ETV Bharat / state

ಜಾನುವಾರು ಜೀವಹಿಂಡುತ್ತಿದೆ ಚರ್ಮಗಂಟು ಬಾಧೆ : ಪಶು ವೈದ್ಯ ಸಿಬ್ಬಂದಿ ಕೊರತೆ.. ಸಿಗದ ಉತ್ತಮ ಚಿಕಿತ್ಸೆ, ರೈತರು ಆತಂಕ

author img

By

Published : Dec 17, 2022, 5:58 PM IST

Updated : Dec 17, 2022, 8:06 PM IST

ಉತ್ತರಕನ್ನಡ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಚರ್ಮಗಂಟು ಬಾಧೆ ದಿನದಿಂದ ದಿನಕ್ಕೆ ಹೆಚ್ಚಾಗಿ ಹಬ್ಬುತ್ತಿದೆ.ಇಂಥ ಹೊತ್ತಲ್ಲಿ ಜಿಲ್ಲೆಯ ಪಶು ಇಲಾಖೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇದ್ದು,ಗೋವುಗಳಿಗೆ ಸಮರ್ಪಕ ಚಿಕಿತ್ಸೆ ಸಿಗದೇ ಗೋವು ಸಾಕಣೆದಾರರು ಪರದಾಡುವಂತಾಗಿದೆ.

cattle are suffering from lumpy skin disease
ಚರ್ಮಗಂಟು ಬಾಧೆ ತಗುಲಿದ ಗೋವುಗಳು
ಚರ್ಮಗಂಟು ಬಾಧೆ

ಕಾರವಾರ: ಜಾನುವಾರುಗಳಿಗೆ ಚರ್ಮಗಂಟು ರೋಗವು ಮಾರಕವಾಗಿದೆ. ಮೈಮೇಲೆ ಏಳುವ ಗಂಟು ಗಂಟಾದ ಗುಳ್ಳೆಗಳು ದನಕರುಗಳನ್ನು ನರಳಿ ನರಳಿ ಸಾಯುವಂತೆ ಮಾಡಿದ್ದು ಉತ್ತರಕನ್ನಡ ಜಿಲ್ಲೆಯಲ್ಲಿ ರೋಗದ ತೀವ್ರತೆ ಹೆಚ್ಚಾಗತೊಡಗಿದೆ. ಆದರೆ ಇಂಥ ಹೊತ್ತಲ್ಲಿ ಜಿಲ್ಲೆಯ ಪಶು ಇಲಾಖೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ದೊಡ್ಡ ತಲೆನೋವಾಗಿದ್ದು, ಚಿಕಿತ್ಸೆಗಾಗಿ ರೈತರು ಕಣ್ಣೀರಿಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೌದು.. ರೈತರ ಒಡನಾಡಿ ಗೋವುಗಳಿಗೆ ಚರ್ಮಗಂಟು ರೋಗ ಹರಡುತ್ತಿದೆ. ಉತ್ತರಕನ್ನಡ ಜಿಲ್ಲೆಯಲ್ಲಿಯೂ ಇದರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆರಂಭದಲ್ಲಿ ದಕ್ಷಿಣ ಹಾಗೂ ಮಧ್ಯೆ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಹರಡಿದ್ದ ಕಾಯಿಲೆಯೂ ಇದೀಗ ಉತ್ತರಕನ್ನಡ ಜಿಲ್ಲೆಗೂ ವ್ಯಾಪಿಸಿದೆ.

ಜಾನುವಾರು ಬಲಿ:ಈಗಾಗಲೇ ಜಿಲ್ಲೆಯಲ್ಲಿ ಸುಮಾರು 111 ಜಾನುವಾರುಗಳು ಸಾವನ್ನಪ್ಪಿವೆ. ಒಟ್ಟು 434 ಹಳ್ಳಿಗಳಲ್ಲಿ 2500ಕ್ಕೂ ಹೆಚ್ವು ಜಾನುವಾರುಗಳಲ್ಲಿ ಕಾಣಿಸಿಕೊಂಡಿದೆ. ಸದ್ಯ 1 ಸಾವಿರದಷ್ಟು ಜಾನುವಾರುಗಳು ಗುಣಮುಖವಾಗಿದ್ದು ಲಕ್ಷದಷ್ಟು ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ.

