ETV Bharat / state

ಮಲೆನಾಡಿಗೆ ಜಲ ಕಂಟಕ... ಪ್ರವಾಹದ ಭೀತಿಯಲ್ಲಿ ಕರಾವಳಿ ಜನರು

author img

By

Published : Sep 6, 2019, 8:17 PM IST

ಮಲೆನಾಡಿನಲ್ಲಿ ವಿಪರೀತ ಮಳೆಯಾಗುತ್ತಿರುವ ಕಾರಣ ನದಿಗಳು ತುಂಬಿ ಹರಿಯುತ್ತಿದ್ದು, ಪ್ರಮುಖ ಜಲಾಶಯಗಳು ಭರ್ತಿಯಾಗಿ ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದೆ. ಹೀಗೆ ಬಿಟ್ಟ ನೀರು ಇದೀಗ ಕರಾವಳಿಯಲ್ಲಿ ಪ್ರವಾಹ ಭೀತಿ ತಂದೊಡ್ಡಿರುವುದರಿಂದ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಮಲೆನಾಡಿನಲ್ಲಿ ಮಳೆ...ಪ್ರವಾಹದ ಭೀತಿಯಲ್ಲಿ ಕರಾವಳಿಗರು

ಕಾರವಾರ: ಮಲೆನಾಡಿನಲ್ಲಿ ವಿಪರೀತ ಮಳೆಯಾಗುತ್ತಿರುವ ಕಾರಣ ನದಿಗಳು ತುಂಬಿ ಹರಿಯುತ್ತಿವೆ. ಪ್ರಮುಖ ಜಲಾಶಯಗಳು ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದೆ. ಹೀಗೆ ಬಿಟ್ಟ ನೀರು ಇದೀಗ ಕರಾವಳಿಯಲ್ಲಿ ಪ್ರವಾಹ ಭೀತಿ ತಂದೊಡ್ಡಿದೆ.

ಮಲೆನಾಡಿನಲ್ಲಿ ಮಳೆ...ಪ್ರವಾಹದ ಭೀತಿಯಲ್ಲಿ ಕರಾವಳಿಗರು

ಉತ್ತರಕನ್ನಡ ಹಾಗೂ ಶಿವಮೊಗ್ಗದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನದಿಗಳು ಮೈದುಂಬಿವೆ. ಇದರಿಂದ ಜಲಾಶಯಗಳು ಭರ್ತಿಯಾಗಿದ್ದು, ಸೂಪಾದಿಂದ 31 ಸಾವಿರ ಕ್ಯೂಸೆಕ್, ಕೊಡಸಳ್ಳಿಯಿಂದ 48 ಸಾವಿರ ಕ್ಯೂಸೆಕ್, ಕದ್ರಾದಿಂದ 58 ಸಾವಿರ ಕ್ಯೂಸೆಕ್, ಲಿಂಗನಮಕ್ಕಿಯಿಂದ 58 ಸಾವಿರ ಕ್ಯೂಸೆಕ್ ಹಾಗೂ ಗೇರುಸೊಪ್ಪ ದಿಂದ 77 ಸಾವಿರ ಕ್ಯೂಸೆಕ್ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ.

ಹೀಗೆ ಬಿಟ್ಟ ನೀರು ಅದಾಗಲೇ ಕಾಳಿ ಹಾಗೂ ಶರಾವತಿ ನದಿಯಂಚಿನ ತೋಟ ಹಾಗೂ ಗದ್ದೆಗಳಿಗೆ ನುಗ್ಗಿದ್ದು, ತಗ್ಗು ಪ್ರದೇಶದಲ್ಲಿನ ಮನೆಗಳಿಗೂ ನೀರು ನುಗ್ಗಿ ಹಾನಿಯಾಗಿದೆ. ಇನ್ನು, ಶಿರಸಿ ಸಿದ್ದಾಪುರದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಅಘನಾಶಿನಿ ನದಿ ಕೂಡ ತುಂಬಿ ಹರಿಯುತ್ತಿದ್ದು, ಮಳೆ ಮುಂದುವರಿದಲ್ಲಿ ಕುಮಟಾದ ಹೆಗಡೆ, ಮಿರ್ಜಾನ್ ಗ್ರಾಮ ಪಂಚಾಯತ್​ ವ್ಯಾಪ್ತಿಯಲ್ಲಿ ಪ್ರವಾಹ ಎದುರಾಗುವ ಆಂತಕ ತಲೆದೋರಿದೆ.

