ETV Bharat / state

ಮುರುಕಲು ಆಟಿಕೆ ಸಾಧನಗಳು.. ನಿರ್ವಹಣೆಯಿಲ್ಲದೆ ಅವ್ಯವಸ್ಥೆಯ ಆಗರವಾದ ಗಾಂಧಿ ಪಾರ್ಕ್‌ ವೇಸ್ಟ್‌.. - undefined

ನಗರದ ಅತ್ಯಂತ ದೊಡ್ಡ ಉದ್ಯಾನವನವೆಂಬ ಖ್ಯಾತಿ ಪಡೆದಿರುವ ಗಾಂಧಿ ಪಾರ್ಕ್‌ ಅವ್ಯವಸ್ಥೆಯಿಂದ ಕೂಡಿದ್ದು, ಮಹಾನಗರ ಪಾಲಿಕೆ ಈ ಕಡೆ ಗಮನ ಹರಿಸಿ ಇಲ್ಲಿನ ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರಕಿಸಿಕೊಡಬೇಕಿದೆ.

ಗಾಂಧಿ ಪಾರ್ಕ್
author img

By

Published : May 28, 2019, 12:47 PM IST

ಶಿವಮೊಗ್ಗ: ನಗರದ ಹೃದಯ ಭಾಗದಲ್ಲಿರುವ ಗಾಂಧಿ ಪಾರ್ಕ್​ ನಗರದ ಅತ್ಯಂತ ದೊಡ್ಡ ಉದ್ಯಾನವನವೆಂಬ ಖ್ಯಾತಿ ಪಡೆದಿದೆ. ಆದರೆ, ಅದರೊಳಗಡೆ ಹೋದರೆ ಸಮಸ್ಯೆಗಳ ಸರಮಾಲೆಗಳೇ ಎಲ್ಲರ ಕಣ್ಣಿಗೆ ಗೋಚರಿಸುತ್ತವೆ.

ಗಾಂಧಿ ಪಾರ್ಕ್‌ನಲ್ಲಿ ಅವ್ಯವಸ್ಥೆ

ಸರಿಯಾದ ನಿರ್ವಹಣೆಯ ಕೊರೆಯಿರುವ ಗಾಂಧಿ ಪಾರ್ಕಿನ ಒಳಗಡೆ ಹೋದರೆ ಅವ್ಯವಸ್ಥೆ ಕಾಣಿಸುತ್ತೆ. ಗಾಂಧಿ ಹೆಸರಿಗೆ ಈ ಉದ್ಯಾನವನ ಒಂದ್ರೀತಿ ಕಳಂಕವೆಂಬತಿದೆ. ಮೂಲಸೌಕರ್ಯವೇ ಇಲ್ಲದೆ ಜನ ಈ ಕಡೆ ಮುಖ ಮಾಡಲ್ಲ.

ಈ ಉದ್ಯನವನದಲ್ಲಿರುವ ಕಾರಂಜಿ ಕೊಳದ ಒಳಗಡೆ ಹಾಳಾಗಿರುವ ಪೈಪ್​ಗಳಿವೆ. ಬೀದಿ ದೀಪ ಸೇರಿ ಮಕ್ಕಳ ಮನೋರಂಜನೆಗಾಗಿರುವ ಯಾವ ಸಲಕರಣೆಗಳೂ ಇಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. ಹೀಗೆ ಹತ್ತಾರು ಸಮಸ್ಯೆಗಳ ತಾಣ ಈ ಉದ್ಯಾನವನ. ಇಷ್ಟೆಲ್ಲ ಆದರೂ ಕೂಡ ಮಹಾನಗರ ಪಾಲಿಕೆ ಈ ಕಡೆ ತಲೆ ಕೂಡ ಹಾಕಿಲ್ಲ. ನಿತ್ಯ ಪಾರ್ಕ್​ಗೆ ಬರುವ ನೂರಾರು ಜನರಿಂದ ತಲಾ ಹತ್ತು ರೂ. ಫೀ ಪಡೆಯುವ ಗುತ್ತಿಗೆದಾರರು ಇದರ ನಿರ್ವಹಣೆ ಮಾತ್ರ ಮಾಡೋದಿಲ್ಲ.

