಜಾಗವಾಗಿದ್ದರಿಂದ ಅಗೆದು ಕಳೆದ ಒಂದು ವಾರದಿಂದ ಸಮತಟ್ಟು ಮಾಡಲಾಗುತ್ತಿತ್ತು.

ಬಂಡಿವಾಳ ಗ್ರಾಮದಲ್ಲಿ ಆಶ್ಚರ್ಯಕರ ರೀತಿಯಲ್ಲಿ ಪತ್ತೆಯಾಗಿರುವ ಸುರಂಗ

ಈ ಮಧ್ಯೆ ಭೂಮಿಯನ್ನು ಪಿಕಾಸಿಯಿಂದ ಅಗೆಯುವಾಗ ಕಬ್ಬಿಣಕ್ಕೆ ತಾಗಿದ ಶಬ್ದವೊಂದು ಬಂದಿದೆ. ಕೆಲಸಗಾರರೂ ಕುತೂಹಲದಿಂದ ಜೋರಾಗಿ ಅಗೆದಾಗ ಸುಮಾರು ಎರಡು ಮೀಟರ್ ಸುತ್ತಳತೆಯ ಜಾಗದಲ್ಲಿ ಮಣ್ಣು ಕುಸಿದು ಬಿದ್ದಿದೆ. ಇದರಿಂದ ಹೆದರಿಕೊಂಡ ಕೆಲಸಗಾರರು ಮನೆಯ ಮಾಲೀಕನಿಗೆ ತಿಳಿಸಿದ್ದಾರೆ. ಬಳಿಕ ಕುಸಿದ ಜಾಗವನ್ನು ಪರಿಶೀಲಿಸಿ ಸುರಂಗದ ಒಳ ಹೋಗಿ ನೋಡಿದಾಗ ಎಲ್ಲರಿಗೂ ಆಶ್ಚರ್ಯ ಕಾದಿತ್ತು. ಸುಮಾರು 50 ರಿಂದ 60 ಮೀಟರ್ ಸುರಂಗ ಇರುವುದು ಗೋಚರವಾಗಿದೆ.

ಸುರಂಗ ಪತ್ತೆಯಾಗಿರುವ ಸುದ್ದಿ ಹರಡುತ್ತಿದ್ದಂತೆ ಪ್ರತಿನಿತ್ಯ ನೂರಾರು ಜನರು ಬಂದು ಕುತೂಹಲದಿಂದ ನೋಡುತ್ತಿದ್ದಾರೆ. ಆದರೆ ಬಂದಂತವರಿಗೆ ಏನಾದರು ತೊಂದರೆಯಾಗಬಹುದು ಎಂಬ ಹೆದರಿಕೆ ಶುರುವಾಗಿದೆ. ಆದ್ದರಿಂದ ಸುರಂಗದ ಒಳಗೆ ತೆರಳದಂತೆ ಜಾಗದ ಮಾಲೀಕರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.

Karwar
ಆಶ್ಚರ್ಯಕರ ರೀತಿಯಲ್ಲಿ ಪತ್ತೆಯಾದ ಸುರಂಗ

ಸುರಂಗ ಹೇಗೆ ಸೃಷ್ಟಿಯಾಗಿದೆ ಎಂಬುದು ಯಾರಿಗೂ ತಿಳಿಯುತ್ತಿಲ್ಲ. ಸುರಂಗದ ಮೇಲ್ಭಾಗದಲ್ಲಿ ಚಿರೆಕಲ್ಲಿನಂತ ಗಟ್ಟಿ ಕಲ್ಲುಗಳು ಉದ್ದಕ್ಕಿರುವುದು ಕಂಡು ಬರುತ್ತಿದೆ. ಇನ್ನು ಸುರಂಗದ ಕೆಳ ಬದಿಯಲ್ಲಿ ಜೇಡಿ ಮಣ್ಣಿನ ರೂಪದ ಮಣ್ಣು ಇರೋದು ಕಾಣಿಸುತ್ತಿದೆ. ಅಲ್ಲದೆ ಸುರಂಗದುದ್ದಕ್ಕೂ ಪಕ್ಕದಲ್ಲಿ ಸಣ್ಣ ಸಣ್ಣ ಹೊಂಡಗಳಿವೆ. ಮಳೆಗಾಲದ ಗುಡ್ಡದ ನೀರು ಇದೇ ಸುರಂಗದ ಮೂಲಕವೇ ಹರಿದು ಹೋಗಿ ಈ ರೀತಿ ಗುಹೆ ನಿರ್ಮಾಣವಾಗಿರಬಹುದು ಎಂದು ಜಾಗದ ಮಾಲೀಕರು ಹೇಳುತ್ತಿದ್ದಾರೆ.

