ETV Bharat / state

ಶಿವಮೊಗ್ಗದಲ್ಲಿ ಮಹಿಳೆಯನ್ನು ಕಿಡ್ನಾಪ್​​​ ಮಾಡಿ ಕೊಲೆ: ಆರೋಪಿ ಅರೆಸ್ಟ್​​ - Murder accused arrest in Shimoga

ಶಿವಮೊಗ್ಗದ ನಗರದ ಹಳೇ ರೈಲು ನಿಲ್ದಾಣದ ಬಳಿ ಕೆಟ್ಟು ನಿಂತ ಕಾರಿನಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣ ತಿರುವು ಪಡೆದುಕೊಂಡಿದ್ದು, ಕೊಲೆ ಆರೋಪಿ ಸೋಮಿನಕೊಪ್ಪದ ಸೈಯದ್ ಅಬು ಸಲೇಹ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ.

Murder accused arrest in Shimoga
ಆರೋಪಿ ಬಂಧನ
author img

By

Published : Jan 10, 2020, 11:59 AM IST

ಶಿವಮೊಗ್ಗ: ಮಾರುತಿ ಓಮ್ನಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದ ಪ್ರಕರಣ ಬೇಧಿಸುವಲ್ಲಿ ಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಜನವರಿ 2ರಂದು ನಗರದ ಹಳೇ ರೈಲು ನಿಲ್ದಾಣದ ಬಳಿ ಕೆಟ್ಟು ನಿಂತಿದ್ದ ಮಾರುತಿ ಓಮ್ನಿಯಿಂದ ಕೆಟ್ಟ ವಾಸನೆ ಬರುತ್ತಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಮಹಿಳೆಯೊಬ್ಬರ ಶವ ಮುಖಕ್ಕೆ ಆ್ಯಸಿಡ್ ಹಾಕಿ ಪ್ಲಾಸ್ಟಿಕ್​ನಲ್ಲಿ ಸುತ್ತಿಟ್ಟ ರೀತಿಯಲ್ಲಿ ಪತ್ತೆಯಾಗಿತ್ತು.

ಪತ್ತೆಯಾದ ಶವ ಊರುಗಡೂರು ಗ್ರಾಮದ ತಹಸೀನಾ ಎಂಬ‌ ಮಹಿಳೆಯದ್ದು ಎಂದು ಬಳಿಕ ತಿಳಿದು ಬಂದಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಕೋಟೆ ಠಾಣೆ ಪೊಲೀಸರು, ಕೊಲೆ ಆರೋಪಿ ಸೋಮಿನಕೊಪ್ಪದ ಸೈಯದ್ ಅಬು ಸಲೇಹ ಎಂಬುವನನ್ನು ಬಂಧಿಸಿದ್ದಾರೆ. ಮಹಿಳೆಯ ಶವ ಪತ್ತೆಯಾದ ಕಾರು ಈತನದ್ದೇ ಎಂದು ತಿಳಿದು ಬಂದಿದ್ದು, ಕೊಲೆಯಾದ ಮಹಿಳೆ ತಹಸೀನಾಳ ಜೊತೆ ಈತ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ.

ಶಿವಮೊಗ್ಗ: ಮಾರುತಿ ಓಮ್ನಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದ ಪ್ರಕರಣ ಬೇಧಿಸುವಲ್ಲಿ ಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಜನವರಿ 2ರಂದು ನಗರದ ಹಳೇ ರೈಲು ನಿಲ್ದಾಣದ ಬಳಿ ಕೆಟ್ಟು ನಿಂತಿದ್ದ ಮಾರುತಿ ಓಮ್ನಿಯಿಂದ ಕೆಟ್ಟ ವಾಸನೆ ಬರುತ್ತಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಮಹಿಳೆಯೊಬ್ಬರ ಶವ ಮುಖಕ್ಕೆ ಆ್ಯಸಿಡ್ ಹಾಕಿ ಪ್ಲಾಸ್ಟಿಕ್​ನಲ್ಲಿ ಸುತ್ತಿಟ್ಟ ರೀತಿಯಲ್ಲಿ ಪತ್ತೆಯಾಗಿತ್ತು.