ಉದ್ಯಾನವನ ಅಭಿವೃದ್ಧಿಗಾಗಿಯೇ 3 ವರ್ಷಕ್ಕೊಮ್ಮೆ ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತೆ. ಅದರಿಂದ ಲಕ್ಷಾಂತರ ರೂ. ಕೂಡ ಬಿಡುಗಡೆಯಾಗಿದೆ. ಆದರೆ, ಪಾಲಿಕೆ ಮಾತ್ರ ಆ ಹಣವನ್ನ ಗಾಂಧಿ ಪಾರ್ಕಿನ ಅಭಿವೃದ್ಧಿಗೆ ಬಳಸದೇ ಏನು ಮಾಡುತ್ತಿದೆ ಎನ್ನುವುದೇ ಸಾರ್ವಜನಿಕರ ಪ್ರಶ್ನೆ.

ಶಿವಮೊಗ್ಗ: ನಗರದ ಹೃದಯ ಭಾಗದಲ್ಲಿರುವ ಗಾಂಧಿ ಪಾರ್ಕ್​ ನಗರದ ಅತ್ಯಂತ ದೊಡ್ಡ ಉದ್ಯಾನವನವೆಂಬ ಖ್ಯಾತಿ ಪಡೆದಿದೆ. ಆದರೆ, ಅದರೊಳಗಡೆ ಹೋದರೆ ಸಮಸ್ಯೆಗಳ ಸರಮಾಲೆಗಳೇ ಎಲ್ಲರ ಕಣ್ಣಿಗೆ ಗೋಚರಿಸುತ್ತವೆ.

ಗಾಂಧಿ ಪಾರ್ಕ್‌ನಲ್ಲಿ ಅವ್ಯವಸ್ಥೆ

ಸರಿಯಾದ ನಿರ್ವಹಣೆಯ ಕೊರೆಯಿರುವ ಗಾಂಧಿ ಪಾರ್ಕಿನ ಒಳಗಡೆ ಹೋದರೆ ಅವ್ಯವಸ್ಥೆ ಕಾಣಿಸುತ್ತೆ. ಗಾಂಧಿ ಹೆಸರಿಗೆ ಈ ಉದ್ಯಾನವನ ಒಂದ್ರೀತಿ ಕಳಂಕವೆಂಬತಿದೆ. ಮೂಲಸೌಕರ್ಯವೇ ಇಲ್ಲದೆ ಜನ ಈ ಕಡೆ ಮುಖ ಮಾಡಲ್ಲ.

ಈ ಉದ್ಯನವನದಲ್ಲಿರುವ ಕಾರಂಜಿ ಕೊಳದ ಒಳಗಡೆ ಹಾಳಾಗಿರುವ ಪೈಪ್​ಗಳಿವೆ. ಬೀದಿ ದೀಪ ಸೇರಿ ಮಕ್ಕಳ ಮನೋರಂಜನೆಗಾಗಿರುವ ಯಾವ ಸಲಕರಣೆಗಳೂ ಇಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. ಹೀಗೆ ಹತ್ತಾರು ಸಮಸ್ಯೆಗಳ ತಾಣ ಈ ಉದ್ಯಾನವನ. ಇಷ್ಟೆಲ್ಲ ಆದರೂ ಕೂಡ ಮಹಾನಗರ ಪಾಲಿಕೆ ಈ ಕಡೆ ತಲೆ ಕೂಡ ಹಾಕಿಲ್ಲ. ನಿತ್ಯ ಪಾರ್ಕ್​ಗೆ ಬರುವ ನೂರಾರು ಜನರಿಂದ ತಲಾ ಹತ್ತು ರೂ. ಫೀ ಪಡೆಯುವ ಗುತ್ತಿಗೆದಾರರು ಇದರ ನಿರ್ವಹಣೆ ಮಾತ್ರ ಮಾಡೋದಿಲ್ಲ.

ಉದ್ಯಾನವನ ಅಭಿವೃದ್ಧಿಗಾಗಿಯೇ 3 ವರ್ಷಕ್ಕೊಮ್ಮೆ ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತೆ. ಅದರಿಂದ ಲಕ್ಷಾಂತರ ರೂ. ಕೂಡ ಬಿಡುಗಡೆಯಾಗಿದೆ. ಆದರೆ, ಪಾಲಿಕೆ ಮಾತ್ರ ಆ ಹಣವನ್ನ ಗಾಂಧಿ ಪಾರ್ಕಿನ ಅಭಿವೃದ್ಧಿಗೆ ಬಳಸದೇ ಏನು ಮಾಡುತ್ತಿದೆ ಎನ್ನುವುದೇ ಸಾರ್ವಜನಿಕರ ಪ್ರಶ್ನೆ.

