ETV Bharat / state

ಮೈಸೂರು: ವೀಸಾ ಅವಧಿ ಮುಗಿದು ಕಣ್ಗಾವಲಿನಲ್ಲಿದ್ದ ಇಬ್ಬರು ವಿದೇಶಿ ಯುವತಿಯರು ಎಸ್ಕೇಪ್​

author img

By

Published : Oct 18, 2021, 12:03 PM IST

ಬೆಂಗಳೂರಲ್ಲಿ ಉಗಾಂಡ ಪ್ರಜೆ ಜೈಲಿನಲ್ಲಿ ಮೃತಪಟ್ಟ ಪ್ರಕರಣದ ಬಳಿಕ ವಿದೇಶಿ ಪ್ರಜೆಗಳ ವೀಸಾ ಪರಿಶೀಲನೆಗೆ ಮುಂದಾಗಿದ್ದ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಇಬ್ಬರು ಯುವತಿಯರನ್ನು ವೀಸಾ ಅವಧಿ ಅಂತ್ಯವಾಗಿದ್ದ ಹಿನ್ನೆಲೆ ವಶಕ್ಕೆ ಪಡೆದು ಮೈಸೂರಿನಲ್ಲಿ ಇರಿಸಲಾಗಿತ್ತು. ಆದರೆ ಈ ಇಬ್ಬರು ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.

two-foreign-women-escaped-from-mysuru-state-women-home
ವೀಸಾ ಅವಧಿ ಮುಗಿದು ಕಣ್ಗಾವಲಿನಲ್ಲಿದ್ದ ಇಬ್ಬರು ವಿದೇಶಿ ಯುವತಿಯರು ಪರಾರಿ

ಮೈಸೂರು: ವೀಸಾ ರದ್ದುಗೊಂಡಿದ್ದ ವಿದೇಶಿ ಯುವತಿಯರು ಪರಾರಿಯಾಗಿರುವ ಘಟನೆ ಇಲ್ಲಿನ ವಿಜಯನಗರದಲ್ಲಿ ನಡೆದಿದೆ. ವೀಸಾ ರದ್ದಾದರೂ ಬೆಂಗಳೂರಲ್ಲಿ ನೆಲೆಸಿದ್ದ ಇವರನ್ನು ವಶಕ್ಕೆ ಪಡೆದು ಮೈಸೂರಿನ ಸ್ಟೇಟ್ ವುಮೆನ್ಸ್ ಹೋಮ್​ನಲ್ಲಿ ಇರಿಸಲಾಗಿತ್ತು.

ಉಗಾಂಡ ದೇಶದ ಪ್ರಜೆಗಳಾದ ನಿಹಾನ್ ಹಾಗೂ ಲಿಹಂಸ್ ಎಂಬ ಯುವತಿಯರು ಕಾವಲುಗಾರರ ಕಣ್ತಪ್ಪಿಸಿ ಪರಾರಿಯಾಗಿದ್ದಾರೆ. ಮೂರು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಪೊಲೀಸರ ವಿರುದ್ಧವೇ ಉಗಾಂಡ ಪ್ರಜೆಗಳು ಗಲಾಟೆ ನಡೆಸಿದ್ದರು. ಬಳಿಕ ಅವರ ವೀಸಾ ಪರಿಶೀಲಿಸಿದಾಗ ವೀಸಾ ಅವಧಿ ಮುಕ್ತಾಯವಾಗಿದ್ದು, ಈ ಹಿನ್ನೆಲೆ ಅವರನ್ನು ವಶಕ್ಕೆ ಪಡೆಯಲಾಗಿತ್ತು.

ಹೀಗೆ ವಶಕ್ಕೆ ಪಡೆದವರ ಪೈಕಿ ಇಬ್ಬರು ಯುವತಿಯರನ್ನು ಮೈಸೂರಿನ ಸ್ಟೇಟ್‌ ವುಮೆನ್ಸ್ ಹೋಮ್​ನಲ್ಲಿ ಇರಿಸಿದ್ದರು. ಶನಿವಾರ ರಾತ್ರಿ ಊಟದ ನಂತರ ಕಾವಲುವಾರರ ಕಣ್ತಪ್ಪಿಸಿ ಇಬ್ಬರು ಪರಾರಿಯಾಗಿದ್ದಾರೆ.

ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವತಿಯರ ಪತ್ತೆಗೆ ತಂಡ ರಚಿಸಲಾಗಿದೆ. ಯುವತಿಯರು ಬೆಂಗಳೂರಿನಲ್ಲಿರುವ ಮಾಹಿತಿ ಲಭ್ಯವಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ. ಶೀಘ್ರವೇ ಪತ್ತೆ ಮಾಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪ್ರೀತಿಸಿ ವಂಚನೆಗೊಳಗಾದ ಯುವತಿ ಆತ್ಮಹತ್ಯೆ ಪ್ರಕರಣ: ಎಎಸ್​ಐ ಸೇರಿ 8 ಮಂದಿ ವಿರುದ್ಧ ಎಫ್ಐಆರ್

ಮೈಸೂರು: ವೀಸಾ ರದ್ದುಗೊಂಡಿದ್ದ ವಿದೇಶಿ ಯುವತಿಯರು ಪರಾರಿಯಾಗಿರುವ ಘಟನೆ ಇಲ್ಲಿನ ವಿಜಯನಗರದಲ್ಲಿ ನಡೆದಿದೆ. ವೀಸಾ ರದ್ದಾದರೂ ಬೆಂಗಳೂರಲ್ಲಿ ನೆಲೆಸಿದ್ದ ಇವರನ್ನು ವಶಕ್ಕೆ ಪಡೆದು ಮೈಸೂರಿನ ಸ್ಟೇಟ್ ವುಮೆನ್ಸ್ ಹೋಮ್​ನಲ್ಲಿ ಇರಿಸಲಾಗಿತ್ತು.

ಉಗಾಂಡ ದೇಶದ ಪ್ರಜೆಗಳಾದ ನಿಹಾನ್ ಹಾಗೂ ಲಿಹಂಸ್ ಎಂಬ ಯುವತಿಯರು ಕಾವಲುಗಾರರ ಕಣ್ತಪ್ಪಿಸಿ ಪರಾರಿಯಾಗಿದ್ದಾರೆ. ಮೂರು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಪೊಲೀಸರ ವಿರುದ್ಧವೇ ಉಗಾಂಡ ಪ್ರಜೆಗಳು ಗಲಾಟೆ ನಡೆಸಿದ್ದರು. ಬಳಿಕ ಅವರ ವೀಸಾ ಪರಿಶೀಲಿಸಿದಾಗ ವೀಸಾ ಅವಧಿ ಮುಕ್ತಾಯವಾಗಿದ್ದು, ಈ ಹಿನ್ನೆಲೆ ಅವರನ್ನು ವಶಕ್ಕೆ ಪಡೆಯಲಾಗಿತ್ತು.

ಹೀಗೆ ವಶಕ್ಕೆ ಪಡೆದವರ ಪೈಕಿ ಇಬ್ಬರು ಯುವತಿಯರನ್ನು ಮೈಸೂರಿನ ಸ್ಟೇಟ್‌ ವುಮೆನ್ಸ್ ಹೋಮ್​ನಲ್ಲಿ ಇರಿಸಿದ್ದರು. ಶನಿವಾರ ರಾತ್ರಿ ಊಟದ ನಂತರ ಕಾವಲುವಾರರ ಕಣ್ತಪ್ಪಿಸಿ ಇಬ್ಬರು ಪರಾರಿಯಾಗಿದ್ದಾರೆ.

ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವತಿಯರ ಪತ್ತೆಗೆ ತಂಡ ರಚಿಸಲಾಗಿದೆ. ಯುವತಿಯರು ಬೆಂಗಳೂರಿನಲ್ಲಿರುವ ಮಾಹಿತಿ ಲಭ್ಯವಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ. ಶೀಘ್ರವೇ ಪತ್ತೆ ಮಾಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪ್ರೀತಿಸಿ ವಂಚನೆಗೊಳಗಾದ ಯುವತಿ ಆತ್ಮಹತ್ಯೆ ಪ್ರಕರಣ: ಎಎಸ್​ಐ ಸೇರಿ 8 ಮಂದಿ ವಿರುದ್ಧ ಎಫ್ಐಆರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.