ETV Bharat / state

ಗ್ರಾಹಕರ ಅನುಮತಿ ಇಲ್ಲದೇ ಪೇಮೆಂಟ್​ ಬ್ಯಾಂಕ್​ ಬಳಕೆ ವಿಚಾರ: ಏರ್​ಟೆಲ್​ ವಿರುದ್ಧ ದೂರು!

author img

By

Published : May 3, 2019, 1:23 PM IST

ಏರ್​​ಟೆಲ್ ಪೇಮೆಂಟ್ ಬ್ಯಾಂಕ್ ಖಾತೆ ತೆಗೆಯುವ ಮೂಲಕ ತನ್ನ ಬಳಕೆದಾರರಿಗೆ ಮೋಸ ಮಾಡುತ್ತಿದೆ ಎಂಬ ಆರೋಪ  ಕೇಳಿ ಬಂದಿದ್ದು, ಕಂಪನಿ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿ ಬಂದಿದೆ‌.

ಏರ್​​ಟೆಲ್​ ಕಂಪನಿ

ರಾಯಚೂರು: ಏರ್​​ಟೆಲ್​ ಬಳಕೆದಾರರ ಪೂರ್ವಾನುಮತಿ ಇಲ್ಲದೆ, ಏರ್​​ಟೆಲ್ ಪೇಮೆಂಟ್ ಬ್ಯಾಂಕ್ ಖಾತೆ ತೆಗೆಯುವ ಮೂಲಕ ತನ್ನ ಬಳಕೆದಾರರಿಗೆ ಮೋಸ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಕಂಪನಿ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿ ಬಂದಿದೆ‌.

ಲಿಂಗಸುಗೂರು ಪಟ್ಟಣದ ನಿವಾಸಿ ಪ್ರಭು ಅತ್ನೂರು ಎಂಬುವವರು, ತೊಗರಿ ಮಾರಾಟ ಮಾಡಿ ಬಂದ ಹಣವನ್ನ ಪಟ್ಟಣದ ಎಸ್​​​ಬಿಐ ಬ್ರ್ಯಾಂಚ್​ ನಲ್ಲಿರುವ ಖಾತೆಗೆ ಜಮಾ ಮಾಡಲು ದಾಖಲಾತಿಗಳನ್ನ ಕೊಟ್ಟಿದ್ದರು. ಆದರೆ ಈ ಹಣ ಏರ್​ಟೇಲ್​ ಪೇಮೆಂಟ್​ ಬ್ಯಾಂಕ್​ಗೆ ಜಮಾ ಆಗಿದೆಯಂತೆ. ಇದು ಗ್ರಾಹಕರಲ್ಲಿ ಅಚ್ಚರಿ ತಂದಿದ್ದು, ಎಸ್​​ಬಿಐ ಖಾತೆಯ ವಿವರ ನೀಡಿದರೆ, ಏರ್​ಟೆಲ್​ ಪೇಮೆಂಟ್​ ಬ್ಯಾಂಕ್​ ಗೆ ಜಮಾ ಆಗಿರುವುದು ಗಾಬರಿಗೂ ಕಾರಣವಾಗಿದೆ. ಈ ಸಂಬಂಧ ಏರ್​​​​ಟೆಲ್ ಕಂಪನಿ ವಿರುದ್ಧ ಪ್ರಭು ಅತ್ನೂರು ಎಂಬ ರೈತ ದೂರು ನೀಡಿದ್ದಾರೆ.

ಏರ್​​ಟೆಲ್​ ಕಂಪನಿ

ಕೆಲ ವರ್ಷಗಳ ಹಿಂದೆ ಏರ್​​​ಟೆಲ್ ಕಂಪನಿ, ತನ್ನ ಸಿಮ್​ ಕಾರ್ಡ್​ ಹೊಂದಿದವರು ಆಧಾರ್​ ಲಿಂಕ್​ ಜೋಡಣೆ ಮಾಡಬೇಕು ಎಂದು ಹೇಳಿತ್ತು. ಈ ಸಮಯದಲ್ಲಿ ಅಸಂಖ್ಯಾತ ಗ್ರಾಹಕರು ಆಧಾರ್​ ಕಾರ್ಡ್​ ಜೋಡಣೆ ಮಾಡಿದ್ದರು ಎನ್ನಲಾಗಿದೆ. ಇನ್ನು ಸಿಮ್​​ಕಾರ್ಡ್​ಗೆ ಆಧಾರ್‌ಕಾರ್ಡ್ ಲಿಂಕ್ ನೆಪದಲ್ಲಿ ಏರ್​​​​ಟೆಲ್ ಕಂಪನಿ ಬಳಕೆದಾರರಿಗೆ ಮಾಹಿತಿ ನೀಡದೇ ಪೇಮೆಂಟ್​​ ಬ್ಯಾಂಕ್​​ ಖಾತೆ ಆರಂಭಿಸಿದೆ ಎಂಬ ಆರೋಪ ಕೇಳಿ ಬಂದಿದೆ.