Intro:ಶಿವಮೊಗ್ಗ
ಸ್ಪೇಷಲ್ ಸ್ಟೋರಿ
ಸಮಸ್ಯೆಗಳ ಆಗಾರ ಈ ಉದ್ಯಾನವನ
ಆ್ಯಂಕರ್
.ಅದು ನಗರದ ಹೃದಯ ಬಾಗದಲ್ಲಿರುವ ಉದ್ಯಾವನ ಆ ಉದ್ಯಾನವನದ ಅಭಿವೃದ್ಧಿ ಗಾಗಿಯೇ ಬರುತ್ತೆ ಲಕ್ಷಾಂತರ ಹಣ, ಆಂದ್ರೆ ಆ ಉದ್ಯಾನವನದ ಒಳಗಡೆ ಹೋದರೆ ಸಮಸ್ಯೆ ಗಳ ಸರಮಾಲೆಯೆ ಕಾಣುತ್ತದೆ ‌
ಹಾಗಾಂದ್ರೆ ಏನ್ ಈ ಸ್ಟೋರಿ ಅಂತಿರಾ.
ವಾಯ್ಸ್ ಓವರ್ ೧.
ಹೌದು ನಗರದ ಹೃದಯ ಬಾಗದಲ್ಲಿರುವ ಗಾಂಧಿ ಪಾರ್ಕಿನ ಅವ್ಯವಸ್ಥೆ ಇದು
ನಗರದ ಅತ್ಯಂತ ದೊಡ್ಡ ಉದ್ಯಾನವನವೆಂಬ ಖ್ಯಾತಿ ಪಡೆದಿದೆ. ಆಂದ್ರೆ ಅದರ ಒಳಗಡೆ ಹೋದರೆ ಸಮಸ್ಯೆ ಗಳ ಸರಮಾಲೆಯೆ ನಮಗೆ ಗೋಚರಿಸುತ್ತದೆ. ಗಾಂಧಿ ಪಾರ್ಕ್ ಹೆಸರಿಗೆ ಮಾತ್ರ ಗಾಂದಿ ಪಾರ್ಕ್‌ ಆದರೆ ಇಲ್ಲಿ ಗಾಂಧಿಜೀ ಅವರಿಗೆ ಅವಮಾನ ಆಗುವಂತ ಪರಿಸ್ಥಿತಿ ಬಂದಿದೆ .ಗಾಂಧಿ ಪಾರ್ಕ್ ಗೆ ಎಂಟ್ರಿ ಕೋಡುತ್ತಿದಂತೆ ನಮಗೆ ಕಾಣುವುದು ಗಾಂಧಿ ಅವರ ಹೆಸರಲ್ಲಿರು ಗಾಂಧಿ ಪಾರ್ಕ್ ಎಂಬ ಹೆಸರಿನ ಮಧ್ಯೆ ಇರುವ ಗಾಂಧಿ ಪೋಟೋ ಸುಟ್ಟಿರುವ ದೃಶ್ಯ .ಹಾಗೇ ಒಳಗಡೆ ಹೋದರೆ
ನೀರಿನ ಕಾರಂಜಿ ಕೋಳ ಕಾಣುತ್ತದೆ ಆ ಕಾರಂಜಿಯ ಕೋಳದಲ್ಲಿ ಕಾರಂಜಿಯನ್ನ ನೋಡಿದವರೆ ಇಲ್ಲವೇನೋ ಅನ್ನಿಸುತ್ತದೆ. ಕಾರಂಜಿಯಕೋಳದ ಒಳಗಡೆ ಹಾಳಾಗಿರುವ ಪೈಪ್ ಗಳು. ರಾತ್ರಿ ವೇಳೆಯಲ್ಲಿ ಬೆಳಕಿಗಾಗಿ ಲೈಟ್ ಕಂಬಗಳು ಮಾತ್ರ ಕಾಣುತ್ತದೆ ಆಂದ್ರೆ ಅವ್ಯಾವು ಹತ್ತುವುದಿಲ್ಲ. ಅಷ್ಟೇ ಅಲ್ಲ ಅಲ್ಲಿ ಮಕ್ಕಳಿಗಾಗಿ ಯೇ ಆಟಿಕೆ ಸಾಮಾನುಗಳಿವೆ ಆದರೆ ಅವ್ಯಾವು ಮಕ್ಕಳಿಗೆ ಆಡಲು ಯೋಗ್ಯವಾಗಿಲ್ಲ.
ಹೀಗೆ ಮುಂದೆ ಹೋದರೆ ಶೌಚಾಲಯ ಇದೆ ಆದರೆ ಅದು ಯೋಗ್ಯವಿಲ್ಲ ಅಷ್ಟೇ ಅಲ್ಲ ಮಕ್ಕಳಿಗೆ ಆಟಲು ರೈಲು ಇದೆ ಅದರ ಇಂಜಿನ್ ಸರಿ ಇಲ್ಲ .ಹೀಗೆ ಹತ್ತು ಹಲವಾರು ಸಮಸ್ಯೆ ಗಳ ತಾಣವಾಗಿರುವುದು ಈ ಉದ್ಯಾನ ವನ.
ಹೇಳಲು ಮಾತ್ರ ನಗರದ ಅತ್ಯಂತ ದೊಡ್ಡ ಉದ್ಯಾನ ವನ ಎಂಬ ಹೆಸರು. ಆದ್ರೆ ಇದರ ಅವ್ಯವಸ್ಥೆ ಯನ್ನು ನೋಡಿದರೆ ಇದರ ನಿರ್ವಹಣೆ ಮಾಡುವ ಮಹಾನಗರ ಪಾಲಿಕೆ ಕಣ್ಮುಂಚಿ ಕುಳಿತುಕೊಂಡಿದೆ ಏನೋ ಅನಿಸುವುದು ಸುಳಲ್ಲ. ಈ ಪಾರ್ಕ್ ಗೆ ಪ್ರತಿದಿನವು ಸಾವಿರ ಜನ ಬರುತ್ತಾರೆ ಅವರಿಂದ ಹತ್ತು ರೂಪಾಯಿ ಟೀಕೆಟ್ ಪಡೆಯುವ ಗುತ್ತಿಗೆದಾರ ಅದರ ನಿರ್ವಹಣೆ ಮಾಡದೇ ಜನರಿಗೆ ಮೋಸ ಮಾಡುತ್ತಿರುವುದಂತ್ತು ಸುಳಲ್ಲ.


