ETV Bharat / state

ಭದ್ರಾವತಿಯಲ್ಲಿ ಮಹಿಷಾ ದಸರಾ ಆಚರಣೆ: ಬಿಜೆಪಿ ಕಾರ್ಯಕರ್ತರಿಂದ ವಿರೋಧ

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಮಹಿಷಾ ದಸರಾವನ್ನು ಪ್ರಗತಿಪರರು ಆಚರಿಸಿದ್ರು. ಅದೇ ಮಾರ್ಗದಲ್ಲಿ ಬಿಜೆಪಿಯ ಗಾಂಧಿ ಸಂಕಲ್ಪ ಯಾತ್ರೆಯಲ್ಲಿ ಬಂದ ಬಿಜೆಪಿ ಕಾರ್ಯಕರ್ತರು ಮಹಿಷಾ ದಸರಾ ಆಚರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

author img

By

Published : Oct 6, 2019, 7:43 PM IST

ಮಹಿಷಾ ದಸರಾ ಆಚರಣೆ

ಶಿವಮೊಗ್ಗ: ಮೈಸೂರಿನಲ್ಲಿ ರದ್ದಾಗಿದ್ದ ಮಹಿಷಾ ದಸರಾವನ್ನು ಭದ್ರಾವತಿಯಲ್ಲಿ ಆಚರಿಸಲಾಗಿದೆ. ಮಹಿಷಾ ದಸರಾ‌ವನ್ನು ಮೈಸೂರಿನಲ್ಲಿ ಪ್ರಗತಿಪರರು ಆಚರಿಸಲು ಮುಂದಾದಾಗ ನಡೆಯದಂತೆ ತಡೆಯಲಾಗಿತ್ತು. ಆದರೆ ಪ್ರಗತಿಪರರು ಇಂದು ಭದ್ರಾವತಿ ಪಟ್ಟಣದಲ್ಲಿ ಮಹಿಷಾ ದಸರಾ ಆಚರಿಸಿದ್ದಾರೆ.

ಮಹಿಷಾ ದಸರಾ ಆಚರಣೆ

ಮಹಿಷಾ ಆಳುತ್ತಿದ್ದ ಇಂದಿನ ಮೈಸೂರಿನಲ್ಲಿ ಚಾಮುಂಡಿ ಆತನನ್ನು ವಧೆ ಮಾಡಿದಳು ಎಂದು ಪುರಾಣ ತಿಳಿಸುತ್ತದೆ. ಚಾಮುಂಡಿ ದಸರಾ ಆಚರಣೆ ಮಾಡಿದಂತೆ ಮಹಿಷಾನ ದಸರಾ ಆಚರಣೆ ಮಾಡುವ ಸಲುವಾಗಿ ಪ್ರಗತಿಪರರು ಭದ್ರಾವತಿಯ ಅಂಡರ್ ಬ್ರಿಡ್ಜ್ ಅಂಬೇಡ್ಕರ್ ವೃತ್ತದ ಬಳಿ ಮಹಿಷಾ ದಸರಾ ಆಚರಣೆ ಮಾಡಿದ್ದಾರೆ. ಮಹಿಷಾನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಪ್ರಗತಿಪರರು ಭಾಷಣ ಮಾಡುವಾಗ ಅದೇ ಮಾರ್ಗದಲ್ಲಿ ಬಿಜೆಪಿಯ ಗಾಂಧಿ ಸಂಕಲ್ಪ ಯಾತ್ರೆಯಲ್ಲಿ ಬಂದ ಬಿಜೆಪಿ ಕಾರ್ಯಕರ್ತರು, ಮಹಿಷಾ ದಸರಾ ಆಚರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ದಸರಾ ಆಚರಣೆಗೆ ಪಟ್ಟಣದಲ್ಲಿ ಅಳವಡಿಸಿದ್ದ ಫ್ಲೆಕ್ಸ್​​ನಲ್ಲಿದ್ದ ಚಾಮುಂಡಿ ದೇವಿಗೆ ಪುಷ್ಪನಮನ ಸಲ್ಲಿಸುತ್ತೇವೆ ಎಂದು ಬಿಜೆಪಿ ಕಾರ್ಯಕರ್ತರು ಪಟ್ಟು ಹಿಡಿದಿದ್ದರು. ಈ ವೇಳೆ ಕೆಲ ಕಾಲ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ‌ ನಿರ್ಮಾಣವಾಗಿತ್ತು. ನಂತ್ರ ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಗಿದೆ.