ಇನ್ನು ಯಾವುದೇ ಬ್ಯಾಂಕ್ ಖಾತೆ ತೆರೆಯಬೇಕಾದ್ರೆ ಆ ಗ್ರಾಹಕನ ಅನುಮತಿ ಕಡ್ಡಾಯವಾಗಿರುತ್ತದೆ. ಗ್ರಾಹಕನ ಸಮ್ಮತಿಯಿಲ್ಲದೇ ಖಾತೆ ತೆರೆದರೂ ಅದು ಕಾನೂನು ಬಾಹಿರ ಅಪರಾಧವಾಗುತ್ತದೆ. ಒಟ್ಟಿನಲ್ಲಿ ಆಧಾರ್‌ಕಾರ್ಡ್ ಹೊಂದಿದವರು, ಯಾವ ಉದ್ದೇಶಕ್ಕಾಗಿ ಆಧಾರ್‌ಕಾರ್ಡ್ ಬಳಕೆ ಮಾಡಿಕೊಳ್ಳಲಾಗುತ್ತದೆ ಎನ್ನುವ ಖಾತರಿ ಪಡಿಸಿಕೊಂಡು ಆಧಾರ್ ಜೋಡಣೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಇಂತಹ ಯಡವಟ್ಟುಗಳು‌ ಆಗುತ್ತದೆ.

ರಾಯಚೂರು: ಏರ್​​ಟೆಲ್​ ಬಳಕೆದಾರರ ಪೂರ್ವಾನುಮತಿ ಇಲ್ಲದೆ, ಏರ್​​ಟೆಲ್ ಪೇಮೆಂಟ್ ಬ್ಯಾಂಕ್ ಖಾತೆ ತೆಗೆಯುವ ಮೂಲಕ ತನ್ನ ಬಳಕೆದಾರರಿಗೆ ಮೋಸ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಕಂಪನಿ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿ ಬಂದಿದೆ‌.

ಲಿಂಗಸುಗೂರು ಪಟ್ಟಣದ ನಿವಾಸಿ ಪ್ರಭು ಅತ್ನೂರು ಎಂಬುವವರು, ತೊಗರಿ ಮಾರಾಟ ಮಾಡಿ ಬಂದ ಹಣವನ್ನ ಪಟ್ಟಣದ ಎಸ್​​​ಬಿಐ ಬ್ರ್ಯಾಂಚ್​ ನಲ್ಲಿರುವ ಖಾತೆಗೆ ಜಮಾ ಮಾಡಲು ದಾಖಲಾತಿಗಳನ್ನ ಕೊಟ್ಟಿದ್ದರು. ಆದರೆ ಈ ಹಣ ಏರ್​ಟೇಲ್​ ಪೇಮೆಂಟ್​ ಬ್ಯಾಂಕ್​ಗೆ ಜಮಾ ಆಗಿದೆಯಂತೆ. ಇದು ಗ್ರಾಹಕರಲ್ಲಿ ಅಚ್ಚರಿ ತಂದಿದ್ದು, ಎಸ್​​ಬಿಐ ಖಾತೆಯ ವಿವರ ನೀಡಿದರೆ, ಏರ್​ಟೆಲ್​ ಪೇಮೆಂಟ್​ ಬ್ಯಾಂಕ್​ ಗೆ ಜಮಾ ಆಗಿರುವುದು ಗಾಬರಿಗೂ ಕಾರಣವಾಗಿದೆ. ಈ ಸಂಬಂಧ ಏರ್​​​​ಟೆಲ್ ಕಂಪನಿ ವಿರುದ್ಧ ಪ್ರಭು ಅತ್ನೂರು ಎಂಬ ರೈತ ದೂರು ನೀಡಿದ್ದಾರೆ.

