ETV Bharat / state

ಮಹಿಳಾ ಅಭಿವೃದ್ಧಿ ನಿಗಮದಿಂದ ಪಡೆದ ಸಾಲ ಮರುಪಾವತಿಗೆ ಸೂಚನೆ

author img

By

Published : Aug 31, 2020, 5:59 PM IST

ರಾಮನಗರ ಜಿಲ್ಲಾ ಪಂಚಾಯತ್ ನಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಯಿತು.‌ ಇದರಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ.ಟೆಂಗಳಿ ಭಾಗವಹಿಸಿದ್ದರು.

Ramanagara
Ramanagara

ರಾಮನಗರ: ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಪಡೆದ ಸಾಲವನ್ನು ಫಲಾನುಭವಿ ಮಹಿಳೆಯರು ಸಮಯಕ್ಕೆ ಸರಿಯಾಗಿ ಪಾವತಿಸುವ ಮೂಲಕ ಬದ್ಧತೆಯನ್ನು ತೋರಿಸುವ ಜೊತೆಗೆ ಇನ್ನೊಬ್ಬ ಮಹಿಳೆಗೆ ನೆರವಾಗುವಂತೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ.ಟೆಂಗಳಿ ಕರೆ‌ ನೀಡಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಸಂಯುಕ್ತಾಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಹಾಗೂ ಉದ್ಯೋಗಿನಿ ಹಾಗೂ ಸಮೃದ್ಧಿ ಯೋಜನೆ ಫಲಾನುಭವಿಗಳಿಗೆ ಚೆಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳಾ ಅಭಿವೃದ್ಧಿ ನಿಗಮದಿಂದ ಸಾಲ ಪಡೆದುಕೊಂಡವರು ಸರ್ಕಾರ ಮತ್ತೆ ಸಾಲಮನ್ನಾ ಮಾಡುತ್ತದೆ ಎನ್ನುವ ಇನ್ನೊಬ್ಬರ ಮಾತಿಗೆ ಕಿವಿಗೊಡದೆ ಸಕಾಲದಲ್ಲಿ ಸಾಲದ ಕಂತನ್ನು ಪಾವತಿಸಿ ಸುಸ್ತಿದಾರರಾಗುವುದನ್ನು ತಪ್ಪಿಸಿಕೊಳ್ಳುವುದು ಸೂಕ್ತ ಎನ್ನುವ ಸಲಹೆ ನೀಡಿದರು.

ಮಹಿಳೆಯರಿಗೆ ನಿಗಮದ ವತಿಯಿಂದ ನೀಡಲಾಗುವ ಒಟ್ಟು ಸಾಲದ ಮೊತ್ತದ ಪೈಕಿ ಶೇ. 50ರಷ್ಟು ಮೊತ್ತಕ್ಕೆ ಸಬ್ಸಿಡಿ ಡಿ ನೀಡಲಾಗಿರುತ್ತದೆ. ಇನ್ನುಳಿದ ಶೇ. 50ರಷ್ಟು ಮೊತ್ತವನ್ನು ಅವರುಗಳು ಪಾವತಿಸಬೇಕಾಗಿರುತ್ತದೆ ಎಂದರು.

ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ನಿರ್ಗತಿಕ ಮಹಿಳೆಯರು, ಅಬಲೆಯರು, ಲಿಂಗತ್ವ ಅಲ್ಪ ಸಂಖ್ಯಾತರು, ಆಶಕ್ತ ಮಹಿಳೆಯರು, ದೇವದಾಸಿಯರು ಮತ್ತು ವಿಧವೆಯರು ಸೇರಿದಂತೆ ಅನೇಕ ಮಹಿಳೆಯರು ಸಾಲ ಪಡೆದುಕೊಂಡು ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ. ಪಡೆದ ಸಾಲವನ್ನು ಮರಳಿ ನೀಡಿದರೆ ಆ ಮೊತ್ತದಿಂದ ಇನ್ನೊಬ್ಬ ಮಹಿಳೆಗೆ ನಿಗಮವು ಸಹಾಯ ಮಾಡಲು ಸಾಧ್ಯವಾಗುತ್ತದೆ. ಹೀಗಾಗಿ, ಸಾಲ ಪಡೆದು ಅದನ್ನು ಕಟ್ಟುವ ಮೂಲಕ ಬದ್ಧತೆಯನ್ನು ತೋರಿಸಿ ಎಂದರು.