ಸದ್ಯ ಸುರಂಗ ಪತ್ತೆಯಾಗಿರುವುದು ಸ್ಥಳೀಯರು ಮಾತ್ರವಲ್ಲದೆ ಸುತ್ತಮುತ್ತಲಿನ ಭಾಗದ ಜನರಲ್ಲಿ ಕುತೂಹಲ ಮೂಡಿಸಿದ್ದು, ಸುರಂಗ ಮಾನವ ನಿರ್ಮಿತವೋ, ಇಲ್ಲ ನಿಸರ್ಗ ನಿರ್ಮಿತವೋ ಎಂಬ ಚರ್ಚೆ ಶುರುವಾಗಿದೆ. ಸದ್ಯ ಸುರಂಗವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿರುವುದರಿಂದ ಮನೆ ಮಾಲೀಕರಿಗೆ ನೋಡಿಕೊಳ್ಳುವುದೇ ದೊಡ್ಡ ಕೆಲಸವಾಗಿದೆ. ಈ ಬಗ್ಗೆ ಇತಿಹಾಸಕಾರರು ಅಧ್ಯಯನ ನಡೆಸಿದಲ್ಲಿ ಏನಾದರು ಮಾಹಿತಿ ಸಿಗಬಹುದಾಗಿದೆ.

ಕಾರವಾರ: ಮನೆ ನಿರ್ಮಾಣಕ್ಕೆ ಭೂಮಿ ಸಮತಟ್ಟುಗೊಳಿಸುವ ವೇಳೆ ಸುರಂಗವೊಂದು ಪತ್ತೆಯಾಗಿದ್ದು, ಸುತ್ತಮುತ್ತಲಿನ ಜನರಲ್ಲಿ ಅಚ್ಚರಿ ಮೂಡಿಸಿದೆ. ಇದೇನು ನಿಸರ್ಗ ನಿರ್ಮಿತ ಸುರಂಗವೋ ಅಥವಾ ಮಾನವ ನಿರ್ಮಿತ ಸುರಂಗವೋ ಎಂಬ ಚರ್ಚೆ ಶುರುವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಂಡಿವಾಳ ಗ್ರಾಮದ ನಿವಾಸಿಗಳಾಗಿರುವ ಗಣಪತಿ ಹೆಬ್ಬಾರ, ಲಿಂಗಪ್ಪ ಹೆಬ್ಬಾರ ಹಾಗೂ ಸತ್ಯನಾರಾಯಣ ಹೆಬ್ಬಾರ ಎಂಬುವವರಿಗೆ ಸೇರಿದ ಖಾಸಗಿ ಜಾಗದಲ್ಲಿ ಈ ಸುರಂಗ ಪತ್ತೆಯಾಗಿದೆ. ಮನೆ ನಿರ್ಮಾಣಕ್ಕೆ ನೆಲ ಸ್ವಚ್ಛಗೊಳಿಸಲಾಗುತ್ತಿತ್ತು. ಚಿರೆಕಲ್ಲು ಜಾಗವಾಗಿದ್ದರಿಂದ ಅಗೆದು ಕಳೆದ ಒಂದು ವಾರದಿಂದ ಸಮತಟ್ಟು ಮಾಡಲಾಗುತ್ತಿತ್ತು.

ಬಂಡಿವಾಳ ಗ್ರಾಮದಲ್ಲಿ ಆಶ್ಚರ್ಯಕರ ರೀತಿಯಲ್ಲಿ ಪತ್ತೆಯಾಗಿರುವ ಸುರಂಗ

ಈ ಮಧ್ಯೆ ಭೂಮಿಯನ್ನು ಪಿಕಾಸಿಯಿಂದ ಅಗೆಯುವಾಗ ಕಬ್ಬಿಣಕ್ಕೆ ತಾಗಿದ ಶಬ್ದವೊಂದು ಬಂದಿದೆ. ಕೆಲಸಗಾರರೂ ಕುತೂಹಲದಿಂದ ಜೋರಾಗಿ ಅಗೆದಾಗ ಸುಮಾರು ಎರಡು ಮೀಟರ್ ಸುತ್ತಳತೆಯ ಜಾಗದಲ್ಲಿ ಮಣ್ಣು ಕುಸಿದು ಬಿದ್ದಿದೆ. ಇದರಿಂದ ಹೆದರಿಕೊಂಡ ಕೆಲಸಗಾರರು ಮನೆಯ ಮಾಲೀಕನಿಗೆ ತಿಳಿಸಿದ್ದಾರೆ. ಬಳಿಕ ಕುಸಿದ ಜಾಗವನ್ನು ಪರಿಶೀಲಿಸಿ ಸುರಂಗದ ಒಳ ಹೋಗಿ ನೋಡಿದಾಗ ಎಲ್ಲರಿಗೂ ಆಶ್ಚರ್ಯ ಕಾದಿತ್ತು. ಸುಮಾರು 50 ರಿಂದ 60 ಮೀಟರ್ ಸುರಂಗ ಇರುವುದು ಗೋಚರವಾಗಿದೆ.