ರೈತ ವರ್ಗ ಆತಂಕ:ಭಟ್ಕಳ, ಹೊನ್ನಾವರ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಹೊನ್ನಾವರದ ಸಾಲ್ಕೋಡು ಪಂಚಾಯಿತಿ ವ್ಯಾಪ್ತಿ ಕಳೆದ ಕೆಲ ದಿನಗಳ ಅವಧಿಯಲ್ಲಿಯೇ 3 ಆಕಳುಗಳು ಸಾವಿಗೀಡಾಗಿವೆ. ಅಲ್ಲದೆ ರೋಗವು ಒಂದು ಆಕಳಿಂದ ಇನ್ನೊಂದು ಆಕಳಿಗೆ ಹರಡುತ್ತಿದೆ. ಈ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಗೋವುಗಳನ್ನು ಸಾಕುವ ರೈತರಲ್ಲಿಆತಂಕ ಸೃಷ್ಟಿಸಿದೆ.


ಪಶುವೈದ್ಯರ ಕೊರತೆ:ಇನ್ನು ಹಳ್ಳಿಯಲ್ಲಿರುವ ಬಹುತೇಕ ಜನರಿಗೆ ಗೋವುಗಳು ಆಧಾರ ಸ್ತಂಭವಾಗಿವೆ. ಇಂಥ ಗೋವುಗಳಿಗೆ ಎದುರಾದ ಸಂಕಷ್ಟ ನಿವಾರಣೆಗೆ ಬಹುತೇಕರು ಪಶು ಆಸ್ಪತ್ರೆಗಳತ್ತ ತೆರಳುತ್ತಿದ್ದಾರೆ.‌ ಆದರೆ ಇಂತಹ ಸಂದಿಗ್ದ ಸ್ಥಿತಿಯಲ್ಲಿ ಜಿಲ್ಲೆಯ ಪಶು ಇಲಾಖೆಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಎದುರಾಗಿದೆ.

ಆ್ಯಂಬುಲೆನ್ಸ್ ಕೂಡಾ ಓಡಾಡುತ್ತಿಲ್ಲ. ಇದರಿಂದ ವೈದ್ಯಾಧಿಕಾರಿಗಳಿಗೆ ಕರೆ ಮಾಡಿ ಅವರು ಸೂಚಿಸಿದ ಔಷಧಿಗಳನ್ನು ನೀಡುವುದರ ಜತೆಗೆ ವನಸ್ಪತಿ ಎಣ್ಣೆ, ಕೀಟಗಳು ಬಾರದಂತೆ ಕಹಿಬೇವು ನುಗ್ಗೆಸೊಪ್ಪಿನ ಹೊಗೆ ಮುಂತಾದವುಗಳನ್ನು ಕೂಡಾ ಬಳಸಲಾಗುತ್ತಿದೆ. ಜಾನುವಾರು ಸತ್ತ ಮೇಲೆ ಪರಿಹಾರ ನೀಡಿ ಯಾವುದೇ ಪ್ರಯೋಜನವಿಲ್ಲ. ಅವುಗಳಿಗೆ ಸೂಕ್ತ ಚಿಕಿತ್ಸೆಗೆ ಲಸಿಕೆ ನೀಡಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪರಿಹಾರ ಹಣ:ಇನ್ನು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಪ್ರಶ್ನಿಸಿದರೆ ಜಾನುವಾರುಗಳಿಗೆ ವ್ಯಾಕ್ಸಿನ್ ನೀಡುವ ವ್ಯವಸ್ಥೆ ಮಾಡಲಾಗಿದ್ರೂ, ವೈದ್ಯರ ಕೊರತೆಯಿಂದಾಗಿ ಆಗಿಲ್ಲ. ಜಿಲ್ಲೆಗೆ 13 ಆ್ಯಂಬುಲೆನ್ಸ್‌ಗಳನ್ನು ಕೊಡಲಾಗಿದೆ. ಇದನ್ನು ಈ ತಿಂಗಳೊಳಗೆ ಕಾರ್ಯರೂಪಕ್ಕೆ ತರಲು ಆದೇಶ ನೀಡಲಾಗಿದೆ. ಸದ್ಯ 76 ಜಾನುವಾರುಗಳಿಗೆ ಪರಿಹಾರದ ಹಣ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.


ಹೈನುಗಾರಿಕೆ ಕುಂಠಿತ:ಒಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಜಾನುವಾರುಗಳಿಗೆ ಹಬ್ಬಿರುವ ಚರ್ಮಗಂಟು ರೋಗ ಸಾಕಷ್ಟು ಜಾನುವಾರುಗಳನ್ನು ಬಲಿ ತೆಗೆದುಕೊಂಡಿದೆ. ಹೀಗಾಗಿ ಹೈನುಗಾರಿಕೆ ಬಹಳಷ್ಟು ಕುಂಠಿತಗೊಂಡಿದೆ. ಸರಕಾರ ಈ ಬಗ್ಗೆ ಹೆಚ್ಚಿನ ಗಮನ ಹರಿಸಿ ಪ್ರತಿಯೊಂದು ಜಾನುವಾರುಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಒದಗಿಸುವ ವ್ಯವಸ್ಥೆ ಮಾಡಬೇಕು ಎನ್ನುತ್ತಿದೆ ರೈತವರ್ಗ.


