ETV Bharat / state

ರಾಜ್ಯದ ನೆರೆ ಸಂತ್ರಸ್ತರ ಬಗ್ಗೆ ಪ್ರಧಾನಿ ಮೋದಿಗೆ ಎಳ್ಳಷ್ಟು ಕಾಳಜಿಯಿಲ್ಲ: ರೈತ ನಾಯಕರ ಆರೋಪ

author img

By

Published : Aug 16, 2019, 1:35 PM IST

ಪ್ರಧಾನಿ ಮೋದಿ, ರಾಜ್ಯ ಪ್ರವಾಸ ಮಾಡದೇ ಸಂತ್ರಸ್ಥರ ಸಮಸ್ಯೆ ಆಲಿಸಿಲ್ಲ ಹಾಗೂ ನಿನ್ನೆ ದೆಹಲಿಯ ಕೆಂಪುಕೋಟೆ ಮೇಲೆ ಧ್ವಜ ಹಾರಿಸಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದು, ದಕ್ಷಿಣ ಭಾರತದ ಪ್ರವಾಹದ ಕುರಿತು ಮಾತನಾಡಿಲ್ಲ. ಇದರಿಂದ ಅವರು ದಕ್ಷಿಣ ಭಾರತದ ಬಗೆಗಿನ ಧೋರಣೆ ವ್ಯಕ್ತವಾಗುತ್ತೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ದೂರಿದರು.

ಬಡಗಲಪುರ ನಾಗೇಂದ್ರ

ರಾಯಚೂರು: ರಾಜ್ಯದಲ್ಲಿ ಒಂದು ಕಡೆ ಬರ ಮತ್ತೊಂದು ಕಡೆ ಭೀಕರ ಪ್ರವಾಹ ಉಂಟಾಗಿ ಜನರು ತತ್ತರಿಸುತಿದ್ದು, ಪ್ರಧಾನಿ ಮೋದಿ ಅವರಿಗೆ ಇಲ್ಲಿನ ಸಂತ್ರಸ್ತರ ಬಗ್ಗೆ ಎಳ್ಳಷ್ಟು ಕಾಳಜಿಯಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ದೂರಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ, ರಾಜ್ಯ ಪ್ರವಾಸ ಮಾಡದೇ ಸಂತ್ರಸ್ತರ ಸಮಸ್ಯೆ ಆಲಿಸಿಲ್ಲ ಹಾಗೂ ನಿನ್ನೆ ದೆಹಲಿಯ ಕೆಂಪುಕೋಟೆ ಮೇಲೆ ಧ್ವಜ ಹಾರಿಸಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದು, ದಕ್ಷಿಣ ಭಾರತದ ಪ್ರವಾಹದ ಕುರಿತು ಮಾತನಾಡಿಲ್ಲ, ಸೌಜನ್ಯಕ್ಕೂ ಸಾಂತ್ವನ ಹೇಳಿಲ್ಲ. ಭೀಕರ ಪ್ರವಾಹದಿಂದ ರಾಜ್ಯದ ಶೇ. 60 ರಷ್ಟು ಭಾಗ ಪ್ರವಾಹಕ್ಕೆ ತುತ್ತಾಗಿ ನಲುಗುತ್ತಿದೆ. ಈವರೆಗೆ ಒಂದು ನಯಾ ಪೈಸೆ ಕೂಡ ಪರಿಹಾರ ಘೋಷಿಸದೇ ನಿರ್ಲಕ್ಷ್ಯ ವಹಿಸಿದ್ದು ಖಂಡನೀಯ ಎಂದರು.

