ETV Bharat / state

ಕುಡಿಯಲು ಹಾಲು ಸಿಗುವ ಮಾರ್ಗದಲ್ಲಿ ಬಿಎಸ್​ವೈ ಸಾಗುತ್ತಿದ್ದಾರೆ: ಸಚಿವ ಸೋಮಣ್ಣ - V somanna statement about yediyurappa

ಕುಡಿಯಲು ಹಾಲು ಎಲ್ಲಿ ಸಿಗುತ್ತದೆಯೋ ಅದೇ ಮಾರ್ಗದಲ್ಲಿ ಯಡಿಯೂರಪ್ಪನವರು ಸಾಗುತ್ತಿದ್ದಾರೆ ಎಂದು ನೂತನ ಸಚಿವ ಸೋಮಣ್ಣ ಬಿಎಸ್​ವೈ ರಾಜಕೀಯ ನಡೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

V somanna
ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಸಚಿವ ವಿ ಸೋಮಣ್ಣ
author img

By

Published : Aug 6, 2021, 12:22 PM IST

ತುಮಕೂರು: ಕುಡಿಯಲು ಹಾಲು ಸಿಗುವ ಮಾರ್ಗದಲ್ಲಿ ಬಿ.ಎಸ್.ಯಡಿಯೂರಪ್ಪನವರು ಸಾಗುತ್ತಿದ್ದಾರೆ ಎಂದು ನೂತನ ಸಚಿವ ಸೋಮಣ್ಣ ಹೇಳಿದರು.

ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ವೇಳೆ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಯಡಿಯೂರಪ್ಪನವರು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು, ಹಿರಿಯ ರಾಜಕಾರಣಿ. ಇದುವರೆಗೂ ಸಮರ್ಥವಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದಾರೆ. ನನ್ನನ್ನು, ನಿಮ್ಮನ್ನು ನೋಡಿದ್ರೆ ಹಾಲು ಸಿಗುತ್ತದೆಯೇ?, ಸಿಗುವುದಿಲ್ಲ. ಹೀಗಾಗಿ ಬಿಎಸ್​ವೈ ಈಗ ಅವರದ್ದೇ ಆದ ಮಾರ್ಗದಲ್ಲಿ ಹೋಗುತ್ತಿದ್ದಾರೆ ಎಂದು ಯಡಿಯೂರಪ್ಪನವರ ರಾಜಕೀಯ ನಡೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.

ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಸಚಿವ ವಿ ಸೋಮಣ್ಣ

ಇನ್ನು ನಾನು ರಾಯಚೂರು ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಶೀಘ್ರದಲ್ಲೇ ಪ್ರವಾಸ ಮಾಡಲಿದ್ದು, ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು. ಇದಕ್ಕೂ ಮುನ್ನ ಸಿದ್ದಗಂಗಾ ಮಠದಲ್ಲಿರುವ ಶ್ರೀ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಶ್ರೀ ಸಿದ್ದಲಿಂಗ ಸ್ವಾಮೀಜಿ ಯವರಿಂದ ಆಶೀರ್ವಾದ ಪಡೆದರು.

ತುಮಕೂರು: ಕುಡಿಯಲು ಹಾಲು ಸಿಗುವ ಮಾರ್ಗದಲ್ಲಿ ಬಿ.ಎಸ್.ಯಡಿಯೂರಪ್ಪನವರು ಸಾಗುತ್ತಿದ್ದಾರೆ ಎಂದು ನೂತನ ಸಚಿವ ಸೋಮಣ್ಣ ಹೇಳಿದರು.

ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ವೇಳೆ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಯಡಿಯೂರಪ್ಪನವರು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು, ಹಿರಿಯ ರಾಜಕಾರಣಿ. ಇದುವರೆಗೂ ಸಮರ್ಥವಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದಾರೆ. ನನ್ನನ್ನು, ನಿಮ್ಮನ್ನು ನೋಡಿದ್ರೆ ಹಾಲು ಸಿಗುತ್ತದೆಯೇ?, ಸಿಗುವುದಿಲ್ಲ. ಹೀಗಾಗಿ ಬಿಎಸ್​ವೈ ಈಗ ಅವರದ್ದೇ ಆದ ಮಾರ್ಗದಲ್ಲಿ ಹೋಗುತ್ತಿದ್ದಾರೆ ಎಂದು ಯಡಿಯೂರಪ್ಪನವರ ರಾಜಕೀಯ ನಡೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.

ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಸಚಿವ ವಿ ಸೋಮಣ್ಣ

ಇನ್ನು ನಾನು ರಾಯಚೂರು ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಶೀಘ್ರದಲ್ಲೇ ಪ್ರವಾಸ ಮಾಡಲಿದ್ದು, ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು. ಇದಕ್ಕೂ ಮುನ್ನ ಸಿದ್ದಗಂಗಾ ಮಠದಲ್ಲಿರುವ ಶ್ರೀ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಶ್ರೀ ಸಿದ್ದಲಿಂಗ ಸ್ವಾಮೀಜಿ ಯವರಿಂದ ಆಶೀರ್ವಾದ ಪಡೆದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.