ಸುರಂಗ ಪತ್ತೆಯಾಗಿರುವ ಸುದ್ದಿ ಹರಡುತ್ತಿದ್ದಂತೆ ಪ್ರತಿನಿತ್ಯ ನೂರಾರು ಜನರು ಬಂದು ಕುತೂಹಲದಿಂದ ನೋಡುತ್ತಿದ್ದಾರೆ. ಆದರೆ ಬಂದಂತವರಿಗೆ ಏನಾದರು ತೊಂದರೆಯಾಗಬಹುದು ಎಂಬ ಹೆದರಿಕೆ ಶುರುವಾಗಿದೆ. ಆದ್ದರಿಂದ ಸುರಂಗದ ಒಳಗೆ ತೆರಳದಂತೆ ಜಾಗದ ಮಾಲೀಕರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.

Karwar
ಆಶ್ಚರ್ಯಕರ ರೀತಿಯಲ್ಲಿ ಪತ್ತೆಯಾದ ಸುರಂಗ

ಸುರಂಗ ಹೇಗೆ ಸೃಷ್ಟಿಯಾಗಿದೆ ಎಂಬುದು ಯಾರಿಗೂ ತಿಳಿಯುತ್ತಿಲ್ಲ. ಸುರಂಗದ ಮೇಲ್ಭಾಗದಲ್ಲಿ ಚಿರೆಕಲ್ಲಿನಂತ ಗಟ್ಟಿ ಕಲ್ಲುಗಳು ಉದ್ದಕ್ಕಿರುವುದು ಕಂಡು ಬರುತ್ತಿದೆ. ಇನ್ನು ಸುರಂಗದ ಕೆಳ ಬದಿಯಲ್ಲಿ ಜೇಡಿ ಮಣ್ಣಿನ ರೂಪದ ಮಣ್ಣು ಇರೋದು ಕಾಣಿಸುತ್ತಿದೆ. ಅಲ್ಲದೆ ಸುರಂಗದುದ್ದಕ್ಕೂ ಪಕ್ಕದಲ್ಲಿ ಸಣ್ಣ ಸಣ್ಣ ಹೊಂಡಗಳಿವೆ. ಮಳೆಗಾಲದ ಗುಡ್ಡದ ನೀರು ಇದೇ ಸುರಂಗದ ಮೂಲಕವೇ ಹರಿದು ಹೋಗಿ ಈ ರೀತಿ ಗುಹೆ ನಿರ್ಮಾಣವಾಗಿರಬಹುದು ಎಂದು ಜಾಗದ ಮಾಲೀಕರು ಹೇಳುತ್ತಿದ್ದಾರೆ.

ಸದ್ಯ ಸುರಂಗ ಪತ್ತೆಯಾಗಿರುವುದು ಸ್ಥಳೀಯರು ಮಾತ್ರವಲ್ಲದೆ ಸುತ್ತಮುತ್ತಲಿನ ಭಾಗದ ಜನರಲ್ಲಿ ಕುತೂಹಲ ಮೂಡಿಸಿದ್ದು, ಸುರಂಗ ಮಾನವ ನಿರ್ಮಿತವೋ, ಇಲ್ಲ ನಿಸರ್ಗ ನಿರ್ಮಿತವೋ ಎಂಬ ಚರ್ಚೆ ಶುರುವಾಗಿದೆ. ಸದ್ಯ ಸುರಂಗವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿರುವುದರಿಂದ ಮನೆ ಮಾಲೀಕರಿಗೆ ನೋಡಿಕೊಳ್ಳುವುದೇ ದೊಡ್ಡ ಕೆಲಸವಾಗಿದೆ. ಈ ಬಗ್ಗೆ ಇತಿಹಾಸಕಾರರು ಅಧ್ಯಯನ ನಡೆಸಿದಲ್ಲಿ ಏನಾದರು ಮಾಹಿತಿ ಸಿಗಬಹುದಾಗಿದೆ.