Body:ಅಷ್ಟಕ್ಕೂ ಇಲ್ಲಿ ಹಣದ ಕೂರತೆ ಇದೆ ಅನ್ಕೊಂಡ್ರೆ ಅದು ನಮ್ಮ ತಪ್ಪು. ಇದರ ಅಭಿವೃದ್ಧಿ ಗಾಗಿಯೇ ಮೂರು ವರ್ಷಗಳಿಗೊಮ್ಮೆ ಟೆಂಡರ್ ಪಕ್ರೀಯೆ ನಡೆಯುತ್ತದೆ. ಅದು ಸಹಾ ಲಕ್ಷಾಂತರ ರೂಗಳಿಗೆ ಆ ಹಣವೇಲ್ಲಾ ಹೋಗೊದು ಮಹಾನಗರ ಪಾಲಿಕೆ ಗೆ ಆದರೆ ಪಾಲಿಕೆ ಮಾತ್ರ ಆ ಹಣವನ್ನ ಗಾಂದಿ ಪಾರ್ಕಿನ ಅಭಿವೃದ್ಧಿ ಗೆ ಬಳಸದೇ ಏನು ಮಾಡುತ್ತಿದೆ ಎನ್ನುವುದೇ ಸಾರ್ವಜನಿಕ ರ ಪ್ರಶ್ನೆ. ಈ ಕುರಿತು ಗುತ್ತಿಗೆದಾರನಿಗೆ ಕೇಳಿದರೆ ನನಗೆ ಟೆಂಟರ್ ಆಗುವ ಮುಂಚೆ ಸಹ ಅನೇಕ ರೀತಿಯ ಸೌಲಭ್ಯ ದ ಕೂರತೆ ಇತ್ತು ನಾನು ಸಹ ಅನೇಕ ಬಾರಿ ಸಮಸ್ಯೆಗಳನ್ನ ಬಗೆಹರಿಸಿಕೋಡಿ ಹಾಗೂ ಮಕ್ಕಳ ಆಟಿಕೆಗಳನ್ನು ಸರಿ ಮಾಡಿ ಎಂದರೂ ಸಹ ಈ ಬಗ್ಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎನ್ನುತ್ತಾನೆ ಟೇಂಟರ್ ದಾರ.