ಏರ್​​ಟೆಲ್​ ಕಂಪನಿ

ಕೆಲ ವರ್ಷಗಳ ಹಿಂದೆ ಏರ್​​​ಟೆಲ್ ಕಂಪನಿ, ತನ್ನ ಸಿಮ್​ ಕಾರ್ಡ್​ ಹೊಂದಿದವರು ಆಧಾರ್​ ಲಿಂಕ್​ ಜೋಡಣೆ ಮಾಡಬೇಕು ಎಂದು ಹೇಳಿತ್ತು. ಈ ಸಮಯದಲ್ಲಿ ಅಸಂಖ್ಯಾತ ಗ್ರಾಹಕರು ಆಧಾರ್​ ಕಾರ್ಡ್​ ಜೋಡಣೆ ಮಾಡಿದ್ದರು ಎನ್ನಲಾಗಿದೆ. ಇನ್ನು ಸಿಮ್​​ಕಾರ್ಡ್​ಗೆ ಆಧಾರ್‌ಕಾರ್ಡ್ ಲಿಂಕ್ ನೆಪದಲ್ಲಿ ಏರ್​​​​ಟೆಲ್ ಕಂಪನಿ ಬಳಕೆದಾರರಿಗೆ ಮಾಹಿತಿ ನೀಡದೇ ಪೇಮೆಂಟ್​​ ಬ್ಯಾಂಕ್​​ ಖಾತೆ ಆರಂಭಿಸಿದೆ ಎಂಬ ಆರೋಪ ಕೇಳಿ ಬಂದಿದೆ.

ಇನ್ನು ಯಾವುದೇ ಬ್ಯಾಂಕ್ ಖಾತೆ ತೆರೆಯಬೇಕಾದ್ರೆ ಆ ಗ್ರಾಹಕನ ಅನುಮತಿ ಕಡ್ಡಾಯವಾಗಿರುತ್ತದೆ. ಗ್ರಾಹಕನ ಸಮ್ಮತಿಯಿಲ್ಲದೇ ಖಾತೆ ತೆರೆದರೂ ಅದು ಕಾನೂನು ಬಾಹಿರ ಅಪರಾಧವಾಗುತ್ತದೆ. ಒಟ್ಟಿನಲ್ಲಿ ಆಧಾರ್‌ಕಾರ್ಡ್ ಹೊಂದಿದವರು, ಯಾವ ಉದ್ದೇಶಕ್ಕಾಗಿ ಆಧಾರ್‌ಕಾರ್ಡ್ ಬಳಕೆ ಮಾಡಿಕೊಳ್ಳಲಾಗುತ್ತದೆ ಎನ್ನುವ ಖಾತರಿ ಪಡಿಸಿಕೊಂಡು ಆಧಾರ್ ಜೋಡಣೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಇಂತಹ ಯಡವಟ್ಟುಗಳು‌ ಆಗುತ್ತದೆ.