ನೆರೆ ಸಂತ್ರಸ್ತರಿಗೆ ಪರಿಹಾರದ ವಿಚಾರದಲ್ಲಿ ಪ್ರಧಾನಿ ಮೋದಿಯನ್ನು ದೂರಿದ ಬಡಗಲಪುರ ನಾಗೇಂದ್ರ

ಚುನಾವಣೆಗೂ ಮುನ್ನ ಪಿಎಂ ಮೋದಿ ಅವರು ಅನೇಕ ಬಾರಿ ರಾಜ್ಯ, ದಕ್ಷಿಣ ಭಾರತ ಪ್ರವಾಸ ಮಾಡಿದ್ದಾರೆ. ಆದ್ರೆ ಈಗ ಕನಿಷ್ಠ ಒಂದು ಭೇಟಿಯೂ ಮಾಡದೇ ಸಂತ್ರಸ್ತರ ಸಂಕಷ್ಟ ಆಲಿಸುವ ಕೆಲಸ ಮಾಡಿಲ್ಲ. ಇದರಿಂದ ಅವರ ದಕ್ಷಿಣ ಭಾರತದ ಬಗೆಗಿನ ಧೋರಣೆ ವ್ಯಕ್ತವಾಗುತ್ತೆ. ಕೂಡಲೇ ಇದನ್ನು ರಾಷ್ಟ್ರೀಯ ವಿಕೋಪ ಎಂದು ಘೋಷಿಸಿ ತುರ್ತು ಪರಿಹಾರ ಘೋಷಣೆ ಮಾಡಬೇಕು. ಪ್ರವಾಹ ಪೀಡಿತ ಪ್ರದೇಶಗಳ ಸಮೀಕ್ಷೆ ನಡೆಸಿ ರಾಜ್ಯ ಪುನರ್​ ನಿರ್ಮಾಣ ಕಾರ್ಯ ಮಾಡಬೇಕೆಂದು ಒತ್ತಾಯಿಸಿದರು.

ರಾಜ್ಯ ಸರಕಾರ ಈ ಬಾರಿ ಮೈಸೂರು ದಸರಾ ಹಬ್ಬ ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಿದ್ದು, ಗಮನಕ್ಕೆ ಬಂದಿದೆ. ಕೂಡಲೇ ಸಿ.ಎಂ ಯಡಿಯೂರಪ್ಪನವರು ಈ ನಿರ್ಧಾರ ಹಿಂಪಡೆದು ಸರಳ ಆಚರಣೆಗೆ ಮುಂದಾಗಬೇಕು. ಸೂತಕದ ನಡುವೆ ಸಂಭ್ರಮ ಸರಿಯಲ್ಲ, ಇದು ಸಂತ್ರಸ್ತರಿಗೆ ಅಪಮಾನ ಮಾಡಿದಂತಾಗುತ್ತದೆ ಎಂದರು.

ರಾಯಚೂರು: ರಾಜ್ಯದಲ್ಲಿ ಒಂದು ಕಡೆ ಬರ ಮತ್ತೊಂದು ಕಡೆ ಭೀಕರ ಪ್ರವಾಹ ಉಂಟಾಗಿ ಜನರು ತತ್ತರಿಸುತಿದ್ದು, ಪ್ರಧಾನಿ ಮೋದಿ ಅವರಿಗೆ ಇಲ್ಲಿನ ಸಂತ್ರಸ್ತರ ಬಗ್ಗೆ ಎಳ್ಳಷ್ಟು ಕಾಳಜಿಯಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ದೂರಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ, ರಾಜ್ಯ ಪ್ರವಾಸ ಮಾಡದೇ ಸಂತ್ರಸ್ತರ ಸಮಸ್ಯೆ ಆಲಿಸಿಲ್ಲ ಹಾಗೂ ನಿನ್ನೆ ದೆಹಲಿಯ ಕೆಂಪುಕೋಟೆ ಮೇಲೆ ಧ್ವಜ ಹಾರಿಸಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದು, ದಕ್ಷಿಣ ಭಾರತದ ಪ್ರವಾಹದ ಕುರಿತು ಮಾತನಾಡಿಲ್ಲ, ಸೌಜನ್ಯಕ್ಕೂ ಸಾಂತ್ವನ ಹೇಳಿಲ್ಲ. ಭೀಕರ ಪ್ರವಾಹದಿಂದ ರಾಜ್ಯದ ಶೇ. 60 ರಷ್ಟು ಭಾಗ ಪ್ರವಾಹಕ್ಕೆ ತುತ್ತಾಗಿ ನಲುಗುತ್ತಿದೆ. ಈವರೆಗೆ ಒಂದು ನಯಾ ಪೈಸೆ ಕೂಡ ಪರಿಹಾರ ಘೋಷಿಸದೇ ನಿರ್ಲಕ್ಷ್ಯ ವಹಿಸಿದ್ದು ಖಂಡನೀಯ ಎಂದರು.

ನೆರೆ ಸಂತ್ರಸ್ತರಿಗೆ ಪರಿಹಾರದ ವಿಚಾರದಲ್ಲಿ ಪ್ರಧಾನಿ ಮೋದಿಯನ್ನು ದೂರಿದ ಬಡಗಲಪುರ ನಾಗೇಂದ್ರ

ಚುನಾವಣೆಗೂ ಮುನ್ನ ಪಿಎಂ ಮೋದಿ ಅವರು ಅನೇಕ ಬಾರಿ ರಾಜ್ಯ, ದಕ್ಷಿಣ ಭಾರತ ಪ್ರವಾಸ ಮಾಡಿದ್ದಾರೆ. ಆದ್ರೆ ಈಗ ಕನಿಷ್ಠ ಒಂದು ಭೇಟಿಯೂ ಮಾಡದೇ ಸಂತ್ರಸ್ತರ ಸಂಕಷ್ಟ ಆಲಿಸುವ ಕೆಲಸ ಮಾಡಿಲ್ಲ. ಇದರಿಂದ ಅವರ ದಕ್ಷಿಣ ಭಾರತದ ಬಗೆಗಿನ ಧೋರಣೆ ವ್ಯಕ್ತವಾಗುತ್ತೆ. ಕೂಡಲೇ ಇದನ್ನು ರಾಷ್ಟ್ರೀಯ ವಿಕೋಪ ಎಂದು ಘೋಷಿಸಿ ತುರ್ತು ಪರಿಹಾರ ಘೋಷಣೆ ಮಾಡಬೇಕು. ಪ್ರವಾಹ ಪೀಡಿತ ಪ್ರದೇಶಗಳ ಸಮೀಕ್ಷೆ ನಡೆಸಿ ರಾಜ್ಯ ಪುನರ್​ ನಿರ್ಮಾಣ ಕಾರ್ಯ ಮಾಡಬೇಕೆಂದು ಒತ್ತಾಯಿಸಿದರು.

ರಾಜ್ಯ ಸರಕಾರ ಈ ಬಾರಿ ಮೈಸೂರು ದಸರಾ ಹಬ್ಬ ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಿದ್ದು, ಗಮನಕ್ಕೆ ಬಂದಿದೆ. ಕೂಡಲೇ ಸಿ.ಎಂ ಯಡಿಯೂರಪ್ಪನವರು ಈ ನಿರ್ಧಾರ ಹಿಂಪಡೆದು ಸರಳ ಆಚರಣೆಗೆ ಮುಂದಾಗಬೇಕು. ಸೂತಕದ ನಡುವೆ ಸಂಭ್ರಮ ಸರಿಯಲ್ಲ, ಇದು ಸಂತ್ರಸ್ತರಿಗೆ ಅಪಮಾನ ಮಾಡಿದಂತಾಗುತ್ತದೆ ಎಂದರು.

Intro:ರಾಜ್ಯದಲ್ಲಿ ಒಂದು ಕಡೆ ಬರ ಮತ್ತೊಂದು ಕಡೆ ಭೀಕರ ಪ್ರವಾಹ ಉಂಟಾಗಿ ಜನರು ತತ್ತರಿಸುತಿದ್ದು ಪ್ರಧಾನಿ ಮೋದಿ ಅವರು ರಾಜ್ಯ ಪ್ರವಾಸ ಮಾಡದೇ ಸಂತ್ರಸ್ಥರ ಸಮಸ್ಯೆ ಆಲಿಸಿಲ್ಲ ಹಾಗೂ ನಿನ್ನೆ ದೆಹಲಿಯ ಕೆಂಪುಕೋಟೆ ಮೇಲೆ ಧ್ವಜಾ ಹಾರಿಸಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದು ದಕ್ಷಿಣ ಭಾರತದ ಪ್ರವಾಹದ ಕುರಿತು ಮಾತನಾಡಿಲ್ಲ ಇಲ್ಲುನ ಸಂತ್ರಸ್ಥರ ಬಗ್ಗೆ ಎಳ್ಳಷ್ಟು ಕಾಳಜಿಯಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲ್ಪುರ ನಾಗೇಂದ್ರ ಟೀಕಿಸಿದರು.