ತರಬೇತಿ ಅವಧಿ ಕಡಿತ:

ಆರು ದಿನಗಳ ಕಡ್ಡಾಯ ತರಬೇತಿ ಪಡೆದುಕೊಂಡ ಬಳಿಕವೇ ಸಾಲ ಮಂಜೂರಾದವರಿಗೆ ಹಣವನ್ನು ನೀಡಲಾಗುತ್ತಿತ್ತು. ಆದರೆ‌ ಕೋವಿಡ್-19 ಹಿನ್ನೆಲೆಯಲ್ಲಿ ಆರು ದಿನಗಳ ತರಬೇತಿ ಪಡೆದುಕೊಳ್ಳಲು ಮಹಿಳೆಯರು ಹೆಚ್ಚಿನ ತೊಂದರೆಯಾಗುತ್ತವೆ ಎನ್ನುವ ಹಿನ್ನೆಲೆಯಲ್ಲಿ ಸರ್ಕಾರ ತರಬೇತಿಯನ್ನು ಅವಧಿಯನ್ನು ಒಂದು ದಿನಕ್ಕೆ ಇಳಿಸಿದೆ. ಮಹಿಳೆಯರು ಇದರ ಲಾಭವನ್ನು ಪಡೆದುಕೊಳ್ಳುವಂತೆ ಟೆಂಗಳಿ ತಿಳಿಸಿದರು.

ಸಮೃದ್ಧಿ ಯೋಜನೆ:

ಸಣ್ಣಪುಟ್ಟ ವ್ಯಾಪಾರಗಳಾದ ಹಣ್ಣು, ಹೂ, ತರಕಾರಿ ಇಲ್ಲವೆ ತೆಂಗಿನಕಾಯಿ ಮಾರಾಟ ಮಾಡುವಂಥ ಸಣ್ಣ ಮಹಿಳಾ ವ್ಯಾಪಾರಿಗಳನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಸಮೃದ್ಧಿ ಯೋಜನೆ ಹೊಂದಿದೆ. ಈ ಹಿನ್ನೆಲೆಯಲ್ಲಿ ತೀರಾ ಅವಶ್ಯಕತೆ ಇರುವ ಮಹಿಳೆಯರಿಗೆ ಮಾತ್ರ ಈ ಯೋಜನೆಯಡಿ ಸಾಲ ನೀಡಲಾಗುತ್ತದೆ. ಇದರಲ್ಲಿ 10 ಸಾವಿರ ಮೊತ್ತವನ್ನು ನೀಡಲಾಗುತ್ತದೆ. ಅದರಿಂದಲೇ ಆ ಮಹಿಳೆಯರು ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕು. ಹೀಗಾಗಿ, ಈ ಯೋಜನೆಯಡಿ ಮಹಿಳೆಯರನ್ನು ಆಯ್ಕೆ ಮಾಡುವಾಗ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಗಮನ ನೀಡಬೇಕು ಎಂದು ತಿಳಿಸಿದರು.

ನಿರ್ಲಕ್ಷ್ಯಕ್ಕೆ ಒಳಾಗದವರಿಗೆ ನೆರವು:

ರಾಜ್ಯದಲ್ಲಿರುವ ದೇವದಾಸಿಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತ ವರ್ಗದವರನ್ನೂ ಮುಖ್ಯವಾಹಿನಿಗೆ ತರುವ ದೃಷ್ಟಿಯಿಂದ ಅವರಿಗೂ ನಿಗಮದ ವತಿಯಿಂದ ಸಾಲ ನೀಡಲಾಗುತ್ತಿದೆ. ಲಿಂಗತ್ವ ಅಲ್ಪಸಂಖ್ಯಾತರು ಭಿಕ್ಷಾಟನೆಯನ್ನು ಕೈಬಿಟ್ಟು ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಲು ಅನುವಾಗುವಂತೆ ಅವರಿಗೂ ಸಾಲ ನೀಡಲಾಗುತ್ತಿದೆ. ಅದೇ, ರೀತಿ ದೇವದಾಸಿಯರನ್ನು ಸಹ ಸಮಾಜದಲ್ಲಿ ಗೌರವಯುತವಾಗಿ ಜೀವನ ನಡೆಸಲು ಅನುವಾಗುವಂತೆ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದರು.