Intro:ಬ್ಯಾಂಕ್ ನಲ್ಲಿ ಖಾತೆ ತೆಗೆಯಬೇಕಾದ್ರೆ, ಗ್ರಾಹಕರ ಅನುಮತಿ, ಮಾಹಿತಿ ನೀಡುವುದು ಕಡ್ಡಾಯವಾಗಿದೆ. ಮೊಬೈಲ್ ಸೀಮ್ ಕಾರ್ಡ್ ಗೆ ಆಧಾರ ಕಾರ್ಡ್ ಜೋಡಣೆ ನೆಪದಲ್ಲಿ ದೂರವಾಣಿ ಸಂಪರ್ಕ ಕೇಂದ್ರ ದೈತ್ಯ ಕಂಪನಿ ತನ್ನ ಬಳಕೆದಾರರಿಗೆ ತಿಳಿಯದೆ ಬ್ಯಾಂಕ್ ಖಾತೆ ತೆಗೆದಿರುವ ಘಟನೆ ಬೆಳಕಿಗೆ ಬಂದಿದೆ. ಯಾವುದು ಅ ದೈತ್ಯ ಕಂಪನಿ ಅಂತಿರಾ.. ಹಾಗಿದ್ರೆ ಈ ರಿಪೋರ್ಟ್ ಇಲ್ಲಿದೆ ನೋಡಿ. ನೋಡಿ. Body:ವಾಯ್ಸ್ ಓವರ್.1: ದೂರವಾಣಿ ಸಂಪರ್ಕ ಕ್ಷೇತ್ರದಲ್ಲಿಯೇ ದೈತ್ಯ ಕಂಪನಿಯೆಂದು ಹೆಸರು ಪಡೆದಿರುವ ಏರೆಟೆಲ್ ತನ್ನ ಬಳಕೆದಾರರಿಗೆ ಮಾಹಿತಿ ನೀಡಿದೆ, ಏರೆಟೆಲ್ ಪೇಮೆಂಟ್ ಬ್ಯಾಂಕ್ ಖ್ಯಾತೆ ತೆಗೆದು ಬಳಕೆದಾರರಿಗೆ ವಂಚನೆ ಮಾಡಿದೆ ಎನ್ನುವ ಆರೋಪ ಬಿಸಿಲೂರು ರಾಯಚೂರು ಜಿಲ್ಲೆಯ ಕೇಳಿ ಬಂದಿದೆ. ಜಿಲ್ಲೆ ಲಿಂಗಸೂಗೂರು ತಾಲೂಕಿನ ಈ ಘಟನೆ ಬೆಳಕಿಗೆ ಬಂದಿದೆ. ಲಿಂಗಸೂಗೂರು ಪಟ್ಟಣದ ನಿವಾಸಿ ಪ್ರಭಕರ ಎನ್ನುವ ವ್ಯಕ್ತಿ ತನ್ನ ಹೊಲದಲ್ಲಿ ಬೆಳೆದ ತೊಗರಿಯನ್ನ ಸರಕಾರದ ಬೆಂಬಲ ಕೇಂದ್ರದಲ್ಲಿ ಮಾರಾಟ ಮಾಡಿ, ಹಣ ಸಂದಾಯಕ್ಕೆ ಲಿಂಗಸೂಗೂರಿನ ಎಸ್ ಬಿಐ ಶಾಖೆಯಲ್ಲಿ ಅಕೌಂಟ್ ನಂಬರ್ ನ್ನು ನೀಡಿದ್ದಾರೆ. ಅಂದ್ಮೇಲೆ ತೊಗರಿ ಹಣ ನೇರವಾಗಿ ಎಸ್ ಬಿಐ ಖಾತೆಗೆ ಜಮಾವಣೆಯಾಗಬೇಕು. ಅದರ ಬದಲಾಗಿ ಏರೆಟೆಲ್ ಪೇಮೆಂಟ್ ಬ್ಯಾಂಕ್ ಖಾತೆಗೆ ತನ್ನಗೆ ತಿಳಿಯದೆ ಜಮಾವಾಗಿ, ಹಣ ಜಮಾವಾಗಿ ಆಕಸ್ಮಿಕವಾಗಿ ಮೊಬೈಲ್ ಮೆಸೇಜ್ ಗಮನಿಸಿ ನೋಡಿದಾಗ ಹಣ ಜಮಾವಾಗಿರುವುದು ಗೊತ್ತಾಗಿದೆ. ಆದ್ರೆ ಏರೆಟೆಲ್ ಕಂಪನಿ ತನ್ನ ಬಳಕೆದಾರನಿಗೆ ತಿಳಿಯದೆ ಈ ರೀತಿಯಾಗಿ ಖಾತೆ ತೆಗೆಯುವ ಮೂಲಕ ಮೋಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ವಾಯ್ಸ್ ಓವರ್.2: ಕಳೆದ ಎರಡ್ಮೂರು ವರ್ಷಗಳ ಹಿಂದೆ ಏರೆಟೆಲ್ ಸೀಮ್ ಹೊಂದಿರುವ ಎಲ್ಲಾ ಬಳಕೆದಾರರಿಗೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳುವುದಕ್ಕೆ ಸೂಚಿಸಿದೆ. ಕಂಪನಿಯ ಸೂಚನೆ ಮೆರೆಗೆ ಏರೆಟೆಲ್ ಸೀಮ್ ಬಳಕೆದಾರರು ಆಧಾರ ಕಾರ್ಡ್ ನ್ನು ಜೋಡಣೆ ಮಾಡಿಕೊಂಡಿದ್ದಾರೆ. ಆಗಾ ಗ್ರಾಹಕರಿಗೆ ತಿಳಿಯದೆ ಏರೆಟೆಲ್ ಪೇಮೆಂಟ್ ಬ್ಯಾಂಕ್ ಖಾತೆ ತೆಗೆಯಲಾಗಿದೆ ಎನ್ನಲಾಗುತ್ತಿದೆ. ಇದರಿಂದ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರ ಕೂಲಿ ಹಣ, ರೈತರ ಸಬ್ಸಿಡಿ ಹಣ, ಗ್ಯಾಸ್ ಸಬ್ಸಿಡಿ ಸೇರಿದಂತೆ ಸರಕಾರ ಯೋಜನೆಯ ಕೆಲ ಸಬ್ಸಿಡಿ ಹಣ ಏರೆಟೆಲ್ ಬ್ಯಾಂಕ್ ಗೆ ಜಮಾವಾಗಿದೆ ಎಂದು ಹೇಳಲಾಗುತ್ತಿದೆ.
ವಾಯ್ಸ್ ಓವರ್.3: ಇನ್ನೂ ಏರೆಟೇಲ್ ಸೀಮ್ ಹೊಂದಿರುವ ಬಳಕೆದಾರರು ಆಧಾರ ಕಾರ್ಡ್ ಅಪಡೇಟ್ ಮಾಡಿಸಿಕೊಂಡಿದ್ದಾರೆ. ಈ ವೇಳೆ ಬ್ಯಾಂಕ್ ಖಾತೆ ತೆಗೆಯುವ ಮೂಲಕ ಅಕ್ರಮವೆಸಗಿ ಬಳಕೆದಾರರಿಗೆ ಸರಿಯಾದ ಮಾಹಿತಿ ನೀಡಿಲ್ಲ ಎಂದು ಬಳಕೆದಾರರು ದೂರಿದ್ದಾರೆ. ಅಲ್ಲದೇ ಏರೆಟೆಲ್ ಪೇಮೆಂಟ್ ಬ್ಯಾಂಕ್ ಖಾತೆ ಪರಿಣಾಮ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಕೆಲಸ ಮಾಡುತ್ತಿದ್ದ ಸಾವಿರಾರು ಕೂಲಿ-ಕಾರ್ಮಿಕರ ಕೂಲಿ ಹಣ ಏರೆಟೆಲ್ ಪೇಮೆಂಟ್ ಬ್ಯಾಂಕ್ ಖಾತೆಗೆ ಟ್ರಾನ್ ಫಾರ್ಸ್ ಆಗಿದೆ. ಆದ್ರೆ ಏರೆಟೆಲ್ ಸೀಮ್ ಕಾರ್ಡ್ ಬಳಸುವವರಿಗೆ ಇದರ ಬಗ್ಗೆ ಮಾಹಿತಿ ಇಲ್ಲದ ಪರಿಣಾಮ ಕೂಲಿ ಹಣಕ್ಕಾಗಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಅಲೆದಾಡಿದ್ರೆ. ಸಮಸ್ಯೆಯನ್ನ ಪತ್ತೆ ಹಚ್ಚಿದ ಜಿಲ್ಲಾ ಪಂಚಾಯಿತಿ ಇದನ್ನ ಗಮನಿಸಿ ಏರೆಟೇಲ್ ಪೇಮೆಂಟ್ ಬ್ಯಾಂಕ್ ಖಾತೆಯಿಂದ ಅವರ ಬ್ಯಾಂಕ್ ಖಾತೆಗೆ ಕೂಲಿ ಹಣವನ್ನ ಪಾವತಿ ಮಾಡಿದ್ದಾರೆ. ಈ ಬಗ್ಗೆ ಲೀಡ್ ಬ್ಯಾಂಕ್ ಮ್ಯಾನೆಜರ್ ಕೆಲವರು ಗಮನಕ್ಕೆ ತಂದಿದ್ದರೂ, ಲಿಖಿತ ದೂರು ಬಂದಿರಲಿಲ್ಲ. ಯಾವುದೇ ಬ್ಯಾಂಕ್ ಖಾತೆಯನ್ನ ತೆಗೆಯಬೇಕಾದ್ರೆ ಮೊದಲಿಗೆ ಗ್ರಾಹಕ ಸಮ್ಮತಿ ಮತ್ತು ಮಾಹಿತಿ ಇರಬೇಕು. ಒಂದು ಇವೇರಡು ಇಲ್ಲದೇ ಖಾತೆಗೆ ಪ್ರಾರಂಭಿಸಿದ್ದಾರೆ ಕಾನೂನು ಪ್ರಕಾರ ಅಪರಾಧವಾಗಿದ್ದು, ಏರೆಟೆಲ್ ಪೇಮೆಂಟ್ ಬ್ಯಾಂಕ್ ನಿಂದ ರಾಯಚೂರು ಜಿಲ್ಲೆಯಲ್ಲಿ ಕೆಲವು ತೊಂದರೆಗಳು ಆಗಿವೆ ಎಂದಿದ್ದಾರೆ.