Body:ಅವರಿಂದು ಮಾಧ್ಯಮಗಾರರೊಂದಿಗೆ ಮಾತನಾಡಿ, ಭೀಕರ ಪ್ರವಾಹದಿಂದ ರಾಜ್ಯದ ಶೇ60 ರಷ್ಟು ಭಾಗ ಪ್ರವಾಹಕ್ಕೆ ತುತ್ತಾಗಿ ನಲುಗುತ್ತಿದೆ ಒಂದು ಕಡೆ ಬರ ಮತ್ತೊಂದು ಕಡೆ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ ಪಿ.ಎಂ ಮೋದಿ ಇಲ್ಲಿಗೆ ಭೇಟಿ ಮಾಡದೇ ಹಾಗೂ ಇವರೆಗೆ ಒಂದು ನಯಾ ಪೈಸಾ ಕೂಡ ಪರಿಹಾರ ಘೋಷಿಸದೇ ನಿರ್ಲಕ್ಷ್ಯ ವಹಿಸಿದ್ದು ಖಂಡನೀಯ ಎಂದರು. ಚುನಾವಣೆಗೂ ಮುನ್ನಾ ಪಿ.ಎಂ ಮೋದಿ ಅವರು ಅನೇಕ ಬಾರಿ ರಾಜ್ಯ,ದಕ್ಷಿಣ ಪ್ರವಾಸ ಮಾಡಿದ್ದಾರೆ ಆದ್ರೆ ಈಗ ಕನಿಷ್ಟ ಒಂದು ಭೆಟಿಯೂ ಮಾಡದೇ ಸಂತ್ರಸ್ಥರ ಸಂಕಷ್ಟ ಆಲಿಸುವ ಕೆಲಸ ಮಾಡಿಲ್ಲ.ಕೂಡಲೇ ಇದನ್ನು ರಾಷ್ಟ್ರೀಯ ವಿಕೋಪ ಎಂದು ಘೋಷಿಸಿ ತುರ್ತು ಪರಿಹಾರ ಘೋಷಣೆ ಮಾಡಬೇಕುವೆಂದು ಆಗ್ರಹಿಸಿದರು. ರಾಷ್ಟ್ರವನ್ನು ಉದ್ದೇಶಿಸಿ ಧ್ವಜಾರೋಹಣ ದ ನಂತರ ಮಾತನಾಡಿದ್ದು ದಕ್ಷಿಣ ಭಾರತದ ಪ್ರವಾಹದ ಕುರಿತು ಸೌಜನ್ಯ ಕ್ಕೂ ಸಾಂತ್ವಾನ ಹೇಳಬೇಕಾದ ಪಿ.ಎಂ ಮೋದಿ ಒಂದು ಶಬ್ದವೂ ಮಾತನಾಡಿಲ್ಲ ಇದರಿಂದ ಅವರ ದಕ್ಷಿಣ ಭಾರತದ ಬಗೆಗಿನ ಧೋರಣೆ ವ್ಯಕ್ತವಾಗುತ್ತೆ ಎಂದು ಟೀಕಿಸಿದರು. ಕೂಡಲೇ ಮೋದಿ ಅವರು ಪ್ರವಾಹ ವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿ ಪರಿಹಾರ ನೀಡಬೇಕು ಪ್ರವಾಹ ಪೀಡಿತರ ಸಮಿಕ್ಷೆ ನಡೆಸಿ ರಾಜ್ಯ ಪುನರ್ನಿರ್ಮಾಣ ಕಾರ್ಯ ಮಾಡಬೇಕೆಂದು ಒತ್ತಾಯಿಸಿದರು. ರಾಜ್ಯ ಸರಕಾರ ಈ ಬಾರಿ ಮೈಸೂರು ದಸರಾ ಹಬ್ಬ ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಿದ್ದು ಗಮನಕ್ಕೆ ಬಂದಿದ್ದು ಕೂಡಲೇ ಸಿ.ಎಂ ಯಡಿಯೂರಪ್ಪ ನವರು ಈ ನಿರ್ಧಾರ ಹಿಂಪಡೆದು ಸರಳವಾಗಿ ಆಚರಣೆಗೆ ಮುಂದಾಗಬೇಕು ಸೂತಕದ ನಡುವೆ ಸಂಭ್ರಮ ಸರಿಯಲ್ಲ ಇದು ಸಂತ್ರಸ್ಥರಿಗೆ ಅಪಮಾನ ಮಾಡಿದಂತಾಗುತ್ತದೆ ಎಂದು ಸಲಹೆ ನೀಡಿದರು. ರಾಜ್ಯ ರೈತ ಸಂಘ ದಿಂದ ಪ್ರವಹದ ಕುರಿತು ರಾಜ್ಯದ್ಯಂತ ಪ್ರವಾಸ ಮಾಡಿ ಸಂತ್ರಸ್ಥರ ಸಂಕಷ್ಟ, ಬೆಳೆ,ಆಸ್ತಿಪಾಸ್ತಿ ನಾಶದ ಕುರಿತು ಅಧ್ಯಯನ ನಡೆಸಿ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಅಗತ್ಯ ಪರಿಹಾರ ನೀಡಲು ಹೋರಾಟ ಮಾಡುತ್ತೇವೆಂದು ಹೇಳಿದರು. ಬೈಟ್: ಬೀಗಲ್ ಪುರ ನಾಗೇಂದ್ರ. ರಾಜ್ಯ ರೈತ ಸಂಘದ ಅಧ್ಯಕ್ಷ.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.