ETV Bharat / state

ಮೈಸೂರಿನಲ್ಲೇ ಫಿಲ್ಮ್ ಸಿಟಿ ಮಾಡುತ್ತೇವೆ: ಸಿಎಂ‌ ಸಿದ್ದರಾಮಯ್ಯ

author img

By ETV Bharat Karnataka Team

Published : Dec 24, 2023, 10:12 AM IST

ನಾನು ಮೈಸೂರು ಅಭಿವೃದ್ಧಿ ಮಾಡೇ ಮಾಡುತ್ತೇನೆ, ಅದು ನನ್ನ ಜವಾಬ್ದಾರಿ. ಜೊತೆಗೆ ಮೈಸೂರಿನಲ್ಲೇ ಫಿಲ್ಮ್ ಸಿಟಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

siddaramaiah
ಸಿಎಂ‌ ಸಿದ್ದರಾಮಯ್ಯ

ಪತ್ತಿನ ಸಹಕಾರ ಸಂಘದ 25ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ

ಮೈಸೂರು : ಮೈಸೂರಿನಲ್ಲಿಯೇ ಫಿಲ್ಮ್ ಸಿಟಿ ಮಾಡುತ್ತೇವೆ, ಹೊರಗಡೆ ಎಲ್ಲೂ ಮಾಡಲ್ಲ. ನಾನು ಹಿಂದೆಯೇ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಮಾಡೋಣ ಅಂತ ಹೇಳಿದ್ದೆ. ಆದರೆ, ಪರಿಸರವಾದಿಗಳು ಬಿಡಲಿಲ್ಲ. ರೋಪ್ ವೇ ಮಾಡಲು ನಾನು ಈಗಲೂ ಸಿದ್ಧ. ಯಾರೂ ತಡೆಯಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಜಯನಗರದಲ್ಲಿರುವ ಬಂಟರ ಸಂಘದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ 25ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರಿನಲ್ಲಿ ಫಿಲ್ಮ್ ಸಿಟಿ ಮಾಡುತ್ತೇನೆ ಎಂದು ಬಜೆಟ್​ನಲ್ಲೇ ಹೇಳಿದ್ದೇನೆ. ಬೆಂಗಳೂರು - ಮೈಸೂರು ಹೈವೇ ಮಾಡಿದ್ದು ನಾವೇ, ನಾನು ಮತ್ತು ಮಹದೇವಪ್ಪ ಮಾಡಿದ್ದು. ನಿಮ್ಮ ಎಂಪಿ ಪ್ರತಾಪ್​ ಸಿಂಹ ಬುರುಡೆ ಹೊಡೆಯುತ್ತಾನೆ ಎಂದು ಛೇಡಿಸಿದರು.

ಪ್ರತಾಪ್​ ಸಿಂಹನ ಕ್ಷೇತ್ರ ಇರೋದು ಸಿದ್ದಲಿಂಗಪುರದವರೆಗೆ. ಅಲ್ಲಿಂದ ಆಚೆ ಇರೋದು ಯಾರು? ಅವರು ಸುಮ್ಮನೆ ಬುರುಡೆ ಹೊಡಿತಾರೆ. ನೀವು ಚಪ್ಪಾಳೆ ತಟ್ಟುತ್ತೀರಿ. ನಾನು ಬೆನ್ನು ತಟ್ಟಿಕೊಳ್ತಾ ಇಲ್ಲ. ನಾನು ಹೋದ ಮೇಲೆ ಮೈಸೂರು ಅಭಿವೃದ್ಧಿ ಆಗಿಲ್ಲ. ಮತ್ತೆ ಬಂದಿದ್ದೇನೆ, ನಾನು ಮೈಸೂರು ಅಭಿವೃದ್ಧಿ ಮಾಡೇ ಮಾಡುತ್ತೇನೆ, ಅದು ನನ್ನ ಜವಾಬ್ದಾರಿ. ಯಾರು ಏನೇ ವಿರೋಧ ಮಾಡಿದರೂ, ನಾವು ಹೇಳಿದಂತೆಯೇ ಮಾಡುತ್ತೇವೆ ಎಂದರು.