ಇದನ್ನೂಓದಿ:ಧಾರವಾಡ ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಚರ್ಮಗಂಟು ರೋಗ: 288 ಜಾನುವಾರುಗಳು ಬಲಿ

ಚರ್ಮಗಂಟು ಬಾಧೆ

ಕಾರವಾರ: ಜಾನುವಾರುಗಳಿಗೆ ಚರ್ಮಗಂಟು ರೋಗವು ಮಾರಕವಾಗಿದೆ. ಮೈಮೇಲೆ ಏಳುವ ಗಂಟು ಗಂಟಾದ ಗುಳ್ಳೆಗಳು ದನಕರುಗಳನ್ನು ನರಳಿ ನರಳಿ ಸಾಯುವಂತೆ ಮಾಡಿದ್ದು ಉತ್ತರಕನ್ನಡ ಜಿಲ್ಲೆಯಲ್ಲಿ ರೋಗದ ತೀವ್ರತೆ ಹೆಚ್ಚಾಗತೊಡಗಿದೆ. ಆದರೆ ಇಂಥ ಹೊತ್ತಲ್ಲಿ ಜಿಲ್ಲೆಯ ಪಶು ಇಲಾಖೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ದೊಡ್ಡ ತಲೆನೋವಾಗಿದ್ದು, ಚಿಕಿತ್ಸೆಗಾಗಿ ರೈತರು ಕಣ್ಣೀರಿಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೌದು.. ರೈತರ ಒಡನಾಡಿ ಗೋವುಗಳಿಗೆ ಚರ್ಮಗಂಟು ರೋಗ ಹರಡುತ್ತಿದೆ. ಉತ್ತರಕನ್ನಡ ಜಿಲ್ಲೆಯಲ್ಲಿಯೂ ಇದರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆರಂಭದಲ್ಲಿ ದಕ್ಷಿಣ ಹಾಗೂ ಮಧ್ಯೆ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಹರಡಿದ್ದ ಕಾಯಿಲೆಯೂ ಇದೀಗ ಉತ್ತರಕನ್ನಡ ಜಿಲ್ಲೆಗೂ ವ್ಯಾಪಿಸಿದೆ.

ಜಾನುವಾರು ಬಲಿ:ಈಗಾಗಲೇ ಜಿಲ್ಲೆಯಲ್ಲಿ ಸುಮಾರು 111 ಜಾನುವಾರುಗಳು ಸಾವನ್ನಪ್ಪಿವೆ. ಒಟ್ಟು 434 ಹಳ್ಳಿಗಳಲ್ಲಿ 2500ಕ್ಕೂ ಹೆಚ್ವು ಜಾನುವಾರುಗಳಲ್ಲಿ ಕಾಣಿಸಿಕೊಂಡಿದೆ. ಸದ್ಯ 1 ಸಾವಿರದಷ್ಟು ಜಾನುವಾರುಗಳು ಗುಣಮುಖವಾಗಿದ್ದು ಲಕ್ಷದಷ್ಟು ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ.

ರೈತ ವರ್ಗ ಆತಂಕ:ಭಟ್ಕಳ, ಹೊನ್ನಾವರ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಹೊನ್ನಾವರದ ಸಾಲ್ಕೋಡು ಪಂಚಾಯಿತಿ ವ್ಯಾಪ್ತಿ ಕಳೆದ ಕೆಲ ದಿನಗಳ ಅವಧಿಯಲ್ಲಿಯೇ 3 ಆಕಳುಗಳು ಸಾವಿಗೀಡಾಗಿವೆ. ಅಲ್ಲದೆ ರೋಗವು ಒಂದು ಆಕಳಿಂದ ಇನ್ನೊಂದು ಆಕಳಿಗೆ ಹರಡುತ್ತಿದೆ. ಈ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಗೋವುಗಳನ್ನು ಸಾಕುವ ರೈತರಲ್ಲಿಆತಂಕ ಸೃಷ್ಟಿಸಿದೆ.