Conclusion:ವಾಯ್ಸ್ ಓವರ್.4: ಕೂಲಿ-ಕೆಲಸ ಮಾಡುವ ಕೂಲಿ ಕಾರ್ಮಿಕರ ಅನಕ್ಷರಸ್ಥರು ಇರುತ್ತಾರೆ. ಅಂತಹವರಿಗೆ ಬ್ಯಾಂಕ್ ಖಾತೆಗೆ ಅವರ ನಂಬರ್ ಗೆ ಮೇಸಜ್ ಮಾಡಿದ್ದಾರೆ, ಹಣದ ವ್ಯವಹಾರ ಸಹ ತಿಳಿಯುವುದಿಲ್ಲ. ಸದ್ಯ ಏರೆಟೇಲ್ ಸೀಮ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ನ ಹೆಸರಿನಲ್ಲಿ ಬಳಕೆದಾರರಿಗೆ ಗೊತ್ತಿಲ್ಲದೆ ಬ್ಯಾಂಕ್ ಖಾತೆಯನ್ನ ಪ್ರಾರಂಭಿಸಿರುವುದು ಸದ್ಯ ಲಿಂಗಸೂಗೂರಿನಲ್ಲಿ ತೊಗರಿ ಹಣದಿಂದ ಜಿಲ್ಲೆಯಿಂದ ಬೆಳಕಿಗೆ ಇನ್ನು ಯಾವ ಯಾವ ಕಡೆ ಇಂತಹ ಯಡವಟ್ಟು ಆಗಿದೆ ಎನ್ನುವುದ ಬಗ್ಗೆ ಮಾಹಿತಿ ಹೊರಬರಬೇಕಾಗಿದೆ. ಅಲ್ಲದೇ ಏರೆಟೆಲ್ ಪೇಮೆಂಟ್ ಬ್ಯಾಂಕ್ ಖಾತೆಗೆ ಜಮಾವಾಗಿರುವ ಹಣವನ್ನ ಸಹ ತನ್ನ ಬ್ಯಾಂಕ್ ಖಾತೆಗೆ ವರ್ಗಾವಣೆಗೆ ಚಾರ್ಜ್ ಮಾಡುವ ಆರೋಪ ಸಹಯಿದೆ. ಒಟ್ನಿಲ್ಲಿ, ದೂರವಾಣಿ ಸಂಪರ್ಕ ಕ್ಷೇತ್ರದಲ್ಲಿ ದಿಗ್ಗಜ ಎನ್ನಿಸಿಕೊಂಡಿರುವ ದೈತ್ಯ ಏರೆಟೆಲ್ ಕಂಪನಿ ಆಧಾರ ಕಾರ್ಡ್ ಜೋಡಣೆ ನೆಪದಲ್ಲಿ ಏರೆಟೆಲ್ ಪೇಮೆಂಟ್ ಬ್ಯಾಂಕ್ ಖಾತೆ ತೆಗೆಯುವ ಬಳಕೆದಾರರ ಕೆಂಗಣ್ಣಿಗೆ ಗುರಿಯಾಗುವುದರ ಜತೆಗೆ ಬಳಕೆದಾರರಿಗೆ ಮೋಸ ಮಾಡುತ್ತಿದೆ ಎನ್ನುವ ಗಂಭೀರ ಆರೋಪ ಗುರಿಯಾಗಿದೆ. ಈ ಬಗ್ಗೆ ಆರ್ ಬಿಐ ಮುಂದೆ ಯಾವ ಕ್ರಮ ಕೈಗೊಳ್ಳತ್ತದೆ ಎಂದು ಕಾದು ನೋಡಬೇಕಾಗಿದ್ದು, ಏರೆಟೆಲ್ ಬಳಕೆದಾರರು ಮತ್ತು ಆಧಾರ್ ಕಾರ್ಡ್ ಜೋಡಣೆ ಮಾಡುವ ವೇಳ ಜನರು ಎಚ್ಚರಿಕೆ ವಹಿಸಬೇಕಾಗಿದೆ.
ಬೈಟ್.1: ಪ್ರಭು ಅತ್ತನೂರು, ಏರೆಟೆಲ್ ಬಳಕೆದಾರ
ಬೈಟ್.2: ರಂಗನಾಥ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.