ಮತ್ತೊಂದೆಡೆ ಗೇರುಸೊಪ್ಪ ಅಣೆಕಟ್ಟೆಯಿಂದ ನೀರು ಹರಿಬಿಟ್ಟಿರುವ ಕಾರಣ ಶರಾವತಿ ಕೊಳ್ಳದ ಎಡ- ಬಲ ದಂಡೆ ತುಂಬಿ ಹರಿಯುತ್ತಿದೆ. ಕೊಡಾಣಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಎದೆಮಟ್ಟಕ್ಕೆ ನೀರು ಬಂದಿದ್ದು, ತೋಟ ಹಾಗೂ ಮನೆಗಳು ಜಲಾವೃತವಾಗಿವೆ. ಅನಿಲಗೋಡ, ಮೂರ್ನಕುಳಿ, ಹೈಗುಂದ, ಹೊಸಾಡ ಶಾಲೆಗಳಲ್ಲಿ ಆಶ್ರಯ ಕೇಂದ್ರ ತೆರೆಯಲಾಗಿದೆ. ಇದರಲ್ಲಿ 35 ಕುಟುಂಬಗಳ 129 ಜನ ಆಶ್ರಯ ಪಡೆದಿದ್ದಾರೆ.

ಕಾರವಾರ: ಮಲೆನಾಡಿನಲ್ಲಿ ವಿಪರೀತ ಮಳೆಯಾಗುತ್ತಿರುವ ಕಾರಣ ನದಿಗಳು ತುಂಬಿ ಹರಿಯುತ್ತಿವೆ. ಪ್ರಮುಖ ಜಲಾಶಯಗಳು ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದೆ. ಹೀಗೆ ಬಿಟ್ಟ ನೀರು ಇದೀಗ ಕರಾವಳಿಯಲ್ಲಿ ಪ್ರವಾಹ ಭೀತಿ ತಂದೊಡ್ಡಿದೆ.

ಮಲೆನಾಡಿನಲ್ಲಿ ಮಳೆ...ಪ್ರವಾಹದ ಭೀತಿಯಲ್ಲಿ ಕರಾವಳಿಗರು

ಉತ್ತರಕನ್ನಡ ಹಾಗೂ ಶಿವಮೊಗ್ಗದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನದಿಗಳು ಮೈದುಂಬಿವೆ. ಇದರಿಂದ ಜಲಾಶಯಗಳು ಭರ್ತಿಯಾಗಿದ್ದು, ಸೂಪಾದಿಂದ 31 ಸಾವಿರ ಕ್ಯೂಸೆಕ್, ಕೊಡಸಳ್ಳಿಯಿಂದ 48 ಸಾವಿರ ಕ್ಯೂಸೆಕ್, ಕದ್ರಾದಿಂದ 58 ಸಾವಿರ ಕ್ಯೂಸೆಕ್, ಲಿಂಗನಮಕ್ಕಿಯಿಂದ 58 ಸಾವಿರ ಕ್ಯೂಸೆಕ್ ಹಾಗೂ ಗೇರುಸೊಪ್ಪ ದಿಂದ 77 ಸಾವಿರ ಕ್ಯೂಸೆಕ್ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ.