ಪಶುವೈದ್ಯರ ಕೊರತೆ:ಇನ್ನು ಹಳ್ಳಿಯಲ್ಲಿರುವ ಬಹುತೇಕ ಜನರಿಗೆ ಗೋವುಗಳು ಆಧಾರ ಸ್ತಂಭವಾಗಿವೆ. ಇಂಥ ಗೋವುಗಳಿಗೆ ಎದುರಾದ ಸಂಕಷ್ಟ ನಿವಾರಣೆಗೆ ಬಹುತೇಕರು ಪಶು ಆಸ್ಪತ್ರೆಗಳತ್ತ ತೆರಳುತ್ತಿದ್ದಾರೆ.‌ ಆದರೆ ಇಂತಹ ಸಂದಿಗ್ದ ಸ್ಥಿತಿಯಲ್ಲಿ ಜಿಲ್ಲೆಯ ಪಶು ಇಲಾಖೆಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಎದುರಾಗಿದೆ.

ಆ್ಯಂಬುಲೆನ್ಸ್ ಕೂಡಾ ಓಡಾಡುತ್ತಿಲ್ಲ. ಇದರಿಂದ ವೈದ್ಯಾಧಿಕಾರಿಗಳಿಗೆ ಕರೆ ಮಾಡಿ ಅವರು ಸೂಚಿಸಿದ ಔಷಧಿಗಳನ್ನು ನೀಡುವುದರ ಜತೆಗೆ ವನಸ್ಪತಿ ಎಣ್ಣೆ, ಕೀಟಗಳು ಬಾರದಂತೆ ಕಹಿಬೇವು ನುಗ್ಗೆಸೊಪ್ಪಿನ ಹೊಗೆ ಮುಂತಾದವುಗಳನ್ನು ಕೂಡಾ ಬಳಸಲಾಗುತ್ತಿದೆ. ಜಾನುವಾರು ಸತ್ತ ಮೇಲೆ ಪರಿಹಾರ ನೀಡಿ ಯಾವುದೇ ಪ್ರಯೋಜನವಿಲ್ಲ. ಅವುಗಳಿಗೆ ಸೂಕ್ತ ಚಿಕಿತ್ಸೆಗೆ ಲಸಿಕೆ ನೀಡಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪರಿಹಾರ ಹಣ:ಇನ್ನು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಪ್ರಶ್ನಿಸಿದರೆ ಜಾನುವಾರುಗಳಿಗೆ ವ್ಯಾಕ್ಸಿನ್ ನೀಡುವ ವ್ಯವಸ್ಥೆ ಮಾಡಲಾಗಿದ್ರೂ, ವೈದ್ಯರ ಕೊರತೆಯಿಂದಾಗಿ ಆಗಿಲ್ಲ. ಜಿಲ್ಲೆಗೆ 13 ಆ್ಯಂಬುಲೆನ್ಸ್‌ಗಳನ್ನು ಕೊಡಲಾಗಿದೆ. ಇದನ್ನು ಈ ತಿಂಗಳೊಳಗೆ ಕಾರ್ಯರೂಪಕ್ಕೆ ತರಲು ಆದೇಶ ನೀಡಲಾಗಿದೆ. ಸದ್ಯ 76 ಜಾನುವಾರುಗಳಿಗೆ ಪರಿಹಾರದ ಹಣ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.


ಹೈನುಗಾರಿಕೆ ಕುಂಠಿತ:ಒಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಜಾನುವಾರುಗಳಿಗೆ ಹಬ್ಬಿರುವ ಚರ್ಮಗಂಟು ರೋಗ ಸಾಕಷ್ಟು ಜಾನುವಾರುಗಳನ್ನು ಬಲಿ ತೆಗೆದುಕೊಂಡಿದೆ. ಹೀಗಾಗಿ ಹೈನುಗಾರಿಕೆ ಬಹಳಷ್ಟು ಕುಂಠಿತಗೊಂಡಿದೆ. ಸರಕಾರ ಈ ಬಗ್ಗೆ ಹೆಚ್ಚಿನ ಗಮನ ಹರಿಸಿ ಪ್ರತಿಯೊಂದು ಜಾನುವಾರುಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಒದಗಿಸುವ ವ್ಯವಸ್ಥೆ ಮಾಡಬೇಕು ಎನ್ನುತ್ತಿದೆ ರೈತವರ್ಗ.


ಇದನ್ನೂಓದಿ:ಧಾರವಾಡ ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಚರ್ಮಗಂಟು ರೋಗ: 288 ಜಾನುವಾರುಗಳು ಬಲಿ

Last Updated : Dec 17, 2022, 8:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.