ಶಿವಮೊಗ್ಗ: ಮೈಸೂರಿನಲ್ಲಿ ರದ್ದಾಗಿದ್ದ ಮಹಿಷಾ ದಸರಾವನ್ನು ಭದ್ರಾವತಿಯಲ್ಲಿ ಆಚರಿಸಲಾಗಿದೆ. ಮಹಿಷಾ ದಸರಾ‌ವನ್ನು ಮೈಸೂರಿನಲ್ಲಿ ಪ್ರಗತಿಪರರು ಆಚರಿಸಲು ಮುಂದಾದಾಗ ನಡೆಯದಂತೆ ತಡೆಯಲಾಗಿತ್ತು. ಆದರೆ ಪ್ರಗತಿಪರರು ಇಂದು ಭದ್ರಾವತಿ ಪಟ್ಟಣದಲ್ಲಿ ಮಹಿಷಾ ದಸರಾ ಆಚರಿಸಿದ್ದಾರೆ.

ಮಹಿಷಾ ದಸರಾ ಆಚರಣೆ

ಮಹಿಷಾ ಆಳುತ್ತಿದ್ದ ಇಂದಿನ ಮೈಸೂರಿನಲ್ಲಿ ಚಾಮುಂಡಿ ಆತನನ್ನು ವಧೆ ಮಾಡಿದಳು ಎಂದು ಪುರಾಣ ತಿಳಿಸುತ್ತದೆ. ಚಾಮುಂಡಿ ದಸರಾ ಆಚರಣೆ ಮಾಡಿದಂತೆ ಮಹಿಷಾನ ದಸರಾ ಆಚರಣೆ ಮಾಡುವ ಸಲುವಾಗಿ ಪ್ರಗತಿಪರರು ಭದ್ರಾವತಿಯ ಅಂಡರ್ ಬ್ರಿಡ್ಜ್ ಅಂಬೇಡ್ಕರ್ ವೃತ್ತದ ಬಳಿ ಮಹಿಷಾ ದಸರಾ ಆಚರಣೆ ಮಾಡಿದ್ದಾರೆ. ಮಹಿಷಾನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಪ್ರಗತಿಪರರು ಭಾಷಣ ಮಾಡುವಾಗ ಅದೇ ಮಾರ್ಗದಲ್ಲಿ ಬಿಜೆಪಿಯ ಗಾಂಧಿ ಸಂಕಲ್ಪ ಯಾತ್ರೆಯಲ್ಲಿ ಬಂದ ಬಿಜೆಪಿ ಕಾರ್ಯಕರ್ತರು, ಮಹಿಷಾ ದಸರಾ ಆಚರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ದಸರಾ ಆಚರಣೆಗೆ ಪಟ್ಟಣದಲ್ಲಿ ಅಳವಡಿಸಿದ್ದ ಫ್ಲೆಕ್ಸ್​​ನಲ್ಲಿದ್ದ ಚಾಮುಂಡಿ ದೇವಿಗೆ ಪುಷ್ಪನಮನ ಸಲ್ಲಿಸುತ್ತೇವೆ ಎಂದು ಬಿಜೆಪಿ ಕಾರ್ಯಕರ್ತರು ಪಟ್ಟು ಹಿಡಿದಿದ್ದರು. ಈ ವೇಳೆ ಕೆಲ ಕಾಲ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ‌ ನಿರ್ಮಾಣವಾಗಿತ್ತು. ನಂತ್ರ ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಗಿದೆ.