ಹೀಗೆ ಬಿಟ್ಟ ನೀರು ಅದಾಗಲೇ ಕಾಳಿ ಹಾಗೂ ಶರಾವತಿ ನದಿಯಂಚಿನ ತೋಟ ಹಾಗೂ ಗದ್ದೆಗಳಿಗೆ ನುಗ್ಗಿದ್ದು, ತಗ್ಗು ಪ್ರದೇಶದಲ್ಲಿನ ಮನೆಗಳಿಗೂ ನೀರು ನುಗ್ಗಿ ಹಾನಿಯಾಗಿದೆ. ಇನ್ನು, ಶಿರಸಿ ಸಿದ್ದಾಪುರದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಅಘನಾಶಿನಿ ನದಿ ಕೂಡ ತುಂಬಿ ಹರಿಯುತ್ತಿದ್ದು, ಮಳೆ ಮುಂದುವರಿದಲ್ಲಿ ಕುಮಟಾದ ಹೆಗಡೆ, ಮಿರ್ಜಾನ್ ಗ್ರಾಮ ಪಂಚಾಯತ್​ ವ್ಯಾಪ್ತಿಯಲ್ಲಿ ಪ್ರವಾಹ ಎದುರಾಗುವ ಆಂತಕ ತಲೆದೋರಿದೆ.

ಮತ್ತೊಂದೆಡೆ ಗೇರುಸೊಪ್ಪ ಅಣೆಕಟ್ಟೆಯಿಂದ ನೀರು ಹರಿಬಿಟ್ಟಿರುವ ಕಾರಣ ಶರಾವತಿ ಕೊಳ್ಳದ ಎಡ- ಬಲ ದಂಡೆ ತುಂಬಿ ಹರಿಯುತ್ತಿದೆ. ಕೊಡಾಣಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಎದೆಮಟ್ಟಕ್ಕೆ ನೀರು ಬಂದಿದ್ದು, ತೋಟ ಹಾಗೂ ಮನೆಗಳು ಜಲಾವೃತವಾಗಿವೆ. ಅನಿಲಗೋಡ, ಮೂರ್ನಕುಳಿ, ಹೈಗುಂದ, ಹೊಸಾಡ ಶಾಲೆಗಳಲ್ಲಿ ಆಶ್ರಯ ಕೇಂದ್ರ ತೆರೆಯಲಾಗಿದೆ. ಇದರಲ್ಲಿ 35 ಕುಟುಂಬಗಳ 129 ಜನ ಆಶ್ರಯ ಪಡೆದಿದ್ದಾರೆ.

