ETV Bharat / state

ವೃದ್ಧೆಗೆ ಸ್ವಂತ ಹಣ ನೀಡಿ ಮಾದರಿಯಾದ ಸಹಾಯಕ ಆಯುಕ್ತ!

author img

By

Published : Sep 18, 2020, 10:41 PM IST

ಧಾರಕಾರ ಮಳೆಯಿಂದಾಗಿ ನೆಲಕ್ಕುರುಳಿದ ಮನೆಗಳ ಪರಿಶೀಲನೆಗೆ ತೆರಳಿದ್ದ ಸಹಾಯಕ ಆಯುಕ್ತ ಸಂತೋಷ್ ಕಾಮಗೌಡ, ಬಡ ವೃದ್ಧೆಯೊಬ್ಬರಿಗೆ ಹಣ ನೀಡಿ ಮಾನವೀಯತೆ ಮೆರೆದಿದ್ದಾರೆ. ಮಳೆಯಿಂದ 5 ಸಾವಿರ ರೂ. ಕಳೆದುಕೊಂಡಿದ್ದ ಅಜ್ಜಿಗೆ ತಮ್ಮ ಕೈಯಿಂದ 4 ಸಾವಿರ ನೀಡಿ ಮಾದರಿಯಾಗಿದ್ದಾರೆ.

assistant commissioner who gave her own money to Old women
ಮಳೆ ನೀರು ನುಗ್ಗಿ 5 ಸಾವಿರ ರೂ ನೀರುಪಾಲು: ಅಜ್ಜಿಗೆ ಸ್ವಂತ ಹಣ ನೀಡಿ ಮಾದರಿಯಾದ ಸಹಾಯಕ ಆಯುಕ್ತ

ರಾಯಚೂರು: ಮಳೆಯಿಂದ ಹಾನಿಗೀಡಾದ ಪ್ರದೇಶ ಪರಿಶೀಲನೆಗೆ ತೆರಳಿದ ವೇಳೆ ಇಲ್ಲಿನ ‌ಸಹಾಯಕ ಆಯುಕ್ತ ಸಂತೋಷ್ ಕಾಮಗೌಡ ವೃದ್ಧೆಯೊಬ್ಬರಿಗೆ ತಮ್ಮ ಜೇಬಿನಿಂದ ಸ್ವಂತ ಹಣ ನೀಡಿ ಮಾದರಿಯಾಗಿದ್ದಾರೆ.

ತಾಲೂಕಿನ ಗುಂಜಳ್ಳಿ, ಯರಗೇರಾ, ಗಧಾರ, ಮಿರ್ಜಾಪುರ, ಇಡಪನೂರು ಹಾಗೂ ಮಿಡಗಲದಿನ್ನಿ ಗ್ರಾಮಗಳ ಸುತ್ತಮುತ್ತಲು ಭಾರೀ ಪ್ರಮಾಣದ ಮಳೆ ಸುರಿದಿದೆ. ಇದರಿಂದ ಪ್ರವಾಹ ಉಂಟಾಗಿ ಅಪಾರ ಪ್ರಮಾಣದ ನೀರು ಹರಿದು ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.

ಮೂರ್ನಾಲ್ಕು ಗ್ರಾಮದ ಸಂಪರ್ಕ ಕಡಿತಗೊಂಡಿದ್ದು, ಕೆಲವೊಂದು ಮನೆಗಳು ನೆಲಕ್ಕುರುಳಿದ್ದವು. ಪರಿಶೀಲನೆ ವೇಳೆ ಕಣ್ಣಿಗೆ ಬಿದ್ದ ವೃದ್ಧೆಯೊಬ್ಬರು, ನನ್ನ ಮನೆಯಲ್ಲಿಟ್ಟಿದ್ದ 5 ಸಾವಿರ ರೂಪಾಯಿ ನೀರಿನಲ್ಲಿ ಕೊಚ್ಚಿಹೋಗಿವೆ ಎಂದು ಅಳಲು ಹೇಳಿಕೊಂಡಿದ್ದರು. ಈ ವೇಳೆ ತಮ್ಮ ಬಳಿಯಿದ್ದ 4 ಸಾವಿರ ರೂಪಾಯಿ ನೀಡಿ ವೃದ್ಧೆಯನ್ನು ಸಮಾಧಾನ ಪಡಿಸಿ ಮಾನವೀಯ ಕಾರ್ಯ ಮಾಡಿದರು. ಸಹಾಯಕ ಆಯುಕ್ತರ ಕೆಲಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಯಚೂರು: ಮಳೆಯಿಂದ ಹಾನಿಗೀಡಾದ ಪ್ರದೇಶ ಪರಿಶೀಲನೆಗೆ ತೆರಳಿದ ವೇಳೆ ಇಲ್ಲಿನ ‌ಸಹಾಯಕ ಆಯುಕ್ತ ಸಂತೋಷ್ ಕಾಮಗೌಡ ವೃದ್ಧೆಯೊಬ್ಬರಿಗೆ ತಮ್ಮ ಜೇಬಿನಿಂದ ಸ್ವಂತ ಹಣ ನೀಡಿ ಮಾದರಿಯಾಗಿದ್ದಾರೆ.

ತಾಲೂಕಿನ ಗುಂಜಳ್ಳಿ, ಯರಗೇರಾ, ಗಧಾರ, ಮಿರ್ಜಾಪುರ, ಇಡಪನೂರು ಹಾಗೂ ಮಿಡಗಲದಿನ್ನಿ ಗ್ರಾಮಗಳ ಸುತ್ತಮುತ್ತಲು ಭಾರೀ ಪ್ರಮಾಣದ ಮಳೆ ಸುರಿದಿದೆ. ಇದರಿಂದ ಪ್ರವಾಹ ಉಂಟಾಗಿ ಅಪಾರ ಪ್ರಮಾಣದ ನೀರು ಹರಿದು ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.

ಮೂರ್ನಾಲ್ಕು ಗ್ರಾಮದ ಸಂಪರ್ಕ ಕಡಿತಗೊಂಡಿದ್ದು, ಕೆಲವೊಂದು ಮನೆಗಳು ನೆಲಕ್ಕುರುಳಿದ್ದವು. ಪರಿಶೀಲನೆ ವೇಳೆ ಕಣ್ಣಿಗೆ ಬಿದ್ದ ವೃದ್ಧೆಯೊಬ್ಬರು, ನನ್ನ ಮನೆಯಲ್ಲಿಟ್ಟಿದ್ದ 5 ಸಾವಿರ ರೂಪಾಯಿ ನೀರಿನಲ್ಲಿ ಕೊಚ್ಚಿಹೋಗಿವೆ ಎಂದು ಅಳಲು ಹೇಳಿಕೊಂಡಿದ್ದರು. ಈ ವೇಳೆ ತಮ್ಮ ಬಳಿಯಿದ್ದ 4 ಸಾವಿರ ರೂಪಾಯಿ ನೀಡಿ ವೃದ್ಧೆಯನ್ನು ಸಮಾಧಾನ ಪಡಿಸಿ ಮಾನವೀಯ ಕಾರ್ಯ ಮಾಡಿದರು. ಸಹಾಯಕ ಆಯುಕ್ತರ ಕೆಲಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.