ರಾಯಚೂರು: ಇಲ್ಲಿನ ಶಿಲ್ಪಾ ಫೌಂಡೇಶನ್, ಡಿಸಿ ಶರತ್ ಅವರ ಮೂಲಕ ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ರೂ. 5 ಲಕ್ಷ ನೀಡಿ ಮಾನವೀಯತೆ ಮೆರೆದಿದೆ.
ಕಳೆದ 15-20 ದಿನಗಳಿಂದ ರಾಜ್ಯದಲ್ಲಿ ಉಂಟಾದ ಅತಿವೃಷ್ಟಿಯಿಂದಾಗಿ ಅನೇಕರು ನಿರ್ಗತಿಕರಾಗಿದ್ದು, ಆಸ್ತಿ-ಪಾಸ್ತಿ ಕಳೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಅನೇಕ ಸಮಾಜಮುಖಿ ಕೆಲಸ ಮಾಡುತ್ತಿರುವ ಶಿಲ್ಪಾ ಫೌಂಡೇಶನ್ ಸಂತ್ರಸ್ತರಿಗೆ ಸಹಾಯಹಸ್ತ ನೀಡಿ ಕಾಳಜಿ ಮೆರೆದಿದೆ.
ಶಿಲ್ಪಾ ಫೌಂಡೇಶನ್ನ ದೀಪಕ್ ಇನ್ನಾಣಿ ಮತ್ತು ಅಜೀತ್ ಸಚೀತಿ ಅವರು ಡಿಸಿ ಶರತ್ ಬಿ. ಅವರಿಗೆ 5 ಲಕ್ಷದ ಚೆಕ್ ನೀಡಿ ಸಂತ್ರಸ್ತರ ಕಷ್ಟಕ್ಕೆ ಸ್ಪಂದಿಸಿದ್ದಾರೆ.