ಮೈಸೂರಿನ ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘ ಕಾರ್ಯಕ್ರಮವನ್ನು ನಾನೇ ಉದ್ಘಾಟನೆ ಮಾಡಿದ್ದೇನೆ. ರಜತ ಮಹೋತ್ಸವವನ್ನು ನಾನೇ ಉದ್ಘಾಟನೆ ಮಾಡುತ್ತಿದ್ದೇನೆ. ಸುವರ್ಣ ಮಹೋತ್ಸವವನ್ನು ನಾನೇ ಮಾಡಬೇಕು ಅಂದುಕೊಂಡಿದ್ದೇನೆ. ನೂರು ವರ್ಷಕ್ಕಿಂತ‌ ಹೆಚ್ಚು ಬದುಕಬೇಕು ಅಂದುಕೊಂಡಿದ್ದೇನೆ ಎಂದು ಶತಾಯುಷಿಯಾಗಿ ಬದುಕುವ ಆಸೆಯನ್ನು ಸಿಎಂ ವ್ಯಕ್ತಪಡಿಸಿದರು.

ಮೈಸೂರು ಪ್ರವಾಸಿಗರ ಸ್ವರ್ಗ. ಇಲ್ಲಿ ಹೋಟೆಲ್ ಉದ್ಯಮ ಬೆಳೆದರೆ ಮೈಸೂರು ಬೆಳೆಯುತ್ತದೆ. ಅತಿಥಿ ದೇವೋಭವ ಅಂತ ಕರೆಯುತ್ತೇವೆ. ರಾಜಕುಮಾರ್ ಅವರು ಅಭಿಮಾನಿಗಳೇ ದೇವರು ಅಂತ ಕರೆಯುತ್ತಿದ್ದರು. ನಾವು ಅತಿಥಿಗಳನ್ನೇ ದೇವರು ಅಂತ ಕರೆಯುತ್ತಿದ್ದೇವೆ‌. ಆ ರೀತಿ‌ ಆತಿಥ್ಯ ನೀಡಬೇಕು ಎಂದು ತಿಳಿಸಿದರು.

ಹೋಟೆಲ್ ಉದ್ಯಮ ಮಾಡುವುದು ಒಂದು ವೃತ್ತಿ. ಮೈಸೂರಲ್ಲಿ ಓದುವಾಗ, ಲಾಯರ್ ಆಗಿದ್ದಾಗ ಪ್ರತಿ‌ದಿನ ಎಲ್ಲೆಲ್ಲಿ ಚೆನ್ನಾಗಿ ತಿಂಡಿ ಸಿಗುತ್ತದೆಯೋ ಆ ಹೋಟೆಲ್​ಗೆ ಹೋಗುತ್ತಿದ್ದೆ. ಅತಿ ಹೆಚ್ಚಾಗಿ ಇಂದ್ರ ಕೆಫೆಗೆ ಹೋಗುತ್ತಿದ್ದೆ. ರಾತ್ರಿ ವೇಳೆ ನಾನ್ ವೆಜ್ ಹೋಟೆಲ್ ಹುಡುಕಿ ಊಟ ಮಾಡುತ್ತಿದ್ದೆ. ನಾನು ಚುನಾವಣೆ ಗೆದ್ದಾಗ, ಸೋತಾಗ ಎಲ್ಲ ಸಂದರ್ಭದಲ್ಲೂ ಹೋಟೆಲ್‌ಗೆ ತೆರಳುತ್ತಿದ್ದೆ ಎಂದರು.

ಬಿಜೆಪಿ ಶಾಸಕ ಶ್ರೀವತ್ಸ ಕಾಲೆಳೆದ ಸಿಎಂ: ನೀನು ಸ್ವಾತಿ ಹೋಟೆಲ್‌ಗೆ ಹೋಗಿ ಬಾ. ಮೈಸೂರಿನ ಸ್ವಾತಿ ಬೇರೆ, ಹಾಸನದ ಸ್ವಾತಿ ಬೇರೆ. ಮೈಸೂರಿನ ಸ್ವಾತಿ ನಾನ್ ವೆಜ್ ಹೋಟೆಲ್ ಅಂತ ಬಿಜೆಪಿ ಶಾಸಕ ಶ್ರೀವತ್ಸ ಅವರಿಗೆ ಸಿಎಂ ಕಿಚಾಯಿಸಿದರು.

