ಮೈಸೂರು: ದಸರಾ ಹಬ್ಬವನ್ನು ರದ್ದು ಮಾಡುವುದಿಲ್ಲ. ಆದರೆ, ಕಳೆದ ಬಾರಿಯಂತೆ ಈ ಬಾರಿಯೂ ಸರಳ ದಸರಾ ಮಾಡುತ್ತೇವೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಇಂದು ಸುತ್ತೂರು ಮಠಕ್ಕೆ ಆಗಮಿಸಿ ಶ್ರೀಗಳ ಆರ್ಶೀವಾದ ಪಡೆದು ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಂದು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಯಾವ ರೀತಿ ದಸರಾ ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಸಿ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇವೆ. ದಸರಾವನ್ನು ಆಚರಣೆ ಮಾಡೇ ಮಾಡುತ್ತೇವೆ. ಆದರೆ, ಕಳೆದ ಬಾರಿಯಂತೆ ಈ ಬಾರಿಯೂ ಸಾಂಪ್ರದಾಯಿಕವಾಗಿ ಹಾಗೂ ಸರಳ ದಸರಾ ಆಚರಿಸಲಾಗುತ್ತದೆ ಎಂದರು.
![Simple Dasara will celebrate on this year: Minister ST Somashekar](https://etvbharatimages.akamaized.net/etvbharat/prod-images/kn-mys-01-minister-st-somashekar-bity-7208092_07082021153201_0708f_1628330521_823.jpg)
ಸಹಕಾರಿ ಖಾತೆ ಸಿಕ್ಕಿದ್ದು ನನಗೆ ಸಂತಷವಾಗಿದೆ. ಇದು ನನ್ನ ನೆಚ್ಚಿನ ಖಾತೆಯಾಗಿದೆ. ಇದರಲ್ಲಿ ಕಳೆದ ಹಲವು ವರ್ಷಗಳಿಂದ ಕೆಲಸ ಮಾಡಿದ್ದೇನೆ ಎಂದರು. ಮೈಸೂರಿಗೆ ಇಲ್ಲಿಯವರೆ ಮಂತ್ರಿ ಬರುತ್ತಾರೆ ಎಂಬ ಲೆಕ್ಕ ಇತ್ತು. ಆದರೆ, ಅದೂ ಆಗಲಿಲ್ಲ. ಆದ್ದರಿಂದ ಮೈಸೂರು ಉಸ್ತುವಾರಿ ಸಚಿವನಾಗಿದ್ದೇನೆ ಎಂದರು.