ಪತ್ತೆಯಾದ ಶವ ಊರುಗಡೂರು ಗ್ರಾಮದ ತಹಸೀನಾ ಎಂಬ‌ ಮಹಿಳೆಯದ್ದು ಎಂದು ಬಳಿಕ ತಿಳಿದು ಬಂದಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಕೋಟೆ ಠಾಣೆ ಪೊಲೀಸರು, ಕೊಲೆ ಆರೋಪಿ ಸೋಮಿನಕೊಪ್ಪದ ಸೈಯದ್ ಅಬು ಸಲೇಹ ಎಂಬುವನನ್ನು ಬಂಧಿಸಿದ್ದಾರೆ. ಮಹಿಳೆಯ ಶವ ಪತ್ತೆಯಾದ ಕಾರು ಈತನದ್ದೇ ಎಂದು ತಿಳಿದು ಬಂದಿದ್ದು, ಕೊಲೆಯಾದ ಮಹಿಳೆ ತಹಸೀನಾಳ ಜೊತೆ ಈತ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ.

Intro:ಮಹಿಳೆಯನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದ ಆರೋಪಿಯ ಬಂಧನ.

ಶಿವಮೊಗ್ಗ: ಹೊಸ ವರ್ಷದ ಪ್ರಾರಂಭದಲ್ಲಿಯೇ ಶಿವಮೊಗ್ಗ ಬೆಚ್ಚಿ ಬಿಳುವಂತೆ ಮಾಡಿದ್ದ ಮಾರುತಿ ಓಮ್ನಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮಹಿಳೆ ಶವ ಪ್ರಕರಣವನ್ನು ಭೇದಿಸುವಲ್ಲಿ ಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಜನವರಿ 2 ರಂದು ನಗರದ ಹಳೇ ರೈಲು ನಿಲ್ದಾಣದ ಬಳಿಯ ಓಮ್ನಿಯಲ್ಲಿ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.Body: ಕಳೆದ ನಾಲ್ಕೈದು ದಿನಗಳಲ್ಲಿ ಈ ಭಾಗದಲ್ಲಿ ಕೆಟ್ಟ ವಾಸನೆ ಬರುತ್ತಿದ್ದ ಮೇರಗೆ ಚೆಕ್ ಮಾಡಿದಾಗ ಓಮ್ನಿಯಲ್ಲಿ‌ ಶವ ಪತ್ತೆಯಾಗಿತ್ತು. ಮಹಿಳೆಯನ್ನು ಕೊಂದು ಮುಖಕ್ಕೆ ಆ್ಯಸಿಡ್ ಹಾಕಿ ಪ್ಲಾಸ್ಟಿಕ್ ನಲ್ಲಿ ಸುತ್ತಿ ಕಾರಿನಲ್ಲಿ ಬಿಟ್ಟು ಬಿಟ್ಟು ಹೋಗಲಾಗಿತ್ತು. ನಂತ್ರ ಮಿಸ್ಸಿಂಗ್ ಕಂಪ್ಲೀಟ್ ಆಧಾರದ ಮೇಲೆ ಪತ್ತೆಯಾದ ಶವವನ್ನು ಊರುಗಡೂರು ಗ್ರಾಮದ ತಹಸೀನಾ ಎಂಬ‌ ಮಹಿಳೆ ಎಂದು ಪತ್ತೆ ಮಾಡಲಾಗಿತ್ತು. ನಂತ್ರ ಕೊಲೆ ಮಾಡಿದ ಆರೋಪಿಗಾಗಿ ಹುಡುಕಾಟ ನಡೆಸಿದಾಗ ಸೋಮಿನಕೊಪ್ಪದ ಸೈಯದ್ ಅಬು ಸಲೇಹ ಎಂಬುವನನ್ನು ಕೋಟೆ ಪೊಲೀಸರು ಬಂಧಿಸಿದ್ದಾರೆ. ಕಾರು ಈತನದೆ ಆಗಿತ್ತು.Conclusion:ಕಾರು ಈತನದೆ ಆಗಿತ್ತು. ಕೊಲೆಯಾದ ಮಹಿಳೆ ತಹಸೀನಾಳ ಜೊತೆ ಈತನಿಗೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ. ಕೊಲೆಯಾದ ಒಂದು ವಾರದೊಳಗೆ ಕೊಲೆಗಾರನನ್ನು ಬಂಧಿಸಿದ್ದರಿಂದ ಶಿವಮೊಗ್ಗ ಜನತೆ ನಿಟ್ಟೂಸಿರು ಬಿಟ್ಟಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.