ಇದನ್ನೂ ಓದಿ : ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಸದಸ್ಯರಾಗಿ ಆಯ್ಕೆ : ಖರ್ಗೆಗೆ ಸಿದ್ದರಾಮಯ್ಯ ಧನ್ಯವಾದ

ಪತ್ತಿನ ಸಹಕಾರ ಸಂಘದ 25ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ

ಮೈಸೂರು : ಮೈಸೂರಿನಲ್ಲಿಯೇ ಫಿಲ್ಮ್ ಸಿಟಿ ಮಾಡುತ್ತೇವೆ, ಹೊರಗಡೆ ಎಲ್ಲೂ ಮಾಡಲ್ಲ. ನಾನು ಹಿಂದೆಯೇ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಮಾಡೋಣ ಅಂತ ಹೇಳಿದ್ದೆ. ಆದರೆ, ಪರಿಸರವಾದಿಗಳು ಬಿಡಲಿಲ್ಲ. ರೋಪ್ ವೇ ಮಾಡಲು ನಾನು ಈಗಲೂ ಸಿದ್ಧ. ಯಾರೂ ತಡೆಯಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಜಯನಗರದಲ್ಲಿರುವ ಬಂಟರ ಸಂಘದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ 25ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರಿನಲ್ಲಿ ಫಿಲ್ಮ್ ಸಿಟಿ ಮಾಡುತ್ತೇನೆ ಎಂದು ಬಜೆಟ್​ನಲ್ಲೇ ಹೇಳಿದ್ದೇನೆ. ಬೆಂಗಳೂರು - ಮೈಸೂರು ಹೈವೇ ಮಾಡಿದ್ದು ನಾವೇ, ನಾನು ಮತ್ತು ಮಹದೇವಪ್ಪ ಮಾಡಿದ್ದು. ನಿಮ್ಮ ಎಂಪಿ ಪ್ರತಾಪ್​ ಸಿಂಹ ಬುರುಡೆ ಹೊಡೆಯುತ್ತಾನೆ ಎಂದು ಛೇಡಿಸಿದರು.

ಪ್ರತಾಪ್​ ಸಿಂಹನ ಕ್ಷೇತ್ರ ಇರೋದು ಸಿದ್ದಲಿಂಗಪುರದವರೆಗೆ. ಅಲ್ಲಿಂದ ಆಚೆ ಇರೋದು ಯಾರು? ಅವರು ಸುಮ್ಮನೆ ಬುರುಡೆ ಹೊಡಿತಾರೆ. ನೀವು ಚಪ್ಪಾಳೆ ತಟ್ಟುತ್ತೀರಿ. ನಾನು ಬೆನ್ನು ತಟ್ಟಿಕೊಳ್ತಾ ಇಲ್ಲ. ನಾನು ಹೋದ ಮೇಲೆ ಮೈಸೂರು ಅಭಿವೃದ್ಧಿ ಆಗಿಲ್ಲ. ಮತ್ತೆ ಬಂದಿದ್ದೇನೆ, ನಾನು ಮೈಸೂರು ಅಭಿವೃದ್ಧಿ ಮಾಡೇ ಮಾಡುತ್ತೇನೆ, ಅದು ನನ್ನ ಜವಾಬ್ದಾರಿ. ಯಾರು ಏನೇ ವಿರೋಧ ಮಾಡಿದರೂ, ನಾವು ಹೇಳಿದಂತೆಯೇ ಮಾಡುತ್ತೇವೆ ಎಂದರು.