Intro:ಆಶ್ಚರ್ಯಕರ ರಿತಿಯಲ್ಲಿ ಪತ್ತೆಯಾದ ಸುರಂಗ

ಕಾರವಾರ: ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಗ್ರಾಮವೊಂದರಲ್ಲಿ ಸುರಂಗ ಪತ್ತೆಯಾಗಿದೆ. ಮನೆ ನಿರ್ಮಾಣಕ್ಕೆ ಭೂಮಿ ಸಮತಟ್ಟುಗೊಳಿಸುವಾಗ ಆಶ್ಚರ್ಯಕರ ರಿತಿಯಲ್ಲಿ ಕಾಣಿಸಿಕೊಂಡಿರುವ ಈ ಸುರಂಗ ಇದೀಗ ಸುತ್ತಮುತ್ತಲಿನ ಜನರಲ್ಲಿ ತೀವ್ರ ಕುತೂಹಲ ಕೆರಳಿಸಿದ್ದು, ನಿಸರ್ಗ ನಿರ್ಮಿತವೋ ಅಥವಾ ಮಾನವ ನಿರ್ಮಿತವೋ ಎಂಬ ಚರ್ಚೆ ಸುರುವಾಗಿದೆ.

ಹೌದು ಕುಮಟಾ ತಾಲೂಕಿನ ಬಂಡಿವಾಳ ಗ್ರಾಮದಲ್ಲಿ ಪತ್ತೆಯಾಗಿರುವ ಸುರಂಗ ಇದೀಗ ಉತ್ತರಕನ್ನಡ ಜಿಲ್ಲೆಯಾದ್ಯಂತ ಸಂಚಲನ ಸೃಷ್ಟಿಸಿದೆ. ಇಲ್ಲಿನ ಗಣಪತಿ ಹೆಬ್ಬಾರ, ಲಿಂಗಪ್ಪ ಹೆಬ್ಬಾರ ಹಾಗೂ ಸತ್ಯನಾರಾಯಣ ಹೆಬ್ಬಾರ ಎಂಬುವವರಿಗೆ ಸೇರಿದ ಖಾಸಗಿ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಸ್ವಚ್ಛಗೊಳಿಸಲಾಗುತಿತ್ತು. ಅಲ್ಲದೆ ಚಿರೆಕಲ್ಲು ಜಾಗವಾಗಿದ್ದರಿಂದ ಅಗೆದು ಕಳೆದೊಂದು ವಾರದಿಂದ ಸಮತಟ್ಟು ಮಾಡಲಾಗುತಿತ್ತು.

ಈ ಮಧ್ಯೆ ಭೂಮಿಯನ್ನು ಪಿಕಾಸಿಯಿಂದ ಅಗೆಯುವಾಗ ಕಬ್ಬಿಣಕ್ಕೆ ತಾಗಿದ ಶಬ್ದವೊಂದು ಬಂದಿದ್ದು, ಕೆಲಸಗಾರರೂ ಕುತೂಹಲದಿಂದ ಜೋರಾಗಿ ಅಗೆದಾಗ ಸುಮಾರು ಎರಡು ಮೀಟರ್ ಸುತ್ತಳತೆಯ ಜಾಗದಲ್ಲಿ ಮಣ್ಣು ಕುಸಿದುಬಿದ್ದಿದೆ. ಒಮ್ಮೆ ಹೆದರಿಕೊಂಡ ಕೆಲಸಗಾರರು ಮನೆಯ ಮಾಲಿಕನಿಗೆ ತಿಳಿಸಿ ಬಳಿಕ ಕುಸಿದ ಜಾಗವನ್ನು ಪರಿಶಿಲಿಸಿದ್ದಾರೆ. ಭಯದಲ್ಲಿಯೇ ಸುರಂಗದ ಒಳ ಹೋಗಿ ನೋಡಿದಾಗ ಎಲ್ಲರಿಗೂ ಆಶ್ಚರ್ಯ ಕಾದಿತ್ತು. ಸುಮಾರು 50 ರಿಂದ 60 ಮೀಟರ್ ಸುರಂಗ ಇರುವುದು ಗೋಚರವಾಗಿದೆ.