Intro:Body:ಮಲೆನಾಡಿನಲ್ಲಿ ಮಳೆ...ಪ್ರವಾಹದ ಭೀತಿಯಲ್ಲಿ ಕರಾವಳಿಗರು
ಕಾರವಾರ: ಮಲೆನಾಡಿನಲ್ಲಿ ವಿಪರೀತ ಮಳೆಯಾಗುತ್ತಿರುವ ಕಾರಣ ನದಿಗಳು ತುಂಬಿ ಹರಿಯುತ್ತಿದ್ದು, ಪ್ರಮುಖ ಜಲಾಶಯಗಳು ಭರ್ತಿಯಾಗಿ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ. ಆದರೆ ಹೀಗೆ ಬಿಟ್ಟ ನೀರು ಇದೀಗ ಕರಾವಳಿಯಲ್ಲಿ ಪ್ರವಾಹ ಭೀತಿ ತಂದೊಡ್ಡಿದ್ದು, ಜನರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಹೌದು, ಉತ್ತರಕನ್ನಡ ಹಾಗೂ ಶಿವಮೊಗ್ಗದಲ್ಲಿ ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿವೆ. ಇದರಿಂದ ಜಲಾಶಯಗಳು ಭರ್ತಿಯಾಗಿದ್ದು, ಸೂಪಾದಿಂದ 31 ಸಾವಿರ ಕ್ಯೂಸೆಕ್, ಕೊಡಸಳ್ಳಿಯಿಂದ48 ಸಾವಿರ ಕ್ಯೂಸೆಕ್, ಕದ್ರಾದಿಂದ 58 ಸಾವಿರ ಕ್ಯೂಸೆಕ್, ಲಿಂಗನಮಕ್ಕಿಯಿಂದ 58 ಸಾವಿರ ಕ್ಯೂಸೆಕ್ ಹಾಗೂ ಗೆರುಸೊಪ್ಪ ದಿಂದ 77 ಸಾವಿರ ಕ್ಯೂಸೆಕ್
ಹೆಚ್ಚುವರಿ ನೀರನ್ನು ಹೊರಹಾಕಲಾಗುತ್ತಿದೆ.
ಆದರೆ ಹೀಗೆ ಬಿಟ್ಟ ನೀರು ಅದಾಗಲೇ ಕಾಳಿ ಹಾಗೂ ಶರಾವತಿ ನದಿಯಂಚಿನ ತೋಟ ಹಾಗೂ ಗದ್ದೆಗಳಿಗೆ ನುಗಿದ್ದು, ತಗ್ಗು ಪ್ರದೇಶದಲ್ಲಿನ ಮನೆಗಳಿಗೂ ನೀರು ನುಗ್ಗಿ ಹಾನಿಯಾಗಿದೆ. ಇನ್ನು ಶಿರಸಿ ಸಿದ್ದಾಪುರದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಅಘನಾಶಿನಿ ಕೂಡ ತುಂಬಿ ಹರಿಯುತ್ತಿದ್ದು, ಮಳೆ ಮುಂದುವರಿದಲ್ಲಿ ಕುಮಟಾದ ಹೆಗಡೆ, ಮಿರ್ಜಾನ್ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರವಾಹ ಎದುರಾಗುವ ಆಂತಕ ತಲೆದೋರಿದೆ.
ಇನ್ನು ಗೆರುಸೊಪ್ಪ ಅಣೆಕಟ್ಟೆಯಿಂದ ನೀರು ಬಿಟ್ಟ ಕಾರಷ ಶರಾವತಿಕೊಳ್ಳದ ಎಡಬಲ ದಂಡೆ ತುಂಬಿ ಹರಿಯುತ್ತಿದೆ. ಕೊಡಾಣಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಎದೆಮಟ್ಟಕ್ಕೆ ನೀರು ಬಂದಿದ್ದು ತೋಟ ಹಾಗೂ ಮನೆಯೊಳಗೆ ನೀರು ನುಗ್ಗಿದೆ. ಅನಿಲಗೋಡ, ಮೂರ್ನಕುಳಿ, ಹೈಗುಂದ, ಹೊಸಾಡ ಶಾಲೆಗಳಲ್ಲಿ ಆಶ್ರಯಕೇಂದ್ರ ತೆರೆಯಲಾಗಿದೆ. 35ಕುಟುಂಬಗಳ 129ಜನ ಆಶ್ರಯಪಡೆದಿದ್ದಾರೆ. ಬಳಕೂರಿನಲ್ಲಿ ರಸ್ತೆಯ ಮೇಲೆ ನೀರು ಬಂದಿದೆ, ಮಾಗೋಡನಲ್ಲಿ ನಗರಬಸ್ತಿಕೇರಿ ಹೆದ್ದಾರಿಯ ಮೇಲೆ ನಾಲ್ಕು ಅಡಿ ನೀರು ನಿಂತಿದ್ದು ದೋಣಿ ಹಾಕಲಾಗಿದೆ.
ಕರಾವಳಿಯಲ್ಲಿ ಕಡಿಮೆಯಾದ ಮಳೆ:
ಇನ್ನು ಜಿಲ್ಲೆಯ ಕರಾವಳಿಯಲ್ಲಿ ಮಳೆ ಕೊಂಚ ಬಿಡುವು ನೀಡಿದೆ. ಶುಕ್ರವಾರ ಮಧ್ಹಾಹ್ನದ ಬಳಿಕ ಮಳೆ ಸಂಪೂರ್ಣ ಕಡಿಮೆಯಾಗಿದ್ದು, ಬಿಸಿಲಿನ ವಾತಾವರಣ ನಿರ್ಮಾಣಗೊಂಡಿತ್ತು. ಇದರಿಂದ ಪ್ರವಾಹ ಭೀತಿಯಲ್ಲಿದ್ದ ಜನರು ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.