Intro:ಸಿಎಂ ತವರು ಜಿಲ್ಲೆಯಲ್ಲಿ ಮಹಿಷಾ ದಸರಾ ಆಚರಣೆ.

ಶಿವಮೊಗ್ಗ: ಮೈಸೂರಿನಲ್ಲಿ ರದ್ದಾಗಿದ್ದ ಮಹಿಷಾ ದಸರಾ ಸಿಎಂ ತವರು ಜಿಲ್ಲೆ ಭದ್ರಾವತಿಯಲ್ಲಿ ನಡೆದಿದೆ. ಮಹಿಷಾ ದಸರಾ‌ವನ್ನು ಮೈಸೂರಿನಲ್ಲಿ ಆಚರಣೆ ಮಾಡಲು ಪ್ರಗತಿಪರರು ಮಾಡಲು ಮುಂದಾದಗ ಅಲ್ಲಿನ ಸಂಸದ ಪ್ರತಾಪ‌ ಸಿಂಹರವರು ಕಾರ್ಯಕ್ರಮ ನಡೆಯದಂತೆ ಮಾಡಿದ್ದರು. ಆದರೆ ಸಿಎಂ ತವರು ಜಿಲ್ಲೆಯಲ್ಲಿ ಪ್ರಗತಿಪರರು ಇಂದು ಭದ್ರಾವತಿ ಪಟ್ಟಣದಲ್ಲಿ ಮಹಿಷಾ ದಸರಾವನ್ನು ಆಚರಿಸಿದ್ದಾರೆ. ಮಹಿಷಾ ಆಳುತ್ತಿದ್ದ ಇಂದಿನ ಮೈಸೂರಿನಲ್ಲಿ ಚಾಮುಂಡಿ ಆತನನ್ನು ವಧೆ ಮಾಡಿದಳು ಎಂದು ಪುರಾಣ ತಿಳಿಸುತ್ತದೆ.Body:ಚಾಮುಂಡಿ ದಸರಾ ಆಚರಣೆ ಮಾಡಿದಂತೆ ಮಹಿಷಾನ ದಸರಾ ಆಚರಣೆ ಮಾಡುವ ಸಲುವಾಗಿ ಪ್ರಗತಿಪರರು ಭದ್ರಾವತಿಯ ಅಂಡರ್ ಬ್ರಿಡ್ಜ್ ಅಂಬೇಡ್ಕರ್ ವೃತ್ತದ ಬಳಿ ಮಹಿಷಾ ದಸರಾ ಆಚರಣೆ ಮಾಡಲಾಗಿದೆ. ಮಹಿಷಾನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪ್ರಗತಿಪರರು ಭಾಷಣ ಮಾಡುವಾಗ ಅದೇ ಮಾರ್ಗದಲ್ಲಿ ಬಂದ ಬಿಜೆಪಿಯ ಗಾಂಧಿ ಸಂಕಲ್ಪ ಯಾತ್ರೆಯಲ್ಲಿ ಬಂದ ಬಿಜೆಪಿ ಕಾರ್ಯಕರ್ತರು ಮಹಿಷಾ ದಸರಾ ಆಚರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.Conclusion: ಈ ವೇಳೆ ಪೊಲೀಸರು ಮಧ್ಯ ಪ್ರವೇಶ ಮಾಡಿದ್ದಾರೆ. ಈ ವೇಳೆ ದಸರಾ ಆಚರಣೆಗೆ ಪಟ್ಟಣದಲ್ಲಿ ಅಳವಡಿಸಿದ ಫ್ಲೇಕ್ಸ್ ನಲ್ಲಿದ್ದ ಚಾಮುಂಡಿ ದೇವಿಗೆ ಪುಷ್ಪ ನಮನ ಸಲ್ಲಿಸುತ್ತೆವೆ ಎಂದು ಬಿಜೆಪಿ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ. ಈ ವೇಳೆ ಕೆಲ ಕಾಲ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ‌ ನಿರ್ಮಾಣವಾಗಿತ್ತು. ನಂತ್ರ ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಯಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.