ಸುರಂಗ ಯಾವುದೇ ರಾಜರ ಗುಹೆ ರಿತಿ ಕಾಣವುದಿಲ್ಲ. ಮಣ್ಣು ಕುಸಿದು ನಿಸರ್ಗ ನಿರ್ಮಿತವಾಗಿಯೇ ಆಗಿರುವುದು ಕಂಡುಬರುತ್ತಿದೆ. ಇದೀಗ ಸುರಂಗ ಪತ್ತೆಯಾಗಿರುವ ಸುದ್ದಿ ಹರಡುತ್ತಿದ್ದಂತೆ ನಿತ್ಯ ನೂರಾರು ಜನರು ಬಂದು ಕುತೂಹಲದಿಂದ ನೋಡುತ್ತಿದ್ದಾರೆ. ಆದರೆ ಬಂದಂತವರಿಗೆ ಏನಾದರು ತೊಂದರೆಯಾಗಬಹುದು ಎಂಬ ಹೆದರಿಕೆ ಸುರುವಾಗಿದೆ. ಆದ್ದರಿಂದ ಸುರಂಗದ ಒಳಗೆ ತೆರಳದಂತೆ ಬಂದೋಬಸ್ತ್ ಮಾಡಲಾಗುವುದು ಎನ್ನುತ್ತಾರೆ ಜಾಗಕ್ಕೆ ಸಂಬಂಧಿಸಿದ ವಿಷ್ಣುಮೂರ್ತಿ ಅವರು.

ಸುರಂಗ ಹೇಗೆ ಸೃಷ್ಟಿಯಾಗಿದೆ ಎಂಬುದು ಇನ್ನು ಯಾರಿಗೂ ಗೊತ್ತಾಗಿಲ್ಲ. ಸುರಂಗದ ಮೇಲ್ಬಾಗದಲ್ಲಿ ಚಿರೆಕಲ್ಲಿನಂತ ಗಟ್ಟಿ ಕಲ್ಲುಗಳು ಉದ್ದಕ್ಕಿರುವುದು ಕಂಡುಬರುತ್ತಿದೆ. ಇನ್ನು ಸುರಂಗದ ಕೆಳ ಬದಿಯಲ್ಲಿ ಜೇಡಿಮಣ್ಣಿನ ರೂಪದ ಮಣ್ಣು ಇರೋದು ಕಾಣಿಸುತ್ತಿದೆ. ಅಲ್ಲದೆ ಸುರಂಗದುದ್ದಕ್ಕೂ ಬದಿಯಲ್ಲಿ ಸಣ್ಣ ಸಣ್ಣ ಹೊಂಡಗಳಿವೆ. ಜಾಗದ ಮಾಲೀಕರು ಹೇಳೋ ಪ್ರಕಾರ ಮಳೆಗಾಲದ ಗುಡ್ಡದ ನೀರು ಇದೇ ಸುರಂಗದ ಮೂಲಕವೇ ಹರಿದು ಹೋಗಿ ಈ ರೀತಿ ಗುಹೆ ನಿರ್ಮಾಣವಾಗಿರಬಹುದು ಎಂದು ಹೇಳುತ್ತಾರೆ.

ಸದ್ಯ ಸುರಂಗ ಪತ್ತೆಯಾಗಿರುವುದು ಸ್ಥಳೀಯರು ಮಾತ್ರವಲ್ಲದೆ ಸುತ್ತಮುತ್ತಲಿನ ಭಾಗದ ಜನರಲ್ಲಿ ಕುತೂಹಲ ಸೃಷ್ಟಿಸಿದು, ಸುರಂಗ ಮಾನವ ನಿರ್ಮಿತವೋ ಇಲ್ಲ ನಿಸರ್ಗ ನಿರ್ಮಿತವೋ ಎಂಬು ಚರ್ಚೆ ಸುರುವಾಗಿದೆ. ಸದ್ಯ ಸುರಂಗವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿರುವುದರಿಂದ ಮನೆ ಮಾಲಿಕರಿಗೆ ನೋಡಿಕೊಳ್ಳುವುದೇ ದೊಡ್ಡ ಕೆಲಸವಾಗಿದೆ. ಈ ಬಗ್ಗೆ ಇತಿಹಾಸಕಾರರು ಅಧ್ಯಯನ ನಡೆಸಿದಲ್ಲಿ ಏನಾದರು ಮಾಹಿತಿ ಸಿಗಬಹುದಾಗಿದೆ.

ಬೈಟ್ ೧ ವಿಷ್ಣುಮೂರ್ತಿ ಹೆಬ್ಬಾರ, ಜಾಗದ ಮಾಲಿಕ

ಬೈಟ್ ೨ ಮಂಜುನಾಥ, ಕೆಲಸಗಾರBody:ಕConclusion:ಕ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.