ETV Bharat / state

ಅಸ್ವಸ್ಥಗೊಂಡ ವೃದ್ಧ: ಪೊಲೀಸ್ ಜೀಪಿನಲ್ಲಿ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟ ಡಿಸಿ, ಎಸ್​ಪಿ - SP humanity

ಶಿವಮೊಗ್ಗದಲ್ಲಿ ಮಾನವೀಯತೆ ಮೆರೆದ ಡಿಸಿ ಹಾಗೂ ಎಸ್​ಪಿ ಅವರ ಕಾರ್ಯ ವೈಖರಿಗೆ ಸಾರ್ವಜನಿಕರು ಭೇಷ್ ಅಂದಿದ್ದಾರೆ.

DC and SP done well job in Shivamogga
ಶಿವಮೊಗ್ಗದಲ್ಲಿ ಮಾನವೀಯತೆ ಮೆರೆದ ಡಿಸಿ ಹಾಗೂ ಎಸ್​ಪಿ
author img

By

Published : Apr 28, 2020, 5:45 PM IST

ಶಿವಮೊಗ್ಗ: ಬ್ಯಾಂಕ್​​ಗೆ ಬಂದಿದ್ದ ವೃದ್ಧನೋರ್ವ ತಲೆ ತಿರುಗಿ ಬಿದ್ದಿದ್ದು ತಕ್ಷಣ ಸ್ಥಳಕ್ಕೆ ಬಂದ ಡಿಸಿ ಹಾಗೂ ಎಸ್​ಪಿ ಆ ವೃದ್ಧನನ್ನು ಆಸ್ಪತ್ರೆಗೆ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ.

DC and SP done well job in Shivamogga
ಶಿವಮೊಗ್ಗದಲ್ಲಿ ಮಾನವೀಯತೆ ಮೆರೆದ ಡಿಸಿ ಹಾಗೂ ಎಸ್​ಪಿ

ಇಲ್ಲಿನ ವಾಣಿಜ್ಯ ಕೇಂದ್ರ ಗಾಂಧಿ ಬಜಾರ್​​ಗೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಹಾಗೂ ಎಸ್​ಪಿ ಶಾಂತರಾಜು ಅವರು ಇಂದು ಭೇಟಿ ನೀಡಿದ್ದರು. ಇದೇ ವೇಳೆ, ವೃದ್ಧ ಮಹೇಂದ್ರ ಎಂಬುವವರು ಸಹ ಎಸ್​ಬಿಐ ಬ್ಯಾಂಕ್​​ಗೆ ಆಗಮಿಸಿದ್ದರು.

ಬ್ಯಾಂಕ್ ಮೊದಲನೆಯ ಮಹಡಿಯಲ್ಲಿದ್ದು, ಎಲ್ಲರಂತೆ ಮಹೇಂದ್ರ ಸರದಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ, ಆಯಾಸವಾಗಿದ್ದರಿಂದ ಅಲ್ಲೇ ತಲೆ ತಿರುಗಿ ಬಿದ್ದಿದ್ದಾರೆ. ಹಿಂದೆ ನಿಂತ ಕೆಲವರು ವೃದ್ಧನನ್ನು ಹಿಡಿದು ಉಪಚರಿಸುವಾಗ ಜನಸಂದಣಿ ಸೇರಿದೆ.

ಶಿವಮೊಗ್ಗದಲ್ಲಿ ಮಾನವೀಯತೆ ಮೆರೆದ ಡಿಸಿ ಹಾಗೂ ಎಸ್​ಪಿ

ಈ ವೇಳೆ, ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಶಿವಕುಮಾರ್ ಹಾಗೂ ಎಸ್​ಪಿ ಶಾಂತರಾಜು ಅವರು ವೃದ್ಧನನ್ನು ಪೊಲೀಸ್ ಜೀಪಿನಲ್ಲಿ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಸದ್ಯ ವೃದ್ಧ ಮಹೇಂದ್ರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಡಿಸಿ ಹಾಗೂ ಎಸ್​ಪಿ ಅವರ ಕಾರ್ಯಕ್ಕೆ ಸಾರ್ವಜನಿಕರು ಭೇಷ್ ಎಂದಿದ್ದಾರೆ.

ಶಿವಮೊಗ್ಗ: ಬ್ಯಾಂಕ್​​ಗೆ ಬಂದಿದ್ದ ವೃದ್ಧನೋರ್ವ ತಲೆ ತಿರುಗಿ ಬಿದ್ದಿದ್ದು ತಕ್ಷಣ ಸ್ಥಳಕ್ಕೆ ಬಂದ ಡಿಸಿ ಹಾಗೂ ಎಸ್​ಪಿ ಆ ವೃದ್ಧನನ್ನು ಆಸ್ಪತ್ರೆಗೆ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ.

DC and SP done well job in Shivamogga
ಶಿವಮೊಗ್ಗದಲ್ಲಿ ಮಾನವೀಯತೆ ಮೆರೆದ ಡಿಸಿ ಹಾಗೂ ಎಸ್​ಪಿ

ಇಲ್ಲಿನ ವಾಣಿಜ್ಯ ಕೇಂದ್ರ ಗಾಂಧಿ ಬಜಾರ್​​ಗೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಹಾಗೂ ಎಸ್​ಪಿ ಶಾಂತರಾಜು ಅವರು ಇಂದು ಭೇಟಿ ನೀಡಿದ್ದರು. ಇದೇ ವೇಳೆ, ವೃದ್ಧ ಮಹೇಂದ್ರ ಎಂಬುವವರು ಸಹ ಎಸ್​ಬಿಐ ಬ್ಯಾಂಕ್​​ಗೆ ಆಗಮಿಸಿದ್ದರು.

ಬ್ಯಾಂಕ್ ಮೊದಲನೆಯ ಮಹಡಿಯಲ್ಲಿದ್ದು, ಎಲ್ಲರಂತೆ ಮಹೇಂದ್ರ ಸರದಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ, ಆಯಾಸವಾಗಿದ್ದರಿಂದ ಅಲ್ಲೇ ತಲೆ ತಿರುಗಿ ಬಿದ್ದಿದ್ದಾರೆ. ಹಿಂದೆ ನಿಂತ ಕೆಲವರು ವೃದ್ಧನನ್ನು ಹಿಡಿದು ಉಪಚರಿಸುವಾಗ ಜನಸಂದಣಿ ಸೇರಿದೆ.

ಶಿವಮೊಗ್ಗದಲ್ಲಿ ಮಾನವೀಯತೆ ಮೆರೆದ ಡಿಸಿ ಹಾಗೂ ಎಸ್​ಪಿ

ಈ ವೇಳೆ, ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಶಿವಕುಮಾರ್ ಹಾಗೂ ಎಸ್​ಪಿ ಶಾಂತರಾಜು ಅವರು ವೃದ್ಧನನ್ನು ಪೊಲೀಸ್ ಜೀಪಿನಲ್ಲಿ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಸದ್ಯ ವೃದ್ಧ ಮಹೇಂದ್ರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಡಿಸಿ ಹಾಗೂ ಎಸ್​ಪಿ ಅವರ ಕಾರ್ಯಕ್ಕೆ ಸಾರ್ವಜನಿಕರು ಭೇಷ್ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.