ತುಮಕೂರು: ಕೊರೊನಾ ಸೋಂಕಿನಿಂದ ಮೃತಪಟ್ಟ ಮಹಿಳೆಯ ಶವವನ್ನು ಮನೆಯಿಂದ ಸಾಗಿಸಲು ಗ್ರಾಮಸ್ಥರು ಮುಂದಾಗದ ಹಿನ್ನೆಲೆ ಸ್ಥಳದಲ್ಲಿದ್ದ ತಹಶೀಲ್ದಾರ್ ಜಿ ವಿ ಮೋಹನ್ ಸ್ವತಃ ಪಿಪಿಇ ಕಿಟ್ ಧರಿಸಿ ತಮ್ಮ ಸಿಬ್ಬಂದಿಯೊಂದಿಗೆ ಗ್ರಾಮದಿಂದ ಶವ ಸಾಗಿಸಿ ಮಾದರಿಯಾಗಿದ್ದಾರೆ.
ತಾಲೂಕಿನ ಕುಪ್ಪೂರು ಗ್ರಾಮದ ಜಯಮ್ಮ(64) ಎಂಬ ಮಹಿಳೆಗೆ ಕೊರೊನಾ ದೃಢಪಟ್ಟಿದ್ದರಿಂದ ಹಲವು ದಿನಗಳಿಂದ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ತೆರಳಿದ ತಹಶೀಲ್ದಾರ್ ಜಿ ವಿ ಮೋಹನ್ ಶವ ಸಾಗಿಸಲು ಯಾರೂ ಕೂಡ ಮುಂದಾಗದಿರುವುದನ್ನು ಕಂಡರು. ತಕ್ಷಣ ರೆವಿನ್ಯೂ ಇನ್ಸ್ಪೆಕ್ಟರ್ ಶಿವಣ್ಣ , ವಿಲೇಜ್ ಅಕೌಂಟೆಂಟ್ ದೇವರಾಜು, ಚಾಲಕ ಮಧು ಹಾಗೂ ಆ್ಯಂಬುಲೆನ್ಸ್ನ ಜಹೀರ್ ಎಂಬುವವರ ಸಹಾಯದೊಂದಿಗೆ ಮನೆಯೊಳಗಿಂದ ಶವ ಹೊರತೆಗೆದು, ನಂತರ ನಗರದ ವಿದ್ಯುತ್ ಚಿತಾಗಾರಕ್ಕೆ ತಂದು ಅಂತ್ಯ ಸಂಸ್ಕಾರ ಮಾಡಲು ನೆರವಾದರು.
ಓದಿ: ಲಾಕ್ಡೌನ್ ಇರುವವರೆಗೂ ಕಾರ್ಮಿಕರಿಗೆ, ನಿರ್ಗತಿಕರಿಗೆ ಆಹಾರ ಭದ್ರತೆ ಕಲ್ಪಿಸಿ: ಹೈಕೋರ್ಟ್