ಮೈಸೂರಿನ ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘ ಕಾರ್ಯಕ್ರಮವನ್ನು ನಾನೇ ಉದ್ಘಾಟನೆ ಮಾಡಿದ್ದೇನೆ. ರಜತ ಮಹೋತ್ಸವವನ್ನು ನಾನೇ ಉದ್ಘಾಟನೆ ಮಾಡುತ್ತಿದ್ದೇನೆ. ಸುವರ್ಣ ಮಹೋತ್ಸವವನ್ನು ನಾನೇ ಮಾಡಬೇಕು ಅಂದುಕೊಂಡಿದ್ದೇನೆ. ನೂರು ವರ್ಷಕ್ಕಿಂತ‌ ಹೆಚ್ಚು ಬದುಕಬೇಕು ಅಂದುಕೊಂಡಿದ್ದೇನೆ ಎಂದು ಶತಾಯುಷಿಯಾಗಿ ಬದುಕುವ ಆಸೆಯನ್ನು ಸಿಎಂ ವ್ಯಕ್ತಪಡಿಸಿದರು.

ಮೈಸೂರು ಪ್ರವಾಸಿಗರ ಸ್ವರ್ಗ. ಇಲ್ಲಿ ಹೋಟೆಲ್ ಉದ್ಯಮ ಬೆಳೆದರೆ ಮೈಸೂರು ಬೆಳೆಯುತ್ತದೆ. ಅತಿಥಿ ದೇವೋಭವ ಅಂತ ಕರೆಯುತ್ತೇವೆ. ರಾಜಕುಮಾರ್ ಅವರು ಅಭಿಮಾನಿಗಳೇ ದೇವರು ಅಂತ ಕರೆಯುತ್ತಿದ್ದರು. ನಾವು ಅತಿಥಿಗಳನ್ನೇ ದೇವರು ಅಂತ ಕರೆಯುತ್ತಿದ್ದೇವೆ‌. ಆ ರೀತಿ‌ ಆತಿಥ್ಯ ನೀಡಬೇಕು ಎಂದು ತಿಳಿಸಿದರು.

ಹೋಟೆಲ್ ಉದ್ಯಮ ಮಾಡುವುದು ಒಂದು ವೃತ್ತಿ. ಮೈಸೂರಲ್ಲಿ ಓದುವಾಗ, ಲಾಯರ್ ಆಗಿದ್ದಾಗ ಪ್ರತಿ‌ದಿನ ಎಲ್ಲೆಲ್ಲಿ ಚೆನ್ನಾಗಿ ತಿಂಡಿ ಸಿಗುತ್ತದೆಯೋ ಆ ಹೋಟೆಲ್​ಗೆ ಹೋಗುತ್ತಿದ್ದೆ. ಅತಿ ಹೆಚ್ಚಾಗಿ ಇಂದ್ರ ಕೆಫೆಗೆ ಹೋಗುತ್ತಿದ್ದೆ. ರಾತ್ರಿ ವೇಳೆ ನಾನ್ ವೆಜ್ ಹೋಟೆಲ್ ಹುಡುಕಿ ಊಟ ಮಾಡುತ್ತಿದ್ದೆ. ನಾನು ಚುನಾವಣೆ ಗೆದ್ದಾಗ, ಸೋತಾಗ ಎಲ್ಲ ಸಂದರ್ಭದಲ್ಲೂ ಹೋಟೆಲ್‌ಗೆ ತೆರಳುತ್ತಿದ್ದೆ ಎಂದರು.

ಬಿಜೆಪಿ ಶಾಸಕ ಶ್ರೀವತ್ಸ ಕಾಲೆಳೆದ ಸಿಎಂ: ನೀನು ಸ್ವಾತಿ ಹೋಟೆಲ್‌ಗೆ ಹೋಗಿ ಬಾ. ಮೈಸೂರಿನ ಸ್ವಾತಿ ಬೇರೆ, ಹಾಸನದ ಸ್ವಾತಿ ಬೇರೆ. ಮೈಸೂರಿನ ಸ್ವಾತಿ ನಾನ್ ವೆಜ್ ಹೋಟೆಲ್ ಅಂತ ಬಿಜೆಪಿ ಶಾಸಕ ಶ್ರೀವತ್ಸ ಅವರಿಗೆ ಸಿಎಂ ಕಿಚಾಯಿಸಿದರು.

ಇದನ್ನೂ ಓದಿ : ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಸದಸ್ಯರಾಗಿ ಆಯ್ಕೆ : ಖರ್ಗೆಗೆ ಸಿದ್ದರಾಮಯ್ಯ ಧನ್ಯವಾದ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.