ಬಳಿಕ ಉದ್ಯೋಗಿನಿ ಹಾಗೂ ಸಮೃದ್ಧಿ ಯೋಜನೆಯಡಿ ಮಹಿಳೆಯರಿಗೆ ಚೆಕ್ ಮತ್ತು ಪ್ರಮಾಣ ಪತ್ರ ವಿತರಿಸಿದರು.

ರಾಮನಗರ: ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಪಡೆದ ಸಾಲವನ್ನು ಫಲಾನುಭವಿ ಮಹಿಳೆಯರು ಸಮಯಕ್ಕೆ ಸರಿಯಾಗಿ ಪಾವತಿಸುವ ಮೂಲಕ ಬದ್ಧತೆಯನ್ನು ತೋರಿಸುವ ಜೊತೆಗೆ ಇನ್ನೊಬ್ಬ ಮಹಿಳೆಗೆ ನೆರವಾಗುವಂತೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ.ಟೆಂಗಳಿ ಕರೆ‌ ನೀಡಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಸಂಯುಕ್ತಾಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಹಾಗೂ ಉದ್ಯೋಗಿನಿ ಹಾಗೂ ಸಮೃದ್ಧಿ ಯೋಜನೆ ಫಲಾನುಭವಿಗಳಿಗೆ ಚೆಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳಾ ಅಭಿವೃದ್ಧಿ ನಿಗಮದಿಂದ ಸಾಲ ಪಡೆದುಕೊಂಡವರು ಸರ್ಕಾರ ಮತ್ತೆ ಸಾಲಮನ್ನಾ ಮಾಡುತ್ತದೆ ಎನ್ನುವ ಇನ್ನೊಬ್ಬರ ಮಾತಿಗೆ ಕಿವಿಗೊಡದೆ ಸಕಾಲದಲ್ಲಿ ಸಾಲದ ಕಂತನ್ನು ಪಾವತಿಸಿ ಸುಸ್ತಿದಾರರಾಗುವುದನ್ನು ತಪ್ಪಿಸಿಕೊಳ್ಳುವುದು ಸೂಕ್ತ ಎನ್ನುವ ಸಲಹೆ ನೀಡಿದರು.

ಮಹಿಳೆಯರಿಗೆ ನಿಗಮದ ವತಿಯಿಂದ ನೀಡಲಾಗುವ ಒಟ್ಟು ಸಾಲದ ಮೊತ್ತದ ಪೈಕಿ ಶೇ. 50ರಷ್ಟು ಮೊತ್ತಕ್ಕೆ ಸಬ್ಸಿಡಿ ಡಿ ನೀಡಲಾಗಿರುತ್ತದೆ. ಇನ್ನುಳಿದ ಶೇ. 50ರಷ್ಟು ಮೊತ್ತವನ್ನು ಅವರುಗಳು ಪಾವತಿಸಬೇಕಾಗಿರುತ್ತದೆ ಎಂದರು.

ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ನಿರ್ಗತಿಕ ಮಹಿಳೆಯರು, ಅಬಲೆಯರು, ಲಿಂಗತ್ವ ಅಲ್ಪ ಸಂಖ್ಯಾತರು, ಆಶಕ್ತ ಮಹಿಳೆಯರು, ದೇವದಾಸಿಯರು ಮತ್ತು ವಿಧವೆಯರು ಸೇರಿದಂತೆ ಅನೇಕ ಮಹಿಳೆಯರು ಸಾಲ ಪಡೆದುಕೊಂಡು ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ. ಪಡೆದ ಸಾಲವನ್ನು ಮರಳಿ ನೀಡಿದರೆ ಆ ಮೊತ್ತದಿಂದ ಇನ್ನೊಬ್ಬ ಮಹಿಳೆಗೆ ನಿಗಮವು ಸಹಾಯ ಮಾಡಲು ಸಾಧ್ಯವಾಗುತ್ತದೆ. ಹೀಗಾಗಿ, ಸಾಲ ಪಡೆದು ಅದನ್ನು ಕಟ್ಟುವ ಮೂಲಕ ಬದ್ಧತೆಯನ್ನು ತೋರಿಸಿ ಎಂದರು.