ಬೆಸಿಗೆ ರಜೆ ಇರುವ ಕಾರಣ ನೂರಾರು ಮಕ್ಕಳನ್ನ ಕರೆದುಕೊಂಡು ಪೋಷಕ ಕರು ಈ ಪಾರ್ಕ್ ಗೆ ಬಂದರೆ ಅವರ ಮಕ್ಕಳಿಗೆ ತೊಂದರೆ ಆಗುವುದರಲ್ಲಿ ಅನುಮಾನವೇ ಇಲ್ಲ
ರಜೆ ದಿನ ಎಂದು ಮಕ್ಕಳನ್ನ ಆಟ ಆಡಲು ಕರೆದುಕೊಂಡು ಬರುವ ಮೊದಲು ಯೊಚಿಸುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಇರುವ ಆಟಿಕೆ ಸಾಮಾನುಗಳು ಯಾವುದು ಸರಿ ಇಲ್ಲದೇ ಹಾಳಾಗಿ ಹೋಗಿವೆ .ತಂತಿಯಿಂದ ಕಟ್ಟಿರುವ ಜೋಕಾಲಿ ,ತುತು ಬಿಂದಿರುವ ಜಾರು ಬಂಡಿ , ಹತ್ತಳು ಆಗದಾ ಮೆಟ್ಟಿಲುಗಳು ಹೀಗೆ ಮಕ್ಕಳ ಇವುಗಳಲ್ಲಿ ಆಟ ಆಡಿದರೆ ಕೈಯೋ ,ಕಾಲೋ ಮುರಿದು ಕೋಳ್ಳುವುದು ಗ್ಯಾರಂಟಿ ಎನ್ನುತ್ತಾರೆ ಪೋಷಕರು.


Conclusion:ಒಟ್ಟಾರೆ ಯಾಗಿ ಮಹಾನಗರ ಪಾಲಿಕೆ ಹಾಗೂ ಗುತ್ತಿಗೆದಾರನ ನಿರ್ಲಕ್ಷಯಿಂದ ಮಕ್ಕಳು ಆಟ ಆಡಲು ಇರುವ ಆಟಿಕೆಗಳು ಹಾಗೂ ಶೌಚಾಲಯ ಗಳು ಹಾಳಾಗಿ ಹೋಗಿರುವುದತ್ತು ಸತ್ಯ. ಹಾಗಾಗಿ ಮಕ್ಕಳು ಕೈ ಯೋ, ಕಾಲೋ ಮುರಿದು ಕೋಳ್ಳುವ ಮುಂಚೆ ಇಲ್ಲಿನ ಸಮಸ್ಯೆ ಗಳಿಗೆ ಪರಿಹಾರವಾಗಬೇಕಿದೆ ಹಾಗೂ ಜನರಿಂದ ತೇಗೆದುಕೊಳ್ಳುವ ತೇರಿಗೆಗೆ ತಕ್ಕ ಸೌಲಭ್ಯವನ್ನ ಒದಗಿಸುವ ಕೆಲಸ ಗುತ್ತಿಗೆ ದಾರ ಹಾಗೂ ಮಹಾನಗರ ಪಾಲಿಕೆ ಯಿಂದಾ ಆಗಬೇಕಿದೆ.
ಬೈಟ್: ಸುಹಾಸ್ ಗುತ್ತಿಗೆದಾರ
ಬೈಟ್: ರೇಖಾ ಪಾರ್ಕ್ ವಿಕ್ಷೇಣೆಗೆ ಬಂದವರು
ಬೈಟ್: ಚೇಲುವರಾಜು ಸ್ಥಳೀಯ
ಭೀಮಾನಾಯ್ಕ ಎಸ್ ಶಿವಮೊಗ್ಗ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.