ತರಬೇತಿ ಅವಧಿ ಕಡಿತ:

ಆರು ದಿನಗಳ ಕಡ್ಡಾಯ ತರಬೇತಿ ಪಡೆದುಕೊಂಡ ಬಳಿಕವೇ ಸಾಲ ಮಂಜೂರಾದವರಿಗೆ ಹಣವನ್ನು ನೀಡಲಾಗುತ್ತಿತ್ತು. ಆದರೆ‌ ಕೋವಿಡ್-19 ಹಿನ್ನೆಲೆಯಲ್ಲಿ ಆರು ದಿನಗಳ ತರಬೇತಿ ಪಡೆದುಕೊಳ್ಳಲು ಮಹಿಳೆಯರು ಹೆಚ್ಚಿನ ತೊಂದರೆಯಾಗುತ್ತವೆ ಎನ್ನುವ ಹಿನ್ನೆಲೆಯಲ್ಲಿ ಸರ್ಕಾರ ತರಬೇತಿಯನ್ನು ಅವಧಿಯನ್ನು ಒಂದು ದಿನಕ್ಕೆ ಇಳಿಸಿದೆ. ಮಹಿಳೆಯರು ಇದರ ಲಾಭವನ್ನು ಪಡೆದುಕೊಳ್ಳುವಂತೆ ಟೆಂಗಳಿ ತಿಳಿಸಿದರು.

ಸಮೃದ್ಧಿ ಯೋಜನೆ:

ಸಣ್ಣಪುಟ್ಟ ವ್ಯಾಪಾರಗಳಾದ ಹಣ್ಣು, ಹೂ, ತರಕಾರಿ ಇಲ್ಲವೆ ತೆಂಗಿನಕಾಯಿ ಮಾರಾಟ ಮಾಡುವಂಥ ಸಣ್ಣ ಮಹಿಳಾ ವ್ಯಾಪಾರಿಗಳನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಸಮೃದ್ಧಿ ಯೋಜನೆ ಹೊಂದಿದೆ. ಈ ಹಿನ್ನೆಲೆಯಲ್ಲಿ ತೀರಾ ಅವಶ್ಯಕತೆ ಇರುವ ಮಹಿಳೆಯರಿಗೆ ಮಾತ್ರ ಈ ಯೋಜನೆಯಡಿ ಸಾಲ ನೀಡಲಾಗುತ್ತದೆ. ಇದರಲ್ಲಿ 10 ಸಾವಿರ ಮೊತ್ತವನ್ನು ನೀಡಲಾಗುತ್ತದೆ. ಅದರಿಂದಲೇ ಆ ಮಹಿಳೆಯರು ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕು. ಹೀಗಾಗಿ, ಈ ಯೋಜನೆಯಡಿ ಮಹಿಳೆಯರನ್ನು ಆಯ್ಕೆ ಮಾಡುವಾಗ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಗಮನ ನೀಡಬೇಕು ಎಂದು ತಿಳಿಸಿದರು.

ನಿರ್ಲಕ್ಷ್ಯಕ್ಕೆ ಒಳಾಗದವರಿಗೆ ನೆರವು:

ರಾಜ್ಯದಲ್ಲಿರುವ ದೇವದಾಸಿಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತ ವರ್ಗದವರನ್ನೂ ಮುಖ್ಯವಾಹಿನಿಗೆ ತರುವ ದೃಷ್ಟಿಯಿಂದ ಅವರಿಗೂ ನಿಗಮದ ವತಿಯಿಂದ ಸಾಲ ನೀಡಲಾಗುತ್ತಿದೆ. ಲಿಂಗತ್ವ ಅಲ್ಪಸಂಖ್ಯಾತರು ಭಿಕ್ಷಾಟನೆಯನ್ನು ಕೈಬಿಟ್ಟು ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಲು ಅನುವಾಗುವಂತೆ ಅವರಿಗೂ ಸಾಲ ನೀಡಲಾಗುತ್ತಿದೆ. ಅದೇ, ರೀತಿ ದೇವದಾಸಿಯರನ್ನು ಸಹ ಸಮಾಜದಲ್ಲಿ ಗೌರವಯುತವಾಗಿ ಜೀವನ ನಡೆಸಲು ಅನುವಾಗುವಂತೆ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದರು.

ಬಳಿಕ ಉದ್ಯೋಗಿನಿ ಹಾಗೂ ಸಮೃದ್ಧಿ ಯೋಜನೆಯಡಿ ಮಹಿಳೆಯರಿಗೆ ಚೆಕ್ ಮತ್ತು ಪ್ರಮಾಣ ಪತ್